ಬೀದರ್: ಲಾಕ್ಡೌನ್ನಿಂದಾಗಿ ಮದ್ಯ ಮಾರಾಟಕ್ಕೆ ನಿಷೇಧ ಹೆರಿದ ಹಿನ್ನೆಲೆಯಲ್ಲಿ ಅಕ್ರಮವಾಗಿ ಮಾರಾಟಕ್ಕೆ ತಯಾರಿಸಿ ಇಟ್ಟಿದ್ದ ಕಳ್ಳಭಟ್ಟಿ ಅಡ್ಡೆ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ತಾಲೂಕಿನ ಮಮದಾಪುರ ತಾಂಡದ ಹೊರ ವಲಯದ ಮೇವಿನ ಬಣಿವೆಯಲ್ಲಿ ಹೂತಿಟ್ಟ 300 ಲೀಟರ್ ಬೆಲ್ಲದ ಕೊಳೆ ಹಾಗೂ 10 ಲಿಟರ್ ಕಳ್ಳಭಟ್ಟಿ ಸರಾಯಿ ವಶಪಡಿಸಿ ನಾಶ ಮಾಡಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಆರೋಪಿ ಪರಾರಿಯಾಗಿದ್ದಾನೆ. ಅಬಕಾರಿ ಉಪಾಯುಕ್ತ ವೀರಣ್ಣ ಬಾಗೇವಾಡಿ, ಉಪಾಧೀಕ್ಷಕ ಅನೀಲಕುಮಾರ್ ಪೊದ್ದಾರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರು, ಸಿಬ್ಬಂದಿ ದಾಳಿ ನಡೆಸಿದ್ದಾರೆ.