ETV Bharat / state

ಅತೃಪ್ತ ಶಾಸಕರ ವಿರುದ್ಧ ಮೈತ್ರಿ ನಾಯಕರ ಕಾನೂನು ಅಸ್ತ್ರ: ದೋಸ್ತಿಗೆ ಗುದ್ದಲು ಬಿಜೆಪಿ ಪ್ರತ್ಯಾಸ್ತ್ರ!​​ - undefined

ಇತ್ತ ಅತೃಪ್ತ ಶಾಸಕರು ಮನವೊಲಿಕೆಗೆ ಬಗ್ಗದಿರುವುದರಿಂದ ಅವರ ವಿರುದ್ಧ ಕಾನೂನು ಅಸ್ತ್ರ ಬಳಸಲು ಮೈತ್ರಿ ಪಕ್ಷದ ಮುಖಂಡರು ಮುಂದಾಗಿದ್ದರೆ, ಅತ್ತ ಮೈತ್ರಿ ಸರ್ಕಾರದ ಕಾನೂನು ಹೋರಾಟವನ್ನು ಆರಂಭದಲ್ಲೇ ವಿಫಲಗೊಳಿಸುವ ಯೋಜನೆಯನ್ನು ಬಿಜೆಪಿ ಸಿದ್ಧಪಡಿಸುತ್ತಿದೆ.

ಮೈತ್ರಿಗೆ ಗುದ್ದಲು ಬಿಜೆಪಿ ಸ್ಕೆಚ್
author img

By

Published : Jul 8, 2019, 5:39 PM IST

ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 13 ಅತೃಪ್ತ ಶಾಸಕರು ಮನವೊಲಿಕೆಗೆ ಬಗ್ಗದಿರುವುದರಿಂದ ಅವರ ವಿರುದ್ಧ ಅನರ್ಹತೆ ಹಾಗೂ ಸಚಿವರಾಗುವುದನ್ನು ತಡೆಯುವ ಕಾನೂನು ಅಸ್ತ್ರ ಬಳಸಲು ಮೈತ್ರಿ ಪಕ್ಷದ ಮುಖಂಡರು ಮುಂದಾಗಿದ್ದಾರೆ.

ಅತೃಪ್ತರಿಗೆ ಬಿಜೆಪಿ ಜತೆ ಇರುವ ಸಂಬಂಧವನ್ನು ಉಲ್ಲೇಖಿಸಿ ಪಕ್ಷಾಂತರ ನಿಷೇಧ ಕಾಯ್ದೆಯ ಪ್ರಕಾರ ಬಿಜೆಪಿ ಸರ್ಕಾರದಲ್ಲಿ ಮೈತ್ರಿಯ ಅತೃಪ್ತರು ಪ್ರಕರಣ ಇತ್ಯರ್ಥಗೊಳ್ಳದೇ ಸಚಿವರಾಗುವುದನ್ನು ತಡೆಯುವ ಕಾನೂನು ಸಮರ ನಡೆಸುವ ಪ್ಲಾನ್​​ ಮೈತ್ರಿ ನಾಯಕರದ್ದಾಗಿದೆ.

ಆದರೆ ಮೈತ್ರಿ ಸರ್ಕಾರದ ಕಾನೂನು ಹೋರಾಟವನ್ನು ಆರಂಭದಲ್ಲೇ ವಿಫಲಗೊಳಿಸುವ ಪ್ಲಾನ್​​ಅನ್ನು ಬಿಜೆಪಿ ಸಿದ್ಧಪಡಿಸುತ್ತಿದೆ ಎನ್ನಲಾಗಿದೆ. ಮೈತ್ರಿ ಸರ್ಕಾರದಲ್ಲಿ ವಿಧಾನಸಭಾಧ್ಯಕ್ಷರಾಗಿರುವ ರಮೇಶ್​ ಕುಮಾರ್ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಸ್ಪೀಕರ್ ಚುನಾವಣೆ ನಡೆಸಲು ಮನವಿ ಸಲ್ಲಿಸಲಿದೆ. ಬಹುಮತದ ಕೊರತೆಯಿಂದ ದೋಸ್ತಿ ಪಕ್ಷಗಳ ಸ್ಪೀಕರ್ ಅಭ್ಯರ್ಥಿ ಚುನಾವಣೆಯಲ್ಲಿ ಸೋತ ನಂತರ ಬಿಜೆಪಿ ತನ್ನ ಸ್ಪೀಕರ್ ಅಭ್ಯರ್ಥಿ ಗೆಲ್ಲಿಸಿಕೊಂಡು ಬರಲಿದೆ. ಸ್ಪೀಕರ್ ಬದಲಾವಣೆ ಆದರೆ ಸದನದಲ್ಲಿ ಮೈತ್ರಿ ಪಕ್ಷಗಳ ಎಲ್ಲ ಕಾನೂನು ಹೋರಾಟಗಳನ್ನು ವಿಫಲಗೊಳಿಸಬಹುದೆಂದು ಬಿಜೆಪಿ ಪ್ರತಿತಂತ್ರ ರೂಪಿಸಿದೆ ಎಂದು ತಿಳಿದು ಬಂದಿದೆ.

ಮೈತ್ರಿ ಸರ್ಕಾರ ಪತನಕ್ಕೆ ಹಾಗೂ ಬಿಜೆಪಿ ಸರ್ಕಾರ ರಚನೆಗೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ತೆರೆಮರೆಯಲ್ಲಿ ಕಮಲ ನಾಯಕರು ಹೈಕಮಾಂಡ್ ಮಾರ್ಗದರ್ಶನದಂತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಇದರ ಜತೆಗೆ ಆಪರೇಷನ್ ಕಮಲದ ಆರೋಪ ಪಕ್ಷದ ಮೇಲೆ ಬರದಂತೆ ಎಚ್ಚರಿಕೆಯನ್ನೂ ಬಿಜೆಪಿ ವಹಿಸಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 13 ಅತೃಪ್ತ ಶಾಸಕರು ಮನವೊಲಿಕೆಗೆ ಬಗ್ಗದಿರುವುದರಿಂದ ಅವರ ವಿರುದ್ಧ ಅನರ್ಹತೆ ಹಾಗೂ ಸಚಿವರಾಗುವುದನ್ನು ತಡೆಯುವ ಕಾನೂನು ಅಸ್ತ್ರ ಬಳಸಲು ಮೈತ್ರಿ ಪಕ್ಷದ ಮುಖಂಡರು ಮುಂದಾಗಿದ್ದಾರೆ.

ಅತೃಪ್ತರಿಗೆ ಬಿಜೆಪಿ ಜತೆ ಇರುವ ಸಂಬಂಧವನ್ನು ಉಲ್ಲೇಖಿಸಿ ಪಕ್ಷಾಂತರ ನಿಷೇಧ ಕಾಯ್ದೆಯ ಪ್ರಕಾರ ಬಿಜೆಪಿ ಸರ್ಕಾರದಲ್ಲಿ ಮೈತ್ರಿಯ ಅತೃಪ್ತರು ಪ್ರಕರಣ ಇತ್ಯರ್ಥಗೊಳ್ಳದೇ ಸಚಿವರಾಗುವುದನ್ನು ತಡೆಯುವ ಕಾನೂನು ಸಮರ ನಡೆಸುವ ಪ್ಲಾನ್​​ ಮೈತ್ರಿ ನಾಯಕರದ್ದಾಗಿದೆ.

ಆದರೆ ಮೈತ್ರಿ ಸರ್ಕಾರದ ಕಾನೂನು ಹೋರಾಟವನ್ನು ಆರಂಭದಲ್ಲೇ ವಿಫಲಗೊಳಿಸುವ ಪ್ಲಾನ್​​ಅನ್ನು ಬಿಜೆಪಿ ಸಿದ್ಧಪಡಿಸುತ್ತಿದೆ ಎನ್ನಲಾಗಿದೆ. ಮೈತ್ರಿ ಸರ್ಕಾರದಲ್ಲಿ ವಿಧಾನಸಭಾಧ್ಯಕ್ಷರಾಗಿರುವ ರಮೇಶ್​ ಕುಮಾರ್ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಸ್ಪೀಕರ್ ಚುನಾವಣೆ ನಡೆಸಲು ಮನವಿ ಸಲ್ಲಿಸಲಿದೆ. ಬಹುಮತದ ಕೊರತೆಯಿಂದ ದೋಸ್ತಿ ಪಕ್ಷಗಳ ಸ್ಪೀಕರ್ ಅಭ್ಯರ್ಥಿ ಚುನಾವಣೆಯಲ್ಲಿ ಸೋತ ನಂತರ ಬಿಜೆಪಿ ತನ್ನ ಸ್ಪೀಕರ್ ಅಭ್ಯರ್ಥಿ ಗೆಲ್ಲಿಸಿಕೊಂಡು ಬರಲಿದೆ. ಸ್ಪೀಕರ್ ಬದಲಾವಣೆ ಆದರೆ ಸದನದಲ್ಲಿ ಮೈತ್ರಿ ಪಕ್ಷಗಳ ಎಲ್ಲ ಕಾನೂನು ಹೋರಾಟಗಳನ್ನು ವಿಫಲಗೊಳಿಸಬಹುದೆಂದು ಬಿಜೆಪಿ ಪ್ರತಿತಂತ್ರ ರೂಪಿಸಿದೆ ಎಂದು ತಿಳಿದು ಬಂದಿದೆ.

ಮೈತ್ರಿ ಸರ್ಕಾರ ಪತನಕ್ಕೆ ಹಾಗೂ ಬಿಜೆಪಿ ಸರ್ಕಾರ ರಚನೆಗೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ತೆರೆಮರೆಯಲ್ಲಿ ಕಮಲ ನಾಯಕರು ಹೈಕಮಾಂಡ್ ಮಾರ್ಗದರ್ಶನದಂತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಇದರ ಜತೆಗೆ ಆಪರೇಷನ್ ಕಮಲದ ಆರೋಪ ಪಕ್ಷದ ಮೇಲೆ ಬರದಂತೆ ಎಚ್ಚರಿಕೆಯನ್ನೂ ಬಿಜೆಪಿ ವಹಿಸಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

Intro:ಅತೃಪ್ತರ ವಿರುದ್ಧ ಅನರ್ಹತೆಯ ಕಾನೂನು ಅಸ್ತ್ರ
ಪ್ರಯೋಗ ಕ್ಕೆ ಮೈತ್ರಿ ಧುರೀಣರ ಚಿಂತನೆ

ಬೆಂಗಳೂರು : ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ೧೩ ಅತೃಪ್ತ ಶಾಸಕರು ಮನವೊಲಿಕೆಗೆ ಬಗ್ಗದಿರುವುದರಿಂದ ಅವರ ವಿರುದ್ಧ ಅನರ್ಹತೆ ಹಾಗು ಸಚಿವರಾಗುವುದನ್ನು ತಡೆಯುವ ಕಾನೂನು ಅಸ್ತ್ರ ಬಳಸಲು ಮೈತ್ರಿ ಪಕ್ಷದ ಮುಖಂಡರು ಕಾನೂನು ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆನ್ನಲಾಗಿದೆ.

ಅತೃಪ್ತರಿಗೆ ಬಿಜೆಪಿ ಜತೆ ಇರುವ ಸಂಬಂಧವನ್ನು ಉಲ್ಲೇಖಿಸಿ ಪಕ್ಷಾಂತರ ನಿಷೇಧ ಕಾಯ್ದೆ ೧೦ ನೇ ಶೆಡ್ಯೂಲಿನ ೧೬೪ ೧ ಬಿ ಪ್ರಕಾರ ಬಿಜೆಪಿ ಸರಕಾರದಲ್ಲಿ ಅತೃಪ್ತರು ಪ್ರಕರಣ ಇತ್ಯರ್ಥಗೊಳ್ಳದೇ ಸಚಿವರಾಗುವುದನ್ನು ತಡೆಯುವ ಕಾನೂನು ಸಮರ ನಡೆಸುವ ಬೆದರಿಕೆಯನ್ನು ಹಾಕುತ್ತಿದ್ದಾರೆಂದು ತಿಳಿದುಬಂದಿದೆ.


Body: ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಶಾಸಕರಾಗಿ ಆಯ್ಕೆಯಾದ ವರು ಬಿಜೆಪಿ ಸೇರಿದರೆ ಅದು ಪಕ್ಷಾಂತರ ಅಗುತ್ತದೆ. ಶಾಸಕ ಸ್ತಾನಕ್ಕೆ ರಾಜೀನಾಮೆ ನೀಡಿದರೂ ಸಹ ಉಪ ಚುನಾವಣೆಯಲ್ಲಿ ಗೆದ್ದು ಬರುವವರೆಗೆ ಸಚಿವರಾಗುವುದನ್ನು ತಡೆಯುವ ಪ್ರಕರಣವನ್ನು ದಾಖಲಿಸಿ ವಿಧಾಸನಭಾದ್ಯಕ್ಷರಿಗೆ ದೂರು ದಾಖಲಿಸಲು ಉಭಯ ಪಕ್ಷಗಳ ವರಿಷ್ಠರು ತೀರ್ಮಾನಿಸಿದ್ದಾರೆಂದು ಹೇಳಲಾಗಿದೆ.

ಮೈತ್ರಿ ಪಕ್ಷಗಳ ದೂರಿನ ಆಧರಿಸಿ ಸ್ಪೀಕರ್ ಅವರು ಅನರ್ಹ ಗೊಳಿಸಿ ತೀರ್ಪುನೀಡಿದರೆ ಅತೃಪ್ತ ಶಾಸಕರು ಬಿಕೆಪಿಗೆ ಬೆಂಬಲ ನೀಡಿದರೂ ಸಚಿವರಾಗಲು ಸಾದ್ಯವಿಲ್ಲ ಎನ್ನುವ ಬೆದರಿಕೆ ಸಂದೇಶ ನೀಡಿದರೆ ಮುಂಬೈನಲ್ಲಿರುವ ಅತೃಪ್ತ ಶಾಸಕರು ಹೆದರಿ ವಾಪಾಸ್ಸು ಬರುತ್ತಾರೆನ್ನುವ ಲೆಕ್ಕಾಚಾರ ಮೈತ್ರಿ ನಾಯಕರದ್ದಾಗಿದೆ.

ಮೈತ್ರಿಗೆ ಗುದ್ದಲು ಬಿಜೆಪಿ ಸ್ಕೆಚ್


ಮೈತ್ರಿ ಸರಕಾರದ ಕಾನೂನು ಹೋರಾಟವನ್ನು ಆರಂಭದಲ್ಲೇ ವಿಫಲಗೊಳಿಸುವ ಪ್ಲಾನ್ ನ್ನು ಬಿಜೆಪಿ ಸಿದ್ಧಪಡಿಸುತ್ತಿದೆ. ಮೈತ್ರಿ ಸರಕಾರದಲ್ಲಿ ವಿಧಾನಸಭಾದ್ಯಕ್ಷರಾಗಿರುವ ರಮೇಶ್ಕುಮಾರ್ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಸ್ಪೀಕರ್ ಚುನಾವಣೆ ನಡೆಸಲು ಮನವಿ ಸಲ್ಲಿಸಲಿದೆ . ಬಹುಮತದ ಕೊರತೆಯಿಂದ ದೋಸ್ತಿ ಪಕ್ಷಗಳ ಸ್ಪೀಕರ್ ಅಭ್ಯರ್ಥಿ ಚುನಾವಣೆಯಲ್ಲಿ ಸೋತ ನಂತರ ಬಿಜೆಪಿ ತನ್ನ ಸ್ಪೀಕರ್ ಅಭ್ಯರ್ಥಿ ಗೆಲ್ಲಿಸಿಕೊಂಡು ಬರಲಿದೆ.

ಸ್ಪೀಕರ್ ಬದಲಾವಣೆ ಆದರೆ ಸದನದಲ್ಲಿ ಮೈತ್ರಿ ಪಕ್ಷಗಳ ಎಲ್ಲ ಕಾನೂನು ಹೋರಾಟಗಳನ್ನು ವಿಫಲಗೊಳಿಸಬಹುದೆಂದು ಬಿಜೆಪಿ ಪ್ರತಿ ತಂತ್ರಗಳನ್ನು ರೂಪಿಸಿದೆ.


Conclusion: ಮುಖ್ಯಮಂತ್ರಿ ಕುಮಾರಸ್ವಾಮಿ ಸರಕಾರ ಪತನಕ್ಕೆ ಹಾಗು ಬಿಜೆಪಿ ಸರಕಾರ ರವನೆಗೆ ಅಗತ್ಯವಿರುವ ಎಲ್ಲ ಸಿದ್ದತೆ ಗಳನ್ನು ತೆರೆಮರೆಯಲ್ಲಿ ಕಮಲ ನಾಯಕರು ಹೈಕಮಾಂಡ್ ಮಾರ್ಗದರ್ಶನದಂತೆ ಮಾಡಿಕೊಳ್ಳುತ್ತಿದೆ. ಇದರ ಜತೆಗೆ ಆಪರೇಶನ್ ಕಮಲದ ಆರೋಪ ಪಕ್ಷದ ಮೇಲೆ ಬರದಂತೆ ಎಚ್ಚರಿಕೆಯನ್ನೂ ಬಿಜೆಪಿ ವಹಿಸಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.