ಬೀದರ್: ಕಾಡಿನಿಂದ ನಾಡಿಗೆ ಬಂದ ಜಿಂಕೆ ಮರಿ - ಶಿವಪುರ ಶಿವಾರದಲ್ಲಿ ರಸ್ತೆಗೆ ಬಂದ ಜಿಂಕೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17225500-thumbnail-3x2-bin.jpg)
ಬೀದರ್: ಬೀದಿ ನಾಯಿಗಳಿಂದ ದಾಳಿಗೊಳಗಾದ ಜಿಂಕೆ ಮರಿಗೆ ಸೂಕ್ತ ಚಿಕಿತ್ಸೆ ನೀಡಿ, ಅರಣ್ಯಾಧಿಕಾರಿಗಳು ಕಾಡಿಗೆ ಬಿಟ್ಟ ಘಟನೆ ಬಸವಕಲ್ಯಾಣದಲ್ಲಿ ನಡೆಯಿತು. ತಾಲೂಕಿನ ಶಿವಪುರ ಶಿವಾರದಲ್ಲಿ ರಸ್ತೆಗೆ ಬಂದ ಜಿಂಕೆಯನ್ನು ನಾಯಿಗಳು ಬೆನ್ನಟ್ಟಿದ್ದವು. ಇದರಿಂದ ಹೆದರಿ ಪಕ್ಕದಲ್ಲಿದ್ದ ಖಾಸಗಿ ಆಸ್ಪತ್ರೆಗೆ ನುಗ್ಗಿತ್ತು. ಆಸ್ಪತ್ರೆ ಸಿಬ್ಬಂದಿಯ ಮೂಲಕ ವಿಚಾರ ತಿಳಿದು ಸ್ಥಳಕ್ಕೆ ಬಂದ ಪಶು ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿದರು.
Last Updated : Feb 3, 2023, 8:36 PM IST