ETV Bharat / state

ದುಷ್ಕೃತ್ಯ ಎಸಗುತ್ತಿದ್ದ ಪುಂಡರ ಚಳಿ ಬಿಡಿಸಿದ ಪೊಲೀಸರು: ಕೋಲಾರ ಎಸ್​ಪಿ ನೇತೃತ್ವದಲ್ಲಿ ಹೊಸ ಪ್ರಯೋಗ

author img

By

Published : Feb 16, 2023, 2:07 PM IST

Updated : Feb 16, 2023, 2:28 PM IST

ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದವರ ಮನೆ ಮೇಲೆ ದಾಳಿ- ಕೃತ್ಯಗಳಲ್ಲಿ ಭಾಗಿಯಾಗದಂತೆ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ- ಕೋಲಾರ ಪೊಲೀಸರ ವಿಭಿನ್ನ ಪ್ರಯತ್ನ

kolara
ಪುಂಡರ ಚಳಿ ಬಿಡಿಸಿದ ಪೊಲೀಸರು

ಕೋಲಾರ: ಜಿಲ್ಲೆಯಲ್ಲಿ ದುಷ್ಕೃತ್ಯ ಎಸಗುತ್ತಿದ್ದ ರೌಡಿಗಳು ಮತ್ತು ಪುಂಡರಿಗೆ ಕೋಲಾರ ಎಸ್​ಪಿ ನಾರಾಯಣ್​ ಹಾಗೂ ಸಿಬ್ಬಂದಿಗಳು ಚಳಿ ಬಿಡಿಸಿದ್ದಾರೆ. ಎಡಿಜಿಪಿ ಅಲೋಕ್​ ಕುಮಾರ್​ ಮತ್ತು ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ಅವರ ಸೂಚನೆಯಂತೆ, ಕೋಲಾರ ಪೊಲೀಸರು ವಿಶೇಷ ರಾತ್ರಿ ಗಸ್ತು ಮಾಡುವ ಮೂಲಕ ಕೋಲಾರ ಜಿಲ್ಲೆಯಾಧ್ಯಂತ ರೌಡಿ ಶೀಟರ್​, ಎಂಓಬಿಗಳು ಸೇರಿದಂತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದವರ ಮನೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಲ್ಲದೇ, ಅವರನ್ನು ಠಾಣೆಗೆ ಕರೆತಂದು ಚಳಿ ಬಿಡಿಸಿದ್ದಾರೆ.

ಜಿಲ್ಲೆಯ ಸುಮಾರು 500ಕ್ಕೂ ಹೆಚ್ಚು ಪೊಲೀಸರು ರಾತ್ರೋ ರಾತ್ರಿ ಕಾರ್ಯಾಚರಣೆಗಿಳಿದ್ದಾರೆ. ಜಿಲ್ಲೆಯಾಧ್ಯಂತ ಎಲ್ಲಾ ಪೊಲೀಸ್ ಸಿಬ್ಬಂದಿಗಳನ್ನು ಬಳಸಿಕೊಂಡು ಈ ಕಾರ್ಯಾಚರಣೆ ನಡೆಸಲಾಗಿದೆ. ಕೋಲಾರ ನಗರ, ಮುಳಬಾಗಿಲು, ಮಾಲೂರು, ಶ್ರೀನಿವಾಸಪುರ ಸೇರಿದಂತೆ ಎಲ್ಲ ಪಟ್ಟಣಗಳಲ್ಲಿ ಹಾಗೂ ಗಡಿ ಭಾಗದಲ್ಲಿ ಸುಮಾರು 25 ಚೆಕ್​ಪೋಸ್ಟ್​ಗಳನ್ನು ಹಾಕಲಾಗಿದ್ದು, ಅನಧೀಕೃತವಾಗಿ ಓಡಾಡುವ ವಾಹನಗಳನ್ನು ತಪಾಸಣೆ ಮಾಡುವುದು, ಕುಡಿದು ಎಲ್ಲೆಂದರಲ್ಲಿ ಓಡಾಡುವವರು, ಅನಾವಶ್ಯಕವಾಗಿ ರಾತ್ರಿ ಹನ್ನೊಂದು ಗಂಟೆ ನಂತರವೂ ರಸ್ತೆ ಹಾಗೂ ಎಲ್ಲೆಂದರಲ್ಲಿ ತಿರುಗುವವರನ್ನು ಠಾಣೆಗೆ ಕರೆತಂದಿದ್ದಾರೆ.

ಇದನ್ನೂ ಓದಿ: ಆತ್ಮಹತ್ಯೆ ದಾರಿ ಕುರಿತು ಇಂಟರ್​ನೆಟ್​ನಲ್ಲಿ ಮಾಹಿತಿ ಹುಡುಕಾಟ: ಪೊಲೀಸರಿಂದ ಉಳಿಯಿತು ಯುವಕನ ಪ್ರಾಣ

ಜಿಲ್ಲೆಯಾಧ್ಯಂತ ಸುಮಾರು 250 ಕ್ಕೂ ಹೆಚ್ಚು ರೌಡಿಶೀಟರ್​ ಹಾಗೂ ಎಂಒಬಿಗಳನ್ನು ಠಾಣೆಗೆ ಕರೆತಂದು ಅವರಿಂದ ಇನ್ನು ಮುಂದೆ ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗದಂತೆ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ಕಳುಸಿದ್ದಾರೆ. ಇನ್ನೂ ವಿಶೇಷ ರಾತ್ರಿ ಗಸ್ತು ಕಾರ್ಯಾಚರಣೆಯಲ್ಲಿ ಕೋಲಾರ ಹೆಚ್ಚುವರಿ ಎಸ್​ಪಿ ಭಾಸ್ಕರ್​, ಡಿವೈಎಸ್​ಪಿಗಳಾದ ಮುರಳೀಧರ್​, ಜೈಶಂಕರ್​ ಸೇರಿದಂತೆ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ಜಿಲ್ಲೆಯಲ್ಲಿ ಅಪರಾಧಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಆಗಿಂದಾಗ್ಗೆ ಈ ರೀತಿಯ ಕಾರ್ಯಾಚರಣೆ ಮಾಡಲಾಗುವುದು ಎಂದು ಎಸ್​ಪಿ ನಾರಾಯಣ್​ ತಿಳಿಸಿದ್ದಾರೆ.

ಮೊಬೈಲ್​ ಕಳ್ಳತನಕ್ಕೆ ಗದಗ ಪೊಲೀಸರಿಂದ ಬ್ರೇಕ್​: ಮೊಬೈಲ್​ ಕಳ್ಳತನಕ್ಕೆ ಗದಗ ಪೊಲೀಸರು ಬ್ರೇಕ್​ ಹಾಕಿದ್ದಾರೆ. ಕಳೆದುಹೋದ ಮೊಬೈಲ್​ಗಳನ್ನು ಹುಡುಕಿಕೊಡುವ ತಾಂತ್ರಿಕ ವ್ಯವಸ್ಥೆಯೊಂದನ್ನು ಪೊಲೀಸ್​ ಇಲಾಖೆಯಿಂದ ಮಾಡಲಾಗಿದೆ. ಹೀಗಾಗಿ ಮೊಬೈಲ್​ ಕಳೆದುಕೊಂಡರೆ ಭಯಪಡಬೇಕಿಲ್ಲ. ಈ ವಿನೂತನ ಪ್ರಯೋಗವು ಗದಗದಲ್ಲಿ ಮಾತ್ರವೇ ಜಾರಿಗೊಳಿಸಲಾಗಿದ್ದು, ಯಶಸ್ಸು ಕಂಡಲ್ಲಿ ರಾಜ್ಯದಲ್ಲಿ ಅಭಿವೃದ್ಧಿಪಡಿಸುವ ತೀರ್ಮಾನ ಮಾಡಲಾಗಿದೆ.

ಇಲಾಖೆಯು 'ಮೊಬಿಫೈ' ಎಂಬ ಹೊಸದೊಂದು ಆ್ಯಪ್​ ಅನ್ನು ಜಾರಿಗೆ ತಂದಿದೆ. ಈ ಮೂಲಕ ಕಳೆದು ಹೋದ ಮೊಬೈಲ್​ ಅನ್ನು ಪತ್ತೆ ಮಾಡಬಹುದು. ಆದರೆ ಇದಕ್ಕೆ ಕೆಲವೊಂದು ಪ್ರಕ್ರಿಯೆಗಳನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕಿದೆ. ಇದ್ದ ಜಾಗದಿಂದಲೇ ಕೆಲವು ಮಾಹಿತಿಯನ್ನು ಈ ಆ್ಯಪ್​ನಲ್ಲಿ ಭರ್ತಿ ಮಾಡಿದರೆ ಸಾಕು. ಪೊಲೀಸ್​ ಠಾಣೆ ಮೆಟ್ಟಿಲು ಹತ್ತಬೇಕಿಲ್ಲ. ಈ ಹೊಸ ತಾಂತ್ರಿಕ ವ್ಯವಸ್ಥೆಯಿಂದ ಸುಲಭವಾಗಿ ನಿಮ್ಮ ಮೊಬೈಲ್​ ನಿಮ್ಮ ಕೈ ಸೇರುತ್ತದೆ.

ಇದನ್ನೂ ಓದಿ: ತಮಿಳುನಾಡು ಬೇಟೆಗಾರರು ರಾಜ್ಯದ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ

ಕೋಲಾರ: ಜಿಲ್ಲೆಯಲ್ಲಿ ದುಷ್ಕೃತ್ಯ ಎಸಗುತ್ತಿದ್ದ ರೌಡಿಗಳು ಮತ್ತು ಪುಂಡರಿಗೆ ಕೋಲಾರ ಎಸ್​ಪಿ ನಾರಾಯಣ್​ ಹಾಗೂ ಸಿಬ್ಬಂದಿಗಳು ಚಳಿ ಬಿಡಿಸಿದ್ದಾರೆ. ಎಡಿಜಿಪಿ ಅಲೋಕ್​ ಕುಮಾರ್​ ಮತ್ತು ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ಅವರ ಸೂಚನೆಯಂತೆ, ಕೋಲಾರ ಪೊಲೀಸರು ವಿಶೇಷ ರಾತ್ರಿ ಗಸ್ತು ಮಾಡುವ ಮೂಲಕ ಕೋಲಾರ ಜಿಲ್ಲೆಯಾಧ್ಯಂತ ರೌಡಿ ಶೀಟರ್​, ಎಂಓಬಿಗಳು ಸೇರಿದಂತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದವರ ಮನೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಲ್ಲದೇ, ಅವರನ್ನು ಠಾಣೆಗೆ ಕರೆತಂದು ಚಳಿ ಬಿಡಿಸಿದ್ದಾರೆ.

ಜಿಲ್ಲೆಯ ಸುಮಾರು 500ಕ್ಕೂ ಹೆಚ್ಚು ಪೊಲೀಸರು ರಾತ್ರೋ ರಾತ್ರಿ ಕಾರ್ಯಾಚರಣೆಗಿಳಿದ್ದಾರೆ. ಜಿಲ್ಲೆಯಾಧ್ಯಂತ ಎಲ್ಲಾ ಪೊಲೀಸ್ ಸಿಬ್ಬಂದಿಗಳನ್ನು ಬಳಸಿಕೊಂಡು ಈ ಕಾರ್ಯಾಚರಣೆ ನಡೆಸಲಾಗಿದೆ. ಕೋಲಾರ ನಗರ, ಮುಳಬಾಗಿಲು, ಮಾಲೂರು, ಶ್ರೀನಿವಾಸಪುರ ಸೇರಿದಂತೆ ಎಲ್ಲ ಪಟ್ಟಣಗಳಲ್ಲಿ ಹಾಗೂ ಗಡಿ ಭಾಗದಲ್ಲಿ ಸುಮಾರು 25 ಚೆಕ್​ಪೋಸ್ಟ್​ಗಳನ್ನು ಹಾಕಲಾಗಿದ್ದು, ಅನಧೀಕೃತವಾಗಿ ಓಡಾಡುವ ವಾಹನಗಳನ್ನು ತಪಾಸಣೆ ಮಾಡುವುದು, ಕುಡಿದು ಎಲ್ಲೆಂದರಲ್ಲಿ ಓಡಾಡುವವರು, ಅನಾವಶ್ಯಕವಾಗಿ ರಾತ್ರಿ ಹನ್ನೊಂದು ಗಂಟೆ ನಂತರವೂ ರಸ್ತೆ ಹಾಗೂ ಎಲ್ಲೆಂದರಲ್ಲಿ ತಿರುಗುವವರನ್ನು ಠಾಣೆಗೆ ಕರೆತಂದಿದ್ದಾರೆ.

ಇದನ್ನೂ ಓದಿ: ಆತ್ಮಹತ್ಯೆ ದಾರಿ ಕುರಿತು ಇಂಟರ್​ನೆಟ್​ನಲ್ಲಿ ಮಾಹಿತಿ ಹುಡುಕಾಟ: ಪೊಲೀಸರಿಂದ ಉಳಿಯಿತು ಯುವಕನ ಪ್ರಾಣ

ಜಿಲ್ಲೆಯಾಧ್ಯಂತ ಸುಮಾರು 250 ಕ್ಕೂ ಹೆಚ್ಚು ರೌಡಿಶೀಟರ್​ ಹಾಗೂ ಎಂಒಬಿಗಳನ್ನು ಠಾಣೆಗೆ ಕರೆತಂದು ಅವರಿಂದ ಇನ್ನು ಮುಂದೆ ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗದಂತೆ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ಕಳುಸಿದ್ದಾರೆ. ಇನ್ನೂ ವಿಶೇಷ ರಾತ್ರಿ ಗಸ್ತು ಕಾರ್ಯಾಚರಣೆಯಲ್ಲಿ ಕೋಲಾರ ಹೆಚ್ಚುವರಿ ಎಸ್​ಪಿ ಭಾಸ್ಕರ್​, ಡಿವೈಎಸ್​ಪಿಗಳಾದ ಮುರಳೀಧರ್​, ಜೈಶಂಕರ್​ ಸೇರಿದಂತೆ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ಜಿಲ್ಲೆಯಲ್ಲಿ ಅಪರಾಧಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಆಗಿಂದಾಗ್ಗೆ ಈ ರೀತಿಯ ಕಾರ್ಯಾಚರಣೆ ಮಾಡಲಾಗುವುದು ಎಂದು ಎಸ್​ಪಿ ನಾರಾಯಣ್​ ತಿಳಿಸಿದ್ದಾರೆ.

ಮೊಬೈಲ್​ ಕಳ್ಳತನಕ್ಕೆ ಗದಗ ಪೊಲೀಸರಿಂದ ಬ್ರೇಕ್​: ಮೊಬೈಲ್​ ಕಳ್ಳತನಕ್ಕೆ ಗದಗ ಪೊಲೀಸರು ಬ್ರೇಕ್​ ಹಾಕಿದ್ದಾರೆ. ಕಳೆದುಹೋದ ಮೊಬೈಲ್​ಗಳನ್ನು ಹುಡುಕಿಕೊಡುವ ತಾಂತ್ರಿಕ ವ್ಯವಸ್ಥೆಯೊಂದನ್ನು ಪೊಲೀಸ್​ ಇಲಾಖೆಯಿಂದ ಮಾಡಲಾಗಿದೆ. ಹೀಗಾಗಿ ಮೊಬೈಲ್​ ಕಳೆದುಕೊಂಡರೆ ಭಯಪಡಬೇಕಿಲ್ಲ. ಈ ವಿನೂತನ ಪ್ರಯೋಗವು ಗದಗದಲ್ಲಿ ಮಾತ್ರವೇ ಜಾರಿಗೊಳಿಸಲಾಗಿದ್ದು, ಯಶಸ್ಸು ಕಂಡಲ್ಲಿ ರಾಜ್ಯದಲ್ಲಿ ಅಭಿವೃದ್ಧಿಪಡಿಸುವ ತೀರ್ಮಾನ ಮಾಡಲಾಗಿದೆ.

ಇಲಾಖೆಯು 'ಮೊಬಿಫೈ' ಎಂಬ ಹೊಸದೊಂದು ಆ್ಯಪ್​ ಅನ್ನು ಜಾರಿಗೆ ತಂದಿದೆ. ಈ ಮೂಲಕ ಕಳೆದು ಹೋದ ಮೊಬೈಲ್​ ಅನ್ನು ಪತ್ತೆ ಮಾಡಬಹುದು. ಆದರೆ ಇದಕ್ಕೆ ಕೆಲವೊಂದು ಪ್ರಕ್ರಿಯೆಗಳನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕಿದೆ. ಇದ್ದ ಜಾಗದಿಂದಲೇ ಕೆಲವು ಮಾಹಿತಿಯನ್ನು ಈ ಆ್ಯಪ್​ನಲ್ಲಿ ಭರ್ತಿ ಮಾಡಿದರೆ ಸಾಕು. ಪೊಲೀಸ್​ ಠಾಣೆ ಮೆಟ್ಟಿಲು ಹತ್ತಬೇಕಿಲ್ಲ. ಈ ಹೊಸ ತಾಂತ್ರಿಕ ವ್ಯವಸ್ಥೆಯಿಂದ ಸುಲಭವಾಗಿ ನಿಮ್ಮ ಮೊಬೈಲ್​ ನಿಮ್ಮ ಕೈ ಸೇರುತ್ತದೆ.

ಇದನ್ನೂ ಓದಿ: ತಮಿಳುನಾಡು ಬೇಟೆಗಾರರು ರಾಜ್ಯದ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ

Last Updated : Feb 16, 2023, 2:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.