ಕರ್ನಾಟಕ

karnataka

ಟೆನ್ನಿಸ್​​ ದಂತಕಥೆ ಅಖ್ತರ್ ಅಲಿ ನಿಧನ: ಸಿಎಂ ಮಮತಾ ಬ್ಯಾನರ್ಜಿ ಸಂತಾಪ

By

Published : Feb 7, 2021, 5:23 PM IST

ವಿವಿಧ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಭಾರತದ ಟೆನ್ನಿಸ್​​ ದಂತಕಥೆ ಅಖ್ತರ್ ಅಲಿ ಇಂದು ಮುಂಜಾನೆ ನಿಧನರಾಗಿದ್ದಾರೆ.

Former tennis star Akhtar Ali passes away
ಟೆನಿಸ್ ದಂತಕಥೆ ಅಖ್ತರ್ ಅಲಿ ನಿಧನ

ಕೋಲ್ಕತ್ತಾ: ಭಾರತದ ಟೆನ್ನಿಸ್​​​ ದಂತಕಥೆ ಅಖ್ತರ್ ಅಲಿ ಇಂದು ಮುಂಜಾನೆ ಕೋಲ್ಕತ್ತಾದಲ್ಲಿ ನಿಧನರಾಗಿದ್ದಾರೆ.

ಅಖ್ತರ್ ಅಲಿ ಮನೆಗೆ ಅರುಪ್ ಬಿಸ್ವಾಸ್ ಭೇಟಿ

ವಿಜಯ್ ಅಮೃತಜ್, ಆನಂದ್ ಅಮೃತರಾಜ್, ರಮೇಶ್ ಕೃಷ್ಣನ್, ಲಿಯಾಂಡರ್ ಪೇಸ್ ಮತ್ತು ಸೋಮದೇವ್ ಅವರಂತಹ ಪ್ರಸಿದ್ಧ ಆಟಗಾರರ ಮೇಲೆ ಅಲಿ ಅವರ ಕೋಚಿಂಗ್ ಪ್ರಭಾವ ಬೀರಿದೆ.

ವಿವಿಧ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರನ್ನು ಕೆಲವು ದಿನಗಳವರೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. 81 ವರ್ಷದ ಅಲಿ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಓದಿ:ಬಲೂನ್ ಸ್ಫೋಟ: 6ಕ್ಕೂ ಹೆಚ್ಚು ಬಿಜೆಪಿ ಮುಖಂಡರಿಗೆ ಗಂಭೀರ ಗಾಯ

ಟೆನ್ನಿಸ್​​ ದಂತಕಥೆ ಅಲಿ ಸಾವಿನ ಬಗ್ಗೆ ಸಿಎಂ ಮಮತಾ ಬ್ಯಾನರ್ಜಿ ಸಂತಾಪ ವ್ಯಕ್ತಪಡಿಸಿದ್ದು, ಸಚಿವ ಅರುಪ್ ಬಿಸ್ವಾಸ್, ಅಖ್ತರ್ ಅಲಿ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.

ABOUT THE AUTHOR

...view details