ETV Bharat / state

ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ಸೊಸೆ... ಮಹಿಳಾ ಪಿಎಸ್​ಐ, ಮಗನಿಗೆ 7 ವರ್ಷ ಜೈಲು - KN_DVG_04A_MAHILA_PSI_GE-SHIKSHE_PKG_KA10016

ಮಹಿಳೆಗೆ ಏನಾದರೂ ತೊಂದರೆ ಆದರೆ ಮಹಿಳಾ ಪಡೆ ರಕ್ಷಣೆಗೆ ನಿಲ್ಲುತ್ತದೆ. ಆದರೆ, ಇಲ್ಲೋರ್ವ ಮಹಿಳಾ ಠಾಣೆ ಪಿಎಸ್​ಐ ತನ್ನ ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿ, ಆಕೆಯ ಆತ್ಮಹತ್ಯೆಗೆ ಕಾರಣವಾಗಿದ್ದಾಳೆ. ಪ್ರಕರಣ ಸಾಬೀತಾದ ಹಿನ್ನೆಲೆ ಪಿಎಸ್​ಐ ಹಾಗೂ ಇವರ ಪುತ್ರ ಜೈಲು ಪಾಲಾಗಿದ್ದಾರೆ.

ಮಹಿಳಾ ಪಿಎಸ್​ಐ, ಮಗ ಈಗ ಕಂಬಿ ಹಿಂದೆ
author img

By

Published : Jul 9, 2019, 8:01 PM IST

ದಾವಣಗೆರೆ: ಮಹಿಳೆಗೆ ಏನಾದರೂ ತೊಂದರೆ ಆದರೆ ಮಹಿಳಾ ಪಡೆ ರಕ್ಷಣೆಗೆ ನಿಲ್ಲುತ್ತದೆ. ಆದರೆ, ಇಲ್ಲೋರ್ವ ಮಹಿಳಾ ಠಾಣೆ ಪಿಎಸ್​ಐ ತನ್ನ ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿ, ಆಕೆಯ ಆತ್ಮಹತ್ಯೆಗೆ ಕಾರಣವಾಗಿದ್ದಾಳೆ. ಪ್ರಕರಣ ಸಾಬೀತಾದ ಹಿನ್ನೆಲೆ ಪಿಎಸ್​ಐ ಹಾಗೂ ಇವರ ಪುತ್ರ ಜೈಲು ಪಾಲಾಗಿದ್ದಾರೆ.

ಘಟನೆ ಹಿನ್ನೆಲೆ:
ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆಯ ಪಿಎಸ್​ಐ ಲೀಲಾವತಿ ಎಂಬುವರ ಮಗನಾದ ನವೀನ್ ಕುಮಾರ್, ದಾವಣಗೆರೆ ನಗರದ ಸರಸ್ವತಿ ಬಡಾವಣೆಯ ನಿವಾಸಿ ನಿವೃತ್ತ ಎಂಜಿನಿಯರ್ ಬಸಪ್ಪ ಎಂಬುವರ ಮಗಳಾದ ಶರ್ಮಿಳಾ ಜೊತೆ 2014ರಲ್ಲಿ ವಿವಾಹ ಮಾಡಿಕೊಂಡಿದ್ದರು.

ಮಹಿಳಾ ಪಿಎಸ್​ಐ, ಮಗ ಈಗ ಕಂಬಿ ಹಿಂದೆ

ಮದುವೆ ಸಮಯದಲ್ಲಿ 10 ಲಕ್ಷ ರೂ. ಹಣ, 40 ತೊಲೆ ಬಂಗಾರ, 2 ಕೆಜಿ ಬೆಳ್ಳಿಯನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು ಎನ್ನಲಾಗಿದೆ. ಇಷ್ಟಕ್ಕೆ ಸುಮ್ಮನಾಗದ ಪಿಎಸ್​ಐ ಲೀಲಾವತಿ ಹಾಗೂ ಇವರ ಮಗ, ಶರ್ಮಿಳಾಗೆ ಹೆಚ್ಚಿನ ವರದಕ್ಷಿಣೆ‌ ತರುವಂತೆ ಒತ್ತಾಯಿಸಿ 03-09-2015ರಂದು ಆಕೆಯನ್ನು ಮನೆಯಿಂದ ಹೊರಗೆ ಹಾಕಿ ಬಳಿಕ ವಕೀಲರಿಂದ ನೋಟಿಸ್ ಕಳುಹಿಸಿ ಮಾನಸಿಕ ಹಿಂಸೆ ನೀಡಿದ್ದರು ಎನ್ನಲಾಗಿದೆ.‌

ಇದರಿಂದ ಬೇಸತ್ತ ಶರ್ಮಿಳಾ, 07-09-2015ರಂದು ತಮ್ಮ ತಂದೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಬಗ್ಗೆ ತಂದೆ ಬಸಪ್ಪ ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಡಿವೈಎಸ್ಪಿ ಅಶೋಕ್ ಕುಮಾರ್ ತನಿಖೆ‌ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

4 ವರ್ಷಗಳ ನಂತ್ರ ಜೈಲು‌ಪಾಲಾದ ಆರೋಪಿಗಳು:
ನ್ಯಾಯಾಧೀಶರಾದ ಅಂಬಾದಾಸ್ ಕುಲಕರ್ಣಿ ಅವರು ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಆರೋಪಿಗಳಾದ ಲೀಲಾವತಿ(56), ನವೀನ್ ಕುಮಾರ್(32)ಗೆ ತಲಾ 7 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ 18 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ.

ದಾವಣಗೆರೆ: ಮಹಿಳೆಗೆ ಏನಾದರೂ ತೊಂದರೆ ಆದರೆ ಮಹಿಳಾ ಪಡೆ ರಕ್ಷಣೆಗೆ ನಿಲ್ಲುತ್ತದೆ. ಆದರೆ, ಇಲ್ಲೋರ್ವ ಮಹಿಳಾ ಠಾಣೆ ಪಿಎಸ್​ಐ ತನ್ನ ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿ, ಆಕೆಯ ಆತ್ಮಹತ್ಯೆಗೆ ಕಾರಣವಾಗಿದ್ದಾಳೆ. ಪ್ರಕರಣ ಸಾಬೀತಾದ ಹಿನ್ನೆಲೆ ಪಿಎಸ್​ಐ ಹಾಗೂ ಇವರ ಪುತ್ರ ಜೈಲು ಪಾಲಾಗಿದ್ದಾರೆ.

ಘಟನೆ ಹಿನ್ನೆಲೆ:
ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆಯ ಪಿಎಸ್​ಐ ಲೀಲಾವತಿ ಎಂಬುವರ ಮಗನಾದ ನವೀನ್ ಕುಮಾರ್, ದಾವಣಗೆರೆ ನಗರದ ಸರಸ್ವತಿ ಬಡಾವಣೆಯ ನಿವಾಸಿ ನಿವೃತ್ತ ಎಂಜಿನಿಯರ್ ಬಸಪ್ಪ ಎಂಬುವರ ಮಗಳಾದ ಶರ್ಮಿಳಾ ಜೊತೆ 2014ರಲ್ಲಿ ವಿವಾಹ ಮಾಡಿಕೊಂಡಿದ್ದರು.

ಮಹಿಳಾ ಪಿಎಸ್​ಐ, ಮಗ ಈಗ ಕಂಬಿ ಹಿಂದೆ

ಮದುವೆ ಸಮಯದಲ್ಲಿ 10 ಲಕ್ಷ ರೂ. ಹಣ, 40 ತೊಲೆ ಬಂಗಾರ, 2 ಕೆಜಿ ಬೆಳ್ಳಿಯನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು ಎನ್ನಲಾಗಿದೆ. ಇಷ್ಟಕ್ಕೆ ಸುಮ್ಮನಾಗದ ಪಿಎಸ್​ಐ ಲೀಲಾವತಿ ಹಾಗೂ ಇವರ ಮಗ, ಶರ್ಮಿಳಾಗೆ ಹೆಚ್ಚಿನ ವರದಕ್ಷಿಣೆ‌ ತರುವಂತೆ ಒತ್ತಾಯಿಸಿ 03-09-2015ರಂದು ಆಕೆಯನ್ನು ಮನೆಯಿಂದ ಹೊರಗೆ ಹಾಕಿ ಬಳಿಕ ವಕೀಲರಿಂದ ನೋಟಿಸ್ ಕಳುಹಿಸಿ ಮಾನಸಿಕ ಹಿಂಸೆ ನೀಡಿದ್ದರು ಎನ್ನಲಾಗಿದೆ.‌

ಇದರಿಂದ ಬೇಸತ್ತ ಶರ್ಮಿಳಾ, 07-09-2015ರಂದು ತಮ್ಮ ತಂದೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಬಗ್ಗೆ ತಂದೆ ಬಸಪ್ಪ ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಡಿವೈಎಸ್ಪಿ ಅಶೋಕ್ ಕುಮಾರ್ ತನಿಖೆ‌ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

4 ವರ್ಷಗಳ ನಂತ್ರ ಜೈಲು‌ಪಾಲಾದ ಆರೋಪಿಗಳು:
ನ್ಯಾಯಾಧೀಶರಾದ ಅಂಬಾದಾಸ್ ಕುಲಕರ್ಣಿ ಅವರು ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಆರೋಪಿಗಳಾದ ಲೀಲಾವತಿ(56), ನವೀನ್ ಕುಮಾರ್(32)ಗೆ ತಲಾ 7 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ 18 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ.

Intro:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ತನಿಖೆ ಮಾಡಿ ಮಹಿಳೆಗೆ ರಕ್ಷಣೆ ಮತ್ತು ನ್ಯಾಯ ಕೊಡಿಸುವುದು ಮಹಿಳಾ ಪೊಲೀಸ್ ಠಾಣೆ ಉದ್ದೇಶ, ಆದರೆ ಇಲ್ಲೊಬ್ಬ ಮಹಿಳಾ ಠಾಣೆ ಪಿಎಸ್ ಐ ತನ್ನ ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿ ಅವಳ ಆತ್ಮಹತ್ಯೆಗೆ ಕಾರಣವಾಗಿದ್ದು ಈ ಪ್ರಕರಣ ಸಾಬೀತಾದ ಹಿನ್ನಲೆ ಮಹಿಳಾ ಠಾಣೆ ಪಿಎಸ್ ಐ ಹಾಗೂ ಪಿಎಸ್ ಐ ಇವರ ಪುತ್ರ ಇಬ್ಬರು ಜೈಲು ಪಾಲಾಗಿದ್ದಾರೆ...

ಹೌದು.. ಮಹಿಳಾ ಪೊಲೀಸ್ ಠಾಣೆಗಳು ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಅನ್ಯಾಯದ ವಿರುದ್ದ ತನಿಖೆ ನಡೆಸಿ ಮಹಿಳೆಗೆ ನ್ಯಾಯ ಕೊಡಿಸುವುದು ಮಹಿಳಾ ಠಾಣೆಗಳ ಉದ್ದೇಶ. ಆದರೆ ಇದೇ ಮಹಿಳಾ ಪೊಲೀಸ್ ಠಾಣೆ ಪಿಎಸ್ ಐ ತನ್ನ ಮಗನೊಂದಿಗೆ ಸೇರಿ ಸೊಸೆಗೆ ವರದಕ್ಷಣೆ ಕಿರುಕುಳ ನೀಡಿ ಸೊಸೆ ಸಾವಿಗೆ ಕಾರಣರಾಗಿ ಇದೀಗ ಜೈಲು ಸೇರಿದ್ದಾರೆ..

ಘಟನೆ ಹಿನ್ನಲೆ

ಹುಬ್ಬಳಿ ಮಹಿಳಾ ಪೊಲೀಸ್ ಠಾಣೆಯ ಪಿಎಸ್ ಐ ಲೀಲಾವತಿ ಇವರ ಮಗನಾದ ನವೀನ್ ಕುಮಾರ್ ಇವನಿಗೆ ದಾವಣಗೆರೆ ನಗರದ ಸರಸ್ವತಿ ಬಡಾವಣೆಯ ನಿವಾಸಿ ನಿವೃತ್ತ ಇಂಜಿನಿಯರ್ ಬಸಪ್ಪ ಇವರ ಮಗಳಾದ ಶರ್ಮಿಳಾ ಎಂಬುವವರ ಜೊತೆ 2014ರಲ್ಲಿ ಮದುವೆ ನಡೆದಿತ್ತು. ಮದುವೆ ಸಮಯದಲ್ಲಿ 10ಲಕ್ಷ ರೂ ಹಣ, 40 ತೊಲ ಬಂಗಾರ, 2 ಕೆಜಿ ಬೆಳ್ಳಿಯನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು ಎನ್ನಲಾಗಿದೆ. ಇಷ್ಟಕ್ಕೆ ಸುಮ್ಮನಾಗದ ಪಿಎಸ್ ಐ ಲೀಲಾವತಿ ಹಾಗೂ ಇವರ ಮಗ ನವೀನ್ ಕುಮಾರ್, ಶರ್ಮಿಳಾ ಇವರಿಗೆ ಹೆಚ್ಚಿನ ವರದಕ್ಷಿಣೆ‌ಹಾಗೂ ಭಾಕಿ ವರದಕ್ಷಿಣೆ ತರುವಂತೆ ಒತ್ತಾಯಿಸಿ 03-09- 2015ರಂದು ಶರ್ಮಿಳಾ ಇವರನ್ನು ಹೊರಗೆ ಹಾಕಿ ಬಳಿಕ ವಕೀಲರಿಂದ ನೋಟಿಸ್ ಕಳುಹಿಸಿ ಮಾನಸಿಕ ಹಿಂಸೆ ನೀಡಿದ್ದರು ಎನ್ನಲಾಗಿದೆ.‌ ಇದರಿಂದ ಬೇಸತ್ತ ಶರ್ಮಿಳಾ 07-09-2015ರಂದು ತನ್ನ ತಂದೆ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿರುತ್ತಾಳೆ. ಈ ಬಗ್ಗೆ ಮೃತಳ ತಂದೆ ಬಸಪ್ಪ ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ದಾವಣಗೆರೆ ಡಿವೈಎಸ್ಪಿ ಅಶೋಕ್ ಕುಮಾರ್ ತನಿಖೆ‌ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು..

ಜೈಲು‌ಪಾಲಾದ ಮಹಿಳಾ ಠಾಣೆ ಪಿಎಸ್ ಐ

ಈ ಬಗ್ಗೆ ದಾವಣಗೆರೆ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ ಸುದೀರ್ಘ ವಿಚಾರಣೆ ನಡೆಸಿ ಆರೋಪಿರಾಗಿದ್ದ ಪಿಎಸ್ ಐ ಲೀಲಾವತಿ ಹಾಗೂ ಇವರ ಮಗನಾದ ನವೀನ್ ಕುಮಾರ್ ಇವರುಗಳು ಶರ್ಮಿಳಾ ಇವಳಿಗೆ ವರದಕ್ಷಿಣೆ ಕಿರುಕುಳ ನೀಡಿ ಅವಳ ಆತ್ಮಹತ್ಯೆಗೆ ಕಾರಣರಾಗಿದ್ದಾರೆ ಎಂದು ನ್ಯಾಯಾಲಯದ ನ್ಯಾಯಾಧೀಶರಾದ ಅಂಬಾದಾಸ್ ಕುಲಕರ್ಣಿ ಅವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ..

ಆರೋಪಿಗಳಾಗಿದ್ದ ಲೀಲಾವತಿ(56) , ನವೀನ್ ಕುಮಾರ್(32) ಇವರುಗಳಿಗೆ ತಲಾ 07 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ 18 ಸಾವಿರ ರೂ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಇನ್ನೂ ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ನಿಯೋಜಕರಾದ ಎಸ್ ವಿ ಪಾಟೀಲ್ ಇವರು ವಾದ ಮಂಡಿಸಿದ್ದರು..

ಒಟ್ಟಾರೆ ಮಹಿಳೆಯರಿಗೆ ನ್ಯಾಯಾ ಕೊಡಿಸಬೇಕಾದ ಮಹಿಳಾ ಠಾಣೆ ಪಿಎಸ್ ಐ ತನ್ನ ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿ ಇಂದು ಜೈಲು ಪಾಲಾಗಿದ್ದು ಸೋಜಿಗದ ಸಂಗತಿ...

ಪ್ಲೊ..

ಬೈಟ್; ಎಸ್ ವಿ ಪಾಟೀಲ್.. ಸರ್ಕಾರಿ ಅಭಿಯೋಜಕರು..



Body:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ತನಿಖೆ ಮಾಡಿ ಮಹಿಳೆಗೆ ರಕ್ಷಣೆ ಮತ್ತು ನ್ಯಾಯ ಕೊಡಿಸುವುದು ಮಹಿಳಾ ಪೊಲೀಸ್ ಠಾಣೆ ಉದ್ದೇಶ, ಆದರೆ ಇಲ್ಲೊಬ್ಬ ಮಹಿಳಾ ಠಾಣೆ ಪಿಎಸ್ ಐ ತನ್ನ ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿ ಅವಳ ಆತ್ಮಹತ್ಯೆಗೆ ಕಾರಣವಾಗಿದ್ದು ಈ ಪ್ರಕರಣ ಸಾಬೀತಾದ ಹಿನ್ನಲೆ ಮಹಿಳಾ ಠಾಣೆ ಪಿಎಸ್ ಐ ಹಾಗೂ ಪಿಎಸ್ ಐ ಇವರ ಪುತ್ರ ಇಬ್ಬರು ಜೈಲು ಪಾಲಾಗಿದ್ದಾರೆ...

ಹೌದು.. ಮಹಿಳಾ ಪೊಲೀಸ್ ಠಾಣೆಗಳು ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಅನ್ಯಾಯದ ವಿರುದ್ದ ತನಿಖೆ ನಡೆಸಿ ಮಹಿಳೆಗೆ ನ್ಯಾಯ ಕೊಡಿಸುವುದು ಮಹಿಳಾ ಠಾಣೆಗಳ ಉದ್ದೇಶ. ಆದರೆ ಇದೇ ಮಹಿಳಾ ಪೊಲೀಸ್ ಠಾಣೆ ಪಿಎಸ್ ಐ ತನ್ನ ಮಗನೊಂದಿಗೆ ಸೇರಿ ಸೊಸೆಗೆ ವರದಕ್ಷಣೆ ಕಿರುಕುಳ ನೀಡಿ ಸೊಸೆ ಸಾವಿಗೆ ಕಾರಣರಾಗಿ ಇದೀಗ ಜೈಲು ಸೇರಿದ್ದಾರೆ..

ಘಟನೆ ಹಿನ್ನಲೆ

ಹುಬ್ಬಳಿ ಮಹಿಳಾ ಪೊಲೀಸ್ ಠಾಣೆಯ ಪಿಎಸ್ ಐ ಲೀಲಾವತಿ ಇವರ ಮಗನಾದ ನವೀನ್ ಕುಮಾರ್ ಇವನಿಗೆ ದಾವಣಗೆರೆ ನಗರದ ಸರಸ್ವತಿ ಬಡಾವಣೆಯ ನಿವಾಸಿ ನಿವೃತ್ತ ಇಂಜಿನಿಯರ್ ಬಸಪ್ಪ ಇವರ ಮಗಳಾದ ಶರ್ಮಿಳಾ ಎಂಬುವವರ ಜೊತೆ 2014ರಲ್ಲಿ ಮದುವೆ ನಡೆದಿತ್ತು. ಮದುವೆ ಸಮಯದಲ್ಲಿ 10ಲಕ್ಷ ರೂ ಹಣ, 40 ತೊಲ ಬಂಗಾರ, 2 ಕೆಜಿ ಬೆಳ್ಳಿಯನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು ಎನ್ನಲಾಗಿದೆ. ಇಷ್ಟಕ್ಕೆ ಸುಮ್ಮನಾಗದ ಪಿಎಸ್ ಐ ಲೀಲಾವತಿ ಹಾಗೂ ಇವರ ಮಗ ನವೀನ್ ಕುಮಾರ್, ಶರ್ಮಿಳಾ ಇವರಿಗೆ ಹೆಚ್ಚಿನ ವರದಕ್ಷಿಣೆ‌ಹಾಗೂ ಭಾಕಿ ವರದಕ್ಷಿಣೆ ತರುವಂತೆ ಒತ್ತಾಯಿಸಿ 03-09- 2015ರಂದು ಶರ್ಮಿಳಾ ಇವರನ್ನು ಹೊರಗೆ ಹಾಕಿ ಬಳಿಕ ವಕೀಲರಿಂದ ನೋಟಿಸ್ ಕಳುಹಿಸಿ ಮಾನಸಿಕ ಹಿಂಸೆ ನೀಡಿದ್ದರು ಎನ್ನಲಾಗಿದೆ.‌ ಇದರಿಂದ ಬೇಸತ್ತ ಶರ್ಮಿಳಾ 07-09-2015ರಂದು ತನ್ನ ತಂದೆ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿರುತ್ತಾಳೆ. ಈ ಬಗ್ಗೆ ಮೃತಳ ತಂದೆ ಬಸಪ್ಪ ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ದಾವಣಗೆರೆ ಡಿವೈಎಸ್ಪಿ ಅಶೋಕ್ ಕುಮಾರ್ ತನಿಖೆ‌ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು..

ಜೈಲು‌ಪಾಲಾದ ಮಹಿಳಾ ಠಾಣೆ ಪಿಎಸ್ ಐ

ಈ ಬಗ್ಗೆ ದಾವಣಗೆರೆ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ ಸುದೀರ್ಘ ವಿಚಾರಣೆ ನಡೆಸಿ ಆರೋಪಿರಾಗಿದ್ದ ಪಿಎಸ್ ಐ ಲೀಲಾವತಿ ಹಾಗೂ ಇವರ ಮಗನಾದ ನವೀನ್ ಕುಮಾರ್ ಇವರುಗಳು ಶರ್ಮಿಳಾ ಇವಳಿಗೆ ವರದಕ್ಷಿಣೆ ಕಿರುಕುಳ ನೀಡಿ ಅವಳ ಆತ್ಮಹತ್ಯೆಗೆ ಕಾರಣರಾಗಿದ್ದಾರೆ ಎಂದು ನ್ಯಾಯಾಲಯದ ನ್ಯಾಯಾಧೀಶರಾದ ಅಂಬಾದಾಸ್ ಕುಲಕರ್ಣಿ ಅವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ..

ಆರೋಪಿಗಳಾಗಿದ್ದ ಲೀಲಾವತಿ(56) , ನವೀನ್ ಕುಮಾರ್(32) ಇವರುಗಳಿಗೆ ತಲಾ 07 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ 18 ಸಾವಿರ ರೂ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಇನ್ನೂ ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ನಿಯೋಜಕರಾದ ಎಸ್ ವಿ ಪಾಟೀಲ್ ಇವರು ವಾದ ಮಂಡಿಸಿದ್ದರು..

ಒಟ್ಟಾರೆ ಮಹಿಳೆಯರಿಗೆ ನ್ಯಾಯಾ ಕೊಡಿಸಬೇಕಾದ ಮಹಿಳಾ ಠಾಣೆ ಪಿಎಸ್ ಐ ತನ್ನ ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿ ಇಂದು ಜೈಲು ಪಾಲಾಗಿದ್ದು ಸೋಜಿಗದ ಸಂಗತಿ...

ಪ್ಲೊ..

ಬೈಟ್; ಎಸ್ ವಿ ಪಾಟೀಲ್.. ಸರ್ಕಾರಿ ಅಭಿಯೋಜಕರು..



Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.