ETV Bharat / state

ಮಿರಿಂಡಾ ಟಿನ್​ನೊಳಗೆ ತಲೆ ಸಿಕ್ಕಿಸಿಕೊಂಡ ಹಾವು: ಒಂದು ಗಂಟೆ ನರಳಾಡಿದ ಕೇರೆ ಹಾವು - R_kn_ckm_01_21_Snake_Rajakumar_ckm_av_7202347

ಮಿರಿಂಡಾ ಟಿನ್​ನೊಳಗೆ ತಲೆ ಸಿಕ್ಕಿಸಿಕೊಂಡು ಸಾವು, ಬದುಕಿನ ನಡುವೆ ಹೊರಾಟ ನಡೆಸಿದ್ದ ಹಾವಿಗೆ ವೈಲ್ಡ್ ಕ್ಯಾಟ್ ಸಿ ಮುಖ್ಯಸ್ಥ ಶ್ರೀದೇವ್ ಅವರು ಕೆರೆಹಾವನ್ನು ರಕ್ಷಿಸಿ, ಉರಗಪ್ರೇಮವನ್ನು ಮೆರೆದಿದ್ದಾರೆ.

ಮಿರಿಂಡಾ ಬಾಟಲಿಯೊಳಗೆ ತಲೆ ಸಿಕ್ಕಿಸಿಕೊಂಡ ಕೆರೆಹಾವು
author img

By

Published : May 21, 2019, 1:31 PM IST

Updated : May 21, 2019, 3:49 PM IST

ಚಿಕ್ಕಮಗಳೂರು: ಚಿಕ್ಕಮಗಳೂರಿನ ಮಲ್ಲಂದೂರು ಗ್ರಾಮದಲ್ಲಿ ದಾರಿಹೋಕರು ಕುಡಿದು ಬಿಸಾಡಿದ ಟಿನ್​ನೊಳಗೆ ಕೆರೆ ಹಾವು ತನ್ನ ತಲೆ ಸಿಕ್ಕಿಸಿಕೊಂಡು ಒಂದು ಗಂಟೆಗೂ ಅಧಿಕ ಕಾಲ ತನ್ನ ಜೀವ ಉಳಿಸಿಕೊಳ್ಳಲು ಹೋರಾಟ ಮಾಡಿದೆ.

ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ ಮಿರಿಂಡಾ ಟಿನ್ ಡಬ್ಬಿಯಲ್ಲಿ ತಲೆಸಿಕ್ಕಿಸಿಕೊಂಡ ಸುಮಾರು 7 ಅಡಿ ಗಾತ್ರದ ಕೆರೆ ಹಾವು ದಾರಿ ಕಾಣದೆ ವಿಲ ವಿಲ ಒದ್ದಾಡುತ್ತಿತ್ತು.

ಮಿರಿಂಡಾ ಟಿನ್​ ಡಬ್ಬಿಯೊಳಗೆ ತಲೆ ಸಿಕ್ಕಿಸಿಕೊಂಡ ಕೆರೆಹಾವು

ಸುಮಾರು ಒಂದು ಗಂಟೆಗಳ ಕಾಲ ರಸ್ತೆ ಬದಿಯಲ್ಲೇ ಜೀವ ಉಳಿಸಿಕೊಳ್ಳಲು ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಇದೇ ವೇಳೆಯಲ್ಲಿ ಚಿಕ್ಕಮಗಳೂರಿನಿಂದ ಮಲ್ಲಂದೂರಿಗೆ ಹೋಗುತ್ತಿದ್ದ ವೈಲ್ಡ್ ಕ್ಯಾಟ್ ಸಿ ಮುಖ್ಯಸ್ಥ ಶ್ರೀದೇವ್ ಕೆರೆ ಹಾವನ್ನು ನೋಡಿ ಪತ್ನಿಯ ಜೊತೆಗೂಡಿ ಹಾವಿನ ತಲೆಯನ್ನು ಟಿನ್​ ಡಬ್ಬಿಯಿಂದ ಹೊರತೆಗೆದಿದ್ದಾರೆ.

ಶ್ರೀದೇವ್ ಅವರ ಪತ್ನಿ, ಉದ್ದವಾದ ಕೋಲಿನಿಂದ ಹಾವಿನ ತಲೆ ಮೇಲಿದ್ದ ಟಿನ್​ಅನ್ನು ಒತ್ತಿ ಹಿಡಿದಿದ್ದಾರೆ. ಶ್ರೀದೇವ್ ಅವರು ಹಾವಿನ ಬಾಲ ಹಿಡಿದು ಎಳೆದಿದ್ದಾರೆ. ಈ ಮೂಲಕ ದಂಪತಿ ಉರಗ ಪ್ರೇಮವನ್ನು ಮೆರದಿದ್ದಾರೆ.

ಚಿಕ್ಕಮಗಳೂರು: ಚಿಕ್ಕಮಗಳೂರಿನ ಮಲ್ಲಂದೂರು ಗ್ರಾಮದಲ್ಲಿ ದಾರಿಹೋಕರು ಕುಡಿದು ಬಿಸಾಡಿದ ಟಿನ್​ನೊಳಗೆ ಕೆರೆ ಹಾವು ತನ್ನ ತಲೆ ಸಿಕ್ಕಿಸಿಕೊಂಡು ಒಂದು ಗಂಟೆಗೂ ಅಧಿಕ ಕಾಲ ತನ್ನ ಜೀವ ಉಳಿಸಿಕೊಳ್ಳಲು ಹೋರಾಟ ಮಾಡಿದೆ.

ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ ಮಿರಿಂಡಾ ಟಿನ್ ಡಬ್ಬಿಯಲ್ಲಿ ತಲೆಸಿಕ್ಕಿಸಿಕೊಂಡ ಸುಮಾರು 7 ಅಡಿ ಗಾತ್ರದ ಕೆರೆ ಹಾವು ದಾರಿ ಕಾಣದೆ ವಿಲ ವಿಲ ಒದ್ದಾಡುತ್ತಿತ್ತು.

ಮಿರಿಂಡಾ ಟಿನ್​ ಡಬ್ಬಿಯೊಳಗೆ ತಲೆ ಸಿಕ್ಕಿಸಿಕೊಂಡ ಕೆರೆಹಾವು

ಸುಮಾರು ಒಂದು ಗಂಟೆಗಳ ಕಾಲ ರಸ್ತೆ ಬದಿಯಲ್ಲೇ ಜೀವ ಉಳಿಸಿಕೊಳ್ಳಲು ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಇದೇ ವೇಳೆಯಲ್ಲಿ ಚಿಕ್ಕಮಗಳೂರಿನಿಂದ ಮಲ್ಲಂದೂರಿಗೆ ಹೋಗುತ್ತಿದ್ದ ವೈಲ್ಡ್ ಕ್ಯಾಟ್ ಸಿ ಮುಖ್ಯಸ್ಥ ಶ್ರೀದೇವ್ ಕೆರೆ ಹಾವನ್ನು ನೋಡಿ ಪತ್ನಿಯ ಜೊತೆಗೂಡಿ ಹಾವಿನ ತಲೆಯನ್ನು ಟಿನ್​ ಡಬ್ಬಿಯಿಂದ ಹೊರತೆಗೆದಿದ್ದಾರೆ.

ಶ್ರೀದೇವ್ ಅವರ ಪತ್ನಿ, ಉದ್ದವಾದ ಕೋಲಿನಿಂದ ಹಾವಿನ ತಲೆ ಮೇಲಿದ್ದ ಟಿನ್​ಅನ್ನು ಒತ್ತಿ ಹಿಡಿದಿದ್ದಾರೆ. ಶ್ರೀದೇವ್ ಅವರು ಹಾವಿನ ಬಾಲ ಹಿಡಿದು ಎಳೆದಿದ್ದಾರೆ. ಈ ಮೂಲಕ ದಂಪತಿ ಉರಗ ಪ್ರೇಮವನ್ನು ಮೆರದಿದ್ದಾರೆ.

Intro:R_kn_ckm_01_21_Snake_Rajakumar_ckm_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರಿನಲ್ಲಿ ಪ್ರವಾಸಿಗರು ಕುಡಿದು ಬಿಸಾಡಿದ ಬಾಟಲಿಯಲ್ಲಿ ಕೆರೆ ಹಾವು ತನ್ನ ತಲೆ ಸಿಕ್ಕಿಸಿಕೊಂಡು ಒಂದು ಗಂಟೆಗೂ ಅಧಿಕ ಕಾಲ ತನ್ನ ಜೀವ ಉಳಿಸಿಕೊಳಲು ಹೋರಾಟ ಮಾಡಿದೆ. ರಸ್ತೆಯ ಪಕ್ಕದಲ್ಲಿ ಬಿದ್ದಿದ ಮಿರಿಂಡಾ ಬಾಟಲಿಯಲ್ಲಿ ಮೀರಿ0ಡಾ ಕುಡಿಯಲು ಹೋಗಿ ತಲೆಸಿಕ್ಕಿಸಿಕೊಂಡ 7 ಅಡಿ ಗಾತ್ರದ ಕೆರೆ ಹಾವು ದಾರಿ ಕಾಣದೆ ಕಂಗಾಲಾದ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಗ್ರಾಮದಲ್ಲಿ ನಡೆದಿದೆ. ರಸ್ತೆ ಬದಿಯಲ್ಲಿದ್ದ ಬಾಟಲಿಗೆ ತಲೆ ಹಾಕಿದ ಕೆರೆಹಾವು ತಲೆಯನ್ನು ಹೊರ ತೆಗೆಯಲಾಗದೆ ಸುಮಾರು ಒಂದು ಗಂಟೆಗಳ ಕಾಲ ರಸ್ತೆ ಬದಿಯಲ್ಲೇ ಜೀವ ಉಳಿಸಿಕೊಳ್ಳಲು ಹೋರಾಟ ನಡೆಸಿದೆ. ಆದರೂ ಹಾವಿಗೆ ತಲೆ ಹೊರ ತೆಗೆಯಲು ಸಾಧ್ಯವಾಗಿಲ್ಲ. ರಸ್ತೆಯಲ್ಲಿ ಬಿದ್ದು, ಹೊರಳಾಡಿ, ತಿಣುಕಾಡಿ ಏನೇ ಹರಸಾಹಸ ಪಟ್ಟರು ಹಾವಿಗೆ ತಲೆಯನ್ನು ತೆಗೆಯಲು ಸಾಧ್ಯವಾಗಿಲ್ಲ. ಇದೇ ವೇಳೆ, ಚಿಕ್ಕಮಗಳೂರಿನಿಂದ ಮಲ್ಲಂದೂರಿಗೆ ಹೋಗುತ್ತಿದ್ದ ವೈಲ್ಡ್ ಕ್ಯಾಟ್ ಸಿ ಮುಖ್ಯಸ್ಥ ಶ್ರೀದೇವ್ ಕೆರೆ ಹಾವನು ನೋಡಿ ಪತ್ನಿಯ ಜೊತೆಗೂಡಿ ಹಾವಿನ ತಲೆಯನ್ನು ಬಾಟಲಿಯಿಂದ ಹೊರತೆಗೆದಿದ್ದಾರೆ. ಶ್ರೀದೇವ್ ಅವರ ಪತ್ನಿ, ಉದ್ದವಾದ ಕೋಲಿನಿಂದ ಹಾವಿ ತಲೆ ಮೇಲಿದ್ದ ಬಾಟಲಿಗೆ ಒತ್ತಿ ಹಿಡಿದಿದ್ದಾರೆ. ಇದೇ ವೇಳೆ, ಶ್ರೀದೇವ್ ಹಾವಿನ ಬಾಲ ಹಿಡಿದು ಎಳೆದ ಕಾರಣ ಹಾವು ಹೊರಬಂದಿದೆ.ಸಾಮಾನ್ಯವಾಗಿ ಕೆರೆ ಹಾವುಗಳಿಗೆ ಮನುಷ್ಯರನ್ನು ನೋಡಿದರೆ ಆಗೋದಿಲ್ಲ ಮನುಷ್ಯರು ನೋಡಿದರೆ ಸಾಕು ಎದ್ನೋ-ಬಿದ್ನೋ ಅಂತ ಓಡುವ ಕೆರೆ ಹಾವು ಬಾಟಲಿಯಿಂದ ಹೊರ ಬಂದ ಕೂಡಲೇ ಕಣ್ಣಿಗೆ ಕಾಣದಂತೆ ಸ್ಥಳದಿಂದ ಮಾಯವಾಗಿದೆ....Conclusion:ರಾಜಕುಮಾರ್....
ಈಟಿವಿ ಭಾರತ್.....
ಚಿಕ್ಕಮಗಳೂರು....
Last Updated : May 21, 2019, 3:49 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.