ETV Bharat / state

ದಾವಣಗೆರೆ ವಿವಿಯಲ್ಲಿ ಅಕ್ರಮ ನೇಮಕಾತಿ : ಕರ್ನಾಟಕ ರಕ್ಷಣಾ ವೇದಿಕೆ ಆರೋಪ - undefined

ಕಳೆದ ಮೇ 21 ಹಾಗೂ 22 ರಂದು ನೇಮಕಾತಿಗಾಗಿ ವಿವಿಯಲ್ಲಿ ಸಂದರ್ಶನ ನಡೆಸಿದ ವಿಶ್ವವಿದ್ಯಾಲಯ 24 ನೇ ತಾರೀಖಿನ ಮಧ್ಯಾಹ್ನ ಒಂದು ಗಂಟೆಗೆ ಸಿಂಡಿಕೇಟ್ ಸಭೆ ಮಾಡಿತ್ತು. ಅದೇ ದಿನ ಸಂದರ್ಶನ ನಡೆಸಿ ನಾಲ್ಕು ಗಂಟೆಗೆ ನೇಮಕವಾದ ಅಭ್ಯರ್ಥಿಗಳಿಗೆ ಆದೇಶ ಪತ್ರವನ್ನು ನೀಡಿದೆ. ಇದು ಹೇಗೆ ಸಾಧ್ಯ ಎಂಬುದು ರಕ್ಷಣಾ ವೇದಿಕೆಯ ಪ್ರಶ್ನೆಯಾಗಿದೆ.

ದಾವಣಗೆರೆ ವಿವಿ
author img

By

Published : Jun 19, 2019, 1:00 AM IST

ದಾವಣಗೆರೆ : ಮಧ್ಯ ಕರ್ನಾಟಕ ಭಾಗದ ಶಿಕ್ಷಣ ಕೇಂದ್ರ ದಾವಣಗೆರೆಯ ವಿಶ್ವವಿದ್ಯಾಲಯದಲ್ಲಿ ಇದೀಗ ಅಕ್ರಮದ ವಾಸನೆ ಕೇಳಿ ಬಂದಿದೆ. ವಿವಿಧ ಉಪನ್ಯಾಸಕರ ಹುದ್ದೆಗೆ ಲಕ್ಷಾಂತರ ರೂಪಾಯಿ ಹಣ ಪಡೆದು ವಿವಿಯ ಕುಲಪತಿ ಅಕ್ರಮವಾಗಿ ನೇಮಕಾತಿ ಮಾಡಿದ್ದಾರೆ ಎಂದು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಆರೋಪಿಸಿದೆ.

ದಾವಣಗೆರೆ ವಿಶ್ವವಿದ್ಯಾನಿಲಯ

ದಾವಣಗೆರೆಯ ಶಿವಗಂಗೋತ್ರಿ ವಿಶ್ವವಿದ್ಯಾಲಯಲ್ಲಿ ಕಳೆದ ತಿಂಗಳ 24 ರಂದು 37 ಅಭ್ಯರ್ಥಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. 125 ಹುದ್ದೆಗಳಲ್ಲಿ 37 ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆಯಾಗಿದ್ದು, ಇದರಲ್ಲಿ ಅಕ್ರಮ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ವಿವಿಯ ಕುಲಪತಿ, ಕುಲಾಧಿಪತಿ ಸೇರಿಕೊಂಡು ಲಕ್ಷ ಲಕ್ಷ ಹಣ ಪಡೆದು ತಮಗೆ ಬೇಕಾದವರನ್ನು ನೇಮಕ ಮಾಡಿಕೊಂಡಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಕಳೆದ ಮೇ 21 ಹಾಗೂ 22 ರಂದು ನೇಮಕಾತಿಗಾಗಿ ವಿವಿಯಲ್ಲಿ ಸಂದರ್ಶನ ನಡೆಸಿದ ವಿಶ್ವವಿದ್ಯಾಲಯ 24 ನೇ ತಾರೀಖಿನ ಮಧ್ಯಾಹ್ನ ಒಂದು ಗಂಟೆಗೆ ಸಿಂಡಿಕೇಟ್ ಸಭೆ ಮಾಡಿತ್ತು. ಅದೇ ದಿನ ಸಂದರ್ಶನ ನಡೆಸಿ ನಾಲ್ಕು ಗಂಟೆಗೆ ನೇಮಕವಾದ ಅಭ್ಯರ್ಥಿಗಳಿಗೆ ಆದೇಶ ಪತ್ರವನ್ನು ನೀಡಿದೆ. ಇದು ಹೇಗೆ ಸಾಧ್ಯ ಎಂಬುದು ರಕ್ಷಣಾ ವೇದಿಕೆಯ ಪ್ರಶ್ನೆಯಾಗಿದೆ.

ವಿಶ್ವವಿದ್ಯಾಲಯ 1:3 ರ ಅನುಪಾತದಲ್ಲಿ ಪಟ್ಟಿ ಪ್ರಕಟಿಸದೇ ತಮಗೆ ಬೇಕಾದವರಿಗೆ ಉದ್ಯೋಗ ನೀಡಿದೆ. ಅಷ್ಟೇ ಅಲ್ಲ, ಆಯ್ಕೆಯಾದ ಅಭ್ಯರ್ಥಿಗಳ ಹೆಸರನ್ನು ನೋಟಿಸ್ ಬೋರ್ಡ್ ನಲ್ಲಿ ಹಾಕದೇ ಇರೋದು ಸಾಕಷ್ಟು ಅನುಮಾನ ಮೂಡಿಸಿದೆ. ಹೀಗಾಗಿ, 37 ಅಭ್ಯರ್ಥಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ತಮಗೆ ಬೇಕಾದವರಿಗೆ ಮಾತ್ರ ಕರೆ ಮಾಡಿ ಸಂದರ್ಶನಕ್ಕೆ ಕರೆಸಿಕೊಂಡಿದ್ದು,ಅವರಿಗೆ ಮಾತ್ರ ನೇಮಕಾತಿ ಆದೇಶ ಪತ್ರ ನೀಡಿದ್ದಾರೆ. ಇದರಲ್ಲಿ ಕುಲಸಚಿವರು ಹಣ ಪಡೆದು ಬೋಧಕ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದಾರೆ ಎನ್ನುವುದು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಆರೋಪವಾಗಿದೆ.

ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ರಾಜ್ಯಪಾಲರಿಗೆ ದೂರು ನೀಡಲು ಮುಂದಾಗಿದ್ದೇವೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಯಲ್ಲಪ್ಪ ಹೇಳಿದ್ದಾರೆ. ಇನ್ನು ಪರೀಕ್ಷಾ ವಿಧಾನದಲ್ಲಿ ಸಹ ಹಲವು ಅನುಮಾನಗಳಿದ್ದು, ಓಎಮ್ಆರ್ ಇಲ್ಲದ ಉತ್ತರ ಪತ್ರಿಕೆಗಳನ್ನ ನೀಡಲಾಗಿತ್ತು. ಹೀಗಾಗಿ ಅಭ್ಯರ್ಥಿಗಳಿಗೆ ತಾವು ಸರಿ ಉತ್ತರ ಬರೆದಿದ್ದರೂ ಕಡಿಮೆ ಅಂಕ ಬಂದಿವೆ ಎಂಬ ಶಂಕೆಯೂ ಇದೆ.

ಕಳೆದ ಬಾರಿ ನೇಮಕ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದ್ದರಿಂದ ನೇಮಕಾತಿ ಪ್ರಕ್ರಿಯೆಯನ್ನು ರದ್ದು ಮಾಡಲಾಗಿತ್ತು. ಇದೀಗ ಮತ್ತೆ ಅದೇ ರೀತಿ ನೇಮಕ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಇಲ್ಲದಿದ್ದರೆ ಕೆಲವೇ ದಿನಗಳಲ್ಲಿ ವಿವಿ ಆವರಣದಲ್ಲಿ ಪೆಂಡಾಲ್ ಹಾಕಿ ಧರಣಿ ನಡೆಸುವುದಾಗಿ ಸಂಘಟನೆ ಮುಖಂಡರು ಎಚ್ಚರಿಕೆಯನ್ನು ನೀಡಿದ್ದಾರೆ.

ದಾವಣಗೆರೆ : ಮಧ್ಯ ಕರ್ನಾಟಕ ಭಾಗದ ಶಿಕ್ಷಣ ಕೇಂದ್ರ ದಾವಣಗೆರೆಯ ವಿಶ್ವವಿದ್ಯಾಲಯದಲ್ಲಿ ಇದೀಗ ಅಕ್ರಮದ ವಾಸನೆ ಕೇಳಿ ಬಂದಿದೆ. ವಿವಿಧ ಉಪನ್ಯಾಸಕರ ಹುದ್ದೆಗೆ ಲಕ್ಷಾಂತರ ರೂಪಾಯಿ ಹಣ ಪಡೆದು ವಿವಿಯ ಕುಲಪತಿ ಅಕ್ರಮವಾಗಿ ನೇಮಕಾತಿ ಮಾಡಿದ್ದಾರೆ ಎಂದು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಆರೋಪಿಸಿದೆ.

ದಾವಣಗೆರೆ ವಿಶ್ವವಿದ್ಯಾನಿಲಯ

ದಾವಣಗೆರೆಯ ಶಿವಗಂಗೋತ್ರಿ ವಿಶ್ವವಿದ್ಯಾಲಯಲ್ಲಿ ಕಳೆದ ತಿಂಗಳ 24 ರಂದು 37 ಅಭ್ಯರ್ಥಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. 125 ಹುದ್ದೆಗಳಲ್ಲಿ 37 ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆಯಾಗಿದ್ದು, ಇದರಲ್ಲಿ ಅಕ್ರಮ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ವಿವಿಯ ಕುಲಪತಿ, ಕುಲಾಧಿಪತಿ ಸೇರಿಕೊಂಡು ಲಕ್ಷ ಲಕ್ಷ ಹಣ ಪಡೆದು ತಮಗೆ ಬೇಕಾದವರನ್ನು ನೇಮಕ ಮಾಡಿಕೊಂಡಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಕಳೆದ ಮೇ 21 ಹಾಗೂ 22 ರಂದು ನೇಮಕಾತಿಗಾಗಿ ವಿವಿಯಲ್ಲಿ ಸಂದರ್ಶನ ನಡೆಸಿದ ವಿಶ್ವವಿದ್ಯಾಲಯ 24 ನೇ ತಾರೀಖಿನ ಮಧ್ಯಾಹ್ನ ಒಂದು ಗಂಟೆಗೆ ಸಿಂಡಿಕೇಟ್ ಸಭೆ ಮಾಡಿತ್ತು. ಅದೇ ದಿನ ಸಂದರ್ಶನ ನಡೆಸಿ ನಾಲ್ಕು ಗಂಟೆಗೆ ನೇಮಕವಾದ ಅಭ್ಯರ್ಥಿಗಳಿಗೆ ಆದೇಶ ಪತ್ರವನ್ನು ನೀಡಿದೆ. ಇದು ಹೇಗೆ ಸಾಧ್ಯ ಎಂಬುದು ರಕ್ಷಣಾ ವೇದಿಕೆಯ ಪ್ರಶ್ನೆಯಾಗಿದೆ.

ವಿಶ್ವವಿದ್ಯಾಲಯ 1:3 ರ ಅನುಪಾತದಲ್ಲಿ ಪಟ್ಟಿ ಪ್ರಕಟಿಸದೇ ತಮಗೆ ಬೇಕಾದವರಿಗೆ ಉದ್ಯೋಗ ನೀಡಿದೆ. ಅಷ್ಟೇ ಅಲ್ಲ, ಆಯ್ಕೆಯಾದ ಅಭ್ಯರ್ಥಿಗಳ ಹೆಸರನ್ನು ನೋಟಿಸ್ ಬೋರ್ಡ್ ನಲ್ಲಿ ಹಾಕದೇ ಇರೋದು ಸಾಕಷ್ಟು ಅನುಮಾನ ಮೂಡಿಸಿದೆ. ಹೀಗಾಗಿ, 37 ಅಭ್ಯರ್ಥಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ತಮಗೆ ಬೇಕಾದವರಿಗೆ ಮಾತ್ರ ಕರೆ ಮಾಡಿ ಸಂದರ್ಶನಕ್ಕೆ ಕರೆಸಿಕೊಂಡಿದ್ದು,ಅವರಿಗೆ ಮಾತ್ರ ನೇಮಕಾತಿ ಆದೇಶ ಪತ್ರ ನೀಡಿದ್ದಾರೆ. ಇದರಲ್ಲಿ ಕುಲಸಚಿವರು ಹಣ ಪಡೆದು ಬೋಧಕ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದಾರೆ ಎನ್ನುವುದು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಆರೋಪವಾಗಿದೆ.

ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ರಾಜ್ಯಪಾಲರಿಗೆ ದೂರು ನೀಡಲು ಮುಂದಾಗಿದ್ದೇವೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಯಲ್ಲಪ್ಪ ಹೇಳಿದ್ದಾರೆ. ಇನ್ನು ಪರೀಕ್ಷಾ ವಿಧಾನದಲ್ಲಿ ಸಹ ಹಲವು ಅನುಮಾನಗಳಿದ್ದು, ಓಎಮ್ಆರ್ ಇಲ್ಲದ ಉತ್ತರ ಪತ್ರಿಕೆಗಳನ್ನ ನೀಡಲಾಗಿತ್ತು. ಹೀಗಾಗಿ ಅಭ್ಯರ್ಥಿಗಳಿಗೆ ತಾವು ಸರಿ ಉತ್ತರ ಬರೆದಿದ್ದರೂ ಕಡಿಮೆ ಅಂಕ ಬಂದಿವೆ ಎಂಬ ಶಂಕೆಯೂ ಇದೆ.

ಕಳೆದ ಬಾರಿ ನೇಮಕ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದ್ದರಿಂದ ನೇಮಕಾತಿ ಪ್ರಕ್ರಿಯೆಯನ್ನು ರದ್ದು ಮಾಡಲಾಗಿತ್ತು. ಇದೀಗ ಮತ್ತೆ ಅದೇ ರೀತಿ ನೇಮಕ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಇಲ್ಲದಿದ್ದರೆ ಕೆಲವೇ ದಿನಗಳಲ್ಲಿ ವಿವಿ ಆವರಣದಲ್ಲಿ ಪೆಂಡಾಲ್ ಹಾಕಿ ಧರಣಿ ನಡೆಸುವುದಾಗಿ ಸಂಘಟನೆ ಮುಖಂಡರು ಎಚ್ಚರಿಕೆಯನ್ನು ನೀಡಿದ್ದಾರೆ.

Intro:KN_DVG_01_18_GOLMAL_SCRIPT_01_7203307_YOGARAJ

Davanagere

Reporter: Yogaraja G.H.


ದಾವಣಗೆರೆ ವಿವಿಯಲ್ಲಿ ವಿವಿಧ ಉಪನ್ಯಾಸಕರ ಹುದ್ದೆಗೆ ಹಣ ಪಡೆದು ನೇಮಕಾತಿ ಮಾಡಿಕೊಳ್ಳಲಾಯ್ತಾ...?

ದಾವಣಗೆರೆ : ಮಧ್ಯ ಕರ್ನಾಟಕ ಭಾಗದ ಶಿಕ್ಷಣ ಕೇಂದ್ರ ದಾವಣಗೆರೆಯ ವಿಶ್ವವಿದ್ಯಾಲಯದಲ್ಲಿ ಇದೀಗ ಅಕ್ರಮದ ವಾಸನೆ ಕೇಳಿ ಬಂದಿದೆ. ವಿವಿಧ ಉಪನ್ಯಾಸಕರ ಹುದ್ದೆಗೆ ಲಕ್ಷಾಂತರ
ರೂಪಾಯಿ ಹಣ ಪಡೆದು ವಿವಿಯ ಕುಲಪತಿ ಅಕ್ರಮವಾಗಿ ನೇಮಕಾತಿ ಮಾಡಿದ್ದಾರೆ ಎಂದು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಆರೋಪಿಸಿದೆ. ಯುಜಿಸಿ, ಸರ್ಕಾರದ ನಡಾವಳಿಗಳನ್ನು ಗಾಳಿಗೆ
ತೂರಿ ನೇಮಕಾತಿ ನಡೆಸಿದ್ದು, ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಲು ನಿರ್ಧರಿಸಿದೆ.

ದಾವಣಗೆರೆಯ ಶಿವಗಂಗೋತ್ರಿ ವಿಶ್ವವಿದ್ಯಾಲಯಲ್ಲಿ ಕಳೆದ ತಿಂಗಳ 24 ರಂದು 37 ಅಭ್ಯರ್ಥಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. 125 ಹುದ್ದೆಗಳಲ್ಲಿ 37 ಅಭ್ಯರ್ಥಿಗಳ ಆಯ್ಕೆಯಾಗಿದ್ದು
ಇದರಲ್ಲಿ ಅಕ್ರಮ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ. ವಿವಿಯ ಕುಲಪತಿ, ಕುಲಾಧಿಪತಿ ಸೇರಿಕೊಂಡು ಲಕ್ಷ ಲಕ್ಷ ಹಣ ಪಡೆದು ತಮಗೆ ಬೇಕಾದವರನ್ನು ನೇಮಕ ಮಾಡಿಕೊಂಡಿದ್ದಾರೆ
ಎಂಬ ಆರೋಪ ಮಾಡಲಾಗಿದೆ.

ಕಳೆದ ಮೇ 21 ಹಾಗೂ 22 ರಂದು ನೇಮಕಾತಿಗಾಗಿ ವಿವಿಯಲ್ಲಿ ಸಂದರ್ಶನ ನಡೆಸಿದ ವಿಶ್ವವಿದ್ಯಾಲಯ 24 ನೇ ತಾರೀಖಿನ ಮಧ್ಯಾಹ್ನ ಒಂದು ಗಂಟೆಗೆ ಸಿಂಡಿಕೇಟ್ ಸಭೆ ಮಾಡಿತ್ತು. ಅದೇ
ದಿನ ಸಂದರ್ಶನ ನಡೆಸಿ ನಾಲ್ಕು ಗಂಟೆಗೆ ನೇಮಕವಾದ ಅಭ್ಯರ್ಥಿಗಳಿಗೆ ಆದೇಶ ಪತ್ರವನ್ನು ನೀಡಿದೆ. ಇದು ಹೇಗೆ ಸಾಧ್ಯ ಎಂಬುದು ವೇದಿಕೆಯ ಪ್ರಶ್ನೆ.

ವಿಶ್ವವಿದ್ಯಾಲಯ 1:3 ರ ಅನುಪಾತದಲ್ಲಿ ಪಟ್ಟಿ ಪ್ರಕಟಿಸದೇ ತಮಗೆ ಬೇಕಾದವರಿಗೆ ಉದ್ಯೋಗ ನೀಡಿದೆ. ಅಷ್ಟೇ ಅಲ್ಲ, ಆಯ್ಕೆಯಾದ ಅಭ್ಯರ್ಥಿಗಳ ಹೆಸರನ್ನು ನೋಟಿಸ್ ಬೋರ್ಡ್ ನಲ್ಲಿ ಹಾಕದೇ
ಇರೋದು ಸಾಕಷ್ಟು ಅನುಮಾನ ಮೂಡಿಸಿದೆ. ಹೀಗಾಗಿ, 37 ಅಭ್ಯರ್ಥಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ತಮಗೆ ಬೇಕಾದವರಿಗೆ ಮಾತ್ರ ಕರೆ ಮಾಡಿ ಸಂದರ್ಶನಕ್ಕೆ ಕರೆಸಿಕೊಂಡಿದ್ದು,
ಅವರಿಗೆ ಮಾತ್ರ ನೇಮಕಾತಿ ಆದೇಶ ಪತ್ರ ನೀಡಿದ್ದಾರೆ. ಇದರಲ್ಲಿ ಕುಲಸಚಿವರು ಹಣ ಪಡೆದು ಬೋಧಕ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದಾರೆ ಎನ್ನುವುದು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ
ಆರೋಪ. ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ರಾಜ್ಯಪಾಲರಿಗೆ ದೂರು ನೀಡಲು ಮುಂದಾಗಿದ್ದೇವೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಯಲ್ಲಪ್ಪ ಹೇಳಿದ್ದಾರೆ.

ಇನ್ನು ಪರೀಕ್ಷಾ ವಿಧಾನದಲ್ಲಿ ಸಹ ಹಲವು ಅನುಮಾನಗಳಿದ್ದು, ಓಎಮ್ಆರ್ ಇಲ್ಲದ ಉತ್ತರ ಪತ್ರಿಕೆಗಳನ್ನ ನೀಡಲಾಗಿತ್ತು. ಹೀಗಾಗಿ ಅಭ್ಯರ್ಥಿಗಳಿಗೆ ತಾವು ಸರಿ ಉತ್ತರ ಬರೆದಿದ್ದರೂ ಕಡಿಮೆ
ಅಂಕ ಬಂದಿವೆ ಎಂಬ ಶಂಕೆಯೂ ಇದೆ. ಈ ಹಿನ್ನೆಲೆಯಲ್ಲೂ ವಿವಿ ಬಗ್ಗೆ ಹಲವು ಅನುಮಾನಗಳು ಮೂಡಿವೆ. ಕಳೆದ ಬಾರಿ ನೇಮಕ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದ್ದರಿಂದ ನೇಮಕಾತಿ
ಪ್ರಕ್ರಿಯೆಯನ್ನು ರದ್ದು ಮಾಡಲಾಗಿತ್ತು.

ಇದೀಗ ಮತ್ತೆ ಅದೇ ರೀತಿ ನೇಮಕ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಇಲ್ಲದಿದ್ದರೆ ಕೆಲವೇ ದಿನಗಳಲ್ಲಿ ವಿವಿ ಆವರಣದಲ್ಲಿ ಪೆಂಡಾಲ್ ಹಾಕಿ ಧರಣಿ
ನಡೆಸುವುದಾಗಿ ಸಂಘಟನೆ ಮುಖಂಡರು ಎಚ್ಚರಿಕೆಯನ್ನು ನೀಡಿದ್ದಾರೆ. ಕುಲಪತಿಗಳು, ಕುಲಾಧಿಪತಿಗಳು ನೇಮಕಾತಿಯಲ್ಲಿ ಹಣದ ಆಸೆಗೆ ಬಿದ್ದು ಯುಜಿಸಿ, ಸರ್ಕಾರದ ನಿಯಮವನ್ನು ಗಾಳಿಗೆ
ತೂರಿ ನೇಮಕಾತಿ ಮಾಡಿದ್ದಾರೋ ಅಥವಾ ಪ್ರಾಮಾಣಿಕವಾಗಿ ನೇಮಕಾತಿ ಮಾಡಿದ್ದಾರೋ ಎಂಬುದು ತನಿಖೆ ನಂತರ ಗೊತ್ತಾಗ ಬೇಕಿದೆ. ಏನೇ ಆಗಲೀ ಈ ಬಗ್ಗೆ ಸಮರ್ಪಕ ತನಿಖೆ ನಡೆದು,
ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗ ಸಿಗುವಂತಾಗಲಿ ಎಂಬುದು ನೊಂದ ಅಭ್ಯರ್ಥಿಗಳ ಮನವಿ.

ಬೈಟ್-01
ಯಲ್ಲಪ್ಪ, ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ

ಬೈಟ್-02

ಬೈಟ್: ಸಂತೋಷ್ ದೊಡ್ಮನಿ, ವೇದಿಕೆಯ ಕಾರ್ಯಕರ್ತ
Body:KN_DVG_01_18_GOLMAL_SCRIPT_01_7203307_YOGARAJ

Davanagere

Reporter: Yogaraja G.H.


ದಾವಣಗೆರೆ ವಿವಿಯಲ್ಲಿ ವಿವಿಧ ಉಪನ್ಯಾಸಕರ ಹುದ್ದೆಗೆ ಹಣ ಪಡೆದು ನೇಮಕಾತಿ ಮಾಡಿಕೊಳ್ಳಲಾಯ್ತಾ...?

ದಾವಣಗೆರೆ : ಮಧ್ಯ ಕರ್ನಾಟಕ ಭಾಗದ ಶಿಕ್ಷಣ ಕೇಂದ್ರ ದಾವಣಗೆರೆಯ ವಿಶ್ವವಿದ್ಯಾಲಯದಲ್ಲಿ ಇದೀಗ ಅಕ್ರಮದ ವಾಸನೆ ಕೇಳಿ ಬಂದಿದೆ. ವಿವಿಧ ಉಪನ್ಯಾಸಕರ ಹುದ್ದೆಗೆ ಲಕ್ಷಾಂತರ
ರೂಪಾಯಿ ಹಣ ಪಡೆದು ವಿವಿಯ ಕುಲಪತಿ ಅಕ್ರಮವಾಗಿ ನೇಮಕಾತಿ ಮಾಡಿದ್ದಾರೆ ಎಂದು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಆರೋಪಿಸಿದೆ. ಯುಜಿಸಿ, ಸರ್ಕಾರದ ನಡಾವಳಿಗಳನ್ನು ಗಾಳಿಗೆ
ತೂರಿ ನೇಮಕಾತಿ ನಡೆಸಿದ್ದು, ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಲು ನಿರ್ಧರಿಸಿದೆ.

ದಾವಣಗೆರೆಯ ಶಿವಗಂಗೋತ್ರಿ ವಿಶ್ವವಿದ್ಯಾಲಯಲ್ಲಿ ಕಳೆದ ತಿಂಗಳ 24 ರಂದು 37 ಅಭ್ಯರ್ಥಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. 125 ಹುದ್ದೆಗಳಲ್ಲಿ 37 ಅಭ್ಯರ್ಥಿಗಳ ಆಯ್ಕೆಯಾಗಿದ್ದು
ಇದರಲ್ಲಿ ಅಕ್ರಮ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ. ವಿವಿಯ ಕುಲಪತಿ, ಕುಲಾಧಿಪತಿ ಸೇರಿಕೊಂಡು ಲಕ್ಷ ಲಕ್ಷ ಹಣ ಪಡೆದು ತಮಗೆ ಬೇಕಾದವರನ್ನು ನೇಮಕ ಮಾಡಿಕೊಂಡಿದ್ದಾರೆ
ಎಂಬ ಆರೋಪ ಮಾಡಲಾಗಿದೆ.

ಕಳೆದ ಮೇ 21 ಹಾಗೂ 22 ರಂದು ನೇಮಕಾತಿಗಾಗಿ ವಿವಿಯಲ್ಲಿ ಸಂದರ್ಶನ ನಡೆಸಿದ ವಿಶ್ವವಿದ್ಯಾಲಯ 24 ನೇ ತಾರೀಖಿನ ಮಧ್ಯಾಹ್ನ ಒಂದು ಗಂಟೆಗೆ ಸಿಂಡಿಕೇಟ್ ಸಭೆ ಮಾಡಿತ್ತು. ಅದೇ
ದಿನ ಸಂದರ್ಶನ ನಡೆಸಿ ನಾಲ್ಕು ಗಂಟೆಗೆ ನೇಮಕವಾದ ಅಭ್ಯರ್ಥಿಗಳಿಗೆ ಆದೇಶ ಪತ್ರವನ್ನು ನೀಡಿದೆ. ಇದು ಹೇಗೆ ಸಾಧ್ಯ ಎಂಬುದು ವೇದಿಕೆಯ ಪ್ರಶ್ನೆ.

ವಿಶ್ವವಿದ್ಯಾಲಯ 1:3 ರ ಅನುಪಾತದಲ್ಲಿ ಪಟ್ಟಿ ಪ್ರಕಟಿಸದೇ ತಮಗೆ ಬೇಕಾದವರಿಗೆ ಉದ್ಯೋಗ ನೀಡಿದೆ. ಅಷ್ಟೇ ಅಲ್ಲ, ಆಯ್ಕೆಯಾದ ಅಭ್ಯರ್ಥಿಗಳ ಹೆಸರನ್ನು ನೋಟಿಸ್ ಬೋರ್ಡ್ ನಲ್ಲಿ ಹಾಕದೇ
ಇರೋದು ಸಾಕಷ್ಟು ಅನುಮಾನ ಮೂಡಿಸಿದೆ. ಹೀಗಾಗಿ, 37 ಅಭ್ಯರ್ಥಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ತಮಗೆ ಬೇಕಾದವರಿಗೆ ಮಾತ್ರ ಕರೆ ಮಾಡಿ ಸಂದರ್ಶನಕ್ಕೆ ಕರೆಸಿಕೊಂಡಿದ್ದು,
ಅವರಿಗೆ ಮಾತ್ರ ನೇಮಕಾತಿ ಆದೇಶ ಪತ್ರ ನೀಡಿದ್ದಾರೆ. ಇದರಲ್ಲಿ ಕುಲಸಚಿವರು ಹಣ ಪಡೆದು ಬೋಧಕ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದಾರೆ ಎನ್ನುವುದು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ
ಆರೋಪ. ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ರಾಜ್ಯಪಾಲರಿಗೆ ದೂರು ನೀಡಲು ಮುಂದಾಗಿದ್ದೇವೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಯಲ್ಲಪ್ಪ ಹೇಳಿದ್ದಾರೆ.

ಇನ್ನು ಪರೀಕ್ಷಾ ವಿಧಾನದಲ್ಲಿ ಸಹ ಹಲವು ಅನುಮಾನಗಳಿದ್ದು, ಓಎಮ್ಆರ್ ಇಲ್ಲದ ಉತ್ತರ ಪತ್ರಿಕೆಗಳನ್ನ ನೀಡಲಾಗಿತ್ತು. ಹೀಗಾಗಿ ಅಭ್ಯರ್ಥಿಗಳಿಗೆ ತಾವು ಸರಿ ಉತ್ತರ ಬರೆದಿದ್ದರೂ ಕಡಿಮೆ
ಅಂಕ ಬಂದಿವೆ ಎಂಬ ಶಂಕೆಯೂ ಇದೆ. ಈ ಹಿನ್ನೆಲೆಯಲ್ಲೂ ವಿವಿ ಬಗ್ಗೆ ಹಲವು ಅನುಮಾನಗಳು ಮೂಡಿವೆ. ಕಳೆದ ಬಾರಿ ನೇಮಕ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದ್ದರಿಂದ ನೇಮಕಾತಿ
ಪ್ರಕ್ರಿಯೆಯನ್ನು ರದ್ದು ಮಾಡಲಾಗಿತ್ತು.

ಇದೀಗ ಮತ್ತೆ ಅದೇ ರೀತಿ ನೇಮಕ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಇಲ್ಲದಿದ್ದರೆ ಕೆಲವೇ ದಿನಗಳಲ್ಲಿ ವಿವಿ ಆವರಣದಲ್ಲಿ ಪೆಂಡಾಲ್ ಹಾಕಿ ಧರಣಿ
ನಡೆಸುವುದಾಗಿ ಸಂಘಟನೆ ಮುಖಂಡರು ಎಚ್ಚರಿಕೆಯನ್ನು ನೀಡಿದ್ದಾರೆ. ಕುಲಪತಿಗಳು, ಕುಲಾಧಿಪತಿಗಳು ನೇಮಕಾತಿಯಲ್ಲಿ ಹಣದ ಆಸೆಗೆ ಬಿದ್ದು ಯುಜಿಸಿ, ಸರ್ಕಾರದ ನಿಯಮವನ್ನು ಗಾಳಿಗೆ
ತೂರಿ ನೇಮಕಾತಿ ಮಾಡಿದ್ದಾರೋ ಅಥವಾ ಪ್ರಾಮಾಣಿಕವಾಗಿ ನೇಮಕಾತಿ ಮಾಡಿದ್ದಾರೋ ಎಂಬುದು ತನಿಖೆ ನಂತರ ಗೊತ್ತಾಗ ಬೇಕಿದೆ. ಏನೇ ಆಗಲೀ ಈ ಬಗ್ಗೆ ಸಮರ್ಪಕ ತನಿಖೆ ನಡೆದು,
ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗ ಸಿಗುವಂತಾಗಲಿ ಎಂಬುದು ನೊಂದ ಅಭ್ಯರ್ಥಿಗಳ ಮನವಿ.

ಬೈಟ್-01
ಯಲ್ಲಪ್ಪ, ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ

ಬೈಟ್-02

ಬೈಟ್: ಸಂತೋಷ್ ದೊಡ್ಮನಿ, ವೇದಿಕೆಯ ಕಾರ್ಯಕರ್ತ

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.