ಧಾರವಾಡ : ಅಮಿತ್ ಷಾ ಭೇಟಿ ಬಗ್ಗೆ ಶಾಸಕ ಅರವಿಂದ ಬೆಲ್ಲದ್ ಪ್ರತಿಕ್ರಿಯಿಸಿದ್ದಾರೆ. ನಾನು ಸಚಿವ ಸ್ಥಾನದ ಲಾಬಿಗಾಗಿ ಭೇಟಿ ಮಾಡಿಲ್ಲ. ನಾನು 6 ತಿಂಗಳ ಹಿಂದೆಯೇ ಭೇಟಿಯಾಗಲು ಸಮಯ ಕೇಳಿದ್ದೆ. ಅದಕ್ಕೆ ಶಾ ಅವರು ನನ್ನನ್ನ ಕರೆದಿದ್ದರು ಎಂದು ಸ್ಪಷ್ಟನೆ ನೀಡಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಭೇಟಿಗೆ ಅವಕಾಶ ಕೇಳಿದ್ದೆ ಅದಕ್ಕೆ ಕರೆದಿದ್ದರು. ಸಚಿವ ಸ್ಥಾನದ ಲಾಬಿಗಾಗಿ ನಾನು ವಿಶೇಷ ಸಂದರ್ಭ ಭೇಟಿ ಕೇಳಿಲ್ಲ. ಏಕಾಏಕಿ ಒಂದು ದಿನ ಮುಂಚೆಯೇ ಬರುವಂತೆ ಹೇಳಿದ್ದರು. ಭೇಟಿಯಲ್ಲಿ ಪ್ರಸಕ್ತ ರಾಜ್ಯದ ಸ್ಥಿತಿಗತಿ ಬಗ್ಗೆ ಚರ್ಚೆ ಮಾಡಿದರು ಎಂದರು.
ಉತ್ತರ ಕರ್ನಾಟಕ ಹಾಗೂ ನನ್ನ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತುಕತೆ ಆಗಿದೆ. ನಾನಂತೂ ಅವರಿಗೆ ಏನೂ ಕೇಳವುದಕ್ಕೆ ಹೋಗಿಲ್ಲ. ಡಿಸಿಎಂ ಸ್ಥಾನದ ರೇಸ್ನಲ್ಲಿ ನಾನಿಲ್ಲ, ಅದು ಕೇವಲ ಮಾಧ್ಯಮದವರಿಗೆ ಗೊತ್ತು ಎಂದರು.
ಇದನ್ನೂ ಓದಿ: ಹಿಂದೂ-ಮುಸ್ಲಿಂ-ಕ್ರೈಸ್ತರೆಲ್ಲ ಅಣ್ಣ-ತಮ್ಮಂದಿರಂತೆ ಯುಗಾದಿ ಹಬ್ಬ ಆಚರಿಸಿದರು.. ಸೌಹಾರ್ದತೆಗೆ ಬಸವಣ್ಣನೇ ಸಾಕ್ಷಿ..