ETV Bharat / state

ಸಿಟಿ ರವಿ, ಕಟೀಲ್, ಯತ್ನಾಳ್, ರೇಣುಕಾ, ಕರಂದ್ಲಾಜೆ ಇವರೆಲ್ಲರ ವಿರುದ್ಧ ಕೇಸ್ ಹಾಕಿ.. ಬಿಎಸ್​ಪಿ ರಾಜ್ಯಾಧ್ಯಕ್ಷ - withdraw its complaint against Rakesh

ರೈತ ನಾಯಕ ರಾಕೇಶ್ ಟಿಕಾಯತ್ ವಿರುದ್ಧ ಸ್ವತಃ ಪೊಲೀಸರು ಸುಮೋಟೊ ಕೇಸ್ ಹಾಕಿದ್ದಾರೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಹುನ್ನಾರವಾಗಿದೆ. ರೈತರ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಹೊರಟಿದೆ..

ಬಿಎಸ್​ಪಿ ರಾಜ್ಯಧ್ಯಕ್ಷ
ಬಿಎಸ್​ಪಿ ರಾಜ್ಯಧ್ಯಕ್ಷ
author img

By

Published : Mar 26, 2021, 9:05 PM IST

ಕೊಳ್ಳೇಗಾಲ : ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ವಿರುದ್ಧ ಶಿವಮೊಗ್ಗದಲ್ಲಿ ದಾಖಲಾಗಿರುವ ಪ್ರಕರಣವನ್ನು ಪಕ್ಷ ಖಂಡಿಸುತ್ತದೆ ಎಂದು ಬಿಎಸ್​ಪಿ ರಾಜ್ಯಾಧ್ಯಕ್ಷ ಎಂ ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ‌ ಮಾತನಾಡಿದ ಅವರು, ಕರ್ನಾಟಕದ ಶಿವಮೊಗ್ಗ ಹಾಗೂ ಬೆಂಗಳೂರಲ್ಲಿ ನಡೆದ ರೈತ ಸಮಾವೇಶಕ್ಕೆ ರೈತ ನಾಯಕ ರಾಕೇಶ್ ಟಿಕಾಯತ್ ಭೇಟಿ‌ ನೀಡಿದ್ದರು.

ಈ ವೇಳೆ ಹಠಮಾರಿ ಬಿಜೆಪಿ ಸರ್ಕಾರದ ವಿರುದ್ಧ ದೆಹಲಿ‌ ಮಾದರಿ ನೀವು ಹೋರಾಟ ಮಾಡಬೇಕು, ಸಾವಿರರು ರೈತರು ಟ್ರ್ಯಾಕ್ಟರ್ ಬಳಸಿ ಬೆಂಗಳೂರು ಮುತ್ತಿಗೆ ಹಾಕಬೇಕು ಎಂದು ಒಬ್ಬ ರೈತ ನಾಯಕನಾಗಿ ರಾಕೇಶ್ ಟಿಕಾಯತ್ ಸಹಜವಾಗಿ ರೈತರಿಗೆ ಕರೆ ನೀಡಿದ್ದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್​ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ..

ಆದರೆ, ‌ಈ ಹೇಳಿಕೆ ಪ್ರಚೋದನಾಕಾರಿ ಭಾಷಣ ಎಂದು ರಾಕೇಶ್ ಟಿಕಾಯತ್ ವಿರುದ್ಧ ಸ್ವತಃ ಪೊಲೀಸರು ಸುಮೋಟೊ ಕೇಸ್ ಹಾಕಿಕೊಂಡಿದ್ದಾರೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಹುನ್ನಾರವಾಗಿದೆ. ರೈತರ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಹೊರಟಿದೆ ಎಂದು ಆರೋಪಿಸಿದರು.

ಬಿಜೆಪಿಯ ನಾಯಕರ ಮೇಲೆ ದೂರು ದಾಖಲಿಸಿ : ಬಿಜೆಪಿಯ ಅನಂತ್ ಕುಮಾರ್ ಹೆಗ್ಡೆ, ಸಿ ಟಿ ರವಿ, ಶೋಭಾ ಕರಂದ್ಲಾಜೆ, ಕಟೀಲ್, ರೇಣುಕಾಚಾರ್ಯ, ಬಸವರಾಜ ಪಾಟೀಲ್ ಯತ್ನಾಳ್ ಇವರೆಲ್ಲರೂ ಕೂಡ ಒಂದಲ್ಲ‌ ಒಂದು ರೀತಿ ಹಿಂದೂ ಹೆಸರಲ್ಲಿ ಮುಸಲ್ಮಾನರ ವಿರುದ್ಧ ಜನರನ್ನು ಉದ್ರೇಕಗೊಳಿಸುವ ಅನೇಕ ಹೇಳಿಕೆ‌ ನೀಡಿದ್ದಾರೆ. ಈ ಆಧಾರದ ಮೇಲೆ ದೂರು ದಾಖಲಿಸಿ ಎಂದು ಒತ್ತಾಯಿಸಿದರು.

ಕೊಳ್ಳೇಗಾಲ : ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ವಿರುದ್ಧ ಶಿವಮೊಗ್ಗದಲ್ಲಿ ದಾಖಲಾಗಿರುವ ಪ್ರಕರಣವನ್ನು ಪಕ್ಷ ಖಂಡಿಸುತ್ತದೆ ಎಂದು ಬಿಎಸ್​ಪಿ ರಾಜ್ಯಾಧ್ಯಕ್ಷ ಎಂ ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ‌ ಮಾತನಾಡಿದ ಅವರು, ಕರ್ನಾಟಕದ ಶಿವಮೊಗ್ಗ ಹಾಗೂ ಬೆಂಗಳೂರಲ್ಲಿ ನಡೆದ ರೈತ ಸಮಾವೇಶಕ್ಕೆ ರೈತ ನಾಯಕ ರಾಕೇಶ್ ಟಿಕಾಯತ್ ಭೇಟಿ‌ ನೀಡಿದ್ದರು.

ಈ ವೇಳೆ ಹಠಮಾರಿ ಬಿಜೆಪಿ ಸರ್ಕಾರದ ವಿರುದ್ಧ ದೆಹಲಿ‌ ಮಾದರಿ ನೀವು ಹೋರಾಟ ಮಾಡಬೇಕು, ಸಾವಿರರು ರೈತರು ಟ್ರ್ಯಾಕ್ಟರ್ ಬಳಸಿ ಬೆಂಗಳೂರು ಮುತ್ತಿಗೆ ಹಾಕಬೇಕು ಎಂದು ಒಬ್ಬ ರೈತ ನಾಯಕನಾಗಿ ರಾಕೇಶ್ ಟಿಕಾಯತ್ ಸಹಜವಾಗಿ ರೈತರಿಗೆ ಕರೆ ನೀಡಿದ್ದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್​ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ..

ಆದರೆ, ‌ಈ ಹೇಳಿಕೆ ಪ್ರಚೋದನಾಕಾರಿ ಭಾಷಣ ಎಂದು ರಾಕೇಶ್ ಟಿಕಾಯತ್ ವಿರುದ್ಧ ಸ್ವತಃ ಪೊಲೀಸರು ಸುಮೋಟೊ ಕೇಸ್ ಹಾಕಿಕೊಂಡಿದ್ದಾರೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಹುನ್ನಾರವಾಗಿದೆ. ರೈತರ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಹೊರಟಿದೆ ಎಂದು ಆರೋಪಿಸಿದರು.

ಬಿಜೆಪಿಯ ನಾಯಕರ ಮೇಲೆ ದೂರು ದಾಖಲಿಸಿ : ಬಿಜೆಪಿಯ ಅನಂತ್ ಕುಮಾರ್ ಹೆಗ್ಡೆ, ಸಿ ಟಿ ರವಿ, ಶೋಭಾ ಕರಂದ್ಲಾಜೆ, ಕಟೀಲ್, ರೇಣುಕಾಚಾರ್ಯ, ಬಸವರಾಜ ಪಾಟೀಲ್ ಯತ್ನಾಳ್ ಇವರೆಲ್ಲರೂ ಕೂಡ ಒಂದಲ್ಲ‌ ಒಂದು ರೀತಿ ಹಿಂದೂ ಹೆಸರಲ್ಲಿ ಮುಸಲ್ಮಾನರ ವಿರುದ್ಧ ಜನರನ್ನು ಉದ್ರೇಕಗೊಳಿಸುವ ಅನೇಕ ಹೇಳಿಕೆ‌ ನೀಡಿದ್ದಾರೆ. ಈ ಆಧಾರದ ಮೇಲೆ ದೂರು ದಾಖಲಿಸಿ ಎಂದು ಒತ್ತಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.