ಮಕ್ಕಳಿಂದ ದೂರಾದವರ ಬಾಳಲ್ಲಿ ಆಶಾಕಿರಣ; ಬದುಕಿನ ಮುಸ್ಸಂಜೆಯಲ್ಲಿ ವೃದ್ಧರ ಕೈ ಹಿಡಿದ ಹೃದಯವಂತರಿವರು!
ಕೊಡಗು: ಬದುಕಿನ ಸಂಧ್ಯಾಕಾಲ ವೃದ್ಧಾಪ್ಯ. ಮಕ್ಕಳು-ಮೊಮ್ಮಕ್ಕಳೊಂದಿಗೆ ನೆಮ್ಮದಿಯ ಕಾಲ ಕಳೆಯಬೇಕೆಂಬುದು ಎಲ್ಲ ತಂದೆ ತಾಯಂದಿರ ಆಸೆ. ಆದರೆ ಮಕ್ಕಳಿಗೆ ಹೆತ್ತವರೇ ಹೊರೆಯಾಗಿ ಬಿಟ್ಟರೆ, ಅವರಿಗೆ ಗತಿ ಯಾರು? ಹೌದು, ಹೀಗೆ ಕುಟುಂಬದಿಂದ ನಿರ್ಲಕ್ಷ್ಯಕ್ಕೊಳಗಾದ ಹಿರಿಜೀವಗಳಿಗೆ ಇಲ್ಲೊಂದು ಹೃದಯವಂತ ಕುಟುಂಬವೊಂದು ಆಸರೆ ಒದಗಿಸಿದೆ.