ಚಾಮರಾಜನಗರ: ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಪರಿಣಾಮ ಸಂಜೆ 6 ಬಳಿಕ ಜಿಲ್ಲಾಕೇಂದ್ರದಲ್ಲಿ ಅಘೋಷಿತ ಲಾಕ್ಡೌನ್ ಪರಿಸ್ಥಿತಿ ನಿರ್ಮಾಣವಾಗಿದೆ.
ಪೊಲೀಸರು ಹಾಗೂ ನಗರಸಭೆ ಅಧಿಕಾರಿಗಳು ಸಂಜೆ 6 ಆಗುತ್ತಿದ್ದಂತೆ ಡಿಸಿ ಆದೇಶದಂತೆ ಅಗತ್ಯ ವಸ್ತುಗಳ ಮಾರಾಟ ಬಿಟ್ಟು ಎಲ್ಲಾ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಿಸುತ್ತಿರುವ ಜೊತೆಗೆ ಅನಗತ್ಯವಾಗಿ ಓಡಾಡುವರಿಗೆ ಚುರುಕು ಮುಟ್ಟಿಸುತ್ತಿದ್ದಾರೆ.
ವ್ಯಾಪಾರ ವಹಿವಾಟವನ್ನು ಬಂದ್ ಮಾಡುವುದರಿಂದ ಜಿಲ್ಲಾಕೇಂದ್ರದಲ್ಲಿ 6 ರ ಬಳಿಕ ಓಡಾಟ ಬಹಳ ವಿರಳವಾಗುತ್ತಿದ್ದು, ಅಘೋಷಿತ ಲಾಕ್ಡೌನ್ ರೀತಿ ಜನರು ವರ್ತಿಸುತ್ತಿದ್ದಾರೆ. ಆದರೂ, ಹಗಲಿನಲ್ಲಿ ಸಾಮಾನ್ಯವಾಗಿ ಎಲ್ಲರೂ ಮಾಸ್ಕ್ ಧರಿಸುತ್ತರಾದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರೆಯುತ್ತಿದ್ದಾರೆ. ಈ ಕುರಿತು ನಗರಸಭೆ ಅರಿವು ಮೂಡಿಸಬೇಕಿದೆ.