ETV Bharat / state

ರೋಮಾಂಚನಗೊಳಿಸಿದ ಭಜನಾ ಸಮರ್ಪಣಾ ಕಾರ್ಯಕ್ರಮ - ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರ ನಿಧನದ ಹಿನ್ನೆಲೆ ಭಜನಾ ಸಮರ್ಪಣಾ ಕಾರ್ಯಕ್ರಮ

ಈಶ್ವರಮಂಗಲದ ಹನುಮಗಿರಿ ಕ್ಷೇತ್ರದ ಪುರಂದರದಾಸ ಭಜನಾಂಗಣದಲ್ಲಿ ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರ ನಿಧನದ ಹಿನ್ನೆಲೆ ಭಜನಾ ಸಮರ್ಪಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು

Bhajana program
ಭಜನಾ ಸಮರ್ಪಣಾ ಕಾರ್ಯಕ್ರಮ
author img

By

Published : Dec 30, 2019, 3:29 PM IST

ಪುತ್ತೂರು: ಮಂಗಳೂರು ವಿಭಾಗದ ಭಜನಾ ಮಹಾಮಂಡಲ ಹಾಗೂ ಹನುಮಗಿರಿ ಕ್ಷೇತ್ರದ ಆಶ್ರಯದಲ್ಲಿ ಈಶ್ವರಮಂಗಲದ ಹನುಮಗಿರಿ ಕ್ಷೇತ್ರದ ಪುರಂದರದಾಸ ಭಜನಾಂಗಣದ ಕನಕದಾಸ ಮಂಟಪದಲ್ಲಿ ಭಜನಾ ಸಮರ್ಪಣಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

ಕಾರ್ಯಕ್ರಮದ ವೇಳೆ ಮಾತನಾಡಿದ ಕೇಂದ್ರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಪ್ರತಾಪಚಂದ್ರ ಸಾರಂಗಿ, ದೇಶದಲ್ಲಿ ಭಜನೆಗೆ ದೊಡ್ಡ ಪರಂಪರೆಯಿದ್ದು, ಭಗವಂತನಲ್ಲಿ ಆತ್ಮ ನಿವೇದನೆ ಮಾಡಿಕೊಂಡು ಅನುಗ್ರಹ ಪಡೆಯಲು ಹಾಗೂ ಆಧ್ಮಾತ್ಮಿಕ ಉನ್ನತಿಗೆ ಸರ್ವ ಶ್ರೇಷ್ಠ ಮಾಧ್ಯಮ. ಬಹಳಷ್ಟು ಪ್ರಾಚೀನವೂ, ನಿತ್ಯ ನವೀನವೂ ಆಗಿರುವ ಭಜನೆ ಭಕ್ತಿಯ ಸಾಧನವಾಗಿದ್ದು, ಕಲಿಯುಗದಲ್ಲಿ ಭಜನೆಗೆ ಭಾರಿ ಮಹತ್ವವಿದೆ ಎಂದು ಅಭಿಪ್ರಾಯಪಟ್ಟರು.

ಭಜನಾ ಸಮರ್ಪಣಾ ಕಾರ್ಯಕ್ರಮ

ಮೋಕ್ಷಕ್ಕೆ ಅರ್ಹವಾದ ಮನುಷ್ಯ ಜನ್ಮ ಪ್ರಾಪ್ತಿಯಾಗಿರುವುದು ನಮ್ಮ ಪುಣ್ಯದ ಫಲ. ನಾವು ಸತ್ಸಂಗಗಳ ಮೂಲಕ ಮೋಕ್ಷ ಪಡೆಯಬಹುದಾಗಿದೆ. ಅತ್ಯಂತ ದುರಾಹಂಕಾರಿ, ಪಾಪಿ ಮನುಷ್ಯ ಕೂಡ ಭಕ್ತಿಯಿಂದ ಭಜನೆ ಮಾಡಿದರೆ ದೇವರು ಒಲಿಯುತ್ತಾರೆ. ಅಹಂಕಾರ ಶೂನ್ಯತೆಯಾಗುತ್ತದೆ. ಇದಕ್ಕೆ ಪುರಾಣಗಳಲ್ಲಿ ಬಹಳಷ್ಟು ನಿದರ್ಶನಗಳಿವೆ ಎಂದರು.

ಭಜಕರು ಭಜನಾಂಗಣದಲ್ಲಿ 1,300 ದೀಪಗಳನ್ನು ಬೆಳಗಿ 6 ಭಜನೆ ಹಾಡುಗಳನ್ನು ಹಾಡಿದರು. 48 ನಿಮಿಷಗಳ ಈ ವಿಶೇಷ ಭಜನಾ ಕಾರ್ಯಕ್ರಮ ಎಲ್ಲರನ್ನು ರೋಮಾಂಚನ ಗೊಳಿಸಿತ್ತು. ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರ ನಿಧನದ ಹಿನ್ನೆಲೆ ಕಾರ್ಯಕ್ರಮವನ್ನು ಅವರಿಗೆ ಸಮರ್ಪಿಸಲಾಯಿತು.

ಪುತ್ತೂರು: ಮಂಗಳೂರು ವಿಭಾಗದ ಭಜನಾ ಮಹಾಮಂಡಲ ಹಾಗೂ ಹನುಮಗಿರಿ ಕ್ಷೇತ್ರದ ಆಶ್ರಯದಲ್ಲಿ ಈಶ್ವರಮಂಗಲದ ಹನುಮಗಿರಿ ಕ್ಷೇತ್ರದ ಪುರಂದರದಾಸ ಭಜನಾಂಗಣದ ಕನಕದಾಸ ಮಂಟಪದಲ್ಲಿ ಭಜನಾ ಸಮರ್ಪಣಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

ಕಾರ್ಯಕ್ರಮದ ವೇಳೆ ಮಾತನಾಡಿದ ಕೇಂದ್ರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಪ್ರತಾಪಚಂದ್ರ ಸಾರಂಗಿ, ದೇಶದಲ್ಲಿ ಭಜನೆಗೆ ದೊಡ್ಡ ಪರಂಪರೆಯಿದ್ದು, ಭಗವಂತನಲ್ಲಿ ಆತ್ಮ ನಿವೇದನೆ ಮಾಡಿಕೊಂಡು ಅನುಗ್ರಹ ಪಡೆಯಲು ಹಾಗೂ ಆಧ್ಮಾತ್ಮಿಕ ಉನ್ನತಿಗೆ ಸರ್ವ ಶ್ರೇಷ್ಠ ಮಾಧ್ಯಮ. ಬಹಳಷ್ಟು ಪ್ರಾಚೀನವೂ, ನಿತ್ಯ ನವೀನವೂ ಆಗಿರುವ ಭಜನೆ ಭಕ್ತಿಯ ಸಾಧನವಾಗಿದ್ದು, ಕಲಿಯುಗದಲ್ಲಿ ಭಜನೆಗೆ ಭಾರಿ ಮಹತ್ವವಿದೆ ಎಂದು ಅಭಿಪ್ರಾಯಪಟ್ಟರು.

ಭಜನಾ ಸಮರ್ಪಣಾ ಕಾರ್ಯಕ್ರಮ

ಮೋಕ್ಷಕ್ಕೆ ಅರ್ಹವಾದ ಮನುಷ್ಯ ಜನ್ಮ ಪ್ರಾಪ್ತಿಯಾಗಿರುವುದು ನಮ್ಮ ಪುಣ್ಯದ ಫಲ. ನಾವು ಸತ್ಸಂಗಗಳ ಮೂಲಕ ಮೋಕ್ಷ ಪಡೆಯಬಹುದಾಗಿದೆ. ಅತ್ಯಂತ ದುರಾಹಂಕಾರಿ, ಪಾಪಿ ಮನುಷ್ಯ ಕೂಡ ಭಕ್ತಿಯಿಂದ ಭಜನೆ ಮಾಡಿದರೆ ದೇವರು ಒಲಿಯುತ್ತಾರೆ. ಅಹಂಕಾರ ಶೂನ್ಯತೆಯಾಗುತ್ತದೆ. ಇದಕ್ಕೆ ಪುರಾಣಗಳಲ್ಲಿ ಬಹಳಷ್ಟು ನಿದರ್ಶನಗಳಿವೆ ಎಂದರು.

ಭಜಕರು ಭಜನಾಂಗಣದಲ್ಲಿ 1,300 ದೀಪಗಳನ್ನು ಬೆಳಗಿ 6 ಭಜನೆ ಹಾಡುಗಳನ್ನು ಹಾಡಿದರು. 48 ನಿಮಿಷಗಳ ಈ ವಿಶೇಷ ಭಜನಾ ಕಾರ್ಯಕ್ರಮ ಎಲ್ಲರನ್ನು ರೋಮಾಂಚನ ಗೊಳಿಸಿತ್ತು. ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರ ನಿಧನದ ಹಿನ್ನೆಲೆ ಕಾರ್ಯಕ್ರಮವನ್ನು ಅವರಿಗೆ ಸಮರ್ಪಿಸಲಾಯಿತು.

Intro:Body:ಹನುಮಗಿರಿ ಭಜನಾ ಸಮರ್ಪಣಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸಾರಂಗಿ
ಆಧ್ಮಾತ್ಮಿಕ ಉನ್ನತಿಗೆ ಭಜನೆ ಸರ್ವಶ್ರೇಷ್ಠ ಮಾಧ್ಯಮ

ಪುತ್ತೂರು : ದೇಶದಲ್ಲಿ ಭಜನೆಗೆ ದೊಡ್ಡ ಪರಂಪರೆಯಿದ್ದು, ಭಗವಂತನಲ್ಲಿ ಆತ್ಮ ನಿವೇದನೆ ಮಾಡಿಕೊಂಡು ಅನುಗ್ರಹ ಪಡೆಯಲು ಹಾಗೂ ಆಧ್ಮಾತ್ಮಿಕ ಉನ್ನತಿಗೆ ಭಜನೆ ಸರ್ವ ಶ್ರೇಷ್ಠ ಮಾಧ್ಯಮ. ಬಹಳಷ್ಟು ಪ್ರಾಚೀನವೂ, ನಿತ್ಯ ನವೀನವೂ ಆಗಿರುವ ಭಜನೆ ಭಕ್ತಿಯ ಸಾಧನವಾಗಿದ್ದು, ಕಲಿಯುಗದಲ್ಲಿ ಭಜನೆಗೆ ಬಾರಿ ಮಹತ್ವವಿದೆ ಎಂದು ಕೇಂದ್ರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಪ್ರತಾಪಚಂದ್ರ ಸಾರಂಗಿ ಅವರು ಹೇಳಿದರು.
ಮಂಗಳೂರು ವಿಭಾಗದ ಭಜನಾ ಮಹಾಮಂಡಲ ಹಾಗೂ ಹನುಮಗಿರಿ ಕ್ಷೇತ್ರದ ಆಶ್ರಯದಲ್ಲಿ ಈಶ್ವರಮಂಗಲದ ಹನುಮಗಿರಿ ಕ್ಷೇತ್ರದ ಪುರಂದರದಾಸ ಭಜನಾಂಗಣದ ಕನಕದಾಸ ಮಂಟಪದಲ್ಲಿ ಭಾನುವಾರ ನಡೆದ `ಭಜನಾ ಸಮರ್ಪಣಾ' ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೋಕ್ಷಕ್ಕೆ ಅರ್ಹವಾದ ಮನುಷ್ಯ ಜನ್ಮ ಪ್ರಾಪ್ತಿಯಾಗಿರುವುದು ನಮ್ಮ ಪುಣ್ಯದ ಫಲ. ನಾವು ಸತ್ಸಂಗಗಳ ಮೂಲಕ ಮೋಕ್ಷ ಪಡೆಯಬಹುದಾಗಿದೆ.
ಅತ್ಯಂತ ದುರಾಹಂಕಾರಿ, ಪಾಪಿ ಮನುಷ್ಯನು ಕೂಡ ಭಕ್ತಿಯಿಂದ ಭಜನೆ ಮಾಡಿದರೆ ದೇವರು ಒಲಿಯುತ್ತಾರೆ. ಅಹಂಕಾರ ಶೂನ್ಯತೆಯಾಗುತ್ತದೆ. ಇದಕ್ಕೆ ಪರಾಣಗಳಲ್ಲಿ ಬಹಳಷ್ಟು ನಿದರ್ಶನಗಳಿವೆ ಎಂದರು. ಭಜನೆ ರಸದ ಸಾಗರ, ದೇವರು ಕೂಡ ರಸದ ಸಾಗರ, ಹಿಂದೆ ತಪಸ್ಸು,ಧ್ಯಾನದ ಮೂಲಕ ದೇವರ ಅನುಗ್ರಹ ಪಡೆಯಲಾಗುತ್ತಿದ್ದರೆ ಇಂದು ಭಜನೆಯ ಮೂಲಕ ದೇವರ ಅನುಗ್ರಹ ಪಡೆಯಬಹುದಾಗಿದೆ. ಆದರೆ ಆಡಂಬರದ ಪೂಜೆಯಿಂದ ದೇವರ ಅನುಗ್ರಹ ಸಾಧ್ಯವಿಲ್ಲ ಎಂದರು.
ಪ್ರಧಾನ ಭಾಷಣ ಮಾಡಿದ ರಾಷ್ಟಿçÃಯ ಸ್ವಯಂ ಸೇವಕ ಸಂಘದ ಸಹಸರಕಾರ್ಯವಾಹ ಮುಕುಂದ ಅವರು, ಭಜನೆ ಭಕ್ತಿ ಪರಂಪರೆಯಿಮದ ಬಂದ ಬಹುದೊಡ್ಡ ಕೊಡುಗೆ, ಜ್ಞಾನಕ್ಕಿಂತಲೂ ಭಕ್ತಿ ಮನುಷ್ಯನನ್ನು ಎತ್ತರಕ್ಕೆ ಏರಿಸುತ್ತದೆ. ಭಕ್ತಿ ಇದ್ದಲ್ಲಿ ಮಾತ್ರ ಸಮರ್ಪಣೆ ಇರುತ್ತದೆ. ಭಜನೆ ವರ್ತಮಾನದ ಕೆಲಸಗಳನ್ನು ನೆನಪಿಸುವ ಕೆಲಸ ಮಾಡುತ್ತದೆ. ನಮ್ಮ ಸಾವಿರಾರು ಬೇರುಗಳ ಸಂಸ್ಕೃತಿಯಲ್ಲಿ ಭಜನೆ ಒಂದು ಬಿಂದು ಆಗಿದ್ದು, ವೇದ,ತತ್ವ ಸಾರಗಳನ್ನು ಹಂಚಿಕೊಳ್ಳಲು ಭಜನೆಯ ಮೂಲಕ ಮಾತ್ರ ಸಾಧ್ಯ. ಪುರಾತನ ಸೋಶಿಯಲ್ ಮೀಡಿಯಾವೇ ಭಜನೆಯಾಗಿದ್ದು, ಶ್ರೇಷ್ಠ, ಸುಸಂಸ್ಕೃತ ವಿಚಾರಗಳನ್ನು ವೇಗವಾಗಿ ಜನತೆಗೆ ಮುಟ್ಟಿಸುವ ಕೆಲಸ ಭಜನೆಯ ಮೂಲಕ ನಡೆಯುತ್ತಿತ್ತು ಎಂದರು.
ದಾಸ ಪರಂಪರೆ ಹಿಂದೂ ಸಮಾಜಕ್ಕೆ ನೀಡಿದ್ದ ಬಹುದೊಡ್ಡ ಬಳುವಳಿಯಾದ ಭಜನೆಗೆ ಚೌಕಟ್ಟು ಎಂಬುವುದು ಇಲ್ಲ, ಸಮಯದ ಕಾಲಮಿತಿಯೂ ಇಲ್ಲ, ಎಲ್ಲಿ ಬೇಕಾದರೂ, ಯಾವ ಸಮಯದಲ್ಲಿ ಬೇಕಾದರೂ ಭಜನೆ ಮಾಡಬಹುದು. ದೇಶ,ಕಾಲ, ಜಾತಿ,ಮತ,ಪಂಥ ಎಲ್ಲವನ್ನೂ ಮೀರಿದ್ದು ಭಜನೆಯಾಗಿದೆ. ಸಮಾಜವನ್ನು ತಳಮಟ್ಟದಿಂದಲೇ ಸುಸಂಘಟಿತಗೊಳಿಸಿ ಸಮಾಜಕ್ಕೆ ಆಧಾರ ಕೊಡುವ ಮಾಧ್ಯಮ ಎಂದು ಅವರು ಹೇಳಿದರು.
ದೇಶದ ಸಾವಿರಾರು ಗ್ರಾಮಗಳಲ್ಲಿ ಅಸ್ಪೃಶ್ಯತೆ ಈಗಲೂ ಇದೆ.ಜಾತಿಯ ಭಾವನೆ, ಮೇಲು-ಕೀಳು ಬೇಧ ಭಾವನೆ ಇದೆ. ಇದನ್ನು ಸಮಾಜದಿಂದ ಕಿತ್ತೆಸೆಯಬೇಕಾಗಿದೆ. ಇದಕ್ಕಾಗಿ ಮನಸ್ಸಿನಲ್ಲಿ ಸಾಮರಸ್ಯ ಮೂಡಬೇಕಾಗಿದೆ. ಭಕ್ತಿ ಭಜನೆಯ ಮೂಲಕ ಈ ಕೆಲಸ ಮಾಡಬಹುದಾಗಿದೆ ಎಂದ ಅವರು ಸಾಮಾಜಿಕ ಪರಿವರ್ತನೆ,ಸಾಮಾಜಿಕ ಸಾಮರಸ್ಯ ಭಜನೆಯ ಮೂಲಕ ಆಗಬೇಕಾಗಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.
ರಾಷ್ಟಿçÃಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರು ನಿಧನರಾದ ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರಿಗೆ ನುಡಿನಮನ ಸಲ್ಲಿಸಿದರು.
ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀಧಾಮದ ಮೋಹನದಾಸ್ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಕಣಿಯಾರು ಚಾಮುಂಡೇಶ್ವರಿ ಕ್ಷೇತ್ರದ ಮಹಾಬಲೇಶ್ವರ ಸ್ವಾಮೀಜಿ, ಓಂಶ್ರೀ ಮಠದ ವಿದ್ಯಾರಣ್ಯ ಸರಸ್ವತಿ ಸ್ವಾಮೀಜಿ, ಮಾತಾ ಶಿವಜ್ಞಾನಮಯಿ, ಅಧ್ಯಕ್ಷತೆ ವಹಿಸಿದ್ದ ಭಜನಾ ಸಂಭ್ರಮ ಸ್ವಾಗತ ಸಮಿತಿಯ ಅಧ್ಯಕ್ಷ, ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ, ಧರ್ಮಶ್ರೀ ಷ್ರತಿಷ್ಠಾನದ ಮಹಾಪೋಷಕ ಮಹಾಬಲೇಶ್ವರ ಭಟ್ ಕೊನೆತೋಟ, ಅಳದಂಗಡಿಯ ಪದ್ಮಪ್ರಸಾದ್ ಅಜಿಲ, ರಾಷ್ಟಿçÃಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ತಿಪ್ಪೇ ಸ್ವಾಮಿ, ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಘ ಚಾಲಕ ಡಾ.ವಾಮನ ಶೆಣೈ, ದಕ್ಷಿಣ ಪ್ರಾಂತ ಪ್ರಚಾರಕ ಗುರುಪ್ರಸಾದ್, ಶಾಸಕರಾದ ಡಾ.ಸುಧಾಕರ್ ಚಿಕ್ಕಬಳ್ಳಾಪುರ, ಸಂಜೀವ ಮಠಂದೂರು, ಎಸ್.ಅಂಗಾರ ಸುಳ್ಯ, ಹರೀಶ್ ಪೂಂಜ ಬೆಳ್ತಂಗಡಿ, ಕುಂಟಾರು ರವೀಶ್ ತಂತ್ರಿ, ಹೆಚ್ಚುವರಿ ಎಡ್ವಕೇಟ್ ಜನರಲ್ ಪ್ರಸನ್ನ ದೇಶಪಾಂಡೆ, ಕೊಡ್ಮಣ್ಣು ಕಾಂತಪ್ಪ ಶೆಟ್ಟಿ, ಸುನಿಲ್ ಆಚಾರ್ಯ, ಮಧೂರು ಕ್ಷೇತ್ರದ ಕೃಷ್ಣ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು.
ಆರಂಭದಲ್ಲಿ ಯಕ್ಷಗಾನ ಭಾಗವತ ಸತೀಶ್ ಶೆಟ್ಟಿ ಪಟ್ಲ ಅವರು ಯಕ್ಷಗಾನ ಶೈಲಿಯ ಪ್ರಾರ್ಥನೆ ಹಾಡಿದರು. ಸ್ವಾಗತ ಸಮಿತಿಯ ವಿಭಾಗ ಸಂಯೋಜಕ ಪ್ರವೀಣ್ ಸರಳಾಯ ಸ್ವಾಗತಿಸಿದರು, ಧರ್ಮಶ್ರೀ ಷ್ರತಿಷ್ಠಾನದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ವಂದಿಸಿದರು. ಗಜಾನನ ಪೈ ಕಾರ್ಯಕ್ರಮ ನಿರೂಪಿಸಿದರು.
------------------

ಐತಿಹಾಸಿಕ ಕ್ಷಣ....
ಸಂಜೆ ಗಂಟೆ ೬-೧೨ಕ್ಕೆ ಸರಿಯಾಗಿ ಶಂಖೋದ್ಘೋಷದೊAದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸ್ವಾಮೀಜಿಗಳು ದೀಪ ಬೆಳಗುವ ಮೂಲಕ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ೧೩೦೦ ಜಭನಾ ತಂಡಗಳ ತಲಾ ೫ ಸದಸ್ಯರಂತೆ ಒಟ್ಟು ೬೫೦೦ ಭಜಕರು ಭಜನಾಂಗಣದಲ್ಲಿ ೧೩೦೦ ದೀಪಗಳನ್ನು ಬೆಳಗಿ ೬ ಭಜನೆಗಳನ್ನು ಹಾಡಿದ ೪೮ ನಿಮಿಷಗಳ ಈ ವಿಶೇಷ ಭಜನಾ ಕಾರ್ಯಕ್ರಮ ಇತಿಹಾಸ ಸೃಷ್ಠಿಸಿತು.
ಪುತ್ತೂರಿನ ಜಗದೀಶ್ ಆಚಾರ್ಯ ಮತ್ತು ರಾಮಕೃಷ್ಣ ಕಾಟುಕುಕ್ಕೆ ಸಂಗಡಿಗರು ಆಯ್ದ ೬ ಭಜನೆಗಳನ್ನು ವೇದಿಕೆಯಲ್ಲಿ ಹಾಡಿದರು. ಭಜನಾಂಗಣದಲ್ಲಿದ್ದ ಸಾವಿರಾರು ಸಂಖ್ಯೆಯ ಭಜಕರು ಅದನ್ನು ಏಕಕಾಲದಲ್ಲಿ ಹಾಡುವ ಅಪರೂಪವಾದ ಈ ಭಜನಾ ಸಂಭ್ರಮ ಭಜನಾ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಿತು. ಏಕಕಾಲದಲ್ಲಿ ಬೆಳಗಿದ ದೀಪಗಳು ಶೋಭಾಯಮಾನವಾಗಿ ಕಂಗೊಳಿಸಿತು. ಮಾತ್ರವಲ್ಲದೆ ಪ್ರೇಕ್ಷಕ ವರ್ಗದ ಮನಸೂರೆಗೊಳ್ಳುವ ಜತೆಗೆ ಭಕ್ತಿಯ ಕಡಲಲ್ಲಿ ತೇಲಿಸಿತು.
------------
ಭಜನಾ ಸಂಭ್ರಮ ....ಸಮರ್ಪಣೆಯಾಯಿತು
ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರ ನಿಧನದ ಹಿನ್ನಲೆಯಲ್ಲಿ `ಭಜನಾ ಸಂಭ್ರಮ' ಕಾರ್ಯಕ್ರಮವನ್ನು ಸ್ವಾಮೀಜಿಯವರಿಗೆ `ಭಜನಾ ಸಮರ್ಪಣಾ' ಕಾರ್ಯಕ್ರಮವಾಗಿ ನಡೆಸಿ ಗೌರವ ಸೂಚಿಸಲಾಯಿತು.
ಸಭಾ ಕಾರ್ಯಕ್ರಮದ ಆರಂಭದಲ್ಲಿ ಸ್ವಾಮೀಜಿಯವರ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪಾರ್ಜನೆಗೈದು ಗೌರವ ಸಲ್ಲಿಸಿದರು. ರಾಷ್ಟಿçÃಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರು ಸ್ವಾಮೀಜಿಯವರಿಗೆ ನುಡಿನಮನ ಸಲ್ಲಿಸಿದರು. ಶೋಭಾಯಾತ್ರೆಯನ್ನೂ ಸಮರ್ಪಣಾ ಯಾತ್ರೆಯಾಗಿ ನಡೆಸಲಾಯಿತು. ರಾತ್ರಿ ನಡೆಯಬೇಕಿದ್ದ `ಆಳ್ವಾಸ್ ದೇಶಿ ಸಾಂಸ್ಕೃತಿಕ ವೈಭವ' ಕಾರ್ಯಕ್ರಮವನ್ನು ರದ್ಧುಪಡಿಸಲಾಯಿತು.
--------------------------------------Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.