ETV Bharat / state

ಕೆಆರ್​ಎಸ್​ಗೆ ಕಾವೇರಿ‌ ಪ್ರಾಧಿಕಾರ ಭೇಟಿ... ರೈತರಿಗೆ ಶುರುವಾಯ್ತು ಢವ ಢವ - undefined

ಕೃಷ್ಣರಾಜಸಾಗರ ಜಲಾಶಯಕ್ಕೆ ಕೇಂದ್ರದ ಕಾವೇರಿ‌ ನೀರು ನಿರ್ವಹಣಾ ಪ್ರಾಧಿಕಾರ ತಂಡ ಭೇಟಿ ನೀಡಿ ನೀರಿನ ಸಂಗ್ರಹ ಹಾಗೂ ಅಣೆಕಟ್ಟೆಯ ಪರಿಶೀಲನೆಯಲ್ಲಿ ತೊಡಗಿದೆ. ಬಳಿಕ ಕೇಂದ್ರಕ್ಕೆ ವರದಿ ನೀಡಲಿದೆ.

ಕೆಆರ್​ಎಸ್
author img

By

Published : Jun 4, 2019, 2:41 PM IST

ಮಂಡ್ಯ: ರೈತರ ಎದೆಯಲ್ಲಿ ಢವ ಢವ ಶುರುವಾಗಿದೆ. ಭಯಕ್ಕೆ ಕಾರಣವೂ ಇದೆ. ತಮಿಳುನಾಡಿಗೆ ನೀರು ಬಿಡುವ ಸಂಬಂಧ ಕಾವೇರಿ ನೀರು ನಿಯಂತ್ರಣ ಮಂಡಳಿ ತಾತ್ಕಾಲಿಕ ರಿಲೀಫ್ ನೀಡಿರಬಹುದು. ಆದರೆ ಮುಂದೆ ಇದೆ ಮಾರಿ ಹಬ್ಬ ಎಂಬ ಆತಂಕ ಶುರುವಾಗಿದೆ.

ಹೌದು, ಇಂದು ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯಕ್ಕೆ ಕೇಂದ್ರದ ಕಾವೇರಿ‌ ನೀರು ನಿರ್ವಹಣಾ ಪ್ರಾಧಿಕಾರ ತಂಡ ಭೇಟಿ ನೀಡಿ ನೀರಿನ ಸಂಗ್ರಹ ಹಾಗೂ ಅಣೆಕಟ್ಟೆಯ ಪರಿಶೀಲನೆ ನಡೆಸಿದೆ. ಜಲಾಶಯದ ಅಧಿಕಾರಿಗಳಿಂದ ಪ್ರಸ್ತುತ ನೀರಿನ ಮಟ್ಟ, ಪ್ರಸಕ್ತ ವಾಸ್ತವ ಸ್ಥಿತಿಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಿದೆ. ಇಂದು ಕೆ.ಆರ್.ಎಸ್. ಜಲಾಶಯ ವ್ಯಾಪ್ತಿಯಲ್ಲಿ ಪ್ರವಾಸ ಮಾಡಿ ವಾಸ್ತವ ಅಂಶಗಳ ಮಾಹಿತಿ ಸಂಗ್ರಹ ಮಾಡಲಿದೆ. ನಾಳೆ ಹೇಮಾವತಿ ಹಾಗೂ ಹಾರಂಗಿ ಜಲಾಶಯಕ್ಕೂ ಭೇಟಿ ನೀಡುವ ಸಾಧ್ಯತೆ ಇದೆ. ನಾಡಿದ್ದು ಕೇರಳ, ತಮಿಳುನಾಡು ಮತ್ತು ಪಾಂಡಿಚೇರಿಗೂ ಭೇಟಿ ನೀಡಲಿರುವ ತಂಡ, ಅಲ್ಲಿನ ವಾಸ್ತವಿಕ ಅಂಶಗಳ ಮಾಹಿತಿ ಸಂಗ್ರಹ ಮಾಡಲಿದೆ.

ಕೆಆರ್​ಎಸ್​ಗೆ ಕಾವೇರಿ‌ ನೀರು ನಿರ್ವಹಣಾ ಪ್ರಾಧಿಕಾರ ತಂಡ ಭೇಟಿ

ಬಳಿಕ ಕೇಂದ್ರಕ್ಕೆ ವರದಿ ನೀಡಲಿದ್ದು, ವರದಿ ಮುಂದಿನ ಸಭೆಯ ನಿರ್ಧಾರಕ್ಕೆ ಸಾಕ್ಷಿಯಾಗಲಿದೆ. ಕಾವೇರಿ ಪ್ರಾಧಿಕಾರ ತಮಿಳುನಾಡಿಗೆ ನೀರು ಬಿಡಲು ಸೂಚಿಸಿದ ಬೆನ್ನಲ್ಲೇ ಪ್ರಾಧಿಕಾರದ ಸದಸ್ಯರ ಕೆ.ಆರ್.ಎಸ್. ಭೇಟಿ ಕುತೂಹಲ ಮೂಡಿಸಿದೆ. ಇಲ್ಲಿನ ಮಾಹಿತಿ ಸಂಗ್ರಹ ಮಾಡಿ ಮಳೆ ಬಾರದೇ ಇದ್ದರೂ ಯಾವ ಅಂಶದ ಅನ್ವಯ ನೀರು ಬಿಡಲು ಆದೇಶ ನೀಡಲಿದೆ ಎಂಬ ಆತಂಕ ರೈತರನ್ನು ಕಾಡುತ್ತಿದೆ.

ಮಂಡ್ಯ: ರೈತರ ಎದೆಯಲ್ಲಿ ಢವ ಢವ ಶುರುವಾಗಿದೆ. ಭಯಕ್ಕೆ ಕಾರಣವೂ ಇದೆ. ತಮಿಳುನಾಡಿಗೆ ನೀರು ಬಿಡುವ ಸಂಬಂಧ ಕಾವೇರಿ ನೀರು ನಿಯಂತ್ರಣ ಮಂಡಳಿ ತಾತ್ಕಾಲಿಕ ರಿಲೀಫ್ ನೀಡಿರಬಹುದು. ಆದರೆ ಮುಂದೆ ಇದೆ ಮಾರಿ ಹಬ್ಬ ಎಂಬ ಆತಂಕ ಶುರುವಾಗಿದೆ.

ಹೌದು, ಇಂದು ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯಕ್ಕೆ ಕೇಂದ್ರದ ಕಾವೇರಿ‌ ನೀರು ನಿರ್ವಹಣಾ ಪ್ರಾಧಿಕಾರ ತಂಡ ಭೇಟಿ ನೀಡಿ ನೀರಿನ ಸಂಗ್ರಹ ಹಾಗೂ ಅಣೆಕಟ್ಟೆಯ ಪರಿಶೀಲನೆ ನಡೆಸಿದೆ. ಜಲಾಶಯದ ಅಧಿಕಾರಿಗಳಿಂದ ಪ್ರಸ್ತುತ ನೀರಿನ ಮಟ್ಟ, ಪ್ರಸಕ್ತ ವಾಸ್ತವ ಸ್ಥಿತಿಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಿದೆ. ಇಂದು ಕೆ.ಆರ್.ಎಸ್. ಜಲಾಶಯ ವ್ಯಾಪ್ತಿಯಲ್ಲಿ ಪ್ರವಾಸ ಮಾಡಿ ವಾಸ್ತವ ಅಂಶಗಳ ಮಾಹಿತಿ ಸಂಗ್ರಹ ಮಾಡಲಿದೆ. ನಾಳೆ ಹೇಮಾವತಿ ಹಾಗೂ ಹಾರಂಗಿ ಜಲಾಶಯಕ್ಕೂ ಭೇಟಿ ನೀಡುವ ಸಾಧ್ಯತೆ ಇದೆ. ನಾಡಿದ್ದು ಕೇರಳ, ತಮಿಳುನಾಡು ಮತ್ತು ಪಾಂಡಿಚೇರಿಗೂ ಭೇಟಿ ನೀಡಲಿರುವ ತಂಡ, ಅಲ್ಲಿನ ವಾಸ್ತವಿಕ ಅಂಶಗಳ ಮಾಹಿತಿ ಸಂಗ್ರಹ ಮಾಡಲಿದೆ.

ಕೆಆರ್​ಎಸ್​ಗೆ ಕಾವೇರಿ‌ ನೀರು ನಿರ್ವಹಣಾ ಪ್ರಾಧಿಕಾರ ತಂಡ ಭೇಟಿ

ಬಳಿಕ ಕೇಂದ್ರಕ್ಕೆ ವರದಿ ನೀಡಲಿದ್ದು, ವರದಿ ಮುಂದಿನ ಸಭೆಯ ನಿರ್ಧಾರಕ್ಕೆ ಸಾಕ್ಷಿಯಾಗಲಿದೆ. ಕಾವೇರಿ ಪ್ರಾಧಿಕಾರ ತಮಿಳುನಾಡಿಗೆ ನೀರು ಬಿಡಲು ಸೂಚಿಸಿದ ಬೆನ್ನಲ್ಲೇ ಪ್ರಾಧಿಕಾರದ ಸದಸ್ಯರ ಕೆ.ಆರ್.ಎಸ್. ಭೇಟಿ ಕುತೂಹಲ ಮೂಡಿಸಿದೆ. ಇಲ್ಲಿನ ಮಾಹಿತಿ ಸಂಗ್ರಹ ಮಾಡಿ ಮಳೆ ಬಾರದೇ ಇದ್ದರೂ ಯಾವ ಅಂಶದ ಅನ್ವಯ ನೀರು ಬಿಡಲು ಆದೇಶ ನೀಡಲಿದೆ ಎಂಬ ಆತಂಕ ರೈತರನ್ನು ಕಾಡುತ್ತಿದೆ.

Intro:ಮಂಡ್ಯ: ರೈತರ ಎದೆಯಲ್ಲಿ ಢವ ಢವ ಶುರುವಾಗಿದೆ. ಭಯಕ್ಕೆ ಕಾರಣವೂ ಇದೆ. ಕಾವೇರಿ ನೀರು ನಿಯಂತ್ರಣ ಮಂಡಳಿ ತಾತ್ಕಾಲಿಕ ರಿಲೀಫ್ ನೀಡಿರಬಹುದು. ಆದರೆ ಮುಂದೆ ಇದೆ ಮಾರೀ ಹಬ್ಬ ಎಂಬ ಆತಂಕ ಶುರುವಾಗಿದೆ.
ಹೌದು, ಇಂದು ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್.ಗೆ ಕೇಂದ್ರದ ಕಾವೇರಿ‌ ನೀರು ನಿರ್ವಹಣಾ ಪ್ರಾಧಿಕಾರ ತಂಡ ಭೇಟಿ ನೀಡಿ ನೀರಿನ ಸಂಗ್ರಹ ಹಾಗೂ ಅಣೆಕಟ್ಟೆಯ ಪರಿಶೀಲನೆಯಲ್ಲಿ ತೊಡಗಿದೆ. ಜಲಾಶಯದ ಅಧಿಕಾರಿಗಳಿಂದ ಪ್ರಸ್ತುತ ನೀರಿನ ಮಟ್ಟ , ಪ್ರಸಕ್ತ ವಾಸ್ತವ ಸ್ಥಿತಿಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಿದೆ.
ಇಂದು ಕೆ.ಆರ್.ಎಸ್. ಜಲಾಶಯ ವ್ಯಾಪ್ತಿಯಲ್ಲಿ ಪ್ರವಾಸ ಮಾಡಿ ವಾಸ್ತವ ಅಂಶಗಳ ಮಾಹಿತಿ ಸಂಗ್ರಹ ಮಾಡಲಿದೆ. ನಾಳೆ ಹೇಮಾವತಿ ಹಾಗೂ ಹಾರಂಗಿ ಜಲಾಶಯಕ್ಕೂ ಭೇಟಿ ನೀಡುವ ಸಾಧ್ಯತೆ ಇದೆ.
ನಾಳಿದ್ದು ಕೇರಳ, ತಮಿಳುನಾಡಿ ಮತ್ತು ಪಾಂಡಿಚೇರಿಗೂ ಭೇಟಿ ನೀಡಲಿರುವ ತಂಡ ಅಲ್ಲಿನ ವಾಸ್ತವಿಕ ಅಂಶಗಳ ಮಾಹಿತಿ ಸಂಗ್ರಹ ಮಾಡಲಿದೆ. ಬಳಿಕ ಕೇಂದ್ರಕ್ಕೆ ವರದಿ ನೀಡಲಿದ್ದು, ವರದಿಯೂ ಮುಂದಿನ ಸಭೆಯ ನಿರ್ಧಾರಕ್ಕೆ ಸಾಕ್ಷಿಯಾಗಲಿದೆ.
ಕಾವೇರಿ ಪ್ರಾಧಿಕಾರ ತಮಿಳುನಾಡಿಗೆ ನೀರು ಬಿಡಲು ಸೂಚಿಸಿದ ಬೆನ್ನಲೆ ಪ್ರಾಧಿಕಾರದ ಸದಸ್ಯರ ಕೆ.ಆರ್.ಎಸ್. ಭೇಟಿ ಕುತೂಹಲ ಮೂಡಿಸಿದೆ. ಇಲ್ಲಿನ ಮಾಹಿತಿ ಸಂಗ್ರಹ ಮಾಡಿ ಮಳೆ ಬರದೇ ಇದ್ದರೂ ತೀರ್ಪಿನ ಯಾವ ಅಂಶದ ಅನ್ವಯ ನೀರು ಬಿಡಲು ಆದೇಶ ನೀಡಲಿದೆ ಎಂಬ ಆತಂಕ ರೈತರನ್ನು ಕಾಡುತ್ತಿದೆ.Body:ಕೊತ್ತತ್ತಿ ಯತೀಶ್ ಬಾಬುConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.