ಕೊಳ್ಳೇಗಾಲ: ಚಾಕುವಿನಿಂದ ಸೊಸೆಯನ್ನು ಕೊಂದು ಮಾವ ನೇಣಿಗೆ ಶರಣಾಗಿರುವ ಘಟನೆ ಕೊಳ್ಳೇಗಾಲದ ಆದರ್ಶ ಬಡಾವಣೆಯಲ್ಲಿ ನಡೆದಿದೆ.
ಸರ್ಕಾರಿ ಆಸ್ಪತ್ರೆಯ ಡಿ ಗ್ರೂಪ್ ನೌಕರ ಸುರೇಂದ್ರ ಎಂಬಾತನ ಪತ್ನಿ ಸುಮಿತ್ರ (32) ಕೊಲೆಯಾದ ಮಹಿಳೆ. ಆಕೆಯ ಮಾವ ಚಿಕ್ಕಹುಚ್ಚಯ್ಯ (60) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದ್ದು ಸೊಸೆ, ಮಾವನ ಸಾವು ಅನುಮಾನ ಮೂಡಿಸಿದೆ.
ಡೆತ್ ನೋಟ್ ದೊರಕಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಅಪರ ವರಿಷ್ಠಾಧಿಕಾರಿ ಅನಿತಾ ಹದ್ದಣನವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎರಡೂ ಸಾವಿನ ಕಾರಣಗಳ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ಕಾಯಲಾಗುತ್ತಿದೆ.