ಕರ್ನಾಟಕ

karnataka

By

Published : Aug 21, 2021, 3:01 AM IST

Updated : Aug 21, 2021, 3:25 AM IST

ETV Bharat / bharat

2.38 ಲಕ್ಷ ಟನ್ ಕಲ್ಲಿದ್ದಲು ಉಷ್ಣವಿದ್ಯುತ್ ಸ್ಥಾವರದಿಂದ ನಾಪತ್ತೆ: ಸಚಿವ ಸೆಂಥಿಲ್ ಬಾಲಾಜಿ

ಉತ್ತರ ಚೆನ್ನೈ ಉಷ್ಣ ವಿದ್ಯುತ್ ಸ್ಥಾವರ ಪರಿಶೀಲನೆ ವೇಳೆ 85 ಕೋಟಿ ಮೌಲ್ಯದ 2.38 ಲಕ್ಷ ಟನ್ ಕಲ್ಲಿದ್ದಲು ಕಲ್ಲಿದ್ದಲು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ ಎಂದು ತಮಿಳುನಾಡು ಸಚಿವರೊಬ್ಬರು ಮಾಹಿತಿ ನೀಡಿದ್ದಾರೆ.

2.38 lakh tonnes coal found missing, alleges TN electricity minister!
2.38 ಲಕ್ಷ ಟನ್ ಕಲ್ಲಿದ್ದಲು ಉಷ್ಣವಿದ್ಯುತ್ ಸ್ಥಾವರದಿಂದ ನಾಪತ್ತೆ: ತಮಿಳುನಾಡು ಸಚಿವನ ಆರೋಪ

ಚೆನ್ನೈ, ತಮಿಳುನಾಡು:ಸುಮಾರು 85 ಕೋಟಿ ರೂಪಾಯಿ ಮೌಲ್ಯದ 2.38 ಲಕ್ಷ ಟನ್ ಕಲ್ಲಿದ್ದಲು ಉತ್ತರ ಚೆನ್ನೈ ಉಷ್ಣ ವಿದ್ಯುತ್ ಸ್ಥಾವರದಿಂದ ಕಾಣೆಯಾಗಿದೆ ಎಂದು ತಮಿಳುನಾಡು ವಿದ್ಯುತ್ ಖಾತೆ ಸಚಿವ ವಿ.ಸೆಂಥಿಲ್ ಬಾಲಾಜಿ ಆರೋಪಿಸಿದ್ದಾರೆ.

ಶುಕ್ರವಾರ ಅಧಿಕಾರಿಗಳೊಂದಿಗೆ ಎನ್ನೋರ್​ನಲ್ಲಿರುವ ಉತ್ತರ ಚೆನ್ನೈ ಉಷ್ಣ ವಿದ್ಯುತ್ ಸ್ಥಾವರಕ್ಕೆ (NCTPS) ಭೇಟಿ ನೀಡಿ ಪರಿಶೀಲನೆ ನಡೆಸಿದ ವಿ.ಸೆಂಥಿಲ್ ಬಾಲಾಜಿ ಈ ರೀತಿಯ ಗಂಭೀರ ಆರೋಪ ಮಾಡಿದ್ದಾರೆ.

ಕಲ್ಲಿದ್ದಲು ದಾಸ್ತಾನು ಪರಿಶೀಲನೆ ವೇಳೆ ಸುಮಾರು 85 ಕೋಟಿ ಮೌಲ್ಯದ 2.38 ಲಕ್ಷ ಟನ್ ಕಲ್ಲಿದ್ದಲು ಕಲ್ಲಿದ್ದಲು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ ಎಂದು ವರದಿಗಾರರೊಬ್ಬರ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಈ ವರ್ಷದ ಮಾರ್ಚ್​ ಅಂತ್ಯದವರೆಗಿನ ಕಲ್ಲಿದ್ದಲು ದಾಸ್ತಾನು ಪರಿಶೀಲನೆ ನಡೆಸಲಾಗಿದೆ. ಕಲ್ಲಿದ್ದಲು ಕಾಣೆಯಾದ ಬಗ್ಗೆ ವಿವರವಾದ ತನಿಖೆ ನಡೆಯಬೇಕು. ಇದೇ ರೀತಿಯಲ್ಲಿ ಟುಟಿಕಾರಿನ್, ಮೆಟ್ಟೂರ್​ (ಸೇಲಂ) ಉಷ್ಣ ವಿದ್ಯುತ್ ಸ್ಥಾವರಗಳನ್ನು ಪರಿಶೀಲನೆ ನಡೆಸಲು ನಾವು ನಿರ್ಧರಿಸಿದ್ದೇವೆ ಎಂದು ಸೆಂಥಿಲ್ ಮಾಹಿತಿ ಸ್ಪಷ್ಟನೆ ನೀಡಿದ್ದಾರೆ.

ಸಚಿವ ಸೆಂಥಿಲ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ವಿದ್ಯುತ್ ಇಲಾಖೆಯ ಮಾಜಿ ಸಚಿವ ತಂಗಮಣಿ, ಕಲ್ಲಿದ್ದಲು ನಾಪತ್ತೆಯಾಗಿರುವ ವಿಚಾರವನ್ನು ಮೊದಲೇ ಗುರ್ತಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ:ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಪ್ರಿಯತಮೆಯ ಕೊಲ್ಲಲು ಯತ್ನ

Last Updated : Aug 21, 2021, 3:25 AM IST

ABOUT THE AUTHOR

...view details