ಕರ್ನಾಟಕ

karnataka

By

Published : May 9, 2020, 10:09 AM IST

ETV Bharat / bharat

ತಡರಾತ್ರಿ ಪೊಲೀಸ್​ - ನಕ್ಸಲರ ನಡುವೆ ಗುಂಡಿನ ಕಾಳಗ; ನಾಲ್ವರು ಮಾವೋಗಳ ಎನ್​ಕೌಂಟರ್​

ಮಧ್ಯರಾತ್ರಿ ಪೊಲೀಸರನ್ನು ಗುರಿಯಾಗಿಸಿಕೊಂಡು ನಡೆಸಿದ ನಕ್ಸಲರ ದಾಳಿಯಲ್ಲಿ ಓರ್ವ ಸಬ್​ ಇನ್ಸ್​​ಪೆಕ್ಟರ್​ ಪ್ರಾಣ ಕಳೆದುಕೊಂಡಿದ್ದು, ನಾಲ್ವರು ಮಾವೋವಾದಿಗಳು ಹತರಾಗಿದ್ದಾರೆ.

C'garh: 4 Naxals
C'garh: 4 Naxals

ರಾಜನಂದಗಾಂವ್​​ (ಛತ್ತೀಸ್​ಗಢ):ಮಧ್ಯರಾತ್ರಿ ನಕ್ಸಲರು - ಪೊಲೀಸರ ನಡುವೆ ನಡೆದ ಕಾರ್ಯಾಚರಣೆ ವೇಳೆ ನಾಲ್ವರು ಮಾವೋವಾದಿಗಳನ್ನು ಗುಂಡಿಕ್ಕಿ ಹತ್ಯೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಾರ್ಯಾಚರಣೆ ವೇಳೆ ಪೊಲೀಸ್​ ಸಬ್‌ಇನ್ಸ್​ಪೆಕ್ಟರ್​​ ಹುತಾತ್ಮರಾಗಿದ್ದು, ರಾಜನಂದಗಾವಂವ್​ ಹಾಗೂ ಮದನ್ವಾಡ್​ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ನಕ್ಸಲರು ತಡರಾತ್ರಿ ಪೊಲೀಸರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಲು ಮುಂದಾಗಿದ್ದಾರೆ. ಈ ವೇಳೆ, ಪೊಲೀಸರು ಪ್ರತಿ ದಾಳಿ ನಡೆಸಿದ್ದು, ಮದನ್ವಾಡ್​ ಪೊಲೀಸ್​ ಠಾಣೆ ಸಬ್​ ಇನ್ಸ್​​​​​ಪೆಕ್ಟರ್​​​ ಶ್ಯಾಮ್​​​ ಕಿಶೋರ್​ ಶರ್ಮಾ ಗುಂಡು ತಗುಲಿ ಪ್ರಾಣ ಕಳೆದುಕೊಂಡಿದ್ದಾರೆ.

ಎನ್​ಕೌಂಟರ್​ನಲ್ಲಿ ಸಾವನ್ನಪ್ಪಿರುವ ನಾಲ್ವರು ನಕ್ಸಲರ ಮೃತದೇಹ, AK-47ರೈಫಲ್​, 1 ಎಸ್​ಎಲ್​ಆರ್​ ಬಂದೂಕು ಹಾಗೂ 315 ಬೊರಿ ರೈಫಲ್​ ವಶಕ್ಕೆ ಪಡೆದುಕೊಳ್ಳಲಾಗಿದೆ.

ಈ ಹಿಂದೆ ಕೂಡ ಇದೇ ಪ್ರದೇಶದಲ್ಲಿ ನಾಲ್ವರು ಯೋಧರು ಕಣ್ಮರೆಯಾಗಿದ್ದು, ಇಲ್ಲಿಯವರೆಗೆ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ABOUT THE AUTHOR

...view details