ಕರ್ನಾಟಕ

karnataka

By

Published : Jan 15, 2021, 6:25 AM IST

ETV Bharat / bharat

ವಿಶಾಖಪಟ್ಟಣದಲ್ಲಿ ಸಶಸ್ತ್ರ ಪಡೆಯ ಹಿರಿಯ ಸೇನಾಧಿಕಾರಿಗಳ ದಿನ ಆಚರಣೆ

ಸಶಸ್ತ್ರ ಪಡೆಯ ಹಿರಿಯ ಸೇನಾಧಿಕಾರಿಗಳ ದಿನ ಆಚರಣೆಯನ್ನು ವಿಶಾಖಪಟ್ಟಣಂನ ಬೀಚ್ ರಸ್ತೆಯಲ್ಲಿರುವ ಯುದ್ಧ ಸ್ಮಾರಕದಲ್ಲಿ ನಡೆಸಲಾಯಿತು.

veternas day
ಸಶಸ್ತ್ರ ಪಡೆಯ ಹಿರಿಯ ಸೇನಾಧಿಕಾರಿಗಳ ದಿನ ಆಚರಣೆ

ಹೈದರಾಬಾದ್​: ಜ.14ರಂದು ಸಶಸ್ತ್ರ ಪಡೆಯ ಹಿರಿಯ ಸೇನಾಧಿಕಾರಿಗಳ ದಿನ. ಈ ಸಂದರ್ಭದಲ್ಲಿ, ವಿಶಾಖಪಟ್ಟಣಂನ ಬೀಚ್ ರಸ್ತೆಯಲ್ಲಿರುವ ಯುದ್ಧ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಲಾಯಿತು.

ಇಎನ್‌ಸಿ ಪರವಾಗಿ ಇನ್-ಚಾರ್ಜ್ ನೇವಲ್ ಕೋಸ್ಟಲ್ ಬ್ಯಾಟರಿ ಅಧಿಕಾರಿ ಕ್ಯಾಪ್ಟನ್ ವಿಜಯ್ ಸಿಂಗ್, ನೇವಿ ಫೌಂಡೇಶನ್‌ನ ಅನುಭವಿ ಅಧಿಕಾರಿ ಎಂಎಸ್ಎಂಕೆ ಶರ್ಮಾ (ನಿವೃತ್ತ) ಮತ್ತು ನಿವೃತ್ತ ಮಾಸ್ಟರ್ ಚೀಫ್ ಪೆಟ್ಟಿ ಅಧಿಕಾರಿ ಡಾ.ಚಂದ್ರಶೇಖರ್ ಪಿ ಮತ್ತು ಮತ್ತು ಅನುಭವಿ ನಾವಿಕರು ವೇದಿಕೆಗೆ ಆಗಮಿಸಿ ಕ್ರಮವಾಗಿ ಯುದ್ಧ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿದರು.

ಸಮಾರಂಭದಲ್ಲಿ ದೇಶಕ್ಕಾಗಿ ತ್ಯಾಗ ಮಾಡಿದ ಸಿಬ್ಬಂದಿಗಳಿಗೆ ಗೌರವ ಸೂಚಕವಾಗಿ ಎರಡು ನಿಮಿಷಗಳ ಮೌನಾಚರಣೆ ಮಾಡಲಾಯಿತು. ಹೆಮ್ಮೆಯಿಂದ ಮತ್ತು ಗೌರವದಿಂದ ಭಾರತೀಯ ನೌಕಾಪಡೆಗೆ ಸೇವೆ ಸಲ್ಲಿಸಿದ ಸಿಬ್ಬಂದಿಗಳ ಅದಮ್ಯ ಮನೋಭಾವಕ್ಕೆ ಈ ದಿನವನ್ನು ಅರ್ಪಿಸಲಾಗಿದೆ.

ABOUT THE AUTHOR

...view details