ಚೆನ್ನೈ, ತಮಿಳುನಾಡು:ಸುಮಾರು 85 ಕೋಟಿ ರೂಪಾಯಿ ಮೌಲ್ಯದ 2.38 ಲಕ್ಷ ಟನ್ ಕಲ್ಲಿದ್ದಲು ಉತ್ತರ ಚೆನ್ನೈ ಉಷ್ಣ ವಿದ್ಯುತ್ ಸ್ಥಾವರದಿಂದ ಕಾಣೆಯಾಗಿದೆ ಎಂದು ತಮಿಳುನಾಡು ವಿದ್ಯುತ್ ಖಾತೆ ಸಚಿವ ವಿ.ಸೆಂಥಿಲ್ ಬಾಲಾಜಿ ಆರೋಪಿಸಿದ್ದಾರೆ.
ಶುಕ್ರವಾರ ಅಧಿಕಾರಿಗಳೊಂದಿಗೆ ಎನ್ನೋರ್ನಲ್ಲಿರುವ ಉತ್ತರ ಚೆನ್ನೈ ಉಷ್ಣ ವಿದ್ಯುತ್ ಸ್ಥಾವರಕ್ಕೆ (NCTPS) ಭೇಟಿ ನೀಡಿ ಪರಿಶೀಲನೆ ನಡೆಸಿದ ವಿ.ಸೆಂಥಿಲ್ ಬಾಲಾಜಿ ಈ ರೀತಿಯ ಗಂಭೀರ ಆರೋಪ ಮಾಡಿದ್ದಾರೆ.
ಕಲ್ಲಿದ್ದಲು ದಾಸ್ತಾನು ಪರಿಶೀಲನೆ ವೇಳೆ ಸುಮಾರು 85 ಕೋಟಿ ಮೌಲ್ಯದ 2.38 ಲಕ್ಷ ಟನ್ ಕಲ್ಲಿದ್ದಲು ಕಲ್ಲಿದ್ದಲು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ ಎಂದು ವರದಿಗಾರರೊಬ್ಬರ ಪ್ರಶ್ನೆಗೆ ಉತ್ತರ ನೀಡಿದ್ದಾರೆ.