ಮೈಸೂರು: ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸ್ವಚ್ಛ ಭಾರತ್ ಖ್ಯಾತಿಯ ಹೆಚ್.ವಿ.ರಾಜೀವ್ ನೇಮಕರಾಗಿದ್ದಾರೆ.
ಸ್ವಚ್ಛ ಭಾರತ್ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಹೆಚ್.ವಿ.ರಾಜೀವ್ ಅವರನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಇವರು ಕೆ.ಆರ್. ಕ್ಷೇತ್ರದ ಬಿಜೆಪಿಯ ಪ್ರಮುಖರಲ್ಲಿ ಒಬ್ಬರಾಗಿದ್ದು, ಯಡಿಯೂರಪ್ಪನವರ ಜೊತೆ ಕೆಜೆಪಿಯಿಂದಲೂ ಗುರುತಿಸಿಕೊಂಡಿದ್ದರು. ಸತತವಾಗಿ ಸ್ವಚ್ಛ ಭಾರತ್ ಪರಿಕಲ್ಪನೆಯನ್ನು ಮೈಸೂರು ನಗರದಲ್ಲಿ ಆಂದೋಲನವಾಗಿ ರೂಪಿಸಿದ ರಾಜೀವ್ ಅವರನ್ನು ಈಗ ಸರ್ಕಾರ ಮುಡಾ ಅಧ್ಯಕ್ಷರಾಗಿ ನೇಮಕ ಮಾಡಿದೆ.