ETV Bharat / bharat

ಮಹಿಳಾ ಸಹೋದ್ಯೋಗಿ​ ಮೇಲೆ ಗುಂಡಿಕ್ಕಿ ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿದ ಕಾನ್ಸ್​ಟೇಬಲ್​ - CONSTABLE FIRED FEMALE COLLEAGUE

ಇಬ್ಬರು ಕಾನ್ಸ್​​ಟೇಬಲ್​ಗಳು ಪ್ರೊಬೆಷನರಿ ಅವಧಿ ಸೇವೆ ಸಲ್ಲಿಸುತ್ತಿದ್ದರು. ಒಂದೇ ಕಟ್ಟಡದಲ್ಲಿ ಪ್ರತ್ಯೇಕ ರೂಂನಲ್ಲಿ ಅವರು ವಾಸಿಸುತ್ತಿದ್ದರು.

constable fired at a female colleague before attempting to die by suicide
ಮಹಿಳಾ ಕಾನ್ಸ್​ಟೇಬಲ್​ ಪೂನಂ, ಕಾನ್​​ಟೇಬಲ್​ ಸಿಯಾರಾಮ್​ (ETV Bharat)
author img

By ETV Bharat Karnataka Team

Published : Dec 10, 2024, 1:23 PM IST

ಜೈಪುರ್​​: ಕಾನ್ಸ್​​ಟೇಬಲ್​ವೊಬ್ಬರು ತಮ್ಮ ಮಹಿಳಾ ಸಹೋದ್ಯೋಗಿ​ಯನ್ನು ಗುಂಡಿಕ್ಕಿ ಕೊಂದು ಬಳಿಕ ತಾವು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಜಸ್ಥಾನದಲ್ಲಿ ವರದಿಯಾಗಿದೆ. ಸದ್ಯ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಇಬ್ಬರನ್ನು ಚಿತ್ತೋರ್​ಗಢದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಬೇಗುನ್​ ಉಪ ಪೊಲೀಸ್ ವರಿಷ್ಠಾಧಿಕಾರಿ ಅಂಜಲಿ ಸಿಂಗ್ ಮತ್ತು ಸ್ಟೇಷನ್ ಹೌಸ್ ಆಫೀಸರ್ ರವೀಂದ್ರ ಸಿಂಗ್ ತಿಳಿಸಿದ್ದಾರೆ.

ಬೇಗುನ್​ ಪೊಲೀಸ್​ ಠಾಣೆಯಿಂದ 100 ಮೀಟರ್​ ದೂರದಲ್ಲಿರುವ ನಿವಾಸದಲ್ಲಿ ಈ ಘಟನೆ ನಡೆದಿದೆ. ಘಟನೆ ಸಂಬಂಧ ಮಾಹಿತಿ ನೀಡಿದ ಚುತ್ತೋರ್​ಗಢ ಎಸ್​ಪಿ ಸುಧೀರ್​ ಚೌದರಿ, ಅಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದು, ಈ ಘಟನೆ ಹಿಂದಿನ ಉದ್ದೇಶ ಕುರಿತು ತನಿಖೆಗೆ ಮುಂದಾಗಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ವೈಯಕ್ತಿಕ ಸಮಸ್ಯೆಗಳ ಕಾರಣದಿಂದ ಈ ದಾಳಿ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ತಿಳಿಸಿದ್ದಾರೆ.

ಇಬ್ಬರು ಕಾನ್ಸ್​​ಟೇಬಲ್​ಗಳು ಪ್ರೊಬೆಷನರಿ ಅವಧಿ ಸೇವೆ ಸಲ್ಲಿಸುತ್ತಿದ್ದರು. ಒಂದೇ ಕಟ್ಟಡದಲ್ಲಿ ಪ್ರತ್ಯೇಕ ರೂಂನಲ್ಲಿ ಅವರು ವಾಸಿಸುತ್ತಿದ್ದರು. ಘಟನೆ ನಡೆದ ದಿನ ಕಾನ್ಸ್​ಟೇಬಲ್​ ಸಿಯಾರಾಮ್​, ನಿತ್ಯದ ರೋಲ್​ ಕಾಲ್​ ಮುಗಿಸಿ ಬಂದೂಕಿನ ಜೊತೆ ರೂಮ್​ಗೆ ಮರಳಿದ ಆತ ಮೂನಂಗಾಗಿ ಕಾದಿದ್ದಾರೆ.

ಪೂನಂ ಕೋಣೆ ಪ್ರವೇಶಿಸುತ್ತಿದ್ದಂತೆ ಆತ ಬಂದೂಕಿನಿಂದ ಎದೆಗೆ ಗುಂಡು ಹಾರಿಸಿದ್ದಾರೆ. ಬಳಿಕ ಅದೇ ಬಂದಕಿನಿಂದ ಸ್ವಯಂ ಗುಂಡು ಹಾರಿಸಿಕೊಂಡಿದ್ದಾರೆ. ಭಾರೀ ಶಬ್ಧ ಹಿನ್ನೆಲೆ ತಕ್ಷಣಕ್ಕೆ ಸುತ್ತಮುತ್ತಲಿನ ಜನ ಸ್ಥಳಕ್ಕೆ ಆಗಮಿಸಿ, ಗಾಯಗೊಂಡಿದ್ದ ಇಬ್ಬರನ್ನು ಬೇಗನ್​ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಅವರನ್ನು ಚಿತ್ತೋರ್​ಗಢಗೆ ಸ್ಥಳಾಂತರಿಸಲಾಯಿತು. ಅವರಿಬ್ಬರ ಸ್ಥಿತಿ ಚಿಂತಾಜನಜವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ ಎಂದು ಎಸ್​ಪಿ ಮಾಹಿತಿ ನೀಡಿದರು.

ಬೆಗನ್​ ಉಪ ಜಿಲ್ಲಾ ಆಸ್ಪತ್ರೆ ವೈದ್ಯರಾದ ದಿನೇಶ್​ ಧಕರ್​ ಮಾತನಾಡಿ, ಮಹಿಳಾ ಕಾನ್ಸ್​ಟೇಬಲ್​ ಎದೆಯನ್ನು ಬುಲೆಟ್​ ಸೀಳಿದ್ದು, ಅವರ ಪರಿಸ್ಥಿತಿ ತೀವ್ರ ಚಿಂತಾಜನಕವಾಗಿದೆ ಎಂದರು.

ಜಿಲ್ಲಾಧಿಕಾರಿ ಅಲೋಕ್ ರಂಜನ್ ಕೂಡ ಆಸ್ಪತ್ರೆಗೆ ಆಗಮಿಸಿ ಪ್ರಕರಣದ ಕುರಿತು ಮಾಹಿತಿ ಪಡೆದರು.

ಇದನ್ನೂ ಓದಿ: ಭಾರತದಲ್ಲಿ ಪ್ರತಿವರ್ಷ 41 ಲಕ್ಷ ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆ, ತಮಿಳುನಾಡಿನಲ್ಲಿ ಅತ್ಯಧಿಕ

ಜೈಪುರ್​​: ಕಾನ್ಸ್​​ಟೇಬಲ್​ವೊಬ್ಬರು ತಮ್ಮ ಮಹಿಳಾ ಸಹೋದ್ಯೋಗಿ​ಯನ್ನು ಗುಂಡಿಕ್ಕಿ ಕೊಂದು ಬಳಿಕ ತಾವು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಜಸ್ಥಾನದಲ್ಲಿ ವರದಿಯಾಗಿದೆ. ಸದ್ಯ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಇಬ್ಬರನ್ನು ಚಿತ್ತೋರ್​ಗಢದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಬೇಗುನ್​ ಉಪ ಪೊಲೀಸ್ ವರಿಷ್ಠಾಧಿಕಾರಿ ಅಂಜಲಿ ಸಿಂಗ್ ಮತ್ತು ಸ್ಟೇಷನ್ ಹೌಸ್ ಆಫೀಸರ್ ರವೀಂದ್ರ ಸಿಂಗ್ ತಿಳಿಸಿದ್ದಾರೆ.

ಬೇಗುನ್​ ಪೊಲೀಸ್​ ಠಾಣೆಯಿಂದ 100 ಮೀಟರ್​ ದೂರದಲ್ಲಿರುವ ನಿವಾಸದಲ್ಲಿ ಈ ಘಟನೆ ನಡೆದಿದೆ. ಘಟನೆ ಸಂಬಂಧ ಮಾಹಿತಿ ನೀಡಿದ ಚುತ್ತೋರ್​ಗಢ ಎಸ್​ಪಿ ಸುಧೀರ್​ ಚೌದರಿ, ಅಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದು, ಈ ಘಟನೆ ಹಿಂದಿನ ಉದ್ದೇಶ ಕುರಿತು ತನಿಖೆಗೆ ಮುಂದಾಗಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ವೈಯಕ್ತಿಕ ಸಮಸ್ಯೆಗಳ ಕಾರಣದಿಂದ ಈ ದಾಳಿ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ತಿಳಿಸಿದ್ದಾರೆ.

ಇಬ್ಬರು ಕಾನ್ಸ್​​ಟೇಬಲ್​ಗಳು ಪ್ರೊಬೆಷನರಿ ಅವಧಿ ಸೇವೆ ಸಲ್ಲಿಸುತ್ತಿದ್ದರು. ಒಂದೇ ಕಟ್ಟಡದಲ್ಲಿ ಪ್ರತ್ಯೇಕ ರೂಂನಲ್ಲಿ ಅವರು ವಾಸಿಸುತ್ತಿದ್ದರು. ಘಟನೆ ನಡೆದ ದಿನ ಕಾನ್ಸ್​ಟೇಬಲ್​ ಸಿಯಾರಾಮ್​, ನಿತ್ಯದ ರೋಲ್​ ಕಾಲ್​ ಮುಗಿಸಿ ಬಂದೂಕಿನ ಜೊತೆ ರೂಮ್​ಗೆ ಮರಳಿದ ಆತ ಮೂನಂಗಾಗಿ ಕಾದಿದ್ದಾರೆ.

ಪೂನಂ ಕೋಣೆ ಪ್ರವೇಶಿಸುತ್ತಿದ್ದಂತೆ ಆತ ಬಂದೂಕಿನಿಂದ ಎದೆಗೆ ಗುಂಡು ಹಾರಿಸಿದ್ದಾರೆ. ಬಳಿಕ ಅದೇ ಬಂದಕಿನಿಂದ ಸ್ವಯಂ ಗುಂಡು ಹಾರಿಸಿಕೊಂಡಿದ್ದಾರೆ. ಭಾರೀ ಶಬ್ಧ ಹಿನ್ನೆಲೆ ತಕ್ಷಣಕ್ಕೆ ಸುತ್ತಮುತ್ತಲಿನ ಜನ ಸ್ಥಳಕ್ಕೆ ಆಗಮಿಸಿ, ಗಾಯಗೊಂಡಿದ್ದ ಇಬ್ಬರನ್ನು ಬೇಗನ್​ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಅವರನ್ನು ಚಿತ್ತೋರ್​ಗಢಗೆ ಸ್ಥಳಾಂತರಿಸಲಾಯಿತು. ಅವರಿಬ್ಬರ ಸ್ಥಿತಿ ಚಿಂತಾಜನಜವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ ಎಂದು ಎಸ್​ಪಿ ಮಾಹಿತಿ ನೀಡಿದರು.

ಬೆಗನ್​ ಉಪ ಜಿಲ್ಲಾ ಆಸ್ಪತ್ರೆ ವೈದ್ಯರಾದ ದಿನೇಶ್​ ಧಕರ್​ ಮಾತನಾಡಿ, ಮಹಿಳಾ ಕಾನ್ಸ್​ಟೇಬಲ್​ ಎದೆಯನ್ನು ಬುಲೆಟ್​ ಸೀಳಿದ್ದು, ಅವರ ಪರಿಸ್ಥಿತಿ ತೀವ್ರ ಚಿಂತಾಜನಕವಾಗಿದೆ ಎಂದರು.

ಜಿಲ್ಲಾಧಿಕಾರಿ ಅಲೋಕ್ ರಂಜನ್ ಕೂಡ ಆಸ್ಪತ್ರೆಗೆ ಆಗಮಿಸಿ ಪ್ರಕರಣದ ಕುರಿತು ಮಾಹಿತಿ ಪಡೆದರು.

ಇದನ್ನೂ ಓದಿ: ಭಾರತದಲ್ಲಿ ಪ್ರತಿವರ್ಷ 41 ಲಕ್ಷ ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆ, ತಮಿಳುನಾಡಿನಲ್ಲಿ ಅತ್ಯಧಿಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.