ಚಾಮರಾಜನಗರ: ಕಾವೇರಿ ಪ್ರವಾಹದಿಂದ ಜಲಾವೃತವಾಗಿದ್ದ ಕೊಳ್ಳೇಗಾಲ ತಾಲೂಕಿನ ಗ್ರಾಮಗಳಲ್ಲಿ ನೆರೆ ಇಳಿಮುಖವಾಗಿದ್ದು, ಪರಿಹಾರ ಕೇಂದ್ರದಿಂದ ಸಂತ್ರಸ್ತರು ಮನೆಯತ್ತ ಮುಖ ಮಾಡುತ್ತಿದ್ದಾರೆ.
![Kollegala Flood](https://etvbharatimages.akamaized.net/etvbharat/prod-images/kn-cnr-02-flood-down-7202614_13082019153754_1308f_1565690874_744.jpg)
ದಾಸನಪುರ, ಹಳೇ ಅಣಗಹಳ್ಳಿ, ಹಳೇ ಹಂಪಾಪುರ, ಹರಳೆ ಗ್ರಾಮಗಳಲ್ಲಿ 25ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಕುಸಿದು ಬೀಳುವ ಹಂತ ತಲುಪಿವೆ. ಮನೆಗಳ ಒಳಗೆ ನಿಂತ ನೀರನ್ನು ಹೊರಚೆಲ್ಲುವ ಕಾರ್ಯದಲ್ಲಿ ಜನರು ತೊಡಗಿಕೊಂಡಿದ್ದು, ಪ್ರವಾಹದ ಬಳಿಕ ಸಾಂಕ್ರಾಮಿಕ ರೋಗದ ಭೀತಿ ಎದುರಿಸುತ್ತಿದ್ದಾರೆ. ಜಮೀನುಗಳಲ್ಲಿ ಇನ್ನೂ ನೀರು ನಿಂತಿದ್ದು, ಬಹುಪಾಲು ಬೆಳೆ ನೆಲಕಚ್ಚಿದೆ. ಸ್ಥಳೀಯ ಶಾಸಕ ಎನ್.ಮಹೇಶ್ ಶೀಘ್ರ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ.
ದಾಸನಪುರ ಗ್ರಾಮ ಪ್ರವಾಹಕ್ಕೆ ಹೆಚ್ಚು ನಲುಗಿದ್ದು, ನೀರಿನ ರಭಸಕ್ಕೆ ರಸ್ತೆಗಳು ಗುಂಡಿ ಬಿದ್ದಿವೆ. ಹಾನಿಯಾದ ಗ್ರಾಮಗಳಿಗೆ ಡಿಸಿ ಬಿ.ಬಿ. ಕಾವೇರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.