ETV Bharat / state

ರಾಜಕೀಯ ಲಾಭಕ್ಕಾಗಿ ನನ್ನ ವಿರುದ್ಧ ಸುಳ್ಳು ಕೇಸ್: ಬಿಜೆಪಿ ಮುಖಂಡ ಎಲ್. ನಾಗರಾಜ್ ಆರೋಪ - ದಾವಣಗೆರೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ  ವೈ. ರಾಮಪ್ಪ‌ ಹೇಳಿಕೆ

ರಾಜಕೀಯ ಲಾಭಕ್ಕಾಗಿ ಕೆರಳಿಸುವ ಹೇಳಿಕೆ ಕೊಟ್ಟು, ನಂತರ ಸುಳ್ಳು ಕೇಸ್ ದಾಖಲಿಸುವುದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ  ವೈ. ರಾಮಪ್ಪ‌ ಅವರ ನಿತ್ಯದ ಕಾಯಕವಾಗಿದೆ ಎಂದು ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್ ಆರೋಪಿಸಿದರು.

ಬಿಜೆಪಿ ಮುಖಂಡ ಎಲ್. ನಾಗರಾಜ್
ಬಿಜೆಪಿ ಮುಖಂಡ ಎಲ್. ನಾಗರಾಜ್
author img

By

Published : Nov 28, 2019, 6:25 PM IST

Updated : Nov 28, 2019, 11:32 PM IST

ದಾವಣಗೆರೆ: ರಾಜಕೀಯ ಲಾಭಕ್ಕಾಗಿ ಕೆರಳಿಸುವ ಹೇಳಿಕೆ ಕೊಟ್ಟು, ನಂತರ ಸುಳ್ಳು ಕೇಸ್ ದಾಖಲಿಸುವುದು ಜಿಲ್ಲಾ ಪಂಚಾಯತ್​ ಮಾಜಿ ಅಧ್ಯಕ್ಷ ರಾಮಪ್ಪ‌ ಅವರ ನಿತ್ಯದ ಕಾಯಕವಾಗಿದೆ ಎಂದು ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್ ಆರೋಪಿಸಿದರು.

ಇತ್ತೀಚೆಗೆ ನಡೆದ ಪಾಲಿಕೆ ಚುನಾವಣೆಯಲ್ಲಿ ಹಳೇ ದ್ವೇಷ ಇಟ್ಟುಕೊಂಡು, ರಾಮಪ್ಪ ನಮಗೆ ಅವಾಚ್ಯ ಪದಗಳಿಂದ ನಿಂದಿಸಿದ್ದರು. ನಾವು ಪೊಲೀಸರ ಮಾತಿಗೆ ಬೆಲೆ ಕೊಟ್ಟು ಸುಮ್ಮನೆ ಹೋಗಿದ್ದೆವು ಎಂದರು. ನಾವು ಅವರಿಗೆ ಯಾವುದೇ ರೀತಿಯಲ್ಲಿ ನಿಂದಿಸದಿದ್ದರೂ ಸಹ ಅವರು, ಮರುದಿನ ನನ್ನ ವಿರುದ್ಧ ಸುಳ್ಳು ಜಾತಿ ನಿಂದನೆ ಕೇಸ್ ದಾಖಲಿಸಿದ್ದಾರೆ ಎಂದು ಆರೋಪಿಸಿದರು.

ವೈಯುಕ್ತಿಕ ಲಾಭಕ್ಕಾಗಿ ಈ ರೀತಿ ಸುಳ್ಳು ಕೇಸ್ ದಾಖಲಿಸುವುದು ಅವರಿಗೆ ರೂಢಿಯಾಗಿದೆ. ಇದೇ ರೀತಿ ಅಮಾಯಕರ ವಿರುದ್ಧ 15 ರಿಂದ 16ಕೇಸ್ ಗಳನ್ನು ಹಾಕಿಸಿ ಇವರ ಬೇಳೆ ಕಾಳು ಬೇಯಿಸಿಕೊಂಡಿದ್ದಾರೆ ಎಂದರು. ಕಾನೂನಿಗೆ ಬೆಲೆಕೊಟ್ಟು ಇಂದು ನಾನು ಪೊಲೀಸ್ ಗೆ ಶರಣಾಗತಿ ಆಗುತ್ತಿದ್ದೇನೆ. ಇಂತಹ ನೂರು ಕೇಸ್ ಹಾಕಿದರೂ ನಾನು ಜಗ್ಗಲ್ಲ. ನಮ್ಮವರಿಗಾಗಿ ನಮ್ಮ ಸಮಾಜಕ್ಕಾಗಿ ಹೋರಾಡುತ್ತೇನೆ ಎಂದು ನಾಗರಾಜ್​ ಗುಡುಗಿದರು.

ಬಿಜೆಪಿ ಮುಖಂಡ ಎಲ್. ನಾಗರಾಜ್

ಇನ್ನು, ಲೋಕಸಭಾ ಚುನಾವಣೆಯಲ್ಲಿ ರಾಮಪ್ಪ ಅನ್ಯ ಸಮುದಾಯದವರನ್ನು ನಿಂದಿಸಿದ್ದ ಆಡಿಯೋ ಬಹಿರಂಗಗೊಂಡಿತ್ತು. ಇದರಿಂದ ಕೆರಳಿದ್ದ ಆ ಸಮುದಾಯ ರಾಮಪ್ಪ ಅವರ ವಿರುದ್ಧ ಪ್ರತಿಭಟನೆ ನಡೆಸಿತ್ತು. ಈ ಹಿನ್ನೆಲೆ ಅಂದು ವೈ. ರಾಮಪ್ಪ ಹಲವು ಮುಖಂಡರ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಿಸಿದ್ದರು. ಆ ಪ್ರಕರಣದಲ್ಲಿ ನಾಗರಾಜ್ ಹೆಸರು ಕೂಡ ಇತ್ತು.


ಇನ್ನು ಈ ಕುರಿತು ಸ್ಪಷ್ಟನೆ ನೀಡಿರುವ ರಾಮಪ್ಪ, ನಾಗರಾಜ್ ಅವರು ಜಾತಿ ಹಾಗೂ ಅಶ್ಲೀಲ ಪದ ಪ್ರಯೋಗಿಸಿದರೂ ನಾನು ತಾಳ್ಮೆ ವಹಿಸಿದ್ದೆ. ಬಳಿಕ ಜಾತಿ ನಿಂದನೆ ದೂರು ದಾಖಲಿಸಿದೆ ಎಂದು ಹೇಳಿದ್ದಾರೆ. ನಾನು ಅಟ್ರಾಸಿಟಿಯಲ್ಲಿ ಪಿಎಚ್ ಡಿ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ, ನನ್ನ ಪಿಎಚ್ಡಿ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಇಲ್ಲ, ನಾನು ಸಂಸ್ಕಾರ, ಸನ್ಮಾರ್ಗದಿಂದ ಬೆಳೆದವನು, ದೇವಾಲಯಗಳ ವಿಷಯದಲ್ಲಿ ಅಧ್ಯಾಯನ ಮಾಡಿ ಪಿಎಚ್ ಡಿ ಪಡೆದಿದ್ದೇನೆ ಎಂದರು.

ಜಿಲ್ಲಾ ಪಂಚಾಯತ್​ ಮಾಜಿ ಅಧ್ಯಕ್ಷ ರಾಮಪ್ಪ‌

ಹತ್ತು ದಿನ ನ್ಯಾಯಾಂಗ ಬಂಧನ

ಜಾತಿ ನಿಂದನೆ ಪ್ರಕರಣ ಹಿನ್ನೆಲೆ ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್ ಅವರಿಗೆ ಹತ್ತು ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಕರಣ ಹಿನ್ನೆಲೆ ನಾಗರಾಜ್ ನೇರವಾಗಿ ದಾವಣಗೆರೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಶ್ರೀ ಅವರು, ಡಿಸೆಂಬರ್ 7ರವರೆಗೆ ನ್ಯಾಯಾಂಗ ಬಂಧನಕ್ಕೆ ಸೂಚಿಸಿದ್ದಾರೆ.

ದಾವಣಗೆರೆ: ರಾಜಕೀಯ ಲಾಭಕ್ಕಾಗಿ ಕೆರಳಿಸುವ ಹೇಳಿಕೆ ಕೊಟ್ಟು, ನಂತರ ಸುಳ್ಳು ಕೇಸ್ ದಾಖಲಿಸುವುದು ಜಿಲ್ಲಾ ಪಂಚಾಯತ್​ ಮಾಜಿ ಅಧ್ಯಕ್ಷ ರಾಮಪ್ಪ‌ ಅವರ ನಿತ್ಯದ ಕಾಯಕವಾಗಿದೆ ಎಂದು ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್ ಆರೋಪಿಸಿದರು.

ಇತ್ತೀಚೆಗೆ ನಡೆದ ಪಾಲಿಕೆ ಚುನಾವಣೆಯಲ್ಲಿ ಹಳೇ ದ್ವೇಷ ಇಟ್ಟುಕೊಂಡು, ರಾಮಪ್ಪ ನಮಗೆ ಅವಾಚ್ಯ ಪದಗಳಿಂದ ನಿಂದಿಸಿದ್ದರು. ನಾವು ಪೊಲೀಸರ ಮಾತಿಗೆ ಬೆಲೆ ಕೊಟ್ಟು ಸುಮ್ಮನೆ ಹೋಗಿದ್ದೆವು ಎಂದರು. ನಾವು ಅವರಿಗೆ ಯಾವುದೇ ರೀತಿಯಲ್ಲಿ ನಿಂದಿಸದಿದ್ದರೂ ಸಹ ಅವರು, ಮರುದಿನ ನನ್ನ ವಿರುದ್ಧ ಸುಳ್ಳು ಜಾತಿ ನಿಂದನೆ ಕೇಸ್ ದಾಖಲಿಸಿದ್ದಾರೆ ಎಂದು ಆರೋಪಿಸಿದರು.

ವೈಯುಕ್ತಿಕ ಲಾಭಕ್ಕಾಗಿ ಈ ರೀತಿ ಸುಳ್ಳು ಕೇಸ್ ದಾಖಲಿಸುವುದು ಅವರಿಗೆ ರೂಢಿಯಾಗಿದೆ. ಇದೇ ರೀತಿ ಅಮಾಯಕರ ವಿರುದ್ಧ 15 ರಿಂದ 16ಕೇಸ್ ಗಳನ್ನು ಹಾಕಿಸಿ ಇವರ ಬೇಳೆ ಕಾಳು ಬೇಯಿಸಿಕೊಂಡಿದ್ದಾರೆ ಎಂದರು. ಕಾನೂನಿಗೆ ಬೆಲೆಕೊಟ್ಟು ಇಂದು ನಾನು ಪೊಲೀಸ್ ಗೆ ಶರಣಾಗತಿ ಆಗುತ್ತಿದ್ದೇನೆ. ಇಂತಹ ನೂರು ಕೇಸ್ ಹಾಕಿದರೂ ನಾನು ಜಗ್ಗಲ್ಲ. ನಮ್ಮವರಿಗಾಗಿ ನಮ್ಮ ಸಮಾಜಕ್ಕಾಗಿ ಹೋರಾಡುತ್ತೇನೆ ಎಂದು ನಾಗರಾಜ್​ ಗುಡುಗಿದರು.

ಬಿಜೆಪಿ ಮುಖಂಡ ಎಲ್. ನಾಗರಾಜ್

ಇನ್ನು, ಲೋಕಸಭಾ ಚುನಾವಣೆಯಲ್ಲಿ ರಾಮಪ್ಪ ಅನ್ಯ ಸಮುದಾಯದವರನ್ನು ನಿಂದಿಸಿದ್ದ ಆಡಿಯೋ ಬಹಿರಂಗಗೊಂಡಿತ್ತು. ಇದರಿಂದ ಕೆರಳಿದ್ದ ಆ ಸಮುದಾಯ ರಾಮಪ್ಪ ಅವರ ವಿರುದ್ಧ ಪ್ರತಿಭಟನೆ ನಡೆಸಿತ್ತು. ಈ ಹಿನ್ನೆಲೆ ಅಂದು ವೈ. ರಾಮಪ್ಪ ಹಲವು ಮುಖಂಡರ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಿಸಿದ್ದರು. ಆ ಪ್ರಕರಣದಲ್ಲಿ ನಾಗರಾಜ್ ಹೆಸರು ಕೂಡ ಇತ್ತು.


ಇನ್ನು ಈ ಕುರಿತು ಸ್ಪಷ್ಟನೆ ನೀಡಿರುವ ರಾಮಪ್ಪ, ನಾಗರಾಜ್ ಅವರು ಜಾತಿ ಹಾಗೂ ಅಶ್ಲೀಲ ಪದ ಪ್ರಯೋಗಿಸಿದರೂ ನಾನು ತಾಳ್ಮೆ ವಹಿಸಿದ್ದೆ. ಬಳಿಕ ಜಾತಿ ನಿಂದನೆ ದೂರು ದಾಖಲಿಸಿದೆ ಎಂದು ಹೇಳಿದ್ದಾರೆ. ನಾನು ಅಟ್ರಾಸಿಟಿಯಲ್ಲಿ ಪಿಎಚ್ ಡಿ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ, ನನ್ನ ಪಿಎಚ್ಡಿ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಇಲ್ಲ, ನಾನು ಸಂಸ್ಕಾರ, ಸನ್ಮಾರ್ಗದಿಂದ ಬೆಳೆದವನು, ದೇವಾಲಯಗಳ ವಿಷಯದಲ್ಲಿ ಅಧ್ಯಾಯನ ಮಾಡಿ ಪಿಎಚ್ ಡಿ ಪಡೆದಿದ್ದೇನೆ ಎಂದರು.

ಜಿಲ್ಲಾ ಪಂಚಾಯತ್​ ಮಾಜಿ ಅಧ್ಯಕ್ಷ ರಾಮಪ್ಪ‌

ಹತ್ತು ದಿನ ನ್ಯಾಯಾಂಗ ಬಂಧನ

ಜಾತಿ ನಿಂದನೆ ಪ್ರಕರಣ ಹಿನ್ನೆಲೆ ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್ ಅವರಿಗೆ ಹತ್ತು ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಕರಣ ಹಿನ್ನೆಲೆ ನಾಗರಾಜ್ ನೇರವಾಗಿ ದಾವಣಗೆರೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಶ್ರೀ ಅವರು, ಡಿಸೆಂಬರ್ 7ರವರೆಗೆ ನ್ಯಾಯಾಂಗ ಬಂಧನಕ್ಕೆ ಸೂಚಿಸಿದ್ದಾರೆ.

Intro:ದಾವಣಗೆರೆ; ರಾಜಕೀಯ ಲಾಭಕ್ಕೋಸ್ಕರ ಸುಖಾಸುಮ್ಮನೇ ಕೆರಳಿಸುವ ಹೇಳಿಕೆ ಕೊಟ್ಟು, ನಂತರ ಸುಳ್ಳು ಕೇಸ್ ದಾಖಲಿಸುವುದು, ಸರ್ಕಾರದಿಂದ ಪುಕ್ಕಟೆ ಭದ್ರತೆ ತೆಗೆದುಕೊಳ್ಳುವುದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ನಿತ್ಯದ ಕಾರ್ಯವಾಗಿದೆ ಎಂಬ ಆರೋಪ ಕೇಳಿ ಬಂದಿದೆ..

ಹೌದು.. ಈ ಎಲ್ಲಾ ಆರೋಪ ಮಾಡಿದವರು, ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್ ಅವರು, ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಆರೋಪಗಳ ಸುರಿಮಳೆಗೈದರು. ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈ ರಾಮಪ್ಪ‌ ಅನ್ಯ ಸಮುದಾಯದವರನ್ನು ನಿಂದಿಸಿದ್ದ ಆಡಿಯೋ ಬಹಿರಂಗಗೊಂಡಿತ್ತು ಇದರಿಂದ ಕೆರಳಿದ್ದ ಲಿಂಗಾಯಿತ ಸಮಾಜ ರಾಮಪ್ಪ ವಿರುದ್ದ ಪ್ರತಿಭಟನೆ ನಡೆಸಿತ್ತು. ಈ ಹಿನ್ನಲೆ ಅಂದು ವೈ ರಾಮಪ್ಪ ಹಲವು ಮುಖಂಡರ ಮೇಲೆ ಜಾತಿ ನಿಂದನೆ ಕೇಸ್ ದಾಖಲಿಸಿದ್ದರು. ಆ ಕೇಸ್ನಲ್ಲಿ ಪ್ರಭಾವಿ ಮುಖಂಡ ಲೋಕಿಕೆರೆ ನಾಗರಾಜ್ ಹೆಸರು ಕೂಡ ಸೇರ್ಪಡೆ ಮಾಡಲಾಗಿತ್ತು..



Body:ಅದಾದ ಬಳಿಕ ಮೊನ್ನೆ ನಡೆದ ಪಾಲಿಕೆ ಚುನಾವಣೆ ಹಳೇ ದ್ವೇಷ ಇಟ್ಟುಕೊಂಡು ವೈ ರಾಮಪ್ಪ, ವಿದ್ಯಾನಗರ ಬೂತ್ ನಲ್ಲಿ ನಮಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದರು, ಆದರೂ ಸಹ ನಾವು ಪೊಲೀಸರಿಗೆ ಬೆಲೆ ಕೊಟ್ಟು ಸುಮ್ಮನೆ ಹೊರಟೆವು, ನಾವು ಅವರಿಗೆ ಯಾವೂದೇ ರೀತಿಯಲ್ಲಿ ಬೈಯ್ಯದಿದ್ದರು ಸಹ ಮರುದಿನ ನನ್ನ ಮೇಲೆ ಸುಳ್ಳು ಜಾತಿ ನಿಂದನೆ ಕೇಸ್ ದಾಖಲಿಸಿದ್ದಾರೆ ಎಂದು ಲೋಕಿಕೆರೆ ನಾಗರಾಜ್ ಆರೋಪಿಸಿದ್ದಾರೆ..

ವೈಯುಕ್ತಿಕ ಲಾಭಕ್ಕೋಸ್ಕರ ಈ ರೀತಿ ಸುಳ್ಳು ಕೇಸ್ ದಾಖಲಿಸುವುದು ಅವರಿಗೆ ರೂಢಿಯಾಗಿದೆ, ಇವರೇ ಬೈಯುವುದು ಮತ್ತೆ ಇವರೇ ಎದುರಾಳಿಯ ಮೇಲೆ ಕೇಸ್ ದಾಖಲಿಸುವುದು, ಇದೇ ರೀತಿ ಅಮಾಯಕರ ಮೇಲೆ 15ರಿಂದ 16ಕೇಸ್ ಗಳನ್ನು ಹಾಕಿಸಿ ಇವರ ಬೇಳೆ ಕಾಳು ಬೇಯಿಸಿಕೊಂಡಿದ್ದಾರೆ, ಪಿಎಚ್ ಡಿ ಮಾಡಿದವರು ಇವರು, ಇವರೇ ಕಾನೂನನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ, ಕೇಸ್ ದಾಖಲಿಸಿದ ಹಿನ್ನಲೆ ಆರು ತಿಂಗಳು ಕಾಲ ಸರ್ಕಾರದಿಂದ ಭದ್ರತೆ ಸಿಕ್ಕಿತ್ತು, ಅದು‌ ಮುಗಿಯುವ ಹಂತದಲ್ಲಿದೆ, ಹೀಗಾಗಿ ಮತ್ತೆ ಕೇಸ್ ದಾಖಲಿಸಿದ್ದಾರೆ ಎಂದು ಆರೋಪಿಸಿದರು. ಈ ಹಿನ್ನಲೆ ಕಾನೂನಿಗೆ ಬೆಲೆಕೊಟ್ಟು ಇಂದು ನಾನು ಪೊಲೀಸ್ ಗೆ ಶರಣಾಗತಿ ಆಗುತ್ತಿದ್ದೇನೆ, ಇಂತಹ ನೂರು ಕೇಸ್ ಹಾಕಿದರು, ಜಗ್ಗಲ್ಲ, ಬಗ್ಗಲ್ಲ, ನಮ್ಮವರಿಗಾಗಿ ನಮ್ಮ ಸಮಾಜಕ್ಕಾಗಿ ಹೋರಾಡುತ್ತೇನೆ ಎಂದು ಕಿಡಿಕಾರಿದ್ದಾರೆ.

ಇನ್ನೂ ಈ ಬಗ್ಗೆ ಮಾತನಾಡಿರುವ ದಲಿತ ಮುಖಂಡ ಗೋಣೆಪ್ಪ, ಲೋಕಿಕರೆ ನಾಗರಾಜ್ ಅವರು ಸರ್ವ ಸಮಾಜವನ್ನು ಪ್ರೀತಿಸುವಂತ ವ್ಯಕ್ತಿ, ಅಂತವರ ಮೇಲೆ ಕೇಸ್ ಹಾಕುವುದು ಸರಿಯಲ್ಲ, ವೈಯುಕ್ತಿವಾಗಿ ತೇಜೋವಧೆ ಮಾಡಲು ಇಂತಹ ಸುಳ್ಳು ಕೇಸ್ ಹಾಕಿದ್ದಾರೆ, ನಮ್ಮ‌ ಜಾತಿಯವರು ಪದೇ ಪದೇ ಅಟ್ರಾಸಿಟಿ ಕೇಸ್ ಹಾಕುವುದು ಸರಿಯಲ್ಲ, ಯೋಚನೆ ಮಾಡಿ ವ್ಯಕ್ತಿ ನೋಡಿ ಕೇಸ್ ದಾಖಲಿಸಬೇಕು, ಒಳ್ಳೆಯವರಿಗೆಲ್ಲ ರಾಜಕೀಯ ದ್ವೇಷ ಇಟ್ಟುಕೊಂಡು ಕೇಸ್ ಹಾಕಬಾರದು ಎಂದು ಕಿಡಿಕಾರಿದರು..


Conclusion:ಒಟ್ಟಾರೆ ಕಾನೂನಿಗೆ ತಲೆಬಾಗಿ ಲೋಕಿಕೆರೆ ನಾಗರಾಜ್ ಪೊಲೀಸರಿಗೆ ಶರಣಾಗತಿ ಆಗಿದ್ದು, ಮುಂದೆ ಕೇಸ್ ಗೆದ್ದು ಬರುತ್ತೇನೆ, ಸುಳ್ಳು ಕೇಸ್ ಗೆ ಜಗ್ಗಲ್ಲ, ಬಗ್ಗಲ್ಲ ಎಂದು ಸವಾಲ್ ಹಾಕಿದ್ದು, ಮುಂದೆ ಪ್ರಕರಣ ಯಾವ ತಿರುವು ಪಡೆಯುತ್ತೊ ಕಾದು ನೋಡಬೇಕಿದೆ..

ಪ್ಲೊ..

ಬೈಟ್1&2 ; ಲೋಕಿಕೆರೆ ನಾಗರಾಜ್.. ಮುಖಂಡ..(ಕೇಸರಿ ಶಾಲು ಹಾಕಿರುವವರು)

ಬೈಟ್3: ಗೋಣೆಪ್ಪ.. ದಲಿತ ಮುಖಂಡ.. (ಕನ್ನಡಕ ಹಾಕಿರುವವರು
Last Updated : Nov 28, 2019, 11:32 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.