ETV Bharat / state

ಬಿಸಿಲಿಗೆ ಹೆದರಿ ವಾಹನ ಸವಾರರಿಂದ ರಸ್ತೆ​ ನಿಯಮ ಉಲ್ಲಂಘನೆ: ಖಾಕಿ ಹೊಸ ಪ್ಲಾನ್​ - undefined

ಬಿಸಿಲಿನ ತೀವ್ರತೆ ತಾಳಲಾರದೆ ಪ್ರಮುಖ ಸರ್ಕಲ್‌ಗಳಲ್ಲಿ ವಾಹನ ಸವಾರರು ಸಿಗ್ನಲ್ ಜಂಪ್ ಮಾಡುತ್ತಿದ್ದಾರೆ. ಈ ಸಂಚಾರಿ ನಿಯಮಗಳನ್ನು ಉಲ್ಲಂಘನೆ ತಡೆಯಲು ರಾಯಚೂರು ಸಂಚಾರಿ ಪೊಲೀಸರು ಹೊಸ ಪ್ಲಾನ್ ರೂಪಿಸಿದ್ದಾರೆ.

ಬಸವೇಶ್ವರ ವೃತ್ತದ ಬಳಿಯ ಸಿಗ್ನಲ್​ನಲ್ಲಿ ಹಸಿರು ಹೊದಿಕೆ ಕಟ್ಟಿರುವುದು
author img

By

Published : Apr 3, 2019, 6:32 PM IST

Updated : Apr 3, 2019, 7:44 PM IST

ರಾಯಚೂರು: ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಬೇಸಿಗೆ ಬಂದ್ರೆ, ವಿಪರೀತ ತಾಪದಿಂದ ಜನ ಹೈರಾಣಾಗುತ್ತಾರೆ. ಬೆಳಗ್ಗೆ ಸುಮಾರು 11ಗಂಟೆಯಿಂದ ಶುರುವಾಗುವ ಬಿಸಿಲಿನ ಝಳದಿಂದ ಕಂಗಾಲಾಗಿದ್ದಾರೆ.

ಬಸವೇಶ್ವರ ವೃತ್ತದ ಬಳಿಯ ಸಿಗ್ನಲ್​ನಲ್ಲಿ ಹಸಿರು ಹೊದಿಕೆ ಕಟ್ಟಿರುವುದು

ಇನ್ನು ತಾಪಮಾನ ತಾಳಲಾರದೆ ಪ್ರಮುಖ ಸರ್ಕಲ್‌ಗಳಲ್ಲಿ ವಾಹನ ಸವಾರರು ಸಿಗ್ನಲ್ ಜಂಪ್ ಮಾಡುವ ಮೂಲಕ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಸ್ತೆ ನಿಯಮ ಉಲ್ಲಂಘನೆ ತಡೆಯಲು ಸಂಚಾರಿ ಪೊಲೀಸರು ಹಸಿರು ಹೊದಿಕೆಯ ಪ್ಲಾನ್ ರೂಪಿಸಿದ್ದಾರೆ.

ಸಂಚಾರಿ ನಿಯಮಗಳನ್ನ ಪಾಲಿಸುವುದು ಪ್ರತಿವೋರ್ವ ವಾಹನ ಸವಾರನ ಕರ್ತವ್ಯ. ಆದರೆ ಬೇಸಿಗೆಯಲ್ಲಿ ಬಿಸಿಲಿನ ತಾಪಕ್ಕೆ ಕಂಗಾಲಾಗಿರುವ ಜನರು ಜಿಲ್ಲೆಯಲ್ಲಿರುವ ಸಿಗ್ನಲ್​ಗಳನ್ನು ಜಂಪ್ ಮಾಡಿ ನಿಯಮ ಉಲ್ಲಂಘಿಸುತ್ತಿದ್ದಾರೆ. ಆದ್ದರಿಂದ ಇಂತಹ ಸಮಸ್ಯೆಗಳನ್ನು ನಿಯಂತ್ರಿಸಲು ಜಿಲ್ಲಾ ಪೊಲೀಸ್ ಇಲಾಖೆ ಸಿಗ್ನಲ್​ಗಳ ಬಳಿ ನೆರಳಿನ ವ್ಯವಸ್ಥೆ ಮಾಡಿದೆ. ನಗರದ ಬಸವೇಶ್ವರ ವೃತ್ತದ ಬಳಿಯ ಸಿಗ್ನಲ್​ನ್ನ ಪ್ರಾಯೋಗಿಕವಾಗಿ ಬಳಸಿಕೊಂಡು ಅಲ್ಲಿ ಕಂಬ ಅಳವಡಿಸಿದೆ. ಅದಕ್ಕೆ ಹಸಿರು ಹೊದಿಕೆಯನ್ನು ಶೆಲ್ಟರ್​(ಗುಡಿಸಲು) ರೀತಿ ಅಳವಡಿಸುವ ಮೂಲಕ ನೆರಳಿನ ವ್ಯವಸ್ಥೆಯನ್ನ ಮಾಡಲಾಗಿದೆ.

ಈ ಪ್ರಯೋಗ ಯಶಸ್ವಿಯಾದರೆ ನಗರದಲ್ಲಿನ ಅಂಬೇಡ್ಕರ್ ಸರ್ಕಲ್, ಗಂಜ್ ಸರ್ಕಲ್ ಮತ್ತು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದ್ದಾರೆ ಅಧಿಕಾರಿಗಳು. ಈಗಾಗಲೇ ಜಿಲ್ಲೆಯಲ್ಲಿ 41 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದನ್ನರಿತ ರಾಯಚೂರು ಎಸ್ಪಿ ಡಾ. ಕಿಶೋರ್ ಬಾಬು ಅವರು ವಿಜಯಪುರ ಮಾದರಿಯಲ್ಲಿ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದ್ದಾರೆ.

ರಾಯಚೂರು: ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಬೇಸಿಗೆ ಬಂದ್ರೆ, ವಿಪರೀತ ತಾಪದಿಂದ ಜನ ಹೈರಾಣಾಗುತ್ತಾರೆ. ಬೆಳಗ್ಗೆ ಸುಮಾರು 11ಗಂಟೆಯಿಂದ ಶುರುವಾಗುವ ಬಿಸಿಲಿನ ಝಳದಿಂದ ಕಂಗಾಲಾಗಿದ್ದಾರೆ.

ಬಸವೇಶ್ವರ ವೃತ್ತದ ಬಳಿಯ ಸಿಗ್ನಲ್​ನಲ್ಲಿ ಹಸಿರು ಹೊದಿಕೆ ಕಟ್ಟಿರುವುದು

ಇನ್ನು ತಾಪಮಾನ ತಾಳಲಾರದೆ ಪ್ರಮುಖ ಸರ್ಕಲ್‌ಗಳಲ್ಲಿ ವಾಹನ ಸವಾರರು ಸಿಗ್ನಲ್ ಜಂಪ್ ಮಾಡುವ ಮೂಲಕ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಸ್ತೆ ನಿಯಮ ಉಲ್ಲಂಘನೆ ತಡೆಯಲು ಸಂಚಾರಿ ಪೊಲೀಸರು ಹಸಿರು ಹೊದಿಕೆಯ ಪ್ಲಾನ್ ರೂಪಿಸಿದ್ದಾರೆ.

ಸಂಚಾರಿ ನಿಯಮಗಳನ್ನ ಪಾಲಿಸುವುದು ಪ್ರತಿವೋರ್ವ ವಾಹನ ಸವಾರನ ಕರ್ತವ್ಯ. ಆದರೆ ಬೇಸಿಗೆಯಲ್ಲಿ ಬಿಸಿಲಿನ ತಾಪಕ್ಕೆ ಕಂಗಾಲಾಗಿರುವ ಜನರು ಜಿಲ್ಲೆಯಲ್ಲಿರುವ ಸಿಗ್ನಲ್​ಗಳನ್ನು ಜಂಪ್ ಮಾಡಿ ನಿಯಮ ಉಲ್ಲಂಘಿಸುತ್ತಿದ್ದಾರೆ. ಆದ್ದರಿಂದ ಇಂತಹ ಸಮಸ್ಯೆಗಳನ್ನು ನಿಯಂತ್ರಿಸಲು ಜಿಲ್ಲಾ ಪೊಲೀಸ್ ಇಲಾಖೆ ಸಿಗ್ನಲ್​ಗಳ ಬಳಿ ನೆರಳಿನ ವ್ಯವಸ್ಥೆ ಮಾಡಿದೆ. ನಗರದ ಬಸವೇಶ್ವರ ವೃತ್ತದ ಬಳಿಯ ಸಿಗ್ನಲ್​ನ್ನ ಪ್ರಾಯೋಗಿಕವಾಗಿ ಬಳಸಿಕೊಂಡು ಅಲ್ಲಿ ಕಂಬ ಅಳವಡಿಸಿದೆ. ಅದಕ್ಕೆ ಹಸಿರು ಹೊದಿಕೆಯನ್ನು ಶೆಲ್ಟರ್​(ಗುಡಿಸಲು) ರೀತಿ ಅಳವಡಿಸುವ ಮೂಲಕ ನೆರಳಿನ ವ್ಯವಸ್ಥೆಯನ್ನ ಮಾಡಲಾಗಿದೆ.

ಈ ಪ್ರಯೋಗ ಯಶಸ್ವಿಯಾದರೆ ನಗರದಲ್ಲಿನ ಅಂಬೇಡ್ಕರ್ ಸರ್ಕಲ್, ಗಂಜ್ ಸರ್ಕಲ್ ಮತ್ತು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದ್ದಾರೆ ಅಧಿಕಾರಿಗಳು. ಈಗಾಗಲೇ ಜಿಲ್ಲೆಯಲ್ಲಿ 41 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದನ್ನರಿತ ರಾಯಚೂರು ಎಸ್ಪಿ ಡಾ. ಕಿಶೋರ್ ಬಾಬು ಅವರು ವಿಜಯಪುರ ಮಾದರಿಯಲ್ಲಿ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದ್ದಾರೆ.

Intro:ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಬೇಸಿಗೆ ಕಾಲ ಬಂದ್ರೆ, ವೀಪರಿತ ಬಿಸಿಲಿನ ತಾಪದಿಂದ ಹೈರಾಣ ಆಗುತ್ತಾರೆ. ಬೆಳಿಗ್ಗೆ ೧೧ ಗಂಟೆಯಿಂದ ಶುರುವಾಗುವ ಬಿಸಿಲಿನ ಝಳ ಜನರನ್ನ ಮನೆಯಿಂದ ಹೊರಗಡೆ ಕಾಲು ಹಿಡದಂತೆ ಮಾಡಿ, ರಸ್ತೆಯಲ್ಲಿ ನಿಲ್ಲಲು ಸಹ ಆಗುವುದಿಲ್ಲ. ಬಿಲಿಸಿನ ತಾಪ ತಳಲಾರದೆ ಪ್ರಮುಖ ಸರ್ಕಲ್‌ಗಳಲ್ಲಿ ಸಿಗ್ನಲ್ ಜಂಪ್ ಮಾಡುವ ಸಂಚಾರಿ ನಿಯಮಗಳ ಉಲ್ಲಂಘನೆ ಮಾಡುತ್ತಾರೆ. ಸಿಗ್ನಲ್‌ಗಳಲ್ಲಿ ವಾಹನಗಳು, ಬೈಕ್ ಸವಾರರು ರೋಲ್ಸ್ ಬ್ರೇಕ್ ಮಾಡದಂತೆ ತಡೆಯಲು ಪೊಲೀಸ್ ಹೊಸ ಪ್ಲಾನ್ ಮಾಡಿದೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.


Body:ಸಂಚಾರಿ ನಿಯಮಗಳನ್ನ ಪಾಲಿಸುವುದು ಪ್ರತಿಯೊಬ್ಬ ವಾಹನ ಹೊಂದಿರುವ ಜವಾಬ್ದಾರಿ. ಆದ್ರೆ ಬೇಸಿಗೆ ಕಾಲದಲ್ಲಿ ವೀಪರಿತವಾಗಿ ಬಿಸಿಲಿನ ತಾಪ ತಳಲಾರದೆ ರಾಯಚೂರಿನಲ್ಲಿ ವಾಹನಗಳು ಮತ್ತು ಬೈಕ್ ಸವಾರರು ಸಿಗ್ನಲ್ ಜಂಪ್ ಮಾಡುತ್ತಾರೆ. ಇದನ್ನು ನಿಯಂತ್ರಿಸಲು ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆ ಸಿಗ್ನಲ್ ನೇರಳಿ ವ್ಯವಸ್ಥೆ ಮಾಡಲು ಮುಂದಾಗಿದೆ. ಹೌದು, ನಗರದ ಬಸವೇಶ್ವರ ವೃತ್ತದ ಬಳಿ ಪ್ರಾಯೋಗಿಕವಾಗಿ ಸಿಗ್ನಲ್ ಬಳಿ ನಿಲ್ಲಿಸುವ ವಾಹನಗಳನ್ನ ರಸ್ತೆ ಬದಿಯಲ್ಲಿ ಕಂಬವನ್ನ ಆಳವಡಿಸಿ, ಅದರಕ್ಕೆ ಹಸಿರು ಹೊದಿಕೆ ಶೆಲ್ಟರ್ ಆಳವಡಿಸುವ ಮೂಲಕ ನೆರಳಿನ ವ್ಯವಸ್ಥೆಯನ್ನ ಮಾಡಿದೆ.


Conclusion:ಈ ನೆರಳಿನ ವ್ಯವಸ್ಥೆಯನ್ನ ಪ್ರಾಯೋಗಿಕವಾಗಿ ಬಸವೇಶ್ವರ ಸರ್ಕಲ್ ಆಯ್ಕೆ ಮಾಡಿಕೊಂಡು ಈ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದ್ದು, ಇದು ಸಕ್ಸಸ್ ಕಂಡರೆ ನಗರದಲ್ಲಿನ ಅಂಬೇಡ್ಕರ್ ಸರ್ಕಲ್, ಗಂಜ್ ಸರ್ಕಲ್ ಮತ್ತು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಆಳವಡಿಸುವುದಕ್ಕೆ ಮುಂದಾಗಿದೆ. ಈಗಾಗಲೇ ರಾಯಚೂರು ಜಿಲ್ಲೆಯ ೪೧ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು ಆಗಿದ್ದು, ಹೊರಗಡೆ ಸ್ವಲ್ಪ ಹೊತ್ತು ನಿಲ್ಲದಂತೆ ವಾತಾವರಣ ನಿರ್ಮಾಣವಾಗಿದ್ದು, ಬಿಸಿಲಿಗೆ ಹೆದರಿದ ಕೆಲ ಜನರ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ವಾಹನಗಳನ್ನ ಓಡಿಸುತ್ತಿದ್ದಾರೆ. ಇದನ್ನು ಕಂಡು ವಿಜಯಪುರ ಮಾದರಿಯಲ್ಲಿ ರಾಯಚೂರಿನಲ್ಲಿ ಮಾಡುವುದಕ್ಕೆ ರಾಯಚೂರು ಎಸ್ಪಿ ಡಾ.ಕಿಶೋರ್ ಬಾಬು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಒಟ್ನಿಲ್ಲಿ ಆರಂಭದಲ್ಲಿ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಟ್ರಾಫಿಕ್ ಸಿಗ್ನಲ್ ಆಳವಡಿಸಿರುವ ಶೆಲ್ಟರ್ ಪ್ರಾಯೋಗಿಕವಾಗಿ ಯಶಸ್ಸು ಕಂಡರೆ ಜಿಲ್ಲೆಯ ವ್ಯಾಪ್ತಿಗೆ ವಿಸ್ತರಿಸವಾಗಿದೆ, ಮುಂದೆ ದಿನಗಳಲ್ಲಿ ಏನು ಆಗುತ್ತದೆ ಎನ್ನುವುದು ಕಾದುನೋಡಬೇಕಾಗಿದೆ.
ಬೈಟ್.೧: ಡಾ.ಕಿಶೋರ್ ಬಾಬು, ಎಸ್ಪಿ, ರಾಯಚೂರು
Last Updated : Apr 3, 2019, 7:44 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.