ETV Bharat / state

ಚೂರಿ ಇರಿತಕ್ಕೊಳಗಾದ ಯುವತಿ ರಕ್ಷಿಸಿದ ನರ್ಸ್​ಗೆ ಪ್ರಶಂಸನಾ ಪತ್ರ - undefined

ಮಂಗಳೂರಲ್ಲಿ ಪಾಗಲ್​ ಪ್ರೇಮಿಯಿಂದ ಚೂರಿ ಇರಿತಕ್ಕೊಳಗಾದ ಯುವತಿಯನ್ನು ರಕ್ಷಿಸಿದ ನರ್ಸ್ ನಿಮ್ಮಿ ಸ್ಟೀಫನ್ ಅವರಿಗೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯು ಅವರ ಕಾರ್ಯವೈಖರಿ ಮೆಚ್ಚಿ ಪ್ರಶಂಸನಾ ಪತ್ರ ನೀಡಿ ಗೌರವಿಸಿದೆ.

ನರ್ಸ್ ನಿಮ್ಮಿ ಸ್ಟೀಫನ್
author img

By

Published : Jul 1, 2019, 5:00 PM IST

ಮಂಗಳೂರು: ನಗರದ ದೇರಳಕಟ್ಟೆಯ ಬಗಂಬಿಲದಲ್ಲಿ ಯುವತಿಗೆ ಚೂರಿ ಇರಿತವಾದ ಸಂದರ್ಭದಲ್ಲಿ ಮೊದಲಿಗೆ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯದಲ್ಲಿ ನಿರತರಾದ ನರ್ಸ್ ನಿಮ್ಮಿ ಸ್ಟೀಫನ್ ಅವರಿಗೆ ನಿಟ್ಟೆ ಇನ್‌ಸ್ಟಿಟ್ಯೂಟ್ ಮ್ಯಾನೇಜ್ಮೆಂಟ್​ನಿಂದ ಪ್ರಶಂಸನಾ ಪತ್ರ ನೀಡಿ ಗೌರವಿಸಿದೆ.

ಇದನ್ನು ಓದಿ: ಮಂಗಳೂರಲ್ಲಿ ಯುವತಿಗೆ ಚೂರಿ ಇರಿದು ತಾನೂ ಕುತ್ತಿಗೆ ಕೊಯ್ದುಕೊಂಡ ಯುವಕ!

ಇತ್ತೀಚೆಗೆ ಪಾಗಲ್​ ಪ್ರೇಮಿ ಸುಶಾಂತ್ ಎಂಬಾತ ನಡುರಸ್ತೆಯಲ್ಲೇ ಯುವತಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸುತ್ತಿದ್ದ. ಈ ವೇಳೆ ಸಂದರ್ಭ ಎಲ್ಲರೂ ಬೊಬ್ಬೆ ಹಾಕುತ್ತಿದ್ದರೇ ವಿನಃ ಯುವತಿಯನ್ನು ರಕ್ಷಿಸಲು ಮುಂದಾಗಿರಲಿಲ್ಲ. ಆಗ ಧೈರ್ಯ ಮಾಡಿ ಮೊದಲಿಗೆ ಹೋಗಿ ಯುವಕನನ್ನು ದೂಡಿ ಯುವತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲು ನೆರವಾದ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ನರ್ಸ್, ಕೇರಳದ ಪಯ್ಯಾವೂರ್​ನ ನಿಮ್ಮಿ ಸ್ಟೀಫನ್​ಗೆ ಎಲ್ಲಾ ಕಡೆಗಳಿಂದಲೂ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ.

ಈ ಹಿನ್ನೆಲೆಯಲ್ಲಿ ಕೆ.ಎಸ್. ಹೆಗ್ಡೆ ಆಸ್ಪತ್ರೆಯು ನಿಮ್ಮಿ ಅವರ ಕಾರ್ಯವೈಖರಿಯನ್ನು ಮೆಚ್ಚಿ ಪ್ರಶಂಸಾ ಪತ್ರ ನೀಡಿ ಗೌರವಿಸಿದೆ. ನರ್ಸ್​ ನಿಮ್ಮಿ ಅವರ ಸಮಯಪ್ರಜ್ಞೆಯಿಂದ ಯುವತಿಯ ಪ್ರಾಣ ಉಳಿದಿದೆ. ನಿಮ್ಮಿ ಅವರ ಈ ಮಾನವೀಯ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ.

ಮಂಗಳೂರು: ನಗರದ ದೇರಳಕಟ್ಟೆಯ ಬಗಂಬಿಲದಲ್ಲಿ ಯುವತಿಗೆ ಚೂರಿ ಇರಿತವಾದ ಸಂದರ್ಭದಲ್ಲಿ ಮೊದಲಿಗೆ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯದಲ್ಲಿ ನಿರತರಾದ ನರ್ಸ್ ನಿಮ್ಮಿ ಸ್ಟೀಫನ್ ಅವರಿಗೆ ನಿಟ್ಟೆ ಇನ್‌ಸ್ಟಿಟ್ಯೂಟ್ ಮ್ಯಾನೇಜ್ಮೆಂಟ್​ನಿಂದ ಪ್ರಶಂಸನಾ ಪತ್ರ ನೀಡಿ ಗೌರವಿಸಿದೆ.

ಇದನ್ನು ಓದಿ: ಮಂಗಳೂರಲ್ಲಿ ಯುವತಿಗೆ ಚೂರಿ ಇರಿದು ತಾನೂ ಕುತ್ತಿಗೆ ಕೊಯ್ದುಕೊಂಡ ಯುವಕ!

ಇತ್ತೀಚೆಗೆ ಪಾಗಲ್​ ಪ್ರೇಮಿ ಸುಶಾಂತ್ ಎಂಬಾತ ನಡುರಸ್ತೆಯಲ್ಲೇ ಯುವತಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸುತ್ತಿದ್ದ. ಈ ವೇಳೆ ಸಂದರ್ಭ ಎಲ್ಲರೂ ಬೊಬ್ಬೆ ಹಾಕುತ್ತಿದ್ದರೇ ವಿನಃ ಯುವತಿಯನ್ನು ರಕ್ಷಿಸಲು ಮುಂದಾಗಿರಲಿಲ್ಲ. ಆಗ ಧೈರ್ಯ ಮಾಡಿ ಮೊದಲಿಗೆ ಹೋಗಿ ಯುವಕನನ್ನು ದೂಡಿ ಯುವತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲು ನೆರವಾದ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ನರ್ಸ್, ಕೇರಳದ ಪಯ್ಯಾವೂರ್​ನ ನಿಮ್ಮಿ ಸ್ಟೀಫನ್​ಗೆ ಎಲ್ಲಾ ಕಡೆಗಳಿಂದಲೂ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ.

ಈ ಹಿನ್ನೆಲೆಯಲ್ಲಿ ಕೆ.ಎಸ್. ಹೆಗ್ಡೆ ಆಸ್ಪತ್ರೆಯು ನಿಮ್ಮಿ ಅವರ ಕಾರ್ಯವೈಖರಿಯನ್ನು ಮೆಚ್ಚಿ ಪ್ರಶಂಸಾ ಪತ್ರ ನೀಡಿ ಗೌರವಿಸಿದೆ. ನರ್ಸ್​ ನಿಮ್ಮಿ ಅವರ ಸಮಯಪ್ರಜ್ಞೆಯಿಂದ ಯುವತಿಯ ಪ್ರಾಣ ಉಳಿದಿದೆ. ನಿಮ್ಮಿ ಅವರ ಈ ಮಾನವೀಯ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ.

Intro:ಮಂಗಳೂರು: ನಗರದ ದೇರಳಕಟ್ಟೆಯ ಬಗಂಬಿಲದಲ್ಲಿ ಯುವತಿಗೆ ಚೂರಿ ಇರಿತವಾದ ಸಂದರ್ಭ ಮೊದಲಿಗೆ ಬಂದು ರಕ್ಷಣಾ ಕಾರ್ಯದಲ್ಲಿ ನಿರತರಾದ ನರ್ಸ್ ನಿಮ್ಮಿ ಸ್ಟೀಫನ್ ಅವರಿಗೆ ನಿಟ್ಟೆ ಇನ್‌ಸ್ಟಿಟ್ಯೂಟ್ ಮ್ಯಾನೇಜ್ಮೆಂಟ್ ಅಭಿನಂದನಾ ಪತ್ರ ಸಲ್ಲಿಸಿ ಗೌರವಿಸಿದೆ.

Body:ಇತ್ತೀಚೆಗೆ ಭಗ್ನಪ್ರೇಮಿ ಯುವಕ ಸುಶಾಂತ್ ಎಂಬಾತನು ನಡುರಸ್ತೆಯಲ್ಲಿ ಯುವತಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸುತ್ತಿದ್ದ ಸಂದರ್ಭ ಎಲ್ಲರೂ ಬೊಬ್ಬೆ ಹಾಕುತ್ತಿದ್ದರೇ ವಿನಃ ಯುವತಿಯನ್ನು ರಕ್ಷಣೆ ಮಾಡಲು ಮುಂದುವರಿದಿರಲಿಲ್ಲ. ಈ ಸಂದರ್ಭ ಧೈರ್ಯ ಮಾಡಿ ಮೊದಲಿಗೆ ಹೋಗಿ ಯುವಕನನ್ನು ದೂಡಿ ಯುವತಿಯ
ರಕ್ಷಣೆಯನ್ನು ಮಾಡಿ ಆಸ್ಪತ್ರೆಗೆ ದಾಖಲಿಸಲು ನೆರವಾದ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ನರ್ಸ್ ಕೇರಳದ ಪಯ್ಯಾವೂರ್ ನ ನಿಮ್ಮಿ ಸ್ಟೀಫನ್ ಗೆ ಎಲ್ಲಾ ಕಡೆಗಳಿಂದಲೂ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ.

ಈ ಹಿನ್ನೆಲೆಯಲ್ಲಿ ಕೆ.ಎಸ್.ಹೆಗ್ಡೆ ಆಸ್ಪತ್ರೆಯು ಅವರ ಕಾರ್ಯವೈಖರಿಯನ್ನು ಪ್ರಶಂಸಿ ಅಭಿನಂದನಾ ಪತ್ರ ಸಲ್ಲಿಸಿ ಗೌರವಿಸಿದೆ.

Reporter_Vishwanath PanjimogaruConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.