ETV Bharat / state

ಬಳ್ಳಾರಿ: ಸಂಜೀವರಾಯನಕೋಟೆ ಕೆರೆಗೆ ಬಿತ್ತು ಕೋಡಿ..!

ಬಳ್ಳಾರಿ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗಿದ್ದು, ಮಳೆಯ ಅಬ್ಬರಕ್ಕೆ ಕೆರೆ ಕಟ್ಟೆಗಳೆಲ್ಲಾ ತುಂಬಿದ್ದು, ಸಂಜೀವರಾಯನಕೋಟೆ ಕೆರೆಗೆ ಕೋಡಿ ಬಿದ್ದಿದೆ.

author img

By

Published : Oct 28, 2019, 11:55 AM IST

ಕೆರೆಗೆ ಕೋಡಿ ಬಿದ್ದಿರುವುದು

ಬಳ್ಳಾರಿ: ಗಣಿ ಜಿಲ್ಲೆಯಾದ್ಯಂತ ಸುರಿದ ಮಹಾ ಮಳೆಗೆ ಬಳ್ಳಾರಿ ತಾಲೂಕಿನ ಸಂಜೀವರಾಯನ ಕೋಟೆ ಗ್ರಾಮದ ಕೆರೆಗೆ ಕೋಡಿ ಬಿದ್ದಿದೆ. ಗ್ರಾಮದ ಸುತ್ತಮುತ್ತಲಿನ ಪ್ರದೇಶ ವ್ಯಾಪ್ತಿಯ ಸರಿಸುಮಾರು 30 ಎಕರೆಗೂ ಅಧಿಕ ಬೆಳೆಗೆಈ ಮಹಾಮಳೆಯ ನೀರು ನುಗ್ಗಿದ್ದು,‌ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಕೆರೆಗೆ ಕೋಡಿ ಬಿದ್ದಿರುವುದು

ದೀಪಾವಳಿ ಅಮವಾಸ್ಯೆ ದಿನವಾದ ಸೋಮವಾರ ನಸುಕಿನ ವೇಳೆ ಬಳ್ಳಾರಿ ನಗರ, ತಾಲೂಕು ಸೇರಿ ಜಿಲ್ಲಾದ್ಯಂತ ಧಾರಾಕಾರ ಮಳೆ ಸುರಿದಿದೆ. ನಗರ ವ್ಯಾಪ್ತಿಯ ಸತ್ಯನಾರಾಯಣ ಪೇಟೆ, ಕನಕದುರ್ಗಮ್ಮ ದೇಗುಲದ ಹಾಗೂ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ರಸ್ತೆಗಳ ಕೆಳಸೇತುವೆಗಳು ಸಂಪೂರ್ಣವಾಗಿ ಮಳೆ ನೀರಿನಿಂದ ಜಲಾವೃತಗೊಂಡಿದ್ದು, ಸಾರ್ವಜನಿಕ ಸಂಚಾರಕ್ಕೂ ಅಡ್ಡಿಯುಂಟಾಗಿದೆ.

ಬಳ್ಳಾರಿ: ಗಣಿ ಜಿಲ್ಲೆಯಾದ್ಯಂತ ಸುರಿದ ಮಹಾ ಮಳೆಗೆ ಬಳ್ಳಾರಿ ತಾಲೂಕಿನ ಸಂಜೀವರಾಯನ ಕೋಟೆ ಗ್ರಾಮದ ಕೆರೆಗೆ ಕೋಡಿ ಬಿದ್ದಿದೆ. ಗ್ರಾಮದ ಸುತ್ತಮುತ್ತಲಿನ ಪ್ರದೇಶ ವ್ಯಾಪ್ತಿಯ ಸರಿಸುಮಾರು 30 ಎಕರೆಗೂ ಅಧಿಕ ಬೆಳೆಗೆಈ ಮಹಾಮಳೆಯ ನೀರು ನುಗ್ಗಿದ್ದು,‌ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಕೆರೆಗೆ ಕೋಡಿ ಬಿದ್ದಿರುವುದು

ದೀಪಾವಳಿ ಅಮವಾಸ್ಯೆ ದಿನವಾದ ಸೋಮವಾರ ನಸುಕಿನ ವೇಳೆ ಬಳ್ಳಾರಿ ನಗರ, ತಾಲೂಕು ಸೇರಿ ಜಿಲ್ಲಾದ್ಯಂತ ಧಾರಾಕಾರ ಮಳೆ ಸುರಿದಿದೆ. ನಗರ ವ್ಯಾಪ್ತಿಯ ಸತ್ಯನಾರಾಯಣ ಪೇಟೆ, ಕನಕದುರ್ಗಮ್ಮ ದೇಗುಲದ ಹಾಗೂ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ರಸ್ತೆಗಳ ಕೆಳಸೇತುವೆಗಳು ಸಂಪೂರ್ಣವಾಗಿ ಮಳೆ ನೀರಿನಿಂದ ಜಲಾವೃತಗೊಂಡಿದ್ದು, ಸಾರ್ವಜನಿಕ ಸಂಚಾರಕ್ಕೂ ಅಡ್ಡಿಯುಂಟಾಗಿದೆ.

Intro:ಸಂಜೀವರಾಯನಕೋಟೆ ಕೆರೆಗೆ ಬಿತ್ತು ಕೋಡಿ..!
ಬಳ್ಳಾರಿ: ಗಣಿ ಜಿಲ್ಲಾದ್ಯಂತ ಇಂದು ಬೆಳಗಿನಜಾವ ಸುರಿದ ಮಹಾ ಮಳೆಗೆ ಬಳ್ಳಾರಿ ತಾಲೂಕಿನ ಸಂಜೀವರಾಯನ ಕೋಟೆ ಗ್ರಾಮದ ಕೆರೆಗೆ ದೊಡ್ಡದಾದ ಕೋಡಿ ಬಿದ್ದಿದೆ. ಗ್ರಾಮದ ಸುತ್ತಮುತ್ತಲಿನ ಪ್ರದೇಶ ವ್ಯಾಪ್ತಿಯ ಸರಿಸುಮಾರು 30 ಎಕರೆಗೂ ಅಧಿಕ ಬೆಳೆಗೆ
ಈ ಮಹಾಮಳೆಯ ನೀರು ನುಗ್ಗಿವೆ.‌ ಅಪಾರ ಪ್ರಮಾಣದ ಬೆಳೆ
ನಷ್ಟ ಉಂಟಾಗಿದೆ.
ದೀಪಾವಳಿ ಅಮವಾಸ್ಯೆ ದಿನವಾದ ಸೋಮವಾರ ನಸುಕಿನ
ವೇಳೆ 2 ಗಂಟೆಯ ಸುಮಾರಿಗೆ ಬಳ್ಳಾರಿ ನಗರ, ತಾಲೂಕು ಸೇರಿ ಜಿಲ್ಲಾದ್ಯಂತ ಧಾರಾಕಾರ ಮಳೆ ಸುರಿದಿದೆ. ಅಂದಾಜು ನಾಲ್ಕು ತಾಸಿನವರೆಗೂ ಈ ಮಳೆ ಸುರಿದಿದೆ.
ಬಳ್ಳಾರಿ ನಗರ ವ್ಯಾಪ್ತಿಯ ಸತ್ಯನಾರಾಯಣ ಪೇಟೆ, ಕನಕದುರ್ಗಮ್ಮ ದೇಗುಲದ ಹಾಗೂ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ರಸ್ತೆಗಳ ಕೆಳಸೇತುವೆಗಳು ಸಂಪೂರ್ಣವಾಗಿ ಮಳೆ ನೀರಿನಿಂದ ಜಲಾವೃತಗೊಂಡಿದ್ದು, ಸಾರ್ವಜನಿಕ ಸಂಚಾರಕ್ಕೂ ಅಡ್ಡಿಯುಂಟಾಗಿದೆ.
Body:ಅಲ್ಲದೇ, ಬಳ್ಳಾರಿ ತಾಲೂಕಿನ ಸಂಜೀವರಾಯನಕೋಟೆ ಗ್ರಾಮದಲ್ಲಿ ದಶಕದ ಹಿಂದೆಯಷ್ಟೇ ನಿರ್ಮಿಸಲಾಗಿದ್ದ ಕೆರೆಗೆ ದೊಡ್ಡದಾದ ಕೋಡಿ ಬಿದ್ದಿದ್ದರಿಂದ ಅಪಾರ ಪ್ರಮಾಣದ ಮಳೆ ನೀರು ಹೊರಕ್ಕೆ ಹರಿಯುತ್ತಿದೆ. ಕೆಂಪು ಬಣ್ಣದ ನೀರು ಗ್ರಾಮದ ತಗ್ಗು ಪ್ರದೇಶಗಳಲ್ಲಿ ಜಲಾವೃತಗೊಂಡಿರೋದು ಸರ್ವೇ ಸಾಮಾನ್ಯ ಆಗಿಬಿಟ್ಟಿದೆ. ಜನಜಾನುವಾರುಗಳಿಗೆ ಈ ಕೆರೆಯ ನೀರನ್ನು ಬಳಕೆ ಮಾಡಲಾಗುತ್ತಿತ್ತು. ಈ ಮಹಾಮಳೆಯಿಂದಾಗಿ ಕೆರೆ ಹೊಡೆದು ಹೋಗಿದ್ದು, ಮುಂದಿನ ಬೇಸಿಗೆಕಾಲದ ವೇಳೆಗೆ ಕುಡಿಯಲಿಕ್ಕೆ ನೀರಿನ ಅಭಾವ ಉಂಟಾಗುವ ಸಾಧ್ಯತೆಯಿದೆ ಎಂದು ಸಂಜೀವ ರಾಯನಕೋಟೆ ಗ್ರಾಮದ ಕೆ.ಟಿ.ಹೊನ್ನೂರಸ್ವಾಮಿ ತಿಳಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_1_HEAVY_RAIN_SANJEEVARAYANKOTE_LAKE_DAMAGES_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.