ಕರ್ನಾಟಕ

karnataka

ETV Bharat / bharat

ಸುಳ್ವಾಡಿ ಕೇಸ್​ ಪ್ರೇರಣೆ: ಪ್ರಸಾದದಲ್ಲಿ ವಿಷ ಹಾಕಲು ಉಗ್ರರು ಹಾಕಿದ್ರು ಸ್ಕೆಚ್​, ಕೊನೆಗೆ ಏನಾಯ್ತು?

ಅದೃಷ್ಟವಶಾತ್​ ಉಗ್ರರು ನಡೆಸಿದ್ದ ಈ ಯತ್ನ ವಿಫಲವಾಗಿದೆ. ಅಂದಹಾಗೆ ವಿಷ ಹಾಕಲು ಪ್ಲಾನ್​ ಮಾಡಿದ್ದ ಶಂಕಿತ 10 ಐಸಿಸ್​ ಉಗ್ರರನ್ನು ಮುಂಬೈನ ಭಯೋತ್ಪಾದನೆ ನಿಗ್ರಹ ದಳದ (ಎಟಿಎಸ್​) ಪೊಲೀಸರು ಸೆರೆ ಹಿಡಿದಿದ್ದಾರೆ. ಇವರನ್ನು ವಿಚಾರಣೆಗೊಳಪಡಿಸಿದಾಗ ವಿಷ ಪ್ರಸಾದ ಸ್ಕೆಚ್​ ವಿಷಯ ಬಾಯ್ಬಿಟ್ಟಿದ್ದಾರೆ.

By

Published : Feb 7, 2019, 5:44 PM IST

ವಿಷ ಹಾಕಲು ಐಸಿಸಿ ಸ್ಕೆಚ್​​

ಮುಂಬೈ: ಚಾಮರಾಜನಗರದ ಸುಳ್ವಾಡಿಯ ಕಿಚ್ಚುಗುತ್ತಿ ಮಾರಮ್ಮ ವಿಷ ಪ್ರಸಾದ ದುರಂತದಿಂದ ಪ್ರೇರಣೆ ಪಡೆದ ಐಸಿಸ್​ ಉಗ್ರರು, ಅದೇ ರೀತಿ ಸ್ಕೆಚ್​ ಹಾಕಿ 40 ಸಾವಿರ ಮಂದಿಯನ್ನು ಹತ್ಯೆಗೈಯ್ಯಲು ಯತ್ನಿಸಿದ್ದರು ಎಂಬುದು ತಡವಾಗಿ ಬೆಳಕಿಗೆ ಬಂದಿದೆ.

ಅದೃಷ್ಟವಶಾತ್​ ಉಗ್ರರು ನಡೆಸಿದ್ದ ಈ ಯತ್ನ ವಿಫಲವಾಗಿದೆ. ಅಂದಹಾಗೆ ವಿಷ ಹಾಕಲು ಪ್ಲಾನ್​ ಮಾಡಿದ್ದ ಶಂಕಿತ 10 ಐಸಿಸ್​ ಉಗ್ರರನ್ನು ಮುಂಬೈನ ಭಯೋತ್ಪಾದನೆ ನಿಗ್ರಹ ದಳದ (ಎಟಿಎಸ್​) ಪೊಲೀಸರು ಸೆರೆ ಹಿಡಿದಿದ್ದಾರೆ. ಇವರನ್ನು ವಿಚಾರಣೆಗೊಳಪಡಿಸಿದಾಗ ವಿಷ ಪ್ರಸಾದ ಸ್ಕೆಚ್​ ವಿಷಯ ಬಾಯ್ಬಿಟ್ಟಿದ್ದಾರೆ.

ಕಳೆದ ಡಿಸೆಂಬರ್​ನಲ್ಲಿ ಮುಂಬೈನ ಮುಂಬ್ರೇಶ್ವರ ದೇವಸ್ಥಾನದಲ್ಲಿ ನಡೆದ ಹಬ್ಬ ಆಚರಣೆ ವೇಳೆ ಪ್ರಸಾದದಲ್ಲಿ ವಿಷಯ ಹಾಕಲು ಯತ್ನಿಸಿದ್ದ ಉಗ್ರರು, ಪ್ರವಾಸಿಗರು, ವಿದೇಶಿಗರು ಸೇರಿ 40 ಸಾವಿರ ಮಂದಿಯನ್ನು ಹತ್ಯೆ ಮಾಡಲು ಯತ್ನಿಸಿದ್ದರು ಎಂದು ತಿಳಿದುಬಂದಿದೆ.

ಮಹಾರಾಷ್ಟ್ರ ಎಟಿಎಸ್​ ಅಧಿಕಾರಿಗಳ ತಂಡ ಶಂಕಿತ ಉಗ್ರ ತಲಾಹ್​ ಪೋಟ್ರಿಕ್​ನನ್ನು ಜನವರಿ .28ರಂದು ದೇವಸ್ಥಾನದ ಅಡುಗೆ ಕೋಣೆಗೆ ಕರೆದೊಯ್ದಿದ್ದರು. ಪ್ರಸಾದದಲ್ಲಿ ಯಾವ ರೀತಿ ವಿಷ ಹಾಕಬೇಕೆಂದು ಯೋಜನೆ ರೂಪಿಸಿದ್ದೆವು ಎಂಬುದನ್ನು ಆತ ಎಳೆಎಳೆಯಾಗಿ ಬಾಯ್ಬಿಟ್ಟಿದ್ದಾನೆ ಎಂದು ವಿಚಾರಣೆಯಿಂದ ತಿಳಿದುಬಂದಿದೆ.

ಈ ಸ್ಕೆಚ್​ ವಿಫಲವಾಗಿದ್ದ ಹಿನ್ನೆಲೆಯಲ್ಲಿ ಶಿವರಾತ್ರಿ ದಿನದಂದು ಮತ್ತೆ ಪ್ರಸಾದಕ್ಕೆ ವಿಷ ಬೆರೆಸಲು ಸ್ಕೆಚ್​ ಹಾಕಿಕೊಂಡಿದ್ದರು ಎನ್ನಲಾಗಿದೆ. ಈ ಶಂಕಿತ ಉಗ್ರರು ರಾಸಾಯನಿಕ ಬಳಸಿ ವಿಷ ತಯಾರಿಸಲೂ ಯೋಜನೆ ಹಾಕಿಕೊಂಡಿದ್ದರು ಎಂದು ತಿಳಿದುಬಂದಿದೆ.ವಾಟ್ಸ್​ಆ್ಯಪ್​ನಲ್ಲಿ ಗ್ರೂಪ್​ ಮಾಡಿಕೊಂಡಿದ್ದ ಈ ಹತ್ತು ಮಂದಿ ಯಾವ್ಯಾವ ರೀತಿ ದಾಳಿಗಳನ್ನು ನಡೆಸಬೇಕು ಎಂಬ ಬಗ್ಗೆ ಚರ್ಚಿಸಿದ್ದರು. ಬೃಹನ್ಮುಂಬೈ ಸಾರ್ವಜನಿಕ ಆಸ್ಪತ್ರೆಯ ಔಷಧಗಳಿಗೆ ವಿಷ ಹಾಕಲೂ ಇವರು ಸ್ಕೆಚ್​ ಹಾಕಿದ್ದರು. ಮಹಾರಾಷ್ಟ್ರದ ಪ್ರಮುಖ ಜಲಾಶಯಗಳಿಗೂ ಭೇಟಿ ನೀಡಿ ಅಧ್ಯಯನ ನಡೆಸಿದ್ದ ಈ ಶಂಕಿತ ಉಗ್ರರ ತಂಡ ಡ್ಯಾಂ ನೀರಿಗೆ ರಾಸಾಯನಿಕ ವಿಷ ಬೆರೆಸಿ ಸಾಮೂಹಿಕ ಮಾರಣಹೋಮ ನಡೆಸಲೂ ಯೋಜನೆ ಹಾಕಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ.

ABOUT THE AUTHOR

...view details