ETV Bharat / bharat

ಮಹಾಕುಂಭ ಮೇಳದಿಂದ 3 ಲಕ್ಷ ಕೋಟಿ ರೂ. ಆದಾಯ ; ಉತ್ತರ ಪ್ರದೇಶಕ್ಕೆ ಆರ್ಥಿಕ ಬಲ - MAHA KUMBH 2025

ಮಹಾಕುಂಭ ಮೇಳದಲ್ಲಿ ಸರ್ಕಾರದ ನಿರೀಕ್ಷೆಗೆ ಮೀರಿ ದೇಶ-ವಿದೇಶಿ ಭಕ್ತರು ಭಾಗಿಯಾಗಿದ್ದು, ರಾಜ್ಯದ ಆರ್ಥಿಕತೆಗೂ ಗಣನೀಯ ಪ್ರಮಾಣದ ಕೊಡುಗೆಯನ್ನು ನೀಡಿದೆ.

45-day Maha Kumbh generates over Rs 3 lakh crore, boosts state's economy
ಮಹಾಕುಂಭ ಮೇಳ (ETV Bharat)
author img

By ETV Bharat Karnataka Team

Published : Feb 27, 2025, 12:47 PM IST

ನವದೆಹಲಿ : ಸಂಕ್ರಾಂತಿ ಮುನ್ನಾ ದಿನದಿಂದ ಆರಂಭವಾದ 45 ದಿನಗಳ ಕಾಲ ಸಾಗಿದ ಮಹಾ ಕುಂಭಮೇಳ ಮಹಾಶಿವರಾತ್ರಿಯಂದು ಮುಕ್ತಾಯಗೊಂಡಿದೆ. ಅಷ್ಟೇ ಅಲ್ಲದೇ ಉತ್ತರ ಪ್ರದೇಶದ 1 ಟ್ರಿಲಿಯನ್​ ಆರ್ಥಿಕತೆ ಗುರಿಗೆ ಕೂಡ ಇದು ಸಹಾಯ ಮಾಡಿದ್ದು, ಮಹಾ ಕುಂಭಮೇಳವು 3 ಲಕ್ಷ ಕೋಟಿ ರೂಪಾಯಿ ವಹಿವಾಟಿನ ತೆರಿಗೆಯು ರಾಜ್ಯದ ಆರ್ಥಿಕತೆಗೆ ಬಲ ತಂದಿದೆ.

ಜನವರಿ 13ರಿಂದ ಫೆ. 26ರ ವರೆಗೆ ಜರುಗಿದ ಮಹಾಕುಂಭ ಮೇಳದಲ್ಲಿ 66.21 ಕೋಟಿ ಭಕ್ತರು ಪ್ರಯಾಗ್​ರಾಜ್​ನ ತ್ರಿವೇಣಿ ಸಂಗಮನದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ಉದ್ಯಮ ತಜ್ಞರ ಪ್ರಕಾರ, ಜಗತ್ತಿನ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮದಲ್ಲಿನ ಸರಕು ಮತ್ತು ಸೇವೆಯ ಮೂಲಕ 3 ಲಕ್ಷ ಕೋಟಿ ಉದ್ಯಮ ಚಟುವಟಿಕೆ ನಡೆದಿದೆ ಎಂದಿದ್ದಾರೆ.

ನಿರೀಕ್ಷೆಗೆ ಮೀರಿದ ವಹಿವಾಟು, ಭಕ್ತರು : ಮಹಾ ಕುಂಭಮೇಳ ಆರಂಭಕ್ಕೆ ಮೊದಲ 40 ಕೋಟಿ ಜನರು ಆಗಮನ ಮತ್ತು 2 ಲಕ್ಷ ಕೋಟಿ ಮೌಲ್ಯದ ಉದ್ಯಮದ ವಹಿವಾಟಿನ ಕುರಿತು ಅಂದಾಜಿಸಲಾಗಿತ್ತು. ಆದರೆ, ದೇಶ ಮತ್ತು ವಿದೇಶಗಳಿಂದ ಕಂಡುಬಂದ ಅಭೂತಪೂರ್ವ ಬೆಂಬಲದಿಂದ 66 ಕೋಟಿ ಜನರು ಈ ಧಾರ್ಮಿಕ ಮೇಳದಲ್ಲಿ ಭಾಗಿಯಾಗಿದ್ದು, ಇದು 3 ಲಕ್ಷ ಕೋಟಿಗೂ ಹೆಚ್ಚಿನ ವಹಿವಾಟಿಗೆ ಕಾರಣವಾಯಿತು ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಮತ್ತು ಬಿಜೆಪಿ ಸಂಸದ ಪ್ರವೀಣ್​ ಖಂಡೇಲ್ವಾಲ್​ ತಿಳಿಸಿದರು.

ಮಹಾ ಕುಂಭ ಮೇಳದಿಂದ ವಿಮಾನ ದರವು ಕೂಡ ಹೆಚ್ಚಳಗೊಂಡಿದ್ದು, ಮಾರ್ಚ್​ ತ್ರೈಮಾಸಿಕದಲ್ಲಿ ಹಾಗೂ ವಾರದ ನಡುವಿನ ಸೀಸನ್​ ಹೊರತಾದ ಸಮಯದಲ್ಲಿ ಇದು ಸ್ಥಿರವಾಗಿರಲಿದೆ.

ದೊಡ್ಡ ಪ್ರಮಾಣದ ಆರ್ಥಿಕ ಚಟುವಟಿಕೆಗೆ ಸಾಕ್ಷಿ : ಅತಿಥ್ಯ, ವಸತಿ, ಆಹಾರ ಮತ್ತು ಪಾನೀಯ ವಲಯ, ಸಾರಿಗೆ ಮತ್ತು ಲಾಜಿಸ್ಟಿಕ್​, ಧಾರ್ಮಿಕ ವಸ್ತುಗಳು, ಪೂಜೆ ಮತ್ತು ಕರಕುಶಲ, ಜವಳಿ ಮತ್ತಿತರ ಗ್ರಾಹಕರ ಸರಕುಗಳು ಸೇರಿದಂತೆ ಹಲವು ಉದ್ಯಮ ವಲಯಗಳಲ್ಲಿ ದೊಡ್ಡ ಪ್ರಮಾಣದ ಆರ್ಥಿಕ ಚಟುವಟಿಕೆಗಳು ಕಂಡು ಬಂದಿವೆ.

ಈ ಆರ್ಥಿಕ ಚಟುವಟಿಕೆ ಕೇವಲ ಪ್ರಯಾಗ್​ರಾಜ್​ನಲ್ಲಿ ಮಾತ್ರವಲ್ಲದೇ, ಸುತ್ತಮುತ್ತ 100-150 ಕಿ.ಮೀ. ವ್ಯಾಪ್ತಿಯ ಉದ್ಯಮಗಳಲ್ಲಿ ಗಮನಾರ್ಹ ಏರಿಕೆ ಕಂಡಿದ್ದು, ಇದು ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸಿದೆ.

ಪ್ರಯಾಗ್​ರಾಜ್​ನ ಮೂಲ ಸೌಕರ್ಯಕ್ಕಾಗಿ ಸರ್ಕಾರ ₹7,500 ಕೋಟಿಯನ್ನು ವ್ಯಯಿಸಿತ್ತು. ಇದರ ಮೂಲಕ 14 ಫ್ಲೈಓವರ್​. 6 ಅಂಡರ್​ಪಾಸ್​, 200ಕ್ಕೂ ಹೆಚ್ಚು ರಸ್ತೆ ಅಗಲೀಕರಣ, ಹೊಸ ಕಾರಿಡಾರ್​, ರೈಲ್ವೆ ನಿಲ್ದಾಣದ ವಿಸ್ತರಣೆ ಮತ್ತು ಆಧುನಿಕ ವಿಮಾನ ನಿಲ್ದಾಣದ ಟರ್ಮಿನಲ್​ ನಿರ್ಮಾಣ ಮಾಡಲಾಗಿದೆ. ಇದರ ಜೊತೆ ಹೆಚ್ಚುವರಿಯಾಗಿ 1,500 ಕೋಟಿ ರೂಪಾಯಿಯನ್ನು ಮಹಾ ಕುಂಭ ಮೇಳದ ಸಿದ್ಧತೆಗೆ ವಿನಿಯೋಗಿಸಲಾಗಿತ್ತು. (ಐಎಎನ್​ಎಸ್​)

ಇದನ್ನೂ ಓದಿ: ಮಹಾ ಕುಂಭಮೇಳದ ಕೊನೆಯ ದಿನ 1 ಕೋಟಿಗೂ ಹೆಚ್ಚು ಜನರಿಂದ ಪುಣ್ಯಸ್ನಾನ; ಮಹಾಶಿವರಾತ್ರಿಯಂದು ಭಕ್ತಿಭಾವದ 'ಸಂಗಮ'

ಇದನ್ನೂ ಓದಿ: ಕಾಶಿಯಲ್ಲಿ ಶಿವ - ಪಾರ್ವತಿಗೆ ಮದುವೆ; ಮಹಾಶಿವರಾತ್ರಿಯಂದು 9 ಲಕ್ಷ ಭಕ್ತರು ಭೇಟಿ

ನವದೆಹಲಿ : ಸಂಕ್ರಾಂತಿ ಮುನ್ನಾ ದಿನದಿಂದ ಆರಂಭವಾದ 45 ದಿನಗಳ ಕಾಲ ಸಾಗಿದ ಮಹಾ ಕುಂಭಮೇಳ ಮಹಾಶಿವರಾತ್ರಿಯಂದು ಮುಕ್ತಾಯಗೊಂಡಿದೆ. ಅಷ್ಟೇ ಅಲ್ಲದೇ ಉತ್ತರ ಪ್ರದೇಶದ 1 ಟ್ರಿಲಿಯನ್​ ಆರ್ಥಿಕತೆ ಗುರಿಗೆ ಕೂಡ ಇದು ಸಹಾಯ ಮಾಡಿದ್ದು, ಮಹಾ ಕುಂಭಮೇಳವು 3 ಲಕ್ಷ ಕೋಟಿ ರೂಪಾಯಿ ವಹಿವಾಟಿನ ತೆರಿಗೆಯು ರಾಜ್ಯದ ಆರ್ಥಿಕತೆಗೆ ಬಲ ತಂದಿದೆ.

ಜನವರಿ 13ರಿಂದ ಫೆ. 26ರ ವರೆಗೆ ಜರುಗಿದ ಮಹಾಕುಂಭ ಮೇಳದಲ್ಲಿ 66.21 ಕೋಟಿ ಭಕ್ತರು ಪ್ರಯಾಗ್​ರಾಜ್​ನ ತ್ರಿವೇಣಿ ಸಂಗಮನದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ಉದ್ಯಮ ತಜ್ಞರ ಪ್ರಕಾರ, ಜಗತ್ತಿನ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮದಲ್ಲಿನ ಸರಕು ಮತ್ತು ಸೇವೆಯ ಮೂಲಕ 3 ಲಕ್ಷ ಕೋಟಿ ಉದ್ಯಮ ಚಟುವಟಿಕೆ ನಡೆದಿದೆ ಎಂದಿದ್ದಾರೆ.

ನಿರೀಕ್ಷೆಗೆ ಮೀರಿದ ವಹಿವಾಟು, ಭಕ್ತರು : ಮಹಾ ಕುಂಭಮೇಳ ಆರಂಭಕ್ಕೆ ಮೊದಲ 40 ಕೋಟಿ ಜನರು ಆಗಮನ ಮತ್ತು 2 ಲಕ್ಷ ಕೋಟಿ ಮೌಲ್ಯದ ಉದ್ಯಮದ ವಹಿವಾಟಿನ ಕುರಿತು ಅಂದಾಜಿಸಲಾಗಿತ್ತು. ಆದರೆ, ದೇಶ ಮತ್ತು ವಿದೇಶಗಳಿಂದ ಕಂಡುಬಂದ ಅಭೂತಪೂರ್ವ ಬೆಂಬಲದಿಂದ 66 ಕೋಟಿ ಜನರು ಈ ಧಾರ್ಮಿಕ ಮೇಳದಲ್ಲಿ ಭಾಗಿಯಾಗಿದ್ದು, ಇದು 3 ಲಕ್ಷ ಕೋಟಿಗೂ ಹೆಚ್ಚಿನ ವಹಿವಾಟಿಗೆ ಕಾರಣವಾಯಿತು ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಮತ್ತು ಬಿಜೆಪಿ ಸಂಸದ ಪ್ರವೀಣ್​ ಖಂಡೇಲ್ವಾಲ್​ ತಿಳಿಸಿದರು.

ಮಹಾ ಕುಂಭ ಮೇಳದಿಂದ ವಿಮಾನ ದರವು ಕೂಡ ಹೆಚ್ಚಳಗೊಂಡಿದ್ದು, ಮಾರ್ಚ್​ ತ್ರೈಮಾಸಿಕದಲ್ಲಿ ಹಾಗೂ ವಾರದ ನಡುವಿನ ಸೀಸನ್​ ಹೊರತಾದ ಸಮಯದಲ್ಲಿ ಇದು ಸ್ಥಿರವಾಗಿರಲಿದೆ.

ದೊಡ್ಡ ಪ್ರಮಾಣದ ಆರ್ಥಿಕ ಚಟುವಟಿಕೆಗೆ ಸಾಕ್ಷಿ : ಅತಿಥ್ಯ, ವಸತಿ, ಆಹಾರ ಮತ್ತು ಪಾನೀಯ ವಲಯ, ಸಾರಿಗೆ ಮತ್ತು ಲಾಜಿಸ್ಟಿಕ್​, ಧಾರ್ಮಿಕ ವಸ್ತುಗಳು, ಪೂಜೆ ಮತ್ತು ಕರಕುಶಲ, ಜವಳಿ ಮತ್ತಿತರ ಗ್ರಾಹಕರ ಸರಕುಗಳು ಸೇರಿದಂತೆ ಹಲವು ಉದ್ಯಮ ವಲಯಗಳಲ್ಲಿ ದೊಡ್ಡ ಪ್ರಮಾಣದ ಆರ್ಥಿಕ ಚಟುವಟಿಕೆಗಳು ಕಂಡು ಬಂದಿವೆ.

ಈ ಆರ್ಥಿಕ ಚಟುವಟಿಕೆ ಕೇವಲ ಪ್ರಯಾಗ್​ರಾಜ್​ನಲ್ಲಿ ಮಾತ್ರವಲ್ಲದೇ, ಸುತ್ತಮುತ್ತ 100-150 ಕಿ.ಮೀ. ವ್ಯಾಪ್ತಿಯ ಉದ್ಯಮಗಳಲ್ಲಿ ಗಮನಾರ್ಹ ಏರಿಕೆ ಕಂಡಿದ್ದು, ಇದು ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸಿದೆ.

ಪ್ರಯಾಗ್​ರಾಜ್​ನ ಮೂಲ ಸೌಕರ್ಯಕ್ಕಾಗಿ ಸರ್ಕಾರ ₹7,500 ಕೋಟಿಯನ್ನು ವ್ಯಯಿಸಿತ್ತು. ಇದರ ಮೂಲಕ 14 ಫ್ಲೈಓವರ್​. 6 ಅಂಡರ್​ಪಾಸ್​, 200ಕ್ಕೂ ಹೆಚ್ಚು ರಸ್ತೆ ಅಗಲೀಕರಣ, ಹೊಸ ಕಾರಿಡಾರ್​, ರೈಲ್ವೆ ನಿಲ್ದಾಣದ ವಿಸ್ತರಣೆ ಮತ್ತು ಆಧುನಿಕ ವಿಮಾನ ನಿಲ್ದಾಣದ ಟರ್ಮಿನಲ್​ ನಿರ್ಮಾಣ ಮಾಡಲಾಗಿದೆ. ಇದರ ಜೊತೆ ಹೆಚ್ಚುವರಿಯಾಗಿ 1,500 ಕೋಟಿ ರೂಪಾಯಿಯನ್ನು ಮಹಾ ಕುಂಭ ಮೇಳದ ಸಿದ್ಧತೆಗೆ ವಿನಿಯೋಗಿಸಲಾಗಿತ್ತು. (ಐಎಎನ್​ಎಸ್​)

ಇದನ್ನೂ ಓದಿ: ಮಹಾ ಕುಂಭಮೇಳದ ಕೊನೆಯ ದಿನ 1 ಕೋಟಿಗೂ ಹೆಚ್ಚು ಜನರಿಂದ ಪುಣ್ಯಸ್ನಾನ; ಮಹಾಶಿವರಾತ್ರಿಯಂದು ಭಕ್ತಿಭಾವದ 'ಸಂಗಮ'

ಇದನ್ನೂ ಓದಿ: ಕಾಶಿಯಲ್ಲಿ ಶಿವ - ಪಾರ್ವತಿಗೆ ಮದುವೆ; ಮಹಾಶಿವರಾತ್ರಿಯಂದು 9 ಲಕ್ಷ ಭಕ್ತರು ಭೇಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.