ಶಿರಸಿ : ನಾಯಿ ದಾಳಿಗೆ ಒಳಗಾದ ಜಿಂಕೆ ಹೃದಯಾಘಾತಕ್ಕೊಳಗಾಗಿ ಪ್ರಾಣಬಿಟ್ಟಿರುವ ಘಟನೆ ತಾಲೂಕಿನ ಬನವಾಸಿಯ ಸಂತೋಳ್ಳಿಯಲ್ಲಿ ನಡೆದಿದೆ.
ಕಾಡಿನಲ್ಲಿ ನಾಯಿಯ ದಾಳಿಗೊಳಪಟ್ಟ ಜಿಂಕೆ ಜೀವ ಉಳಿಸಿಕೊಳ್ಳಲು ಸಂತೋಳ್ಳಿ ಗ್ರಾಮಕ್ಕೆ ಬಂದಿದೆ. ಜಿಂಕೆಯನ್ನು ನೋಡಿದ ಗ್ರಾಮಸ್ಥರು ನಾಯಿಯನ್ನು ಓಡಿಸಿ, ಆರೈಕೆ ಮಾಡಿ, ಅರಣ್ಯ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ.
ಆದರೆ ದಾಳಿಯ ಶಾಕ್ನಿಂದಾಗಿ ಹೃದಯಾಘಾತವಾಗಿ ಜಿಂಕೆ ಮೃತಪಟ್ಟಿದೆ. ಜಿಂಕೆಯ ಆರೈಕೆಗೆ ಆಗಮಿಸಿದ್ದ ವೈದ್ಯರು ಅಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಿದ್ದು, ನಂತರ ಇಲಾಖೆಯ ನಿಯಮಾನುಸಾರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಬನವಾಸಿ ಅರಣ್ಯ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.