ಶ್ರೀನಗರ(ಜಮ್ಮು ಕಾಶ್ಮೀರ):ಹವಾಮಾನ ಬದಲಾವಣೆ (Climate Change) ಈಗಿನ ವಿಜ್ಞಾನಿಗಳ ಕಳಕಳಿ. ಪ್ರಸ್ತುತ ಚಳಿಗಾಲ ಆರಂಭವಾಗಿದ್ದು, ದಕ್ಷಿಣ ಭಾರತದ ಹಲವೆಡೆ ವರುಣ ಧಾರಾಕಾರವಾಗಿ ಸುರಿಯುತ್ತಿದ್ದಾನೆ. ಈ ಬೆನ್ನಲ್ಲೇ ಉತ್ತರದಲ್ಲಿ ಚಳಿಯ ನರ್ತನವೂ ಮುಂದುವರೆದಿದೆ.
ಶುಕ್ರವಾರವಷ್ಟೇ ಜಮ್ಮು ಕಾಶ್ಮೀರದ (Jammu Kashmir) ಬೇಸಿಗೆ ಕಾಲದ ರಾಜಧಾನಿಯಾದ ಶ್ರೀನಗರದಲ್ಲಿ 0.7 ಡಿಗ್ರಿ ಸೆಲ್ಸಿಯಸ್ ಇದ್ದ ತಾಪಮಾನ, ಇಂದು 0.1 ಡಿಗ್ರಿ ಸೆಲ್ಸಿಯಸ್ಗೆ ಇಳಿಕೆಯಾಗಿದೆ. ಇದು ತಾಪಮಾನ ವಿಚಾರದಲ್ಲಿ ಶ್ರೀನಗರಕ್ಕೆ ದಾಖಲೆಯ ವಿಷಯವಾಗಿದೆ.
ಇದಕ್ಕಿಂತ ತೀರಾ ಚಳಿಯಾಗಿ ಮಾರ್ಪಟ್ಟಿರುವ ಪ್ರದೇಶವೆಂದರೆ ಲಡಾಖ್ ಕೇಂದ್ರಾಡಳಿತ ಪ್ರದೇಶವಾದ ಡ್ರಾಸ್ನಲ್ಲಿ. ಇಲ್ಲಿರೋದು ಮೈನಸ್ 12.7 ಡಿಗ್ರಿ ಸೆಲ್ಸಿಯಸ್ ತಾಪಮಾನ. ಅಂದಹಾಗೆ ಇಲ್ಲಿ ಭೀಭತ್ಸ ಚಳಿ ಸಾಮಾನ್ಯ.
ಜಮ್ಮು ಕಾಶ್ಮೀರದ ಪಹಲ್ಗಾಮ್ ಮತ್ತು ಗುಲ್ಮಾರ್ಗ್ನಲ್ಲಿ ಈಗ ಸದ್ಯಕ್ಕೆ ದಾಖಲಾಗಿರುವ ತಾಪಮಾನ ಕ್ರಮವಾಗಿ ಮೈನಸ್ 3.5 ಡಿಗ್ರಿ ಸೆಲ್ಸಿಯಸ್ ಮತ್ತು ಮೈನಸ್ 0.2 ಡಿಗ್ರಿ ಸೆಲ್ಸಿಯಸ್ನಷ್ಟಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.