ಕೊಪ್ಪಳ: ಕೊಪ್ಪಳದ ಜೋಡಿಯೊಂದು ಸಿಂಪಲ್ಲಾಗಿ ಸಂಬಂಧಿಯೊಬ್ಬರ ಸಮ್ಮುಖದಲ್ಲಿ ದೇವಸ್ಥಾನಕ್ಕೆ ಬಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ನಗರದ ಹೊರವಲಯದಲ್ಲಿರುವ ಮಳೆಮಲ್ಲೇಶ್ವರ ದೇವಸ್ಥಾನದಲ್ಲಿ ಈ ಮದುವೆ ನಡೆಯಿತು. ಕೊಪ್ಪಳದ ಮಂಜುನಾಥ ಹಂಚಿನಾಳ ಹಾಗೂ ಯಲಬುರ್ಗಾ ತಾಲೂಕಿನ ಮುಧೋಳದ ಸಹನಾ ಕೋವಿಡ್ ಪರಸ್ಪರ ಪ್ರೀತಿಸುತ್ತಿದ್ದರಂತೆ. ಬೆಳಗ್ಗೆ ದೇವಸ್ಥಾನಕ್ಕೆ ಆಗಮಿಸಿದ ಈ ಜೋಡಿಯ ವಿವಾಹಕ್ಕೆ ವರನ ಬಂಧುವೊಬ್ಬರು ಸಾಕ್ಷಿಯಾಗಿದ್ದರು.
ಹುಬ್ಬಳ್ಳಿಯಲ್ಲಿ ಕೆಲಸ ಮಾಡುತ್ತಿರುವ ಮಂಜುನಾಥ ಎರಡು ವರ್ಷದಿಂದ ಸಹನಾರನ್ನು ಪ್ರೀತಿಸುತ್ತಿದ್ದರಂತೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಮದುವೆ ಕಾರ್ಯ ಮಾಡಲು ಆಗಲಿಲ್ಲ. ಹೀಗಾಗಿ ದೇವಸ್ಥಾನದಲ್ಲಿ ಅತ್ಯಂತ ಸರಳವಾಗಿ ಮದುವೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ