ಕರ್ನಾಟಕ

karnataka

By

Published : Sep 20, 2020, 1:50 PM IST

Updated : Sep 20, 2020, 3:56 PM IST

ETV Bharat / bharat

ಮಾದಕವಸ್ತುಗಳ ಕಳ್ಳಸಾಗಣೆ: ಪಾಕ್​ ಯತ್ನ ವಿಫಲಗೊಳಿಸಿದ ಬಿಎಸ್​ಎಫ್​

ಜಮ್ಮು ವಿಭಾಗದ ಆರ್​ಎಸ್ ಪುರ ಸೆಕ್ಟರ್‌ನಲ್ಲಿ ಕಾರ್ಯಾಚರಣೆ ನಡೆಸಿದ ಬಿಎಸ್​ಎಫ್​ ಯೋಧರು ಪಾಕಿಸ್ತಾನದ ಆರ್ನಿಯಾದಿಂದ ಭಾರತಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕಳ್ಳಸಾಗಾಣೆಯ ಯತ್ನ ವಿಫಲಗೊಳಿಸಿದ ಬಿಎಸ್​ಎಫ್​
ಕಳ್ಳಸಾಗಾಣೆಯ ಯತ್ನ ವಿಫಲಗೊಳಿಸಿದ ಬಿಎಸ್​ಎಫ್​

ಆರ್​ ಎಸ್​ ಪುರ(ಜಮ್ಮು-ಕಾಶ್ಮೀರ):ಪಾಕಿಸ್ತಾನದಿಂದ ಭಾರತಕ್ಕೆ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಮಾದಕವಸ್ತುಗಳ ಕಳ್ಳಸಾಗಣೆ ಮಾಡುವ ಪ್ರಯತ್ನವನ್ನು ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್‌ಎಫ್) ವಿಫಲಗೊಳಿಸಿದೆ.

ಜಮ್ಮು ವಿಭಾಗದ ಅಂತಾರಾಷ್ಟ್ರೀಯ ಗಡಿ ಆರ್​ ಎಸ್ ಪುರ ಸೆಕ್ಟರ್‌ನಲ್ಲಿ ಘಟನೆ ನಡೆದಿದ್ದು, ಪಾಕಿಸ್ತಾನದ ಆರ್ನಿಯಾದಿಂದ ಭಾರತಕ್ಕೆ ಪೈಪ್​ಲೈನ್​ ಮೂಲಕ ಕಳ್ಳಸಾಗಣೆ ಮಾಡಲಾಗುತ್ತಿತ್ತು. ಈ ವೇಳೆ ರಾತ್ರಿ ಕಾರ್ಯಾಚರಣೆಯಲ್ಲಿದ್ದ ಯೋಧರು ಅಕ್ರಮ ಸಾಗಣೆಯ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ.

ಮಾದಕ ವಸ್ತುಗಳ ಕಳ್ಳಸಾಗಣೆಯ ಯತ್ನ ವಿಫಲಗೊಳಿಸಿದ ಬಿಎಸ್​ಎಫ್​

ಬಿಎಸ್ಎಫ್​ನ ಐಜಿ ಎನ್.ಎಸ್. ಜಮ್ವಾಲ್ ಈ ಕುರಿತು ಮಾತನಾಡಿದ್ದು, "ಬುದ್ವಾರ್ ಪೋಸ್ಟ್ ಬಳಿ ಪೈಪ್ ಮೂಲಕ ತಳ್ಳಲಾಗುತ್ತಿದ್ದ 62 ಪ್ಯಾಕೆಟ್ ಮಾದಕ ವಸ್ತುಗಳು, ಎರಡು ಪಿಸ್ತೂಲ್​ ಮತ್ತು ನಾಲ್ಕು ಮ್ಯಾಗಜೀನ್​ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ" ಎಂದು ಮಾಹಿತಿ ನೀಡಿದರು.

Last Updated : Sep 20, 2020, 3:56 PM IST

ABOUT THE AUTHOR

...view details