ETV Bharat / state

ಜಿಂಕೆ ಬೇಟೆಯಾಡಿ ಮಾಂಸ ಪಾಲು ಮಾಡುತ್ತಿದ್ದಾಗ ಅರಣ್ಯಾಧಿಕಾರಿಗಳ ದಾಳಿ: ಆರೋಪಿಗಳು ಪರಾರಿ - ಚಾಮರಾಜನಗರ

ಜಿಂಕೆಯನ್ನು ಬೇಟೆಯಾಡಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಅರಣ್ಯಾಧಿಕಾರಿಗಳ ತಂಡ ದಾಳಿ ನಡೆಸಿದೆ. ಈ ವೇಳೆ ಬೇಟೆಯಾಡಿದ ಜಿಂಕೆ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.

chamarajnagar
ಜಿಂಕೆ ಬೇಟೆಯಾಡಿ ಮಾಂಸ ಪಾಲು ಮಾಡುತ್ತಿದ್ದಾಗ ಅರಣ್ಯಾಧಿಕಾರಿಗಳ ದಾಳಿ..
author img

By

Published : Feb 17, 2021, 8:14 PM IST

ಚಾಮರಾಜನಗರ: ಜಿಂಕೆ ಬೇಟೆಯಾಡಿ ಮಾಂಸ ಪಾಲು ಮಾಡುತ್ತಿದ್ದಾಗ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದು, ಬೇಟೆಗಾರರು ಪರಾರಿಯಾಗಿರುವ ಘಟನೆ ಮಲೆಮಹದೇಶ್ವರ ವನ್ಯಜೀವಿಧಾಮದ ಬಂಡಳ್ಳಿ ಮಾದಪ್ಪನ ಹಳ್ಳದಲ್ಲಿ ನಡೆದಿದೆ‌.

ಜಿಂಕೆಯನ್ನು ಬೇಟೆಯಾಡಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಅರಣ್ಯಾಧಿಕಾರಿಗಳ ತಂಡ ದಾಳಿ ನಡೆಸಿದೆ. ಈ ವೇಳೆ ಬೇಟೆಯಾಡಿದ ಜಿಂಕೆ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಅಂಡೇಕುರುಬರದೊಡ್ಡಿಯ ಮೂರ್ತಿ ಹಾಗೂ ಸೀನಿದೊಡ್ಡಿಯ ರಾಮು ಪರಾರಿಯಾಗಿರುವ ಆರೋಪಿಗಳು ಎನ್ನಲಾಗಿದೆ.

ಸದ್ಯ 50 ಕೆಜಿ ತೂಕವಿರುವ ಗಂಡು ಜಿಂಕೆಯ ಕಳೇಬರ ಹಾಗೂ ಬೈಕ್ ವಶಪಡಿಸಿಕೊಂಡ ಅರಣ್ಯಾಧಿಕಾರಿಗಳು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಚಾಮರಾಜನಗರ: ಜಿಂಕೆ ಬೇಟೆಯಾಡಿ ಮಾಂಸ ಪಾಲು ಮಾಡುತ್ತಿದ್ದಾಗ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದು, ಬೇಟೆಗಾರರು ಪರಾರಿಯಾಗಿರುವ ಘಟನೆ ಮಲೆಮಹದೇಶ್ವರ ವನ್ಯಜೀವಿಧಾಮದ ಬಂಡಳ್ಳಿ ಮಾದಪ್ಪನ ಹಳ್ಳದಲ್ಲಿ ನಡೆದಿದೆ‌.

ಜಿಂಕೆಯನ್ನು ಬೇಟೆಯಾಡಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಅರಣ್ಯಾಧಿಕಾರಿಗಳ ತಂಡ ದಾಳಿ ನಡೆಸಿದೆ. ಈ ವೇಳೆ ಬೇಟೆಯಾಡಿದ ಜಿಂಕೆ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಅಂಡೇಕುರುಬರದೊಡ್ಡಿಯ ಮೂರ್ತಿ ಹಾಗೂ ಸೀನಿದೊಡ್ಡಿಯ ರಾಮು ಪರಾರಿಯಾಗಿರುವ ಆರೋಪಿಗಳು ಎನ್ನಲಾಗಿದೆ.

ಸದ್ಯ 50 ಕೆಜಿ ತೂಕವಿರುವ ಗಂಡು ಜಿಂಕೆಯ ಕಳೇಬರ ಹಾಗೂ ಬೈಕ್ ವಶಪಡಿಸಿಕೊಂಡ ಅರಣ್ಯಾಧಿಕಾರಿಗಳು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.