ಬಾಂಬ್​ ಪತ್ತೆ ಪ್ರಕರಣ: ಆರೋಪಿ ಆದಿತ್ಯ ರಾವ್ ಮಂಗಳೂರು ಪೊಲೀಸರಿಗೆ ಹಸ್ತಾಂತರ

By

Published : Jan 22, 2020, 7:21 PM IST

thumbnail
ಬೆಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ಏರ್​ಪೋರ್ಟ್​ನಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯ ರಾವ್​ನ​ನ್ನು ನೇರವಾಗಿ ಕೆಐಎಎಲ್​ ಪೊಲೀಸ್ ಠಾಣೆಗೆ ಕರೆತಂದ ಅಧಿಕಾರಿಗಳು ಮಂಗಳೂರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಆರೋಪಿ ಆದಿತ್ಯ ಮತ್ತು ಮೂರು ಜನ ಅಧಿಕಾರಿಗಳ ತಂಡ 7:15 ಕ್ಕೆ ಸ್ಪೈಸ್ ಜೆಟ್ ವಿಮಾನದ‌ ಮೂಲಕ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ರಾತ್ರಿ 8:40 ರ ಸುಮಾರಿಗೆ ಮಂಗಳೂರು ತಲುಪಲಿದ್ದಾರೆ. ಉಳಿದ ನಾಲ್ವರು ಅಧಿಕಾರಿಗಳು 9:20 ಕ್ಕೆ ಹೊರಡಲಿರುವ ಎರಡನೇ ಜೆಟ್ ಏರ್​ವೇಸ್ ವಿಮಾನದ ಮೂಲಕ ಮಂಗಳೂರಿಗೆ ಪ್ರಯಾಣಿಸಲಿದ್ದಾರೆ. ಸಿಐಎಸ್​ಎಫ್​ ಭದ್ರತಾ ಸಿಬ್ಬಂದಿಯಿಂದ ದಾಖಲಾತಿಗಳ ಪರಿಶೀಲನೆಯಾದ ಬಳಿಕ ಆರೋಪಿಯನ್ನ ವಿಮಾನದ ಮೂಲಕ ಕರೆದೊಯ್ಯಲು ಅವಕಾಶ ನೀಡಲಾಯಿತು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.