ETV Bharat / state

ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ ಅಪರಿಚಿತರು: ಕಿವಿಯೋಲೆ, ಹಣ ದೋಚಿ ಪರಾರಿ -

ಶಿವಮೊಗ್ಗದಲ್ಲಿ ಕುಡಿಯುವ ನೀರು‌ ಕೇಳಲು ಬಂದ ಅಪರಿಚಿತರಿಬ್ಬರು ಮನೆಗೆ ನುಗ್ಗಿ ಯುವತಿಯ ಕಿವಿ ಓಲೆ ಹಾಗೂ 15 ಸಾವಿರ ರೂ‌. ದರೋಡೆ ಮಾಡಿ ಪರಾರಿಯಾಗಿದ್ದಾರೆ.

ಪೊಲೀಸರು ಮನೆಗೆ ಹೋಗಿ ಪರಿಶೀಲನೆ ನಡೆಸುತ್ತಿರುವುದು.
author img

By

Published : Jul 2, 2019, 10:17 PM IST

ಶಿವಮೊಗ್ಗ: ಕುಡಿಯುವ ನೀರು‌ ಕೇಳಲು ಬಂದ ಅಪರಿಚಿತರಿಬ್ಬರು ಮನೆಗೆ ನುಗ್ಗಿ ಯುವತಿಯ ಕಿವಿ ಓಲೆ ಹಾಗೂ 15 ಸಾವಿರ ರೂ‌. ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಶಿವಮೊಗ್ಗದ ಅರವಿಂದ ನಗರದಲ್ಲಿ ನಡೆದಿದೆ.

ಹೆಲ್ಮೆಟ್ ಧರಿಸಿದ್ದ ಅಪರಿಚಿತರಿಬ್ಬರು ಅರವಿಂದ ನಗರದ ಶಂಕರರಾವ್ ಎಂಬುವರ ಮನೆಗೆ ಬಂದಿದ್ದಾರೆ. ಈ ವೇಳೆ ಶಂಕರರಾವ್ ಅವರ ಪುತ್ರಿ ಶುಭ ಮಾತ್ರ ಮನೆಯಲ್ಲಿ ಇದ್ದಾರೆ. ಇದನ್ನು ಗಮನಿಸಿದ ಇಬ್ಬರು ನೀರು ಕೇಳಿದ್ದಾರೆ. ಶುಭ ನೀರು ತರಲು ಒಳಗೆ ಹೋಗುತ್ತಿದ್ದಂತೆಯೇ ಅವರ ಕತ್ತು ಹಿಡಿದಿದ್ದಾರೆ. ಇದರಿಂದ ಶುಭ ಕುತ್ತಿಗೆ ಭಾಗದಲ್ಲಿ‌ ಸ್ವಲ್ಪ ಗಾಯವಾಗಿದೆ. ಈ ವೇಳೆ ಅಪರಿಚಿತರಿಬ್ಬರು ಶುಭ ಕಿವಿಯಲ್ಲಿ ಇದ್ದ ಓಲೆ, ಮನೆಯಲ್ಲಿದ್ದ 15 ಸಾವಿರ ನಗದು ದೋಚಿ‌ ಪರಾರಿಯಾಗಿದ್ದಾರೆ.

ಈ ವೇಳೆಗೆ ಶುಭ ಕರೆ ಮಾಡಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಮನೆಗೆ ಬಂದ ತಂದೆ ಶುಭರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮಗಳು ಕರೆಂಟ್ ಶಾಕ್​​ನಿಂದ ಪ್ರಜ್ಞೆ ತಪ್ಪಿ ಬಿದ್ದಿರಬಹುದು ಎಂದು ನಂಜಪ್ಪ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದರು. ಪ್ರಜ್ಞೆ ಬಂದ ನಂತರ ಶುಭ, ಅಪರಿಚಿತರು ಮನೆಗೆ ಬಂದು ಹಲ್ಲೆ ನಡೆಸಿದ ವಿಚಾರ ತಿಳಿಸಿದ್ದಾರೆ.

ಈ ಸಂಬಂಧ ಶಂಕರರಾವ್ ಅವರು ಮಗಳು‌ ಶುಭ ಜೊತೆ ವಿನೋಬನಗರ ಪೊಲೀಸ್ ಠಾಣೆಗೆ ಹೋಗಿ‌ ದೂರು ನೀಡಿದ್ದಾರೆ. ಪೊಲೀಸರು ಮನೆಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ.

ಶಿವಮೊಗ್ಗ: ಕುಡಿಯುವ ನೀರು‌ ಕೇಳಲು ಬಂದ ಅಪರಿಚಿತರಿಬ್ಬರು ಮನೆಗೆ ನುಗ್ಗಿ ಯುವತಿಯ ಕಿವಿ ಓಲೆ ಹಾಗೂ 15 ಸಾವಿರ ರೂ‌. ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಶಿವಮೊಗ್ಗದ ಅರವಿಂದ ನಗರದಲ್ಲಿ ನಡೆದಿದೆ.

ಹೆಲ್ಮೆಟ್ ಧರಿಸಿದ್ದ ಅಪರಿಚಿತರಿಬ್ಬರು ಅರವಿಂದ ನಗರದ ಶಂಕರರಾವ್ ಎಂಬುವರ ಮನೆಗೆ ಬಂದಿದ್ದಾರೆ. ಈ ವೇಳೆ ಶಂಕರರಾವ್ ಅವರ ಪುತ್ರಿ ಶುಭ ಮಾತ್ರ ಮನೆಯಲ್ಲಿ ಇದ್ದಾರೆ. ಇದನ್ನು ಗಮನಿಸಿದ ಇಬ್ಬರು ನೀರು ಕೇಳಿದ್ದಾರೆ. ಶುಭ ನೀರು ತರಲು ಒಳಗೆ ಹೋಗುತ್ತಿದ್ದಂತೆಯೇ ಅವರ ಕತ್ತು ಹಿಡಿದಿದ್ದಾರೆ. ಇದರಿಂದ ಶುಭ ಕುತ್ತಿಗೆ ಭಾಗದಲ್ಲಿ‌ ಸ್ವಲ್ಪ ಗಾಯವಾಗಿದೆ. ಈ ವೇಳೆ ಅಪರಿಚಿತರಿಬ್ಬರು ಶುಭ ಕಿವಿಯಲ್ಲಿ ಇದ್ದ ಓಲೆ, ಮನೆಯಲ್ಲಿದ್ದ 15 ಸಾವಿರ ನಗದು ದೋಚಿ‌ ಪರಾರಿಯಾಗಿದ್ದಾರೆ.

ಈ ವೇಳೆಗೆ ಶುಭ ಕರೆ ಮಾಡಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಮನೆಗೆ ಬಂದ ತಂದೆ ಶುಭರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮಗಳು ಕರೆಂಟ್ ಶಾಕ್​​ನಿಂದ ಪ್ರಜ್ಞೆ ತಪ್ಪಿ ಬಿದ್ದಿರಬಹುದು ಎಂದು ನಂಜಪ್ಪ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದರು. ಪ್ರಜ್ಞೆ ಬಂದ ನಂತರ ಶುಭ, ಅಪರಿಚಿತರು ಮನೆಗೆ ಬಂದು ಹಲ್ಲೆ ನಡೆಸಿದ ವಿಚಾರ ತಿಳಿಸಿದ್ದಾರೆ.

ಈ ಸಂಬಂಧ ಶಂಕರರಾವ್ ಅವರು ಮಗಳು‌ ಶುಭ ಜೊತೆ ವಿನೋಬನಗರ ಪೊಲೀಸ್ ಠಾಣೆಗೆ ಹೋಗಿ‌ ದೂರು ನೀಡಿದ್ದಾರೆ. ಪೊಲೀಸರು ಮನೆಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ.

Intro:ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಬಂಗಾರ,ಹಣ ದೋಚಿ ಪರಾರಿ.

ಶಿವಮೊಗ್ಗ: ಕುಡಿಯುವ ನೀರು‌ ಕೇಳಿದ ಅಪರಿಚಿತರಿಬ್ಬರು ಮನೆಗೆ ನುಗ್ಗಿ ಯುವತಿಯ ಕಿವಿ ಓಲೆ ಹಾಗೂ 15 ಸಾವಿರ ರೂ‌ ದರೋಡೆ ನಡೆಸಿ, ಪರಾರಿಯಾಗಿರುವ ಘಟನೆ ಶಿವಮೊಗ್ಗದ ಅರವಿಂದ ನಗರದಲ್ಲಿ ನಡೆದಿದೆ. ಹೆಲ್ಮೆಟ್ ಧರಿಸಿದ ಅಪರಿಚಿತರಿಬ್ಬರು ಅರವಿಂದ ನಗರದ ಶಂಕರರಾವ್ ರವರ ಮನೆಗೆ ಬಂದಿದ್ದಾರೆ.Body:ಈ ವೇಳೆ ಶಂಕರರಾವ್ ರವರ ಪುತ್ರಿ ಶುಭ ರವರು ಮಾತ್ರ ಮನೆಯಲ್ಲಿ ಇದ್ದಾರೆ. ಇದನ್ನು ಗಮನಿಸಿದ ಇಬ್ಬರು ನೀರು ಕೇಳಿದ್ದಾರೆ. ಶುಭ ರವರು ನೀರು ತರಲು ಒಳಗೆ ಹೋಗುತ್ತಿದ್ದಂತೆಯೇ ಅವರ ಕತ್ತು ಹಿಡಿದಿದ್ದಾರೆ. ಇದರಿಂದ ಶುಭ ರವರ ಕುತ್ತಿಗೆ ಭಾಗದಲ್ಲಿ‌ ಸ್ವಲ್ಪ ಗಾಯವಾಗಿದೆ. ಈ ವೇಳೆ ಅಪರಿಚಿತರಿಬ್ಬರು ಶುಭರವರ ಕಿವಿಯಲ್ಲಿ ಇದ್ದ ಓಲೆ, ಮನೆಯಲ್ಲಿದ್ದ‌ 15 ಸಾವಿರ ನಗದು ದೋಚಿ‌ ಪರಾರಿಯಾಗಿದ್ದಾರೆ. ಈ ವೇಳೆಗೆ ಶುಭ ಕರೆ ಮಾಡಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಮನೆಗೆ ಬಂದ ಶಂಕರರಾವ್ ರವರ ತಂದೆ ಶುಭರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. Conclusion:ಈ ವೇಳೆಗೆ ಶುಭ ಕರೆ ಮಾಡಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಮನೆಗೆ ಬಂದ ಶಂಕರರಾವ್ ರವರ ತಂದೆ ಶುಭರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮಗಳು ಕರೆಂಟ್ ಶಾಕ್ ನಿಂದ ಪ್ರಜ್ಞೆ ತಪ್ಪಿ ಬಿದ್ದಿರ ಬಹುದು ಎಂದು ನಂಜಪ್ಪ‌ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದರು. ಪ್ರಜ್ಞೆ ಬಂದ ನಂತ್ರ‌ ಶುಭರವರು ಅಪರಿಚಿತರು ಮನೆಗೆ ಬಂದು ಹಲ್ಲೆ ನಡೆಸಿದ ವಿಚಾರ ತಿಳಿಸಿದ್ದಾರೆ. ನಂತ್ರ ಶಂಕರರಾವ್ ರವರು ಮಗಳು‌ ಶುಭರವರ ಜೊತೆ ವಿನೋಬನಗರ ಪೊಲೀಸ್ ಠಾಣೆಗೆ ಹೋಗಿ‌ ದೂರು ನೀಡಿದ್ದಾರೆ. ಪೊಲೀಸರು ಮನೆಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.