ವಿಜಯಪುರ: ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಕುರಿತು ಸೋನಿಯಾ ಗಾಂಧಿಗೆ ಎಂ. ಬಿ ಪಾಟೀಲ್ ಪತ್ರ ಬರೆದಿದ್ದಾರೆ ಎಂಬ ಆರೋಪ ಪ್ರಕರಣ ಈಗ ಚುನಾವಣಾ ಆಯೋಗದ ಮೆಟ್ಟಿಲೇರಿದೆ.
ಈ ಪ್ರಕರಣ ಸಂಬಂಧ ಕೇಂದ್ರ ಹಾಗೂ ರಾಜ್ಯ ಚುನಾವಣಾಧಿಕಾರಿಗಳಿಗೆ ಸಚಿವ ಎಂ. ಬಿ ಪಾಟೀಲ್ ದೂರು ನೀಡಿದ್ದಾರೆ.
ಸುದೀರ್ಘ 6 ಪುಟಗಳ ದೂರು ಸಲ್ಲಿಕೆ ಮಾಡಿದ ಎಂ. ಬಿ ಪಾಟೀಲ್ ತಮ್ಮ ಮೇಲಿನ ಆರೋಪ ಸುಳ್ಳು ಎಂದು ಉಲ್ಲೇಖಿಸಿದ್ದಾರೆ. ನಿನ್ನೆಯಷ್ಟೇ ವಿಜಯಪುರದ ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಎಂ ಬಿ ಪಾಟೀಲ್ ಇಂದು ಚುನಾವಣಾಧಿಕಾರಿಗಳ ಮೊರೆ ಹೋಗಿದ್ದಾರೆ.