ETV Bharat / state

ಬೈಕ್​ಗೆ ಡಿಕ್ಕಿ ಹೊಡೆದ ಬಿಜೆಪಿ ಮುಖಂಡನ ಕಾರು: ಬೈಕ್​​ ಸವಾರ ಸಾವು

ಬಿಜೆಪಿ ಮುಖಂಡ ವಿಶ್ವನಾಥ ಪಾಟೀಲ ಎಂಬುವರ ಕಾರು ಬೈಕ್​ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

author img

By

Published : Dec 7, 2020, 4:17 PM IST

ranebennuru
ಬೈಕ್ ಸವಾರ ಸಾವು

ರಾಣೆಬೆನ್ನೂರು: ಕಾರೊಂದು ಬೈಕಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ ಹಂಚಿನ‌ ಫ್ಯಾಕ್ಟರಿ ಬಳಿ ನಡೆದಿದೆ.

ಕಾರು ಬೈಕ್​ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು

ಬ್ಯಾಡಗಿ ತಾಲೂಕಿನ ಮೊಟೆಬೆನ್ನೂರು ಗ್ರಾಮದ ಶಂಕರಗೌಡ ಮಲ್ಲನಗೌಡ ಪಾಟೀಲ (45) ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ವೃತ್ತಿಯಲ್ಲಿ ಎಲ್​​ಐಸಿ ಏಜೆಂಟ್ ಆಗಿದ್ದ ಶಂಕರಗೌಡ ಸಂಬಂಧಿಕರ ಮದುವೆ ಆಮಂತ್ರಣ ಪತ್ರಿಕೆ ನೀಡಲು ಎಲ್​ಐಸಿ ಕಚೇರಿಗೆ ಹೋಗಿದ್ದಾರೆ. ಕೊಟ್ಟು ವಾಪಸ್​​ ಆಗುವ ಸಮಯದಲ್ಲಿ ಬಿಜೆಪಿ ಮುಖಂಡ ವಿಶ್ವನಾಥ ಪಾಟೀಲ ಎಂಬುವರ ಕಾರು ಗುದ್ದಿದೆ. ಇದರಿಂದ ಬೈಕ್ ಸವಾರ ಶಂಕರಗೌಡ ಮಲ್ಲನಗೌಡ ಪಾಟೀಲ ಕಾರಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ರಾಣೆಬೆನ್ನೂರು ಸಂಚಾರಿ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

ರಾಣೆಬೆನ್ನೂರು: ಕಾರೊಂದು ಬೈಕಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ ಹಂಚಿನ‌ ಫ್ಯಾಕ್ಟರಿ ಬಳಿ ನಡೆದಿದೆ.

ಕಾರು ಬೈಕ್​ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು

ಬ್ಯಾಡಗಿ ತಾಲೂಕಿನ ಮೊಟೆಬೆನ್ನೂರು ಗ್ರಾಮದ ಶಂಕರಗೌಡ ಮಲ್ಲನಗೌಡ ಪಾಟೀಲ (45) ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ವೃತ್ತಿಯಲ್ಲಿ ಎಲ್​​ಐಸಿ ಏಜೆಂಟ್ ಆಗಿದ್ದ ಶಂಕರಗೌಡ ಸಂಬಂಧಿಕರ ಮದುವೆ ಆಮಂತ್ರಣ ಪತ್ರಿಕೆ ನೀಡಲು ಎಲ್​ಐಸಿ ಕಚೇರಿಗೆ ಹೋಗಿದ್ದಾರೆ. ಕೊಟ್ಟು ವಾಪಸ್​​ ಆಗುವ ಸಮಯದಲ್ಲಿ ಬಿಜೆಪಿ ಮುಖಂಡ ವಿಶ್ವನಾಥ ಪಾಟೀಲ ಎಂಬುವರ ಕಾರು ಗುದ್ದಿದೆ. ಇದರಿಂದ ಬೈಕ್ ಸವಾರ ಶಂಕರಗೌಡ ಮಲ್ಲನಗೌಡ ಪಾಟೀಲ ಕಾರಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ರಾಣೆಬೆನ್ನೂರು ಸಂಚಾರಿ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.