ETV Bharat / state

ನಾಗರಹೊಳೆ ಸಫಾರಿ ಟಿಕೆಟ್ ಸೋಲ್ಡ್ ಔಟ್, ಸಫಾರಿಗರಿಗೆ ‌ನಿರಾಸೆ

author img

By ETV Bharat Karnataka Team

Published : Dec 29, 2023, 8:51 AM IST

Updated : Dec 29, 2023, 1:20 PM IST

ನಾಗರಹೊಳೆ ಸಫಾರಿ ಕೇಂದ್ರದಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿರುವ ಹಿನ್ನೆಲೆ ಸಫಾರಿಗರು ನಿರಾಸೆ ಅನುಭವಿಸಿದರು.

ಟಿಕೆಟ್ ಸೋಲ್ಡ್ ಔಟ್  ನಾಗರಹೊಳೆ ಸಫಾರಿ ಕೇಂದ್ರ  ಸಫಾರಿಗರಿಗೆ ‌ನಿರಾಸೆ  Nagarahole Safari Centre  Safari Goers  Nagarahole
ನಾಗರಹೊಳೆ ಸಫಾರಿ ಕೇಂದ್ರದಲ್ಲಿ ಟಿಕೆಟ್ ಸೋಲ್ಡ್ ಔಟ್, ಸಫಾರಿಗರಿಗೆ ‌ನಿರಾಸೆ
ನಾಗರಹೊಳೆ ಸಫಾರಿ ಟಿಕೆಟ್ ಸೋಲ್ಡ್ ಔಟ್, ಸಫಾರಿಗರಿಗೆ ‌ನಿರಾಸೆ

ಮೈಸೂರು: ಹೊಸ ವರ್ಷಾಚಾರಣೆ ಹಿನ್ನೆಲೆಯಲ್ಲಿ ನಾಗರಹೊಳೆ ಅಭಯಾರಣ್ಯಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ಟಿಕೆಟ್ ಸೋಲ್ಡ್ ಔಟ್ ಆಗಿರುವುದರಿಂದ ಕೆಲ ಸಫಾರಿಗರು ನಿರಾಸೆ ಅನುಭವಿಸಿ, ಸಫಾರಿ ಕೇಂದ್ರದ ಸಿಬ್ಬಂದಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿರುವ ಹೆಚ್.ಡಿ. ಕೋಟೆ ತಾಲೂಕಿನ ದಮ್ಮನಕಟ್ಟೆ ಸಫಾರಿ ಕೇಂದ್ರಕ್ಕೆ ಆಫ್​ಲೈನ್ ಮೂಲಕ ಟಿಕೆಟ್ ಪಡೆಯಲು ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ, ಸಫಾರಿಗೆ ಆಗಮಿಸಿದ್ದ ಹಲವು ಪ್ರವಾಸಿಗರಿಗೆ ಟಿಕೆಟ್ ಸಿಗದೆ ನಿರಾಸೆ ಉಂಟಾಯಿತು. ಟಿಕೆಟ್ ಸಿಗದ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಪ್ರವಾಸಿಗರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಟಿಕೆಟ್ ಫುಲ್ ಆಗಿದೆ ಎಂದು ಸಮಜಾಯಿಷಿ ನೀಡಿದ ಸಿಬ್ಬಂದಿ ವಿರುದ್ಧ ಪ್ರವಾಸಿಗರು ಕಿಡಿಕಾರಿದರು. ಅದಕ್ಕೆ ಉತ್ತರಿಸಿದ ಇಲಾಖೆ ಸಿಬ್ಬಂದಿ, ''ಟಿಕೆಟ್ ಸೋಲ್ಡ್ ಔಟ್​ ಆಗಿರುವುದನ್ನು ನೀವೇ ತಿಳಿದುಬೇಕು'' ಎಂದು ಹೇಳಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ, ಆನ್​ಲೈನ್​ನಲ್ಲೇ ಎಲ್ಲಾ ಟಿಕೆಟ್ ಮಾರಾಟವಾಗಿವೆ ಎಂದು ಸಫಾರಿ ವೀಕ್ಷಣೆಗೆ ಟಿಕೆಟ್ ಪಡೆಯಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದ ಪ್ರವಾಸಿಗರಿಗೆ ತಿಳಿಸಿದ್ದಾರೆ. ಟಿಕೆಟ್ ಸಿಗದ ಪ್ರವಾಸಿಗರು, ಅರಣ್ಯ ಇಲಾಖೆ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡಿದ್ದಾರೆ.

ಆನ್​ಲೈನ್ ಮತ್ತು ಆಫ್​ಲೈನ್​ನಲ್ಲಿ 50:50 ಪ್ರತಿಶತದಷ್ಟು ಟಿಕೆಟ್ ಮಾರಾಟಕ್ಕೆ ಅವಕಾಶವಿದೆ. ಡಿ.25ರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಹಲವರು ಟಿಕೆಟ್ ಸಿಗದೇ ನಿರಾಸೆಯಿಂದ ಹೋಗುತ್ತಿದ್ದ ದೃಶ್ಯ ಕಂಡುಬಂತು.

ಇದನ್ನೂ ಓದಿ: ಸಮಗ್ರ ಆಂಧ್ರ ಅಭಿವೃದ್ಧಿಗೆ 'ಪಬ್ಲಿಕ್ ಪ್ರೈವೇಟ್ ಪೀಪಲ್ಸ್ ಪಾಲಿಸಿ' ಅಗತ್ಯ: ಚಂದ್ರಬಾಬು ನಾಯ್ಡು

ನಾಗರಹೊಳೆ ಸಫಾರಿ ಟಿಕೆಟ್ ಸೋಲ್ಡ್ ಔಟ್, ಸಫಾರಿಗರಿಗೆ ‌ನಿರಾಸೆ

ಮೈಸೂರು: ಹೊಸ ವರ್ಷಾಚಾರಣೆ ಹಿನ್ನೆಲೆಯಲ್ಲಿ ನಾಗರಹೊಳೆ ಅಭಯಾರಣ್ಯಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ಟಿಕೆಟ್ ಸೋಲ್ಡ್ ಔಟ್ ಆಗಿರುವುದರಿಂದ ಕೆಲ ಸಫಾರಿಗರು ನಿರಾಸೆ ಅನುಭವಿಸಿ, ಸಫಾರಿ ಕೇಂದ್ರದ ಸಿಬ್ಬಂದಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿರುವ ಹೆಚ್.ಡಿ. ಕೋಟೆ ತಾಲೂಕಿನ ದಮ್ಮನಕಟ್ಟೆ ಸಫಾರಿ ಕೇಂದ್ರಕ್ಕೆ ಆಫ್​ಲೈನ್ ಮೂಲಕ ಟಿಕೆಟ್ ಪಡೆಯಲು ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ, ಸಫಾರಿಗೆ ಆಗಮಿಸಿದ್ದ ಹಲವು ಪ್ರವಾಸಿಗರಿಗೆ ಟಿಕೆಟ್ ಸಿಗದೆ ನಿರಾಸೆ ಉಂಟಾಯಿತು. ಟಿಕೆಟ್ ಸಿಗದ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಪ್ರವಾಸಿಗರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಟಿಕೆಟ್ ಫುಲ್ ಆಗಿದೆ ಎಂದು ಸಮಜಾಯಿಷಿ ನೀಡಿದ ಸಿಬ್ಬಂದಿ ವಿರುದ್ಧ ಪ್ರವಾಸಿಗರು ಕಿಡಿಕಾರಿದರು. ಅದಕ್ಕೆ ಉತ್ತರಿಸಿದ ಇಲಾಖೆ ಸಿಬ್ಬಂದಿ, ''ಟಿಕೆಟ್ ಸೋಲ್ಡ್ ಔಟ್​ ಆಗಿರುವುದನ್ನು ನೀವೇ ತಿಳಿದುಬೇಕು'' ಎಂದು ಹೇಳಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ, ಆನ್​ಲೈನ್​ನಲ್ಲೇ ಎಲ್ಲಾ ಟಿಕೆಟ್ ಮಾರಾಟವಾಗಿವೆ ಎಂದು ಸಫಾರಿ ವೀಕ್ಷಣೆಗೆ ಟಿಕೆಟ್ ಪಡೆಯಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದ ಪ್ರವಾಸಿಗರಿಗೆ ತಿಳಿಸಿದ್ದಾರೆ. ಟಿಕೆಟ್ ಸಿಗದ ಪ್ರವಾಸಿಗರು, ಅರಣ್ಯ ಇಲಾಖೆ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡಿದ್ದಾರೆ.

ಆನ್​ಲೈನ್ ಮತ್ತು ಆಫ್​ಲೈನ್​ನಲ್ಲಿ 50:50 ಪ್ರತಿಶತದಷ್ಟು ಟಿಕೆಟ್ ಮಾರಾಟಕ್ಕೆ ಅವಕಾಶವಿದೆ. ಡಿ.25ರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಹಲವರು ಟಿಕೆಟ್ ಸಿಗದೇ ನಿರಾಸೆಯಿಂದ ಹೋಗುತ್ತಿದ್ದ ದೃಶ್ಯ ಕಂಡುಬಂತು.

ಇದನ್ನೂ ಓದಿ: ಸಮಗ್ರ ಆಂಧ್ರ ಅಭಿವೃದ್ಧಿಗೆ 'ಪಬ್ಲಿಕ್ ಪ್ರೈವೇಟ್ ಪೀಪಲ್ಸ್ ಪಾಲಿಸಿ' ಅಗತ್ಯ: ಚಂದ್ರಬಾಬು ನಾಯ್ಡು

Last Updated : Dec 29, 2023, 1:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.