ಹೈದರಾಬಾದ್: ತೆಲಂಗಾಣದ ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿಯನ್ನು ಪುನರುಚ್ಚರಿಸಿದ ಸಿಎಂ ರೇವಂತ್ ರೆಡ್ಡಿ, ತೆಲಂಗಾಣ ರೈಸಿಂಗ್ ಅನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದರು.
ದೇಶದಲ್ಲಿ ಹೈದರಾಬಾದ್ ವೇಗವಾಗಿ ಬೆಳೆಯುತ್ತಿರುವ ನಗರಿ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ವರ್ಷದೊಳಗೆ ದೇಶ, ವಿದೇಶದಿಂದ ಹೆಚ್ಚಿನ ಹೂಡಿಕೆಯನ್ನು ರಾಜ್ಯ ಆಕರ್ಷಿಸಿದೆ ಎಂದು ಹೇಳಿದ್ದಾರೆ.
ಮಾದಾಪುರದಲ್ಲಿನ ಎಚ್ಸಿಎಲ್ ಟೆಕ್ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತೆಲಂಗಾಣ ರೈಸಿಂಗ್ ಮೂಲಕ ರಾಜ್ಯದ ಆರ್ಥಿಕತೆಯನ್ನು ವೃದ್ಧಿಸುವ ನಮ್ಮ ಯೋಜನೆಯ ಕುರಿತು ಅನೇಕರಿಗೆ ನಂಬಿಕೆ ಇರಲಿಲ್ಲ. ಆದರೆ ಇಡೀ ಜಗತ್ತೇ ಇಂದು ಇದಕ್ಕೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದರು.
ಇಂದು ಇವಿ ಅಳವಡಿಕೆಯಲ್ಲಿ ಹೈದರಾಬಾದ್ ನಂಬರ್ ಒನ್ ಆಗಿದೆ. ಗ್ರೀನ್ ಎನರ್ಜಿ, ಲೈಫ್ ಸೈನ್ಸ್, ಬಯೋಟೆಕ್ನಾಲಜಿ, ಕೌಶಲ್ಯ ಅಭಿವೃದ್ಧಿ, ಉತ್ಪಾದನೆ ಮತ್ತು ಕೃಷಿ ಅಭಿವೃದ್ಧಿಯಲ್ಲಿ ನಗರ ಮುಂಚೂಣಿಯಲ್ಲಿದೆ ಎಂದು ಸಿಎಂ ವಿವರಿಸಿದರು.
ತೆಲಂಗಾಣವನ್ನು ಒಂದು ಟ್ರಿಲಿಯನ್ ಡಾಲರ್ ಜಿಡಿಪಿ ರಾಜ್ಯವಾಗಿಸುವ ನಮ್ಮ ಯೋಜನೆಯ ಕುರಿತು ಅನೇಕರಿಗೆ ಭಿನ್ನ ಅಭಿಪ್ರಾಯವಿದೆ. ಕೆಲವರು ಇದನ್ನು ದೊಡ್ಡ ಕನಸು, ಸಾಧ್ಯವಿಲ್ಲ ಎನ್ನುತ್ತಾರೆ. ಎರಡು ದಾವೋಸ್ ಪ್ರವಾಸದಲ್ಲಿ 41,000 ಕೋಟಿ ಮತ್ತು 1.78 ಲಕ್ಷ ಕೋಟಿ ರೂ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಈ ಗುರಿಯ ಮೌಲ್ಯ ಹೆಚ್ಚಾಗಿದೆ ಎಂದು ಹೇಳಿದರು.
ಕಳೆದ ಕೆಲವು ದಿನಗಳ ಹಿಂದೆ ಹೊಸ ತಂತ್ರಜ್ಞಾನ ಮತ್ತು ಅವಿಷ್ಕಾರದ ಅಮೆಗೆನ್ ಕೇಂದ್ರಕ್ಕೆ ಚಾಲನೆ ನೀಡಲಾಗಿತ್ತು. ಇದು ದೇಶದ ಅತಿದೊಡ್ಡ ಲೈಫ್ ಸೈನ್ಸ್ ಕಂಪನಿಯಾಗಿದ್ದು, ವಿಶ್ವದ ಮಹತ್ವದ ಸಮ್ಮೇಳನಗಳು ಇಲ್ಲಿ ನಡೆಯುತ್ತದೆ ಎಂದು ರೆಡ್ಡಿ ತಿಳಿಸಿದರು. (ಐಎಎನ್ಎಸ್)
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಮುಂದುವರಿದ ಭಾರೀ ಮಳೆ, ಮಂಜು: ಯೆಲ್ಲೋ ಅಲರ್ಟ್ ಘೋಷಣೆ
ಇದನ್ನೂ ಓದಿ: ಹಿಂದಿ ಅಸ್ಮಿತೆಯಿಂದ 25ಕ್ಕೂ ಹೆಚ್ಚು ಪ್ರಾಚೀನ ಮಾತೃಭಾಷೆಗಳು ಕಣ್ಮರೆ': ಸಿಎಂ ಸ್ಟಾಲಿನ್ ಆರೋಪ