ETV Bharat / state

ಮಳೆಗಾಗಿ ಮಲೆನಾಡಲ್ಲಿ ಪ್ರಾರ್ಥನೆ: ಮುಸ್ಲೀಮರಿಂದ ವಿಶೇಷ ನಮಾಜ್ - undefined

ಮಳೆಗಾಗಿ ಶಿವಮೊಗ್ಗದ ಮಂಡ್ಲಿಯ ಮುಸ್ಲಿಂ ಬಾಂಧವರು ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಮಳೆಗಾಗಿ ಪ್ರಾರ್ಥಿಸಿ ಮುಸ್ಲೀಂ ಬಾಂಧವರು ನಮಾಜ್ ಮಾಡಿದರು.
author img

By

Published : Jun 21, 2019, 8:02 PM IST

ಶಿವಮೊಗ್ಗ: ಬರಗಾಲ ಬಂದಾಗ ಅಲ್ಲೂಹುವನ್ನು ಪ್ರಾರ್ಥಿಸಿದರೆ ಮಳೆ ಸುರಿಯುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಇಂದು ಶಿವಮೊಗ್ಗದಲ್ಲಿ ಮುಸ್ಲೀಮರು ನಮಾಜ್ ಮಾಡಿದರು.

ಮಳೆಗಾಗಿ ಪ್ರಾರ್ಥಿಸಿ ಮುಸ್ಲೀಂ ಬಾಂಧವರು ನಮಾಜ್ ಮಾಡಿದರು.

ಮಲೆನಾಡಿನಲ್ಲಿ ಈ ವೇಳೆಗಾಗಲೇ ನದಿ, ಹಳ್ಳಗಳು ತುಂಬಿ ಹರಿಯುತ್ತಿದ್ದವು. ಆದರೆ ಜೂನ್ ಮುಗಿಯುತ್ತಾ ಬಂದರೂ ಮಳೆಯ ಸುಳಿವಿಲ್ಲ. ಇದರಿಂದ ಮಳೆ ಸಕಾಲದಲ್ಲಿ ಸುರಿದು ಜನ, ಜಾನುವಾರುಗಳಿಗೆ ನೀರು ಸಿಗಲಿ ಎಂದು ಶಿವಮೊಗ್ಗದ ಮಂಡ್ಲಿಯ ಮುಸ್ಲಿಂ ಬಾಂಧವರು ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.

ಪ್ರಾರ್ಥನೆ ವೇಳೆ ದನಗಳನ್ನು ತಂದು ನಮಾಜ್ ಮಾಡಲಾಯಿತು. ನಮಾಜ್ ಮಾಡುತ್ತಿದ್ದಂತೆಯೇ ಹನಿ ಹನಿ ಮಳೆ ಬರಲು‌ ಶುರುವಾಯಿತು. ನಮಾಜ್ ವೇಳೆ ಮುಸ್ಲಿಂ ಬಾಂಧವರು ತಮ್ಮ ಕೈಗಳನ್ನು ಭೂಮಿಯ ಕಡೆ ಮಾಡಿ ಪ್ರಾರ್ಥನೆ ಸಲ್ಲಿಸಿದರು.

ಮಳೆಯಾಗಲಿ ಎಂದು ಅಲ್ಲಾಹುವಿನಲ್ಲಿ ಬೇಡಿಕೊಂಡು ನಮಾಜ್ ಮಾಡಿದ್ದೇವೆ. ನಮ್ಮ ಪ್ರಾರ್ಥನೆ ಮನ್ನಿಸಿ ಅಲ್ಲಾ ಮಳೆ ನೀಡುತ್ತಾನೆ ಎಂದು ಮಂಡ್ಲಿ ಮಸೀದಿಯ ಮೌಲ್ವಿ ನಯಾಜ್ ಹೇಳಿದರು.

ಶಿವಮೊಗ್ಗ: ಬರಗಾಲ ಬಂದಾಗ ಅಲ್ಲೂಹುವನ್ನು ಪ್ರಾರ್ಥಿಸಿದರೆ ಮಳೆ ಸುರಿಯುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಇಂದು ಶಿವಮೊಗ್ಗದಲ್ಲಿ ಮುಸ್ಲೀಮರು ನಮಾಜ್ ಮಾಡಿದರು.

ಮಳೆಗಾಗಿ ಪ್ರಾರ್ಥಿಸಿ ಮುಸ್ಲೀಂ ಬಾಂಧವರು ನಮಾಜ್ ಮಾಡಿದರು.

ಮಲೆನಾಡಿನಲ್ಲಿ ಈ ವೇಳೆಗಾಗಲೇ ನದಿ, ಹಳ್ಳಗಳು ತುಂಬಿ ಹರಿಯುತ್ತಿದ್ದವು. ಆದರೆ ಜೂನ್ ಮುಗಿಯುತ್ತಾ ಬಂದರೂ ಮಳೆಯ ಸುಳಿವಿಲ್ಲ. ಇದರಿಂದ ಮಳೆ ಸಕಾಲದಲ್ಲಿ ಸುರಿದು ಜನ, ಜಾನುವಾರುಗಳಿಗೆ ನೀರು ಸಿಗಲಿ ಎಂದು ಶಿವಮೊಗ್ಗದ ಮಂಡ್ಲಿಯ ಮುಸ್ಲಿಂ ಬಾಂಧವರು ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.

ಪ್ರಾರ್ಥನೆ ವೇಳೆ ದನಗಳನ್ನು ತಂದು ನಮಾಜ್ ಮಾಡಲಾಯಿತು. ನಮಾಜ್ ಮಾಡುತ್ತಿದ್ದಂತೆಯೇ ಹನಿ ಹನಿ ಮಳೆ ಬರಲು‌ ಶುರುವಾಯಿತು. ನಮಾಜ್ ವೇಳೆ ಮುಸ್ಲಿಂ ಬಾಂಧವರು ತಮ್ಮ ಕೈಗಳನ್ನು ಭೂಮಿಯ ಕಡೆ ಮಾಡಿ ಪ್ರಾರ್ಥನೆ ಸಲ್ಲಿಸಿದರು.

ಮಳೆಯಾಗಲಿ ಎಂದು ಅಲ್ಲಾಹುವಿನಲ್ಲಿ ಬೇಡಿಕೊಂಡು ನಮಾಜ್ ಮಾಡಿದ್ದೇವೆ. ನಮ್ಮ ಪ್ರಾರ್ಥನೆ ಮನ್ನಿಸಿ ಅಲ್ಲಾ ಮಳೆ ನೀಡುತ್ತಾನೆ ಎಂದು ಮಂಡ್ಲಿ ಮಸೀದಿಯ ಮೌಲ್ವಿ ನಯಾಜ್ ಹೇಳಿದರು.

Intro:ಮಲೆನಾಡಿನಲ್ಲಿ ಈ ವೇಳೆಗಾಗಲೇ ನದಿ ಹಳ್ಳಗಳು ತುಂಬಿ ಹರಿಯುತ್ತಿದ್ದವು. ಆದ್ರೆ, ಈ ವರ್ಷ ಜೂನ್ ಮುಗಿಯುತ್ತಾ ಬಂದರು ಸಹ ಮಳೆಯ ಸುಳಿವಿಲ್ಲ. ಇದರಿಂದ ಮಳೆಗಾಲ ಸಕಾಲದಲ್ಲಿ ಸುರಿದು ಜನ ಜಾನುವಾರುಗಳಿಗೆ ನೀರು ಸಿಗಲಿ ಎಂದು ಶಿವಮೊಗ್ಗದ ಮಂಡ್ಲಿಯ ಮುಸ್ಲಿಂ ಬಾಂಧವರು ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಈದ್ಗಾ ಮೈದಾನದಲ್ಲಿ ಮೌಲ್ವಿ ರವರು ಮಳೆಯು ಸುರಿದು ಭೂಮಿಯ ಮೇಲಿನ ಎಲ್ಲಾ ಜೀವಿಗಳಿಗೂ ಬದುಕಲು ಅನುಕೂಲಕರವಾಗಿರಲಿ ಎಂದು ಪ್ರಾರ್ಥನೆ ಮಾಡಿದರು.


Body:ಪ್ರಾರ್ಥನೆಯ ವೇಳೆ ದನಗಳನ್ನು ತಂದು ನಮಾಜ್ ಮಾಡಲಾಯಿತು. ನಮಾಜ್ ಮಾಡುತ್ತಿದ್ದಂತೆಯೇ ಹನಿ ಹನಿ ಮಳೆ ಬರಲು‌ ಶುರುವಾಯಿತು. ನಮಾಜ್ ವೇಳೆ ಮುಸ್ಲಿಂ ಬಾಂಧವರು ತಮ್ಮ ಕೈಗಳನ್ನು ಭೂಮಿಯ ಕಡೆ ಮಾಡಿ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯಲ್ಲಿ ಎಲ್ಲಾ ವಯಸ್ಸಿನವರು ಇದ್ದರು.


Conclusion:ಬರಗಾಲ ಬಂದಾಗ ಅಲ್ಲಾರನ್ನು ಪ್ರಾರ್ಥಿಸಿದರೆ ಮಳೆ ಸುರಿಯುತ್ತದೆ ಎಂಬ ನಂಬಿಕೆಯ ಮೇಲೆ ನಮಾಜ್ ಸಲ್ಲಿಸಲಾಯಿತು. ನಾವು ಮಳೆಯಾಗಲಿ ಎಂದು ಅಲ್ಲಾನಲ್ಲಿ‌ ಬೇಡಿ ಕೊಂಡು ನಮಾಜ್ ಮಾಡಲಾಗಿದೆ. ನಮ್ಮ ಪ್ರಾರ್ಥನೆಗೆ ಮನ್ನಿಸಿ ಅಲ್ಲಾ ಮಳೆ ನೀಡುತ್ತಾನೆ ಎನ್ನುತ್ತಾರೆ ಮಂಡ್ಲಿ ಮಸೀದಿಯ ಮೌಲ್ವಿ ನಯಾಜ್..

ಬೈಟ್: ನಯಾಜ್. ಮೌಲ್ವಿ.

ಕಿರಣ್ ಕುಮಾರ್. ಶಿವಮೊಗ್ಗ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.