ಹುಬ್ಬಳ್ಳಿ: ನಿಂತ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವಿಗೀಡಾಗಿರುವ ಘಟನೆ ಇಂಗಹಳ್ಳಿ ಕ್ರಾಸ್ ಹಾಗೂ ಕೋಳಿವಾಡ ಬ್ರೀಜ್ ನಡುವೆ ನಡೆದಿದೆ.
ದೇವರ ಕಾರ್ಯ ಮುಗಿಸಿಕೊಂಡು ಹುಬ್ಬಳ್ಳಿಗೆ ಟವೇರಾದಲ್ಲಿ ಮರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ಮೃತರನ್ನು ಹುಬ್ಬಳ್ಳಿಯ ಸೆಟ್ಲಮೆಂಟ್ ಮತ್ತು ಗಂಗಾಧರ ಬಡಾವಣೆ ನಿವಾಸಿಗಳಾದ ನಾಗರಾಜ ಹೊಸಕೋಟಿ ಮತ್ತು ಶ್ಯಾಮ್ ಅಲಿಯಾಸ್ ಶಾನು ಎಂದು ಗುರುತಿಸಲಾಗಿದೆ.
ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.