ಹೊಸಪೇಟೆ : ವಿಶ್ವ ವಿಖ್ಯಾತ ಹಂಪಿಗೆ ಇಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಅವರು ಭೇಟಿ ನೀಡಿ, ಪ್ರೇಕ್ಷಣಿಯ ಸ್ಥಳಗಳನ್ನು ನೋಡಿ ಸಂತಸಪಟ್ಟರು.
ಮಹಾನವಿ ದಿಬ್ಬ, ಲೋಟಸ್ ಮಹಲ್, ಉಗ್ರನಗರಸಿಂಹ, ರಾಣಿಸ್ನಾನ ಗೃಹ, ಸಾಸಿವೆ ಕಾಳು, ಕಡಲೆ ಕಾಳು, ವಿಜಯ ವಿಠ್ಠಲ ದೇವಸ್ಥಾನ, ಕಲ್ಲಿನ ತೇರು ಸೇರಿ ನಾನಾ ಸ್ಮಾರಕಗಳನ್ನು ಕಣ್ತುಂಬಿಕೊಂಡರು.
ಬಳಿಕ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಪಂಪಾಂಬಿಕೆ ಹಾಗೂ ಭುವನೇಶ್ವರಿ ದೇವಿಯ ದರ್ಶನ ಪಡೆದರು. ಈ ವೇಳೆ
ಹೊಸಪೇಟೆಯ ಸಿಡಿಪಿಒ ಅಮರೇಶ್ ಹಾಗೂ ಅಧಿಕಾರಿ ಉಪಸ್ಥಿತರಿದ್ದರು.