ETV Bharat / bharat

ಸಣ್ಣ ರೈತರೇ ಭಾರತದ ಆಹಾರ ಭದ್ರತೆಯ ಬೆನ್ನೆಲುಬು; ಪ್ರಧಾನಿ ಮೋದಿ - Backbone Of Indias Food Security

author img

By ETV Bharat Karnataka Team

Published : Aug 3, 2024, 5:35 PM IST

ಭಾರತದಲ್ಲಿನ ಶೇ 90ರಷ್ಟು ಕುಟುಂಬಗಳು ಸಣ್ಣ ಭೂಮಿಯನ್ನು ಹೊಂದಿವೆ. ಈ ಸಣ್ಣ ರೈತರೇ ಭಾರತದ ಆಹಾರ ಭದ್ರತೆಯ ಬೆನ್ನೆಲುಬಾಗಿದ್ದಾರೆ.

pm-narendra-modi-farmers-food-security-international-conference-of-agricultural-economists
ಸಾಂದರ್ಭಿಕ ಚಿತ್ರ (ETV Bharat)

ನವದೆಹಲಿ: ಜಾಗತಿಕ ಪೌಷ್ಠಿಕಾಂಶದ ಬಿಕ್ಕಟ್ಟನ್ನು ಹೊಡೆದೋಡಿಸುವಲ್ಲಿ ಭಾರತದ ಅನೇಕ ಆಹಾರಗಳು ಪ್ರಮುಖ ಪಾತ್ರವನ್ನು ಹೊಂದಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದರು. 32ನೇ ಇಂಟರ್ನ್ಯಾಷನಲ್​ ಕಾನ್ಫರೆನ್ಸ್​​ ಆಫ್​ ಅಗ್ರಿಕಲ್ಚರ್​ ಎಕನಾಮಿಸ್ಟ್​​ (ಐಸಿಎಇ)ಯಲ್ಲಿ ಮಾತನಾಡಿದ ಅವರು, ಜಗತ್ತಿನ ಸೂಪರ್​ ಫುಡ್​ಗಳ ಬುಟ್ಟಿಯಲ್ಲಿ ಭಾರತದ ಪಾಲನ್ನು ಹಂಚಿಕೊಳ್ಳಲು ಬಯಸುತ್ತದೆ ಎಂದರು.

ಜಗತ್ತಿನಲ್ಲಿಯೇ ಅತಿ ಹೆಚ್ಚು ಸಿರಿಧಾನ್ಯ(ಮಿಲ್ಲೆಟ್​) ಉತ್ಪಾದಿಸುವ ದೇಶ ಭಾರತವಾಗಿದೆ. ಜಗತ್ತು ಇದನ್ನು ಸೂಪರ್​ ಫುಡ್​ ಎಂದು ಕರೆಯುತ್ತದೆ. ಇದನ್ನು ನಾವು ಶ್ರೀಅನ್ನ ಎಂದು ಗುರುತಿಸಿದ್ದೇವೆ.

ಸಣ್ಣ ಹಿಡುವಳಿಗಾರರೇ ಬೆನ್ನೆಲುಬು: ಭಾರತದಲ್ಲಿನ ಶೇ 90ರಷ್ಟು ಕುಟುಂಬಗಳು ಸಣ್ಣ ಭೂಮಿಯನ್ನು ಹೊಂದಿದೆ. ಈ ಸಣ್ಣ ರೈತರೇ ಭಾರತದ ಆಹಾರ ಭದ್ರತೆಯ ಬೆನ್ನೆಲುಬಾಗಿದ್ದಾರೆ. ಏಷ್ಯಾದ ಅನೇಕ ಅಭಿವೃದ್ಧಿಶೀಲ ದೇಶಗಳಲ್ಲಿ ಇದೇ ರೀತಿ ಪರಿಸ್ಥಿತಿ ಇದೆ. ಈ ಹಿನ್ನೆಲೆ ಭಾರತದ ಮಾದರಿಗಳು ಅನೇಕ ದೇಶಗಳಿಗೆ ಪ್ರಯೋಜನವಾಗಲಿವೆ. ಭಾರತದ ಆಹಾರ ಭದ್ರತೆ ಜಗತ್ತಿನ ಕಾಳಜಿ ವಿಷಯವಾಗಿದ್ದ ಕಾಲವೊಂದಿತ್ತು. ಆದರೆ ಇದೀಗ ಭಾರತ ಜಾಗತಿಕ ಆಹಾರ ಮತ್ತು ಪೌಷ್ಠಿಕಾಂಶ ಭದ್ರತೆಯ ಪರಿಹಾರವನ್ನು ಒದಗಿಸುವಲ್ಲಿ ನಿರಂತರವಾಗಿದೆ ಎಂದರು.

ಆಯುರ್ವೇದ ವಿಜ್ಞಾನ ಕುರಿತು ಒತ್ತಿ ಹೇಳಿದ ಪ್ರಧಾನಿ, ಆಯುರ್ವೇದ ವಿಜ್ಞಾನವೂ ನಮ್ಮ ಆಹಾರದ ಜೊತೆಗಿನ ವೈದ್ಯಕೀಯ ಪರಿಣಾಮಗಳ ಬಳಕೆ ಮಾಡಿಕೊಂಡಿ ಪ್ರಯೋಜನಕಾರಿ ಮಾಹಿತಿಯನ್ನು ನೀಡುತ್ತಿದೆ. ಅವರ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಯು ಭಾರತದ ಸಾಮಾಜಿಕ ಜೀವನದ ಭಾಗವಾಗಿದೆ. ಪ್ರಾಚೀನ ಭಾರತೀಯರು ಕೃಷಿ ಮತ್ತು ಆಹಾರದ ಅನುಭವ ಮತ್ತು ನಂಬಿಕೆಯನ್ನು ಹೊಂದಿದ್ದರು. ಭಾರತದಲ್ಲಿ ಕೃಷಿ ಸಂಪ್ರದಾಯವೂ ವಿಜ್ಞಾನ ಮತ್ತು ತರ್ಕಕ್ಕೆ ಪ್ರಾಧಾನ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ಯಥೇಚ್ಛ ಆಹಾರ ಉತ್ಪಾದನೆ:ಕಳೆದ ಬಾರಿ ಐಸಿಎಇ ಸಮಾವೇಶದಲ್ಲಿ ಭಾರತ ಆಗಷ್ಟೇ ಸ್ವಾತಂತ್ರ್ಯವನ್ನು ಪಡೆದುಕೊಂಡಿತು. ಆ ಸಮಯದಲ್ಲಿ ಭಾರತದ ಆಹಾರ ಭದ್ರತೆ ಮತ್ತು ಕೃಷಿಗೆ ಸಂಬಂಧಿಸಿದಂತೆ ಸಾಕಷ್ಟು ಸವಾಲುಗಳಿದ್ದರು. ಇದೀಗ ಭಾರತದ ದೇಹದಲ್ಲಿ ಹೆಚ್ಚುವರಿ ಆಹಾರ ಇದೆ. ಭಾರತದಲ್ಲಿ ಹಾಲು, ಬೇಳೆ ಮತ್ತು ಮಸಾಲೆಗಳನ್ನು ಯಥೇಚ್ಛವಾಗಿ ಉತ್ಪಾದನೆ ಮಾಡಲಾಗುತ್ತಿದೆ.

ಕೃಷಿಯಲ್ಲಿ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿದ್ದು, ಬೆಳೆಗಳ ಸಮೀಕ್ಷೆಗೆ ಡಿಜಿಟಲ್​ ಸಾರ್ವಜನಿಕ ಮೂಲಸೌಕರ್ಯವನ್ನು ನಿರ್ಮಾಣ ಮಾಡಲಾಗಿದೆ. ನಮ್ಮ ರೈತರು ನೈಜ ಸಮಯದಲ್ಲಿ ಮಾಹಿತಿ ಪಡೆಯುತ್ತಿದ್ದಾರೆ. ಇದರಿಂದ ಅವರು ದತ್ತಾಂಶ ಆಧಾರಿತ ನಿರ್ಧಾರ ನಡೆಸಲು ಸಾಧ್ಯವಾಗುತ್ತಿದೆ. ಈ ಕ್ರಮವೂ ಕೋಟ್ಯಾಂತರ ರೈತರಿಗೆ ಪ್ರಯೋಜನಕಾರಿಯಾಗಿದ್ದು, ಆರ್ಥಿಕತೆ ಯೋಗಕ್ಷೇಮವನ್ನು ವೃದ್ಧಿಸಿದೆ.

ಈ ವರ್ಷ ಸುಸ್ಥಿರ ಕೃಷಿ ಆಹಾರ ವ್ಯವಸ್ಥೆಯೆಡೆಗೆ ಪರಿವರ್ತನೆ ಎಂಬ ಧ್ಯೇಯದಲ್ಲಿ ಸಮಾವೇಶ ನಡೆಸಲಾಗಿದೆ. ಇದರ ಹಿಂದಿನ ಉದ್ದೇಶ ಹವಾಮಾನ ಬದಲಾವಣೆ, ನೈಸರ್ಗಿಕ ಸಂಪನ್ಮೂಲಗಳ ಇಳಿಕೆ, ಏರಿಕೆಯಾಗುತ್ತಿರುವ ಉತ್ಪಾದನೆ ವೆಚ್ಚ ಮತ್ತು ಘರ್ಷಣೆಗಳಂತಹ ಜಾಗತಿಕ ಸವಾಲುಗಳನ್ನು ಎದುರಿಸಿ ಸುಸ್ಥಿರ ಕೃಷಿಗೆ ಒತ್ತು ನೀಡುವುದಾಗಿದೆ. ಈ ಸಮಾವೇಶದಲ್ಲಿ 75ದೇಶಗಳ 1000 ಪ್ರತಿನಿಧಿಗಳು ಭಾಗಿಯಾಗಿದ್ದಾರೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರುಸ್ಥಾಪಿಸಲು ಒತ್ತಾಯಿಸಿ ವಿಪಕ್ಷಗಳ I.N.D.I.A ಕೂಟ ಪ್ರತಿಭಟನೆ

ನವದೆಹಲಿ: ಜಾಗತಿಕ ಪೌಷ್ಠಿಕಾಂಶದ ಬಿಕ್ಕಟ್ಟನ್ನು ಹೊಡೆದೋಡಿಸುವಲ್ಲಿ ಭಾರತದ ಅನೇಕ ಆಹಾರಗಳು ಪ್ರಮುಖ ಪಾತ್ರವನ್ನು ಹೊಂದಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದರು. 32ನೇ ಇಂಟರ್ನ್ಯಾಷನಲ್​ ಕಾನ್ಫರೆನ್ಸ್​​ ಆಫ್​ ಅಗ್ರಿಕಲ್ಚರ್​ ಎಕನಾಮಿಸ್ಟ್​​ (ಐಸಿಎಇ)ಯಲ್ಲಿ ಮಾತನಾಡಿದ ಅವರು, ಜಗತ್ತಿನ ಸೂಪರ್​ ಫುಡ್​ಗಳ ಬುಟ್ಟಿಯಲ್ಲಿ ಭಾರತದ ಪಾಲನ್ನು ಹಂಚಿಕೊಳ್ಳಲು ಬಯಸುತ್ತದೆ ಎಂದರು.

ಜಗತ್ತಿನಲ್ಲಿಯೇ ಅತಿ ಹೆಚ್ಚು ಸಿರಿಧಾನ್ಯ(ಮಿಲ್ಲೆಟ್​) ಉತ್ಪಾದಿಸುವ ದೇಶ ಭಾರತವಾಗಿದೆ. ಜಗತ್ತು ಇದನ್ನು ಸೂಪರ್​ ಫುಡ್​ ಎಂದು ಕರೆಯುತ್ತದೆ. ಇದನ್ನು ನಾವು ಶ್ರೀಅನ್ನ ಎಂದು ಗುರುತಿಸಿದ್ದೇವೆ.

ಸಣ್ಣ ಹಿಡುವಳಿಗಾರರೇ ಬೆನ್ನೆಲುಬು: ಭಾರತದಲ್ಲಿನ ಶೇ 90ರಷ್ಟು ಕುಟುಂಬಗಳು ಸಣ್ಣ ಭೂಮಿಯನ್ನು ಹೊಂದಿದೆ. ಈ ಸಣ್ಣ ರೈತರೇ ಭಾರತದ ಆಹಾರ ಭದ್ರತೆಯ ಬೆನ್ನೆಲುಬಾಗಿದ್ದಾರೆ. ಏಷ್ಯಾದ ಅನೇಕ ಅಭಿವೃದ್ಧಿಶೀಲ ದೇಶಗಳಲ್ಲಿ ಇದೇ ರೀತಿ ಪರಿಸ್ಥಿತಿ ಇದೆ. ಈ ಹಿನ್ನೆಲೆ ಭಾರತದ ಮಾದರಿಗಳು ಅನೇಕ ದೇಶಗಳಿಗೆ ಪ್ರಯೋಜನವಾಗಲಿವೆ. ಭಾರತದ ಆಹಾರ ಭದ್ರತೆ ಜಗತ್ತಿನ ಕಾಳಜಿ ವಿಷಯವಾಗಿದ್ದ ಕಾಲವೊಂದಿತ್ತು. ಆದರೆ ಇದೀಗ ಭಾರತ ಜಾಗತಿಕ ಆಹಾರ ಮತ್ತು ಪೌಷ್ಠಿಕಾಂಶ ಭದ್ರತೆಯ ಪರಿಹಾರವನ್ನು ಒದಗಿಸುವಲ್ಲಿ ನಿರಂತರವಾಗಿದೆ ಎಂದರು.

ಆಯುರ್ವೇದ ವಿಜ್ಞಾನ ಕುರಿತು ಒತ್ತಿ ಹೇಳಿದ ಪ್ರಧಾನಿ, ಆಯುರ್ವೇದ ವಿಜ್ಞಾನವೂ ನಮ್ಮ ಆಹಾರದ ಜೊತೆಗಿನ ವೈದ್ಯಕೀಯ ಪರಿಣಾಮಗಳ ಬಳಕೆ ಮಾಡಿಕೊಂಡಿ ಪ್ರಯೋಜನಕಾರಿ ಮಾಹಿತಿಯನ್ನು ನೀಡುತ್ತಿದೆ. ಅವರ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಯು ಭಾರತದ ಸಾಮಾಜಿಕ ಜೀವನದ ಭಾಗವಾಗಿದೆ. ಪ್ರಾಚೀನ ಭಾರತೀಯರು ಕೃಷಿ ಮತ್ತು ಆಹಾರದ ಅನುಭವ ಮತ್ತು ನಂಬಿಕೆಯನ್ನು ಹೊಂದಿದ್ದರು. ಭಾರತದಲ್ಲಿ ಕೃಷಿ ಸಂಪ್ರದಾಯವೂ ವಿಜ್ಞಾನ ಮತ್ತು ತರ್ಕಕ್ಕೆ ಪ್ರಾಧಾನ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ಯಥೇಚ್ಛ ಆಹಾರ ಉತ್ಪಾದನೆ:ಕಳೆದ ಬಾರಿ ಐಸಿಎಇ ಸಮಾವೇಶದಲ್ಲಿ ಭಾರತ ಆಗಷ್ಟೇ ಸ್ವಾತಂತ್ರ್ಯವನ್ನು ಪಡೆದುಕೊಂಡಿತು. ಆ ಸಮಯದಲ್ಲಿ ಭಾರತದ ಆಹಾರ ಭದ್ರತೆ ಮತ್ತು ಕೃಷಿಗೆ ಸಂಬಂಧಿಸಿದಂತೆ ಸಾಕಷ್ಟು ಸವಾಲುಗಳಿದ್ದರು. ಇದೀಗ ಭಾರತದ ದೇಹದಲ್ಲಿ ಹೆಚ್ಚುವರಿ ಆಹಾರ ಇದೆ. ಭಾರತದಲ್ಲಿ ಹಾಲು, ಬೇಳೆ ಮತ್ತು ಮಸಾಲೆಗಳನ್ನು ಯಥೇಚ್ಛವಾಗಿ ಉತ್ಪಾದನೆ ಮಾಡಲಾಗುತ್ತಿದೆ.

ಕೃಷಿಯಲ್ಲಿ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿದ್ದು, ಬೆಳೆಗಳ ಸಮೀಕ್ಷೆಗೆ ಡಿಜಿಟಲ್​ ಸಾರ್ವಜನಿಕ ಮೂಲಸೌಕರ್ಯವನ್ನು ನಿರ್ಮಾಣ ಮಾಡಲಾಗಿದೆ. ನಮ್ಮ ರೈತರು ನೈಜ ಸಮಯದಲ್ಲಿ ಮಾಹಿತಿ ಪಡೆಯುತ್ತಿದ್ದಾರೆ. ಇದರಿಂದ ಅವರು ದತ್ತಾಂಶ ಆಧಾರಿತ ನಿರ್ಧಾರ ನಡೆಸಲು ಸಾಧ್ಯವಾಗುತ್ತಿದೆ. ಈ ಕ್ರಮವೂ ಕೋಟ್ಯಾಂತರ ರೈತರಿಗೆ ಪ್ರಯೋಜನಕಾರಿಯಾಗಿದ್ದು, ಆರ್ಥಿಕತೆ ಯೋಗಕ್ಷೇಮವನ್ನು ವೃದ್ಧಿಸಿದೆ.

ಈ ವರ್ಷ ಸುಸ್ಥಿರ ಕೃಷಿ ಆಹಾರ ವ್ಯವಸ್ಥೆಯೆಡೆಗೆ ಪರಿವರ್ತನೆ ಎಂಬ ಧ್ಯೇಯದಲ್ಲಿ ಸಮಾವೇಶ ನಡೆಸಲಾಗಿದೆ. ಇದರ ಹಿಂದಿನ ಉದ್ದೇಶ ಹವಾಮಾನ ಬದಲಾವಣೆ, ನೈಸರ್ಗಿಕ ಸಂಪನ್ಮೂಲಗಳ ಇಳಿಕೆ, ಏರಿಕೆಯಾಗುತ್ತಿರುವ ಉತ್ಪಾದನೆ ವೆಚ್ಚ ಮತ್ತು ಘರ್ಷಣೆಗಳಂತಹ ಜಾಗತಿಕ ಸವಾಲುಗಳನ್ನು ಎದುರಿಸಿ ಸುಸ್ಥಿರ ಕೃಷಿಗೆ ಒತ್ತು ನೀಡುವುದಾಗಿದೆ. ಈ ಸಮಾವೇಶದಲ್ಲಿ 75ದೇಶಗಳ 1000 ಪ್ರತಿನಿಧಿಗಳು ಭಾಗಿಯಾಗಿದ್ದಾರೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರುಸ್ಥಾಪಿಸಲು ಒತ್ತಾಯಿಸಿ ವಿಪಕ್ಷಗಳ I.N.D.I.A ಕೂಟ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.