ETV Bharat / state

ಗಗನಚುಕ್ಕಿಗೆ ಬಂತು ಜೀವಕಳೆ: ಪ್ರವಾಸಿಗರ ಮನದಲ್ಲಿ ಉಲ್ಲಾಸದ ಹೊಳೆ..!

author img

By

Published : Jul 29, 2019, 2:36 PM IST

ಪ್ರಕೃತಿಗೆ ಮಳೆಯ ಸಿಂಚನವಾಯಿತು ಎಂದರೆ ಸಾಕು ಅಲ್ಲಿ ಮೊದಲಿಗೆ ಚಿಗುರೊಡೆಯುವುದೇ ಹಸಿರು, ಸ್ವಲ್ಪ ಅತಿಯಾದರೆ ಮತ್ತಷ್ಟು ರಂಗು ಮೂಡುವಂತೆ ಅಲ್ಲಲ್ಲಿ ಧುಮ್ಮಿಕ್ಕಿ ಹರಿಯುತ್ತವೆ ಸುಂದರ ಹಾಲ್ನೋರೆಯ ಜಲಪಾತಗಳು, ಅದಕ್ಕೆ ಸರಿಯಾದ ನಿದರ್ಶನ ಎಂಬಂತೆ ಸಕ್ಕರೆ ಜಿಲ್ಲೆಯಲ್ಲಿರುವ ಗಗನ ಚುಕ್ಕಿ ಜಲಪಾತ ಧುಮ್ಮಿಕ್ಕಿ ಹರಿಯುವ ಮೂಲಕ ಹಲವಾರು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದು, ನೋಡುಗರಿಗೆ ಮುದ ನೀಡುತ್ತಿದೆ.

ಸಕ್ಕರೆ ಜಿಲ್ಲೆಯಲ್ಲಿರುವ ಗಗನ ಚುಕ್ಕಿ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ


ಮಂಡ್ಯ: ಕಾವೇರಿಗೆ ಕೆಆರ್​​ಎಸ್ ಹಾಗೂ ಕಬಿನಿಯಿಂದ ನೀರು ಬಿಟ್ಟಿರುವುದರಿಂದ ಮಳವಳ್ಳಿ ತಾಲೂಕಿನ ಗಗನಚುಕ್ಕಿಗೆ ಜೀವಕಳೆ ಬಂದಿದೆ. ಈ ಜಲಪಾತ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದು. ಕಳೆದ ಒಂದು ವಾರದಿಂದ ತಮಿಳುನಾಡಿಗೆ ನೀರು ಹರಿಯುತ್ತಿರುವುದರಿಂದ ಜಲಪಾತ ಬೋರ್ಗೆರೆಯುತ್ತಿದೆ. ಈಗಾಗಲೇ ಪ್ರವಾಸಿಗರು ಸೆಲ್ಫಿಗಾಗಿ ಮುಗಿ ಬಿದ್ದಿದ್ದಾರೆ.

ಸಕ್ಕರೆ ಜಿಲ್ಲೆಯಲ್ಲಿರುವ ಗಗನ ಚುಕ್ಕಿ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ

ಶನಿವಾರ ಮತ್ತು ಭಾನುವಾರ ಹಾಗೂ ರಜಾ ದಿನಗಳಲ್ಲಿ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಬೆಂಗಳೂರು, ಮೈಸೂರು ಸೇರಿದಂತೆ ಹೊರ ಜಿಲ್ಲೆಗಳಿಂದ, ಹೊರ ರಾಜ್ಯಗಳಿಂದಲೂ ಪ್ರವಾಸಿಗರನ್ನು ಸೆಳೆಯುತ್ತಿದೆ ಈ ಗಗನಚುಕ್ಕಿ.

ಜಲಪಾತದ ವೈಭವ ನೋಡುತ್ತಿದ್ದಂತೆ ಎಂತಹ ರಸಿಕರ ಮನಸ್ಸಾದರೂ ಸರಿ ಮತ್ತಷ್ಟು ಉನ್ಮಾದಕ್ಕೆ ಹೋಗುವುದರಲ್ಲಿ ಅನುಮಾನವೇ ಇಲ್ಲ. ಈಗೀಗ ಆಕಾಶದಿಂದಲೇ ಜಲಪಾತಕ್ಕೆ ನೀರು ಧುಮ್ಮಿಕ್ಕುತ್ತಿದೆ ಎಂಬಂತೆ ಭಾಸವಾಗುತ್ತಿದೆ. ಇಲ್ಲಿಗೆ ಧಾವಿಸುತ್ತಿರುವ ಹಲವು ಸಹೃದಯರ ಮನಸ್ಸಿನಲ್ಲೇ ಕವನ ಗೀಚಿ ಕಾವೇರಿಯ ಸೊಬಗು ಸವಿಯುತ್ತಿರುವುದು ಮತ್ತಷ್ಟು ವಿಶೇಷವಾಗಿದೆ.


ಮಂಡ್ಯ: ಕಾವೇರಿಗೆ ಕೆಆರ್​​ಎಸ್ ಹಾಗೂ ಕಬಿನಿಯಿಂದ ನೀರು ಬಿಟ್ಟಿರುವುದರಿಂದ ಮಳವಳ್ಳಿ ತಾಲೂಕಿನ ಗಗನಚುಕ್ಕಿಗೆ ಜೀವಕಳೆ ಬಂದಿದೆ. ಈ ಜಲಪಾತ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದು. ಕಳೆದ ಒಂದು ವಾರದಿಂದ ತಮಿಳುನಾಡಿಗೆ ನೀರು ಹರಿಯುತ್ತಿರುವುದರಿಂದ ಜಲಪಾತ ಬೋರ್ಗೆರೆಯುತ್ತಿದೆ. ಈಗಾಗಲೇ ಪ್ರವಾಸಿಗರು ಸೆಲ್ಫಿಗಾಗಿ ಮುಗಿ ಬಿದ್ದಿದ್ದಾರೆ.

ಸಕ್ಕರೆ ಜಿಲ್ಲೆಯಲ್ಲಿರುವ ಗಗನ ಚುಕ್ಕಿ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ

ಶನಿವಾರ ಮತ್ತು ಭಾನುವಾರ ಹಾಗೂ ರಜಾ ದಿನಗಳಲ್ಲಿ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಬೆಂಗಳೂರು, ಮೈಸೂರು ಸೇರಿದಂತೆ ಹೊರ ಜಿಲ್ಲೆಗಳಿಂದ, ಹೊರ ರಾಜ್ಯಗಳಿಂದಲೂ ಪ್ರವಾಸಿಗರನ್ನು ಸೆಳೆಯುತ್ತಿದೆ ಈ ಗಗನಚುಕ್ಕಿ.

ಜಲಪಾತದ ವೈಭವ ನೋಡುತ್ತಿದ್ದಂತೆ ಎಂತಹ ರಸಿಕರ ಮನಸ್ಸಾದರೂ ಸರಿ ಮತ್ತಷ್ಟು ಉನ್ಮಾದಕ್ಕೆ ಹೋಗುವುದರಲ್ಲಿ ಅನುಮಾನವೇ ಇಲ್ಲ. ಈಗೀಗ ಆಕಾಶದಿಂದಲೇ ಜಲಪಾತಕ್ಕೆ ನೀರು ಧುಮ್ಮಿಕ್ಕುತ್ತಿದೆ ಎಂಬಂತೆ ಭಾಸವಾಗುತ್ತಿದೆ. ಇಲ್ಲಿಗೆ ಧಾವಿಸುತ್ತಿರುವ ಹಲವು ಸಹೃದಯರ ಮನಸ್ಸಿನಲ್ಲೇ ಕವನ ಗೀಚಿ ಕಾವೇರಿಯ ಸೊಬಗು ಸವಿಯುತ್ತಿರುವುದು ಮತ್ತಷ್ಟು ವಿಶೇಷವಾಗಿದೆ.

Intro:ಮಂಡ್ಯ: ಜಲಲ ಜಲ ಧಾರೆ. ಈ ಹಾಡು ಕೇಳೋಕೆ ಎಷ್ಟು ಸುಮಧುರನೋ ಅಷ್ಟೇ ಸುಂದರ ಜಲಧಾರೆಗಳು. ಸಕ್ಕರೆ ಜಿಲ್ಲೆಯ ಗಗನ ಚುಕ್ಕಿ ಜಲಪಾತ ಮಳೆಗಾಲ ಆರಂಭವಾಗುತ್ತಿದ್ದಂತೆ ಪ್ರವಾಸಿಗರನ್ನು ಸೆಳೆಯುತ್ತಿದೆ.

ಕಾವೇರಿಗೆ ಕೆ.ಆರ್.ಎಸ್ ಹಾಗೂ ಕಬಿನಿಯಿಂದ ನೀರು ಬಿಟ್ಟಿರುವುದರಿಂದ ಮಳವಳ್ಳಿ ತಾಲ್ಲೂಕಿನ ಗಗನಚುಕ್ಕಿಗೆ ಜೀವಕಳೆ ಬಂದಿದೆ. ಜಲಪಾತ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಕಳೆದ ಒಂದು ವಾರದಿಂದ ತಮಿಳುನಾಡಿಗೆ ನೀರು ಹರಿಯುತ್ತಿರುವುದರಿಂದ ಜಲಪಾತ ಬೋರ್ಗೆರೆಯುತ್ತಿದೆ. ಪ್ರವಾಸಿಗರು ಸೆಲ್ಫಿಗಾಗಿ ಮುಗಿ ಬಿದ್ದಿದ್ದಾರೆ.

ಶನಿವಾರ ಮತ್ತು ಭಾನುವಾರ ಹಾಗೂ ರಜಾ ದಿನಗಳಲ್ಲಿ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಬೆಂಗಳೂರು, ಮೈಸೂರು ಸೇರಿದಂತೆ ಹೊರ ಜಿಲ್ಲೆಗಳಿಂದ, ಹೊರ ರಾಜ್ಯಗಳಿಂದಲೂ ಪ್ರವಾಸಿಗರನ್ನು ಸೆಳೆಯುತ್ತಿದೆ ಗಗನಚುಕ್ಕಿ.

ಜಲಪಾತದ ವೈಭವ ನೋಡುತ್ತಿದ್ದಂತೆ ರಸಿಕರ ಮನಸ್ಸು ಮತ್ತಷ್ಟು ಉಲ್ಲಾಸಕ್ಕೆ ಹೋಗುವುದರಲ್ಲಿ ಅನುಮಾನವೇ ಇಲ್ಲ. ಆಕಾಶದಿಂದಲೇ ಜಲಪಾತಕ್ಕೆ ನೀರು ಧುಮ್ಮಿಕ್ಕುತ್ತಿದೆ ಎಂಬಂತೆ ಭಾಷವಾಗುತ್ತಿದೆ. ಹಲವು ಸಹೃದಯರು ಮನಸ್ಸಿನಲ್ಲೇ ಕವನ ಗೀಚಿ ಕಾವೇರಿಯ ಸೊಬಗನ್ನು ಸವಿಯುತ್ತಿದ್ದಾರೆ. ಮತ್ತೇಕೆ ತಡ, ನೀವೂ ಒಮ್ಮೆ ಗಗನಚುಕ್ಕಿಯ ಕಡೆ ಮುಖ ಮಾಡಿ ಬನ್ನಿ.Body:ಯತೀಶ್ ಬಾಬುConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.