ಕರ್ನಾಟಕ

karnataka

By

Published : May 28, 2019, 10:07 AM IST

ETV Bharat / bharat

ನೀರವ್​, ಮಲ್ಯರಂತಹ ಸುಸ್ತಿದಾರರ ಹೆಸರು ಬಹಿರಂಗಕ್ಕೆ ಸಿಐಸಿ ಆದೇಶ

ಲಖನೌದ ಸಾಮಾಜಿಕ ಕಾರ್ಯಕರ್ತೆ ನೂತನ್ ಠಾಕೂರ್ ಸಲ್ಲಿಸಿರುವ ಮಾಹಿತಿ ಹಕ್ಕು ಕಾಯ್ದೆಯಡಿಯ (ಆರ್​ಟಿಐ) ಅರ್ಜಿಗೆ ಸಂಬಂಧಿಸಿದಂತೆ ಸಿಐಸಿ ಈ ನಿರ್ದೇಶನ ನೀಡಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕ್​ಗಳಿಂದ ದೊಡ್ಡ ಮೊತ್ತದ ಸಾಲ ಬಾಕಿ ಉಳಿಸಿಕೊಂಡಿರುವವರ ಹೆಸರು ಬಹಿರಂಗಪಡಿಸಬೇಕು ಎಂದು ಕೇಂದ್ರೀಯ ಮಾಹಿತಿ ಆಯೋಗವು (ಸಿಐಸಿ) ಭಾರತೀಯ ರಿಸರ್ವ್​ ಬ್ಯಾಂಕ್​ಗೆ (ಆರ್​ಬಿಐ) ಆದೇಶಿಸಿದೆ.

ಲಖನೌದ ಸಾಮಾಜಿಕ ಕಾರ್ಯಕರ್ತೆ ನೂತನ್ ಠಾಕೂರ್ ಸಲ್ಲಿಸಿರುವ ಮಾಹಿತಿ ಹಕ್ಕು ಕಾಯ್ದೆಯಡಿಯ (ಆರ್​ಟಿಐ) ಅರ್ಜಿಗೆ ಸಂಬಂಧಿಸಿದಂತೆ ಸಿಐಸಿ ಈ ನಿರ್ದೇಶನ ನೀಡಿದೆ.

ಆರ್​ಬಿಐ ಪಟ್ಟಿ ಮಾಡಿರುವ ಸುಸ್ತಿದಾರರ ಕುರಿತು ತಮಗೆ ಮಾಹಿತಿ ನೀಡಬೇಕು. ಈ ಸಂಬಂಧ ನಡೆದ ಪತ್ರ ವ್ಯವಹಾರ ಹಾಗೂ ಸಭೆಗಳ ಟಿಪ್ಪಣಿಯನ್ನು ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.

ಗೋಪ್ಯ ಮಾಹಿತಿಯ ವಿವರಗಳನ್ನು ನೀಡುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್​ ಈ ಹಿಂದೆ ನಿಲುವು ತಳಿದಿತ್ತು. ಈ ಕಾರಣಕ್ಕೆ ನೂತನ್ ಠಾಕೂರ್​ ಅವರು ಕೇಂದ್ರೀಯ ಮಾಹಿತಿ ಆಯೋಗಕ್ಕೆ ಮನವಿ ಮಾಡಿದ್ದರು.

ಆರ್​ಬಿಐ ಡೆಪ್ಯುಟಿ ಗವರ್ನರ್​ ವಿರಳ್ ಆಚಾರ್ಯ ಅವರು ಈ ಹಿಂದೆ ನೀಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ, ಸಾಲ ವಸೂಲಾತಿಗೆ ಕ್ರಮ ಕೈಗೊಳ್ಳಲು ಆರ್​ಬಿಐ ಬ್ಯಾಂಕ್​ಗಳಿಗೆ ಕೆಲ ಸುಸ್ತಿದಾರರ ಹೆಸರುಗಳನ್ನು ರವಾನಿಸಿದೆ ಎಂದು ಹೇಳಿದ್ದರು.

For All Latest Updates

TAGGED:

ABOUT THE AUTHOR

...view details