ಶಿರಸಿ (ಉತ್ತರಕನ್ನಡ): ಮದ್ಯದ ಅಮಲಿನಲ್ಲಿ ಔಷಧವೆಂದು ತಿಳಿದು ಬ್ರೇಕ್ ಆಯಿಲ್ ಸೇವಿಸಿ ಹೆಸ್ಕಾಂ ಇಂಜಿನಿಯರ್ ಮೃತಪಟ್ಟಿರುವ ಘಟನೆ ಶಿರಸಿಯ ಕೆಇಬಿ ವಸತಿ ನಿಲಯದಲ್ಲಿ ನಡೆದಿದೆ.
ಸುರೇಶ್ ಗುತ್ಯಪ್ಪ ಅರಳೇಶ್ವರ (51) ಮೃತ ಇಂಜಿನಿಯರ್. ಇವರು ಪಾರ್ಶ್ವವಾಯು, ಬಿಪಿ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು ಎಂಬ ಮಾಹಿತಿ ದೊರೆತಿದೆ. ಜೊತೆಗೆ ತಮ್ಮ ಎರಡನೇ ಮಗ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವುದರಿಂದ ನೊಂದು ವಿಪರೀತ ಕುಡಿತದ ಚಟ ಆರಂಭಿಸಿದ್ದರಂತೆ.
ಓದಿ: ಏಲೂರು ದುರಂತ: ವಿಚಿತ್ರ ಕಾಯಿಲೆಗೆ ಮತ್ತಿಬ್ಬರು ಬಲಿ, ಅಸ್ವಸ್ಥರ ಸಂಖ್ಯೆ 585ಕ್ಕೆ ಏರಿಕೆ
ಬುಧವಾರ ರಾತ್ರಿ ಮದ್ಯ ಕುಡಿದು ಊಟ ಮಾಡಿದ ನಂತರ ಔಷಧವೆಂದು ಬ್ರೇಕ್ ಆಯಿಲ್ ಸೇವಿಸಿ ಮೃತಪಟ್ಟಿರುವುದಾಗಿ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಸುರೇಶ್ ಅವರ ಪತ್ನಿ ದೂರು ದಾಖಲಿಸಿದ್ದಾರೆ.