ETV Bharat / state

ಅತಿವೇಗ ತಡೆಗೆ ಹೊಸ ನಿಯಮ ಜಾರಿ: ಮೊದಲ ದಿನವೇ 33 ಚಾಲಕರ ವಿರುದ್ಧ ಎಫ್‌ಐಆರ್ - Speed Limit Violation Case

author img

By ETV Bharat Karnataka Team

Published : Aug 2, 2024, 7:12 PM IST

ಆಗಸ್ಟ್​ 1ರಿಂದ ಜಾರಿಯಾಗಿರುವ ಹೊಸ ನಿಯಮದನುಸಾರ 33 ವಾಹನ ಚಾಲಕರ ವಿರುದ್ಧ ಸಂಚಾರಿ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ.

BENGALURU
ಸಂಗ್ರಹ ಚಿತ್ರ (ETV Bharat)
ಟ್ರಾಫಿಕ್ ಕಮೀಷನರ್ ಎಂ ಎನ್ ಅನುಚೇತ್ (ETV Bharat)

ಬೆಂಗಳೂರು: ರಾಜ್ಯದಲ್ಲಿ ಅತಿವೇಗದ ವಾಹನ ಚಾಲನೆಗೆ ಕಡಿವಾಣ ಹಾಕುವ ಉದ್ದೇಶದಿಂದ ಜಾರಿಯಾಗಿರುವ ನೂತನ ನಿಯಮದ ಅನುಸಾರ ಮೊದಲ ದಿನ 33 ಎಫ್ಐಆರ್‌ಗಳು ದಾಖಲಾಗಿವೆ. ಅಪಘಾತ ಪ್ರಕರಣಗಳನ್ನು ನಿಯಂತ್ರಿಸುವ ಉದ್ದೇಶದಿಂದ ರಾಜ್ಯದಲ್ಲಿ ಗಂಟೆಗೆ 130 ಕಿ.ಮೀ ಗಿಂತಲೂ ವೇಗವಾಗಿ ಸಂಚರಿಸುವ ಎಲ್ಲಾ ವಿಧದ ವಾಹನಗಳ ಚಾಲಕ/ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ನಿಯಮ ಅನುಷ್ಠಾನಗೊಳಿಸಲಾಗಿತ್ತು.

ಈ ಕುರಿತು 'ಈಟಿವಿ ಭಾರತ್‌'ಗೆ ಪ್ರತಿಕ್ರಿಯಿಸಿದ ರಾಜ್ಯ ರಸ್ತೆ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್, ''ವೇಗಮಿತಿ ಉಲ್ಲಂಘಿಸಿದ 33 ವಾಹನಗಳ ಚಾಲಕರ ವಿರುದ್ಧ ಮೊದಲ ದಿನ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಪೈಕಿ ಬೆಂಗಳೂರು-ಮೈಸೂರು ರಸ್ತೆ ಮಾರ್ಗದಲ್ಲಿನ ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಎಎನ್‌ಪಿಆರ್ (Automatic Number Plate Recognition) ಕ್ಯಾಮರಾಗಳಿಲ್ಲ. ಆದರೂ ಸಹ ಸ್ಪೀಡ್ ಗನ್ ಮೂಲಕ ಪೊಲೀಸ್ ಸಿಬ್ಬಂದಿಗಳೇ ಕಾರ್ಯಾಚರಣೆ ನಡೆಸಿದ್ದಾರೆ, ಹೆಚ್ಚು ಪ್ರಕರಣಗಳು ದಾಖಲಾಗಿಲ್ಲ'' ಎಂದು ಮಾಹಿತಿ ನೀಡಿದರು.

ಹೈ ಬೀಮ್ ಲೈಟ್- ಮುಂದುವರೆದ ಪೊಲೀಸ್ ಕಾರ್ಯಾಚರಣೆ: ಅನಗತ್ಯವಾಗಿ ಹೈ ಬೀಮ್ ಎಲ್ಇಡಿ ಹೆಡ್ ಲೈಟ್‌ ಬಳಸುವ ವಾಹನಗಳ ವಿರುದ್ಧವೂ ಸಹ ರಾಜ್ಯಾದ್ಯಂತ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ. ರಸ್ತೆ ಸುರಕ್ಷತಾ ಅಧಿನಿಯಮ ಉಲ್ಲಂಘಿಸಿ ಅನಾವಶ್ಯಕ ಹೈ ಬೀಮ್ ಲೈಟ್ ಬಳಸುವವರಿಗೆ ಬಿಸಿ ಮುಟ್ಟಿಸುತ್ತಿರುವ ಪೊಲೀಸರು‌ ಜುಲೈ ತಿಂಗಳೊಂದರಲ್ಲೇ ರಾಜ್ಯಾದ್ಯಂತ ಒಟ್ಟು 28,620 ಪ್ರಕರಣ ದಾಖಲಿಸಿದ್ದಾರೆ. ಆ ಪೈಕಿ ಬೆಂಗಳೂರು (9046) ಹಾಗೂ ಮಂಗಳೂರು (1365) ಪ್ರಕರಣಗಳನ್ನ ದಾಖಲಿಸಿಕೊಳ್ಳಲಾಗಿದೆ‌. ಮಂಡ್ಯ (21) ಹಾಗೂ ಮೈಸೂರಿನಲ್ಲಿ (22) ಕನಿಷ್ಠ ಪ್ರಕರಣಗಳು ವರದಿಯಾಗಿವೆ‌ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಚಾಲಕರೇ ಎಚ್ಚರ: ಇಂದಿನಿಂದ 130 ಕೀ.ಮೀ.ಗಿಂತ ವೇಗವಾಗಿ ಚಲಾಯಿಸಿದ್ರೆ ಎಫ್ಐಆರ್, ಲೈಸೆನ್ಸ್ ರದ್ದು - FIR Against Speed Driving

ಟ್ರಾಫಿಕ್ ಕಮೀಷನರ್ ಎಂ ಎನ್ ಅನುಚೇತ್ (ETV Bharat)

ಬೆಂಗಳೂರು: ರಾಜ್ಯದಲ್ಲಿ ಅತಿವೇಗದ ವಾಹನ ಚಾಲನೆಗೆ ಕಡಿವಾಣ ಹಾಕುವ ಉದ್ದೇಶದಿಂದ ಜಾರಿಯಾಗಿರುವ ನೂತನ ನಿಯಮದ ಅನುಸಾರ ಮೊದಲ ದಿನ 33 ಎಫ್ಐಆರ್‌ಗಳು ದಾಖಲಾಗಿವೆ. ಅಪಘಾತ ಪ್ರಕರಣಗಳನ್ನು ನಿಯಂತ್ರಿಸುವ ಉದ್ದೇಶದಿಂದ ರಾಜ್ಯದಲ್ಲಿ ಗಂಟೆಗೆ 130 ಕಿ.ಮೀ ಗಿಂತಲೂ ವೇಗವಾಗಿ ಸಂಚರಿಸುವ ಎಲ್ಲಾ ವಿಧದ ವಾಹನಗಳ ಚಾಲಕ/ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ನಿಯಮ ಅನುಷ್ಠಾನಗೊಳಿಸಲಾಗಿತ್ತು.

ಈ ಕುರಿತು 'ಈಟಿವಿ ಭಾರತ್‌'ಗೆ ಪ್ರತಿಕ್ರಿಯಿಸಿದ ರಾಜ್ಯ ರಸ್ತೆ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್, ''ವೇಗಮಿತಿ ಉಲ್ಲಂಘಿಸಿದ 33 ವಾಹನಗಳ ಚಾಲಕರ ವಿರುದ್ಧ ಮೊದಲ ದಿನ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಪೈಕಿ ಬೆಂಗಳೂರು-ಮೈಸೂರು ರಸ್ತೆ ಮಾರ್ಗದಲ್ಲಿನ ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಎಎನ್‌ಪಿಆರ್ (Automatic Number Plate Recognition) ಕ್ಯಾಮರಾಗಳಿಲ್ಲ. ಆದರೂ ಸಹ ಸ್ಪೀಡ್ ಗನ್ ಮೂಲಕ ಪೊಲೀಸ್ ಸಿಬ್ಬಂದಿಗಳೇ ಕಾರ್ಯಾಚರಣೆ ನಡೆಸಿದ್ದಾರೆ, ಹೆಚ್ಚು ಪ್ರಕರಣಗಳು ದಾಖಲಾಗಿಲ್ಲ'' ಎಂದು ಮಾಹಿತಿ ನೀಡಿದರು.

ಹೈ ಬೀಮ್ ಲೈಟ್- ಮುಂದುವರೆದ ಪೊಲೀಸ್ ಕಾರ್ಯಾಚರಣೆ: ಅನಗತ್ಯವಾಗಿ ಹೈ ಬೀಮ್ ಎಲ್ಇಡಿ ಹೆಡ್ ಲೈಟ್‌ ಬಳಸುವ ವಾಹನಗಳ ವಿರುದ್ಧವೂ ಸಹ ರಾಜ್ಯಾದ್ಯಂತ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ. ರಸ್ತೆ ಸುರಕ್ಷತಾ ಅಧಿನಿಯಮ ಉಲ್ಲಂಘಿಸಿ ಅನಾವಶ್ಯಕ ಹೈ ಬೀಮ್ ಲೈಟ್ ಬಳಸುವವರಿಗೆ ಬಿಸಿ ಮುಟ್ಟಿಸುತ್ತಿರುವ ಪೊಲೀಸರು‌ ಜುಲೈ ತಿಂಗಳೊಂದರಲ್ಲೇ ರಾಜ್ಯಾದ್ಯಂತ ಒಟ್ಟು 28,620 ಪ್ರಕರಣ ದಾಖಲಿಸಿದ್ದಾರೆ. ಆ ಪೈಕಿ ಬೆಂಗಳೂರು (9046) ಹಾಗೂ ಮಂಗಳೂರು (1365) ಪ್ರಕರಣಗಳನ್ನ ದಾಖಲಿಸಿಕೊಳ್ಳಲಾಗಿದೆ‌. ಮಂಡ್ಯ (21) ಹಾಗೂ ಮೈಸೂರಿನಲ್ಲಿ (22) ಕನಿಷ್ಠ ಪ್ರಕರಣಗಳು ವರದಿಯಾಗಿವೆ‌ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಚಾಲಕರೇ ಎಚ್ಚರ: ಇಂದಿನಿಂದ 130 ಕೀ.ಮೀ.ಗಿಂತ ವೇಗವಾಗಿ ಚಲಾಯಿಸಿದ್ರೆ ಎಫ್ಐಆರ್, ಲೈಸೆನ್ಸ್ ರದ್ದು - FIR Against Speed Driving

ETV Bharat Logo

Copyright © 2024 Ushodaya Enterprises Pvt. Ltd., All Rights Reserved.