ETV Bharat / state

ಚಿಮೂ ಅವರದ್ದು ತುಂಬು ಜೀವನ: ಡಾ.ಎಸ್.ಡಿ.ಪದ್ಮಪ್ರಸಾದ್​ - ತುಮಕೂರಲ್ಲಿ ಸಂಶೋಧಕ ಚಿದಾನಂದಮೂರ್ತಿ ನುಡಿನಮನ

ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅವರದ್ದು ಸಾರ್ಥಕ ಹಾಗೂ ತುಂಬು ಜೀವನ. ಅವರಿಲ್ಲ ಎಂದು ಶೋಕಿಸಬೇಕಿಲ್ಲ. ನಮ್ಮೊಟ್ಟಿಗೆ ಚರ್ಚೆಗೆ, ಮಾರ್ಗದರ್ಶನಕ್ಕೆ ಅವರಿಲ್ಲ ಎಂಬ ದುಃಖವಿದೆ ಎಂದು ಚಿಮೂ ಅವರ ಶಿಷ್ಯ ಡಾ.ಎಸ್.ಡಿ ಪದ್ಮಪ್ರಸಾದ್ ಬೇಸರ ವ್ಯಕ್ತಪಡಿಸಿದರು.

ChiMu strived to establish Kannada's antiquity: dr.padmaprasad
ಸಂಶೋಧಕ ಚಿಮೂಗೆ ನುಡಿನಮನ
author img

By

Published : Jan 15, 2020, 6:57 AM IST

ತುಮಕೂರು: ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅವರದು ಸಾರ್ಥಕ ಹಾಗೂ ತುಂಬು ಜೀವನ. ಅವರಿಲ್ಲ ಎಂದು ಶೋಕಿಸಬೇಕಿಲ್ಲ. ನಮ್ಮೊಟ್ಟಿಗೆ ಚರ್ಚೆಗೆ, ಮಾರ್ಗದರ್ಶನಕ್ಕೆ ಅವರಿಲ್ಲವೆಂಬ ದುಃಖವಿದೆ ಎಂದು ಚಿಮೂ ಅವರ ಶಿಷ್ಯ ಡಾ.ಎಸ್.ಡಿ ಪದ್ಮಪ್ರಸಾದ್ ಬೇಸರ ವ್ಯಕ್ತಪಡಿಸಿದರು.

ಚಿಮೂ ಶಿಷ್ಯ ಡಾ.ಎಸ್.ಡಿ.ಪದ್ಮಪ್ರಸಾದ್​

ಚಿಮೂ ಅವರ ಶಿಷ್ಯವೃಂದ ಹಾಗೂ ಅಭಿಮಾನಿ ಬಳಗದಿಂದ ನಗರದ ಜಯದೇವಿ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಹಮ್ಮಿಕೊಂಡ ನುಡಿನಮನ ಕಾರ್ಯಕ್ರಮವನ್ನು ಅವರು ಮಾತನಾಡಿದರು.

ಕನ್ನಡ ಮತ್ತು ಸತ್ಯ ಚಿಮೂ ಅವರಿಗೆ ಅತ್ಯಂತ ಆಪ್ತವಾದವುಗಳು. ಅವರ ಕೃತಿ, ಚರ್ಚೆಗಳಿಂದ ಅನೇಕ ವಿಷಯಗಳ ಒಳನೋಟಗಳನ್ನು ಕಂಡುಕೊಂಡಿದ್ದೇವೆ. ಸಂಶೋಧಕರ ಸಂಶೋದಕ ಚಿಮೂ ಗುರುಗಳು ಎಂದು ಹೇಳಿದರು.

ಸಿದ್ದಗಂಗಾ ಸಂಸ್ಥೆಯ ಕಾರ್ಯದರ್ಶಿ ಟಿ.ಕೆ ನಂಜುಂಡಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು.

ಪ್ರೊ. ಎಂ.ಸಿ.ರುದ್ರರಾಧ್ಯ, ಪ್ರೊ.ಡಿ.ಚಂದ್ರಪ್ಪ, ಜಿ.ಎಸ್.ಸೋಮಶೇಖರ್, ಕೆ.ಎಸ್.ಸಿದ್ದಲಿಂಗಪ್ಪ, ಕೆ.ರಾಮಕೃಷ್ಣಪ್ಪ, ಶೈಲಾ ನಾಗರಾಜ್, ಸೌಮ್ಯ ಇದ್ದರು.

ತುಮಕೂರು: ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅವರದು ಸಾರ್ಥಕ ಹಾಗೂ ತುಂಬು ಜೀವನ. ಅವರಿಲ್ಲ ಎಂದು ಶೋಕಿಸಬೇಕಿಲ್ಲ. ನಮ್ಮೊಟ್ಟಿಗೆ ಚರ್ಚೆಗೆ, ಮಾರ್ಗದರ್ಶನಕ್ಕೆ ಅವರಿಲ್ಲವೆಂಬ ದುಃಖವಿದೆ ಎಂದು ಚಿಮೂ ಅವರ ಶಿಷ್ಯ ಡಾ.ಎಸ್.ಡಿ ಪದ್ಮಪ್ರಸಾದ್ ಬೇಸರ ವ್ಯಕ್ತಪಡಿಸಿದರು.

ಚಿಮೂ ಶಿಷ್ಯ ಡಾ.ಎಸ್.ಡಿ.ಪದ್ಮಪ್ರಸಾದ್​

ಚಿಮೂ ಅವರ ಶಿಷ್ಯವೃಂದ ಹಾಗೂ ಅಭಿಮಾನಿ ಬಳಗದಿಂದ ನಗರದ ಜಯದೇವಿ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಹಮ್ಮಿಕೊಂಡ ನುಡಿನಮನ ಕಾರ್ಯಕ್ರಮವನ್ನು ಅವರು ಮಾತನಾಡಿದರು.

ಕನ್ನಡ ಮತ್ತು ಸತ್ಯ ಚಿಮೂ ಅವರಿಗೆ ಅತ್ಯಂತ ಆಪ್ತವಾದವುಗಳು. ಅವರ ಕೃತಿ, ಚರ್ಚೆಗಳಿಂದ ಅನೇಕ ವಿಷಯಗಳ ಒಳನೋಟಗಳನ್ನು ಕಂಡುಕೊಂಡಿದ್ದೇವೆ. ಸಂಶೋಧಕರ ಸಂಶೋದಕ ಚಿಮೂ ಗುರುಗಳು ಎಂದು ಹೇಳಿದರು.

ಸಿದ್ದಗಂಗಾ ಸಂಸ್ಥೆಯ ಕಾರ್ಯದರ್ಶಿ ಟಿ.ಕೆ ನಂಜುಂಡಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು.

ಪ್ರೊ. ಎಂ.ಸಿ.ರುದ್ರರಾಧ್ಯ, ಪ್ರೊ.ಡಿ.ಚಂದ್ರಪ್ಪ, ಜಿ.ಎಸ್.ಸೋಮಶೇಖರ್, ಕೆ.ಎಸ್.ಸಿದ್ದಲಿಂಗಪ್ಪ, ಕೆ.ರಾಮಕೃಷ್ಣಪ್ಪ, ಶೈಲಾ ನಾಗರಾಜ್, ಸೌಮ್ಯ ಇದ್ದರು.

Intro:ತುಮಕೂರು:


Body:ಡಾ. ಎಂ ಚಿದಾನಂದಮೂರ್ತಿ ಅವರ ಶಿಷ್ಯವೃಂದ ಹಾಗೂ ಅಭಿಮಾನಿ ಬಳಗದಿಂದ ನುಡಿನಮನ ಕಾರ್ಯಕ್ರಮವನ್ನು ನಗರದ ಶ್ರೀ ಜಯದೇವ ವಿದ್ಯಾರ್ಥಿನಿಲಯದ ಸಭಾಂಗಣದಲ್ಲಿ ಶ್ರೀ ಸಿದ್ದಗಂಗಾ ಸಂಸ್ಥೆಯ ಕಾರ್ಯದರ್ಶಿ ಟಿ.ಕೆ ನಂಜುಂಡಪ್ಪ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮಾತನಾಡಿದ ಡಾ. ಎಸ್.ಡಿ ಪದ್ಮಪ್ರಸಾದ್, ಚಿದಾನಂದ ಮೂರ್ತಿಯವರಿಗೆ ಕನ್ನಡ ಮತ್ತು ಸತ್ಯ ಆಪ್ತವಾದಂತಹ ಸಂಗತಿಗಳು, ಅನೇಕ ಸಂದರ್ಭಗಳಲ್ಲಿ ಅವರ ಕೃತಿಗಳಿಂದ ಅವರ ಚರ್ಚೆಗಳಿಂದ ಒಳನೋಟಗಳನ್ನು ಕಂಡುಕೊಂಡು ನಮ್ಮ ಬರಹಗಳಲ್ಲಿ ಅವುಗಳನ್ನು ಉಪಯೋಗಿಸಿ ಕೊಂಡಿದ್ದೇವೆ. ಸಂಶೋಧಕರ ಸಂಶೋಧಕರು ಚಿದಾನಂದಮೂರ್ತಿಯವರು ಶಿಕ್ಷಕರನ್ನು ಶೋಧಕರನ್ನು ಕನ್ನಡ ಹೋರಾಟಗಾರರನ್ನು ರೂಪಿಸಿದ್ದಾರೆ. ನಮ್ಮ ಜೊತೆಯಲ್ಲಿ ಚರ್ಚೆಗೆ ಮಾರ್ಗದರ್ಶನಕ್ಕೆ ಅವರು ಇಲ್ಲದಂತಾಗಿರುವುದು ನಮಗೆ ದುಃಖದ ಸಂಗತಿಯೆಂದು ವಿಷಾದಿಸಿದರು.
ಬೈಟ್: ಡಾ. ಎಸ್.ಡಿ ಪದ್ಮಪ್ರಸಾದ್, ಡಾ. ಎಂ ಚಿದಾನಂದಮೂರ್ತಿ ಅವರ ಶಿಷ್ಯ.


Conclusion:ಈ ಸಂದರ್ಭದಲ್ಲಿ ಪ್ರೊ. ಎಂ.ಸಿ ರುದ್ರರಾಧ್ಯ, ಪ್ರೊ. ಡಿ ಚಂದ್ರಪ್ಪ, ಜಿ.ಎಸ್ ಸೋಮಶೇಖರ್, ಕೆ.ಎಸ್ ಸಿದ್ದಲಿಂಗಪ್ಪ, ಕೆ. ರಾಮಕೃಷ್ಣಪ್ಪ, ಶೈಲಾ ನಾಗರಾಜ್, ಸೌಮ್ಯ ಮುಂತಾದವರು ಹಾಜರಿದ್ದರು.

ವರದಿ
ಸುಧಾಕರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.