ETV Bharat / state

ಮುದ್ದಣ್ಣ ಕೆರೆ ಪ್ರಕರಣ : ಜಿಪಂ​ ಸಿಇಒಗೆ ಭೂ ಕಬಳಿಕೆ ನಿಷೇಧ ನ್ಯಾಯಾಲಯದಿಂದ ವಾರೆಂಟ್ ಜಾರಿ

ಶಿವಮೊಗ್ಗದ ಮುದ್ದಣ್ಣ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆದ ಪ್ರಕರಣದ ವರದಿ ವಿಳಂಬಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್​ ಸಿಇಒ ವಿರುದ್ಧ ಭೂ ಕಬಳಿಕೆ ನಿಷೇಧ ನ್ಯಾಯಾಲಯವು ವಾರೆಂಟ್ ಜಾರಿ ಮಾಡಿದೆ.

author img

By ETV Bharat Karnataka Team

Published : Jan 7, 2024, 3:51 PM IST

Updated : Jan 9, 2024, 12:48 PM IST

ಮುದ್ದಣ್ಣ ಕೆರೆ ಪ್ರಕರಣ
ಮುದ್ದಣ್ಣ ಕೆರೆ ಪ್ರಕರಣ
ಜಿಪಂ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ ಪ್ರತಿಕ್ರಿಯೆ

ಶಿವಮೊಗ್ಗ: ನಗರದ ಹೊರವಲಯದ ಅಬ್ಬಲಗೆರೆಯ ಮುದ್ದಣ್ಣ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆದ ಪ್ರಕರಣ ಸಂಬಂಧ ನಿಗದಿತ ಅವಧಿಯಲ್ಲಿ ವರದಿ ನೀಡದ ಕಾರಣಕ್ಕೆ ಶಿವಮೊಗ್ಗ ಜಿಲ್ಲಾ ಪಂಚಾಯತ್​ ಮುಖ್ಯ ಕಾರ್ಯನಿರ್ವಹಣಾಧಿಕಾರಿ‌‌ ಸ್ನೇಹಲ್ ಸುಧಾಕರ್ ಲೋಖಂಡೆ ಅವರಿಗೆ ಕರ್ನಾಟಕ ರಾಜ್ಯ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ವಾರೆಂಟ್​ ಜಾರಿ ಮಾಡಿದೆ.

ಮುದ್ದಣ್ಣ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆದಿರುವ ಕುರಿತು ಭೂ ನ್ಯಾಯಾಧೀಕರಣವು ಸ್ವಯಂ ದೂರನ್ನು ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು. ಈ ವೇಳೆ ಕೆರೆಯಲ್ಲಿ 500 ಲೋಡ್ ಮಣ್ಣನ್ನು ಎತ್ತಲು ಅನುಮತಿ ಪಡೆದು, 15,004 ಲೋಡ್ ಮಣ್ಣನ್ನು ಎತ್ತಲಾಗಿದೆ. ಇದರಿಂದ ಸರ್ಕಾರಕ್ಕೆ 71.45 ಲಕ್ಷ ರೂ. ನಷ್ಟವಾಗಿದೆ ಎಂದು ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಂಡಿತ್ತು. ದೂರು ದಾಖಲಿಸಿಕೊಂಡ ನಂತರ ನವೆಂಬರ್​ನಲ್ಲಿ ಅಕ್ರಮವಾಗಿ ಮಣ್ಣು ಎತ್ತಿರುವ ಕುರಿತು ವರದಿಯನ್ನು ನೀಡುವಂತೆ ಜಿಲ್ಲಾ ಪಂಚಾಯತ್ ಸಿಇಒಗೆ ಕೋರ್ಟ್ ಆದೇಶ ಮಾಡಿತ್ತು.

ಆದರೆ ಸಿಇಒ ಅವರು ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸದ ಕಾರಣ, ಅವರನ್ನು ಫೆಬ್ರವರಿ 16ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಡಿಸೆಂಬರ್ 23ರಂದು ನ್ಯಾಯಾಲಯ ಶಿವಮೊಗ್ಗ ಪೊಲೀಸರಿಗೆ ಆದೇಶಿಸಿತ್ತು. ಈ ವೇಳೆ ತಪ್ಪದೆ ವರದಿಯನ್ನು ಸಲ್ಲಿಸಬೇಕು. 25 ಸಾವಿರ ರೂ. ಮುಚ್ಚಳಿಕೆ ಬರೆದುಕೊಟ್ಟರೆ ಅವರನ್ನು ಬಿಡುಗಡೆ ಮಾಡಬಹುದು ಮತ್ತು ವಾರೆಂಟ್ ವಾಪಸ್​​ ಪಡೆಯಲು ಸೂಚಿಸಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಫೆಬ್ರವರಿ 16ರ ತನಕ ಅವಕಾಶವಿದೆ. ಈಗ ಮುದ್ದಣ್ಣ ಕೆರೆ ಕುರಿತು ವರದಿ ತಯಾರಾಗುತ್ತಿದೆ. ನ್ಯಾಯಾಲಯದ ಆದೇಶದಂತೆ ವರದಿಯನ್ನು ನಿಗದಿತ ಅವಧಿ ಒಳಗೆ ಸಲ್ಲಿಸಲಾಗುವುದು. ಆಗ ವಾರೆಂಟ್ ರದ್ದಾಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಕೃಷ್ಣಾ ನದಿ ಸೇತುವೆ ರಸ್ತೆ ಶಿಥಿಲ; 45 ದಿನ ವಾಹನ ಸಂಚಾರ ಬಂದ್

ಜಿಪಂ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ ಪ್ರತಿಕ್ರಿಯೆ

ಶಿವಮೊಗ್ಗ: ನಗರದ ಹೊರವಲಯದ ಅಬ್ಬಲಗೆರೆಯ ಮುದ್ದಣ್ಣ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆದ ಪ್ರಕರಣ ಸಂಬಂಧ ನಿಗದಿತ ಅವಧಿಯಲ್ಲಿ ವರದಿ ನೀಡದ ಕಾರಣಕ್ಕೆ ಶಿವಮೊಗ್ಗ ಜಿಲ್ಲಾ ಪಂಚಾಯತ್​ ಮುಖ್ಯ ಕಾರ್ಯನಿರ್ವಹಣಾಧಿಕಾರಿ‌‌ ಸ್ನೇಹಲ್ ಸುಧಾಕರ್ ಲೋಖಂಡೆ ಅವರಿಗೆ ಕರ್ನಾಟಕ ರಾಜ್ಯ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ವಾರೆಂಟ್​ ಜಾರಿ ಮಾಡಿದೆ.

ಮುದ್ದಣ್ಣ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆದಿರುವ ಕುರಿತು ಭೂ ನ್ಯಾಯಾಧೀಕರಣವು ಸ್ವಯಂ ದೂರನ್ನು ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು. ಈ ವೇಳೆ ಕೆರೆಯಲ್ಲಿ 500 ಲೋಡ್ ಮಣ್ಣನ್ನು ಎತ್ತಲು ಅನುಮತಿ ಪಡೆದು, 15,004 ಲೋಡ್ ಮಣ್ಣನ್ನು ಎತ್ತಲಾಗಿದೆ. ಇದರಿಂದ ಸರ್ಕಾರಕ್ಕೆ 71.45 ಲಕ್ಷ ರೂ. ನಷ್ಟವಾಗಿದೆ ಎಂದು ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಂಡಿತ್ತು. ದೂರು ದಾಖಲಿಸಿಕೊಂಡ ನಂತರ ನವೆಂಬರ್​ನಲ್ಲಿ ಅಕ್ರಮವಾಗಿ ಮಣ್ಣು ಎತ್ತಿರುವ ಕುರಿತು ವರದಿಯನ್ನು ನೀಡುವಂತೆ ಜಿಲ್ಲಾ ಪಂಚಾಯತ್ ಸಿಇಒಗೆ ಕೋರ್ಟ್ ಆದೇಶ ಮಾಡಿತ್ತು.

ಆದರೆ ಸಿಇಒ ಅವರು ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸದ ಕಾರಣ, ಅವರನ್ನು ಫೆಬ್ರವರಿ 16ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಡಿಸೆಂಬರ್ 23ರಂದು ನ್ಯಾಯಾಲಯ ಶಿವಮೊಗ್ಗ ಪೊಲೀಸರಿಗೆ ಆದೇಶಿಸಿತ್ತು. ಈ ವೇಳೆ ತಪ್ಪದೆ ವರದಿಯನ್ನು ಸಲ್ಲಿಸಬೇಕು. 25 ಸಾವಿರ ರೂ. ಮುಚ್ಚಳಿಕೆ ಬರೆದುಕೊಟ್ಟರೆ ಅವರನ್ನು ಬಿಡುಗಡೆ ಮಾಡಬಹುದು ಮತ್ತು ವಾರೆಂಟ್ ವಾಪಸ್​​ ಪಡೆಯಲು ಸೂಚಿಸಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಫೆಬ್ರವರಿ 16ರ ತನಕ ಅವಕಾಶವಿದೆ. ಈಗ ಮುದ್ದಣ್ಣ ಕೆರೆ ಕುರಿತು ವರದಿ ತಯಾರಾಗುತ್ತಿದೆ. ನ್ಯಾಯಾಲಯದ ಆದೇಶದಂತೆ ವರದಿಯನ್ನು ನಿಗದಿತ ಅವಧಿ ಒಳಗೆ ಸಲ್ಲಿಸಲಾಗುವುದು. ಆಗ ವಾರೆಂಟ್ ರದ್ದಾಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಕೃಷ್ಣಾ ನದಿ ಸೇತುವೆ ರಸ್ತೆ ಶಿಥಿಲ; 45 ದಿನ ವಾಹನ ಸಂಚಾರ ಬಂದ್

Last Updated : Jan 9, 2024, 12:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.