ಮುರುಡೇಶ್ವರದಲ್ಲಿ ಭಕ್ತರಿಗೆ ಈಶ ಕೊಟ್ಟ ಶುಭ ಸೂಚನೆ ಇದು..
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಲ್ಲಿ ದಿನದಿಂದ ದಿನಕ್ಕೆ ಕೊರೊನಾ ಶಂಕಿತರು ಮತ್ತು ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೊನಾದಿಂದ ನಮ್ಮ ದೇಶವನ್ನು ಕಾಪಾಡು ಎಂದು ಮುರುಡೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಶ್ರೀಪಾದ ಕಾಮತ್ ಉಪಸ್ಥಿತಿಯಲ್ಲಿ ಪ್ರಧಾನ ಅರ್ಚಕ ಜಯರಾಮ್ ಅಡಿಗರು ಪೂಜೆ ನಡೆಸಿದರು. ಭಕ್ತರಿಗೆ ಅಭಯವನ್ನು ನೀಡಿ, ಲೋಕದ ಕಷ್ಟ ನಿವಾರಿಸುವಂತೆ ದೇವರಿಗೆ ಪ್ರಾರ್ಥನೆ ಮಾಡಿಕೊಳ್ಳುವ ಸಂದರ್ಭದಲ್ಲಿ ಪೂಜೆ ವೇಳೆ ಶಿವ ಬಲಗಡೆಯಿಂದ ಪ್ರಸಾದ ಕೊಟ್ಟಿದ್ದಾನೆ. ಹೀಗಾಗಿ ಮಹಾಮಾರಿ ಕೊರೊನಾ ವೈರಸ್ನಿಂದ ಜನತೆ ಪಾರಾಗುತ್ತಾರೆಂಬ ಸೂಚನೆಯನ್ನು ಭಗವಂತ ನೀಡಿದ್ದಾನೆ ಎಂದು ಭಕ್ತರು ಹೇಳುತ್ತಿದ್ದಾರೆ.