ಕರ್ನಾಟಕ

karnataka

ETV Bharat / bharat

ರಂಜಾನ್​ ಹಬ್ಬದಂದೇ ಪ್ರೇಮ ವಿವಾಹ...ಬೇಕರಿ ಬಾಯ್​ ಲವ್​ಸ್ಟೋರಿಗೆ ಮುಹೂರ್ತವಿಟ್ಟ ಕುಟುಂಬಸ್ಥರು!

ರಂಜಾನ್​ ಹಬ್ಬದಂದೇ ಪ್ರೇಮ ವಿವಾಹವಾದ ಯುವಕನ ಮೇಲೆ ಯುವತಿ ಕುಟುಂಬಸ್ಥರು ನಡು ರಸ್ತೆಯಲ್ಲೇ ಕೊಲೆಗೆ ಪ್ರಯತ್ನಿಸಿರುವ ಘಟನೆ ಸಂಚಲನ ಮೂಡಿಸಿದೆ.

By

Published : Jun 8, 2019, 4:14 PM IST

ರಂಜಾನ್​ ಹಬ್ಬ

ಹೈದರಾಬಾದ್​: ಕುಟುಂಬಸ್ಥರು ಎದುರಿಸಿ ರಂಜಾನ್​ ಹಬ್ಬದಂದೇ ಯುವತಿ ಪ್ರೇಮ ವಿವಾಹವಾಗಿದ್ದಳು. ಇದರಿಂದ ಬೇಸರಗೊಂಡಿದ್ದ ಯುವತಿ ಕುಟುಂಬ ನವದಂಪತಿ ಮೇಲೆ ಎಲ್ಲರೂ ನೋಡು, ನೋಡುತ್ತಿದ್ದಂತೆ ಚಾಕು ದಾಳಿ ನಡೆಸಿದ್ದಾರೆ.

ಬೇಕರಿ ಬಾಯ್​ ಲವ್​ಸ್ಟೋರಿಗೆ ಮುಹೂರ್ತವಿಟ್ಟ ಕುಟುಂಬಸ್ಥರು!

ಈ ಘಟನೆ ನಡೆದಿದ್ದು ಹೈದರಾಬಾದ್​ನಲ್ಲಿ. ಸಂಗಾರೆಡ್ಡಿ ನಿವಾಸಿ ಶೇಖ್​ ಇಂತಿಯಾಜ್​ (21) ನಾಂಪಲ್ಲಿಯ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಬೊರಬಂಡದಲ್ಲಿರುವ ಸಂಬಂಧಿ ಸಯ್ಯದ್​ ಅಲಿಯ ಮನೆಗೆ ಇಂತಿಯಾಜ್​ ಆಗಾಗ ಹೋಗಿ ಬರುತ್ತಿದ್ದ. ಅಲಿ ಹಾಗೂ ಅಲಿಯ ಮಗಳು ಫಾತಿಮಾ (19) ಪರಿಚಯವಾಗಿದ್ದಾಳೆ. ಇಬ್ಬರ ಪರಿಚಯ ಪ್ರೇಮವಾಗಿ ಬದಲಾಗಿದ್ದು, ಈ ವಿಷಯ ಯುವತಿ ಮನೆಯವರಿಗೂ ಗೊತ್ತಾಗಿದೆ. ಆದ್ರೆ ಇವರ ವಿವಾಹಕ್ಕೆ ಫಾತಿಮಾ ಕುಟುಬಂಸ್ಥರು ಒಪ್ಪಿಗೆ ನೀಡಲಿಲ್ಲ. ಹೀಗಾಗಿ ರಂಜಾನ್​ ಹಬ್ಬದಂದು ಫಾತಿಮಾ ಮತ್ತು ಇಂತಿಯಾಜ್​ ದರ್ಗಾವೊಂದಕ್ಕೆ ತೆರಳಿ ಮದುವೆ ಮಾಡಿಕೊಂಡರು.

ಇನ್ನು ಯುವತಿ ಫಾತಿಮಾ ನಮ್ಮ ಕುಟುಂಬಸ್ಥರಿಂದ ಜೀವ ಬೆದರಿಕೆಯಿದೆ ಎಂದು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದರು. ಶುಕ್ರವಾರದಂದು ಪೊಲೀಸರು ಎರಡು ಕುಟುಂಬಗಳನ್ನು ಠಾಣೆಗೆ ಕರೆಸಿ ರಾಜಿಗೆ ಒಪ್ಪಿಸಿದ್ದರು. ಬಳಿಕ ಪೊಲೀಸ್​ ಠಾಣೆಯಿಂದ ಎರಡು ಕುಟುಂಬಗಳು ವಾಪಾಸ್​ ತೆರಳಿದ್ದವು. ಆದ್ರೆ, ಯುವತಿ ಕುಟುಂಬಸ್ಥರು ಇಂತಿಯಾಜ್​​ ಮೇಲೆ ಚಾಕುವಿನಿಂದ ದಾಳಿ ನಡೆಸಿದರು. ನಡು ರಸ್ತೆಯಲ್ಲೇ ಎಲ್ಲರೂ ನೋಡ ನೋಡುತ್ತಿದಂತೆ ಇಂತಿಯಾಜ್​ ಮನಸೋ ಇಚ್ಛೆ ಚಾಕುವಿನಿಂದ ಚುಚ್ಚಿ ಹಲ್ಲೆ ನಡೆಸಿದರು. ಈ ವೇಳೆ ಫಾತಿಮಾಳ ಕೈಬೆರಳು ಸಹಾ ಕಟ್​ ಆಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯುವಕನ ಸ್ಥಿತಿ ಚಿಂತಾಜನಕವಾಗಿದೆ.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

ABOUT THE AUTHOR

...view details